Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಹಿಜಾಬ್ ಪ್ರಕರಣ: ವಿಚಾರಣೆಯನ್ನು...

ಹಿಜಾಬ್ ಪ್ರಕರಣ: ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ ನ್ಯಾಯಾಲಯ

ಬಿಂದಿ, ಬಳೆ, ಶಿಲುಬೆಗೆ ನಿಷೇಧವಿಲ್ಲ, ಹಿಜಾಬ್‍ಗೆ ಮಾತ್ರ ಏಕೆ ನಿರ್ಬಂಧವಿದೆ: ಪ್ರೊ.ರವಿವರ್ಮಕುಮಾರ್

ವಾರ್ತಾಭಾರತಿವಾರ್ತಾಭಾರತಿ16 Feb 2022 2:50 PM IST
share
ಹಿಜಾಬ್ ಪ್ರಕರಣ: ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ ನ್ಯಾಯಾಲಯ

ಬಿಂದಿ, ಬಳೆ, ಶಿಲುಬೆಗೆ ನಿಷೇಧವಿಲ್ಲ, ಹಿಜಾಬ್‍ಗೆ ಮಾತ್ರ ಏಕೆ ನಿರ್ಬಂಧವಿದೆ: ಪ್ರೊ.ರವಿವರ್ಮಕುಮಾರ್ 

ಸರಕಾರಿ ಕಾಲೇಜುಗಳ ವ್ಯಾಪ್ತಿಯಲ್ಲಿ ಇದೇ ರೀತಿಯಾದ ಸಮವಸ್ತ್ರ ಧರಿಸಬೇಕು ಹಾಗೂ ಅದರೊಂದಿಗೆ ಹಿಜಾಬ್ ಇರುವಂತಿಲ್ಲ ಎಂದು ನಿರ್ಧರಿಸುವ ಅಧಿಕಾರ ಕಾಲೇಜು ಅಭಿವೃದ್ಧಿ ಸಮಿತಿಗೆ ಇಲ್ಲ. ಹಾಗಿದ್ದೂ ಇತರೆ ಧರ್ಮಗಳ ಧಾರ್ಮಿಕ ಸಂಕೇತಗಳಾದ ಬಿಂದಿ, ಬಳೆ, ಕ್ರೈಸ್ತರ ಶಿಲುಬೆಗೆ ನಿರ್ಬಂಧ ವಿಧಿಸದಿರುವಾಗ ಬಡ ಮುಸ್ಲಿಮ್ ವಿದ್ಯಾರ್ಥಿಗಳನ್ನೇ ಏಕೆ ಗುರಿಯಾಗಿಸಲಾಗಿದೆ. ಹಿಜಾಬ್ ಅನ್ನೇ ಸರಕಾರ ಏಕೆ ಆಯ್ಕೆ ಮಾಡಿಕೊಂಡಿದೆ ಎಂದು ಮಾಜಿ ಅಡ್ವೊಕೇಟ್ ಜನರಲ್, ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಹೈಕೋರ್ಟ್‍ಗೆ ಪ್ರಶ್ನಿಸಿದ್ದಾರೆ.

ಹಿಜಾಬ್ ನಿರ್ಬಂಧಿಸಿದ್ದ ಕೆಲ ಕಾಲೇಜುಗಳ ಕ್ರಮ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿಗೆ ಸರಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೆಲ ಮುಸ್ಲಿಮ್ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಹಗೂ ಖಾಜಿ ಝೈಬುನ್ನಿಸಾ ಮೊಹಿಯುದ್ದೀನ್ ಅವರಿದ್ದ ಪೂರ್ಣಪೀಠ ಬುಧವಾರ ವಿಚಾರಣೆ ನಡೆಸಿತು. 

ಅರ್ಜಿದಾರರ ವಿದ್ಯಾರ್ಥಿನಿಯರ ಪರ ವಾದ ಮುಂದುವರಿಸಿದ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಅವರು, ತನ್ನ ಧರ್ಮದ ಕಾರಣಕ್ಕಾಗಿ ಮಾತ್ರವೇ ಅರ್ಜಿದಾರರನ್ನು ತರಗತಿಯಿಂದ ಹೊರಕ್ಕೆ ಕಳುಹಿಸಲಾಗಿದೆ. ಬಿಂದಿ ಇರಿಸುವ, ಬಳೆಗಳನ್ನು ಧರಿಸುವ ಹುಡುಗಿಯರನ್ನು ಕಳುಹಿಸಿಲ್ಲ. ಶಿಲುವೆ ಧರಿಸುವ ಕ್ರೈಸ್ತರನ್ನು ಹೊರಗೆ ಕಳುಹಿಸಿಲ್ಲ. ಈ ಹುಡುಗಿಯರು ಮಾತ್ರ ಏಕೆ? ಇದು 15ನೇ ವಿಧಿಯ ಉಲ್ಲಂಘನೆ ಎಂದು ರವಿವರ್ಮಕುಮಾರ್ ವಾದಿಸಿದರು. 

ಹಿಜಾಬ್ ಧರಿಸಿದ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸುವ ಹಾಗೂ ಬಲವಂತವಾಗಿ ಅವರ ಹಿಜಾಬ್ ತೆಗೆಸುವ ಪೈಶಾಚಿಕ ವರ್ತನೆ ಸರಿಯಲ್ಲ ಎಂದು ಹಿರಿಯ ವಕೀಲ ರವಿವರ್ಮ ಕುಮಾರ್ ಪೀಠಕ್ಕೆ ತಿಳಿಸಿದರು.

ಶೈಕ್ಷಣಿಕ ನಿಯಮಗಳ 11ನೆ ನಿಯಮದ ಪ್ರಕಾರ ಶಿಕ್ಷಣ ಸಂಸ್ಥೆಯು ಸಮವಸ್ತ್ರ ಬದಲಾವಣೆ ಬಗ್ಗೆ ಪೋಷಕರಿಗೆ ಒಂದು ವರ್ಷ ಮೊದಲೇ ನೋಟಿಸ್ ನೀಡಬೇಕಾಗುತ್ತದೆ. ಹಿಜಾಬ್ ನಿಷೇಧ ಇದ್ದರೂ ಒಂದು ವರ್ಷ ಮುನ್ನ ಅವರು ನೀಡಬೇಕಾಗುತ್ತದೆ. ಪಿಯು ಕಾಲೇಜುಗಳು ಬೇರೆ ನಿಯಮಗಳ ಅಡಿ ಬರುತ್ತವೆ. ಇಲ್ಲಿ ನಿಯಮಗಳ ಅಡಿ ಸಿಡಿಸಿ ಅಧಿಕಾರ ಹೊಂದಿಲ್ಲ. ಪಿಯು ಕಾಲೇಜುಗಳಿಗೆ ಸಮವಸ್ತ್ರ ಸೂಚನೆ ಮಾಡಿಲ್ಲ ಎಂದು ಸರಕಾರ ಕೂಡ ಪ್ರತಿಪಾದಿಸಿದೆ ಎಂದ ರವಿವರ್ಮ ಕುಮಾರ್ ಅವರು, ಮಾರ್ಗಸೂಚಿಯನ್ನು ಓದಿದರು. ಪಿಯು ಮಂಡಳಿಯ ಮಾರ್ಗಸೂಚಿಯಲ್ಲಿ ಅಥವಾ ಶಿಕ್ಷಣ ಕಾಯ್ದೆಯಲ್ಲಿ ಹಿಜಾಬ್ ಧರಿಸುವುದರ ಮೇಲೆ ನಿಷೇಧ ವಿಧಿಸುವ ಯಾವುದೇ ನಿಯಮ ಇಲ್ಲ ಎಂದು ತಿಳಿಸಿದರು. ಸಿಡಿಸಿ ವಿದ್ಯಾರ್ಥಿಗಳ ಕಲ್ಯಾಣಕ್ಕೆ ಇರುವುದಲ್ಲ. ಅದು ಶೈಕ್ಷಣಿಯ ಗುಣಮಟ್ಟಕ್ಕಾಗಿ ಮಾತ್ರ ಇರುವುದು ಎಂದರು.


ತ್ರಿಸದದ್ಯ ಪೀಠದ ವಿಚಾರಣೆಯ ಮುಖ್ಯಾಂಶಗಳು

► ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ ನ್ಯಾಯಾಲಯ

ಅಡ್ವೊಕೇಟ್‌ ಯೂಸುಫ್‌ ಮುಚ್ಚಾಲ: ಉಲ್ಲಂಘನೆಯಾಗಿರುವ ಸಾಂವಿಧಾನಿಕ ಹಕ್ಕು ಯಾವುದು, 25 ನೇ ವಿಧಿ, ಆತ್ಮಸಾಕ್ಷಿಯ ನನ್ನ ಹಕ್ಕು ಮತ್ತು ಶಿಕ್ಷಣವನ್ನು ಹೊಂದುವ ನನ್ನ ಹಕ್ಕು. ಆದ್ದರಿಂದ ಕ್ರಿಯೆಯು ಸಂಪೂರ್ಣವಾಗಿ ಅಸಮಾನವಾಗಿದೆ. 

ತೀರ್ಪು ನಾಳೆಗೆ ಮುಂದೂಡಿದ ಹೈಕೋರ್ಟ್ಅಡ್ವೊಕೇಟ್‌ ಯೂಸುಫ್‌ ಮುಚ್ಚಾಲ: ಉಲ್ಲಂಘನೆಯಾಗಿರುವ ಸಾಂವಿಧಾನಿಕ ಹಕ್ಕು ಯಾವುದು, 25 ನೇ ವಿಧಿ, ಆತ್ಮಸಾಕ್ಷಿಯ ನನ್ನ ಹಕ್ಕು ಮತ್ತು ಶಿಕ್ಷಣವನ್ನು ಹೊಂದುವ ನನ್ನ ಹಕ್ಕು. ಆದ್ದರಿಂದ ಕ್ರಿಯೆಯು ಸಂಪೂರ್ಣವಾಗಿ ಅಸಮಾನವಾಗಿದೆ. 

ತೀರ್ಪು ನಾಳೆಗೆ ಮುಂದೂಡಿದ ಹೈಕೋರ್ಟ್‌

ಅಡ್ವೊಕೇಟ್‌ ಯೂಸುಫ್‌ ಮುಚ್ಚಾಲ: ಹಿಜಾಬ್ ಧರಿಸಬೇಕು ಎಂದು ಆತ್ಮಸಾಕ್ಷಿಯಾಗಿ ನಂಬುವ ಮುಸ್ಲಿಂ ಹುಡುಗಿಯರನ್ನು ಶಿಕ್ಷಣ ಮತ್ತು ನಂಬಿಕೆಗೆ ಸಂಬಂಧಿಸಿದಂತೆ ಏಕೆ ಗೊಂದಲಕ್ಕೆ ಕೆಡವಲಾಗುತ್ತಿದೆ? ಇದು ನ್ಯಾಯವೇ? ಅವರು ಪ್ರಾರಂಭಿಸಿರುವುದು ನಾಗರಿಕರ ಮೂಲಭೂತ ಕರ್ತವ್ಯಕ್ಕೂ ವಿರುದ್ಧವಾಗಿದೆ. ಏಕೆಂದರೆ, ಇದು ಕೋಮು ಸೌಹಾರ್ದತೆಗೆ ವಿರುದ್ಧವಾಗಿದೆ. ಶಿಕ್ಷಣ ಕಾಯಿದೆಯ ಉದ್ದೇಶವು ಸಾಮರಸ್ಯವನ್ನು ಉತ್ತೇಜಿಸುವುದು ಮತ್ತು ವಿದ್ಯಾರ್ಥಿಗಳಲ್ಲಿ ಭಿನ್ನಾಭಿಪ್ರಾಯವನ್ನು ಸೃಷ್ಟಿಸುವುದು ಅಲ್ಲ. ಇಂತಹ ಅವಿರೋಧ ಕಾನೂನನ್ನು ಸರ್ಕಾರ ಏಕೆ ಹೊರತರಬೇಕು? ನಾವು ಇದರೊಂದಿಗೆ ಏಕೆ ಸಹಮತ ವ್ಯಕ್ತಪಡಿಸಬೇಕು?

ಅಡ್ವೊಕೇಟ್‌ ಯೂಸುಫ್‌ ಮುಚ್ಚಾಲ ಮುಂದುವರಿಸುತ್ತಾರೆ. ಅವರು ಮಾಡರ್ನ್ ಡೆಂಟಲ್ ಕಾಲೇಜ್ ಕೇಸ್ (2016) 7 SCC 353 ಅನ್ನು ಉಲ್ಲೇಖಿಸುತ್ತಾರೆ. ಮೊದಲನೆಯದಾಗಿ, ಈ ಆಕ್ಷೇಪಾರ್ಹ ಕ್ರಮವು (ಶಿಕ್ಷಣ) ಕಾಯಿದೆಯ ಉದ್ದೇಶವನ್ನು ಮುನ್ನಡೆಸುತ್ತಿಲ್ಲ. ಸಾಮರಸ್ಯವು ಕಾಯಿದೆಯ ನಿಜವಾದ ಉದ್ದೇಶವಾಗಿದೆ ಮತ್ತು ಅವರು ತೆಗೆದುಕೊಂಡ ಕ್ರಮವು ಸಾಮರಸ್ಯ ಮತ್ತು ಮೂಲಭೂತ ಕರ್ತವ್ಯಗಳಿಗೆ ವಿರುದ್ಧವಾಗಿದೆ.


ಅಡ್ವೊಕೇಟ್‌ ಯೂಸುಫ್‌ ಮುಚ್ಚಾಲ: ಇಲ್ಲಿ ಕೆಲವು ವಿದ್ಯಾರ್ಥಿಗಳು ತಲೆವಸ್ತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆಂದು ತುರ್ತಾಗಿ ಈ ಆದೇಶಗಳನ್ನು ತರಲಾಗಿದೆ. ಅವರಿಗೆ ಆ ವಿದ್ಯಾರ್ಥಿನಿಯರೊಂದಿಗೆ ವಿರೋಧವಿದೆ. ಇದು ಸರಿಯೇ? ಎರಡೂ ಕಡೆಯವರನ್ನು ಸರಿಯಾಗಿ ಕರೆದು, ವಿಚಾರಗಳನ್ನು ಆಲಿಸಿ ಪರಿಹಾರವನ್ನು ಕೈಗೊಳ್ಳಬೇಕಿತ್ತು. ಇದು ಸ್ಪಷ್ಟ ನಿರಂಕುಶತ್ವವಾಗಿದೆ. ಪರಿಚ್ಛೇದ 25(1) ಮತ್ತು 19(1)(a) ಅಡಿಯಲ್ಲಿ ಹಕ್ಕನ್ನು ಕ್ಲೈಮ್ ಮಾಡಿದಾಗ, ವ್ಯಕ್ತಿಯ ಆತ್ಮಸಾಕ್ಷಿಯ ನಂಬಿಕೆಯನ್ನು ಆಚರಿಸುವುದು ಮುಖ್ಯವಾಗಿದೆ. ಆತ್ಮಸಾಕ್ಷಿಯ ವಿಷಯವಾಗಿ ಹಕ್ಕನ್ನು ಪ್ರತಿಪಾದಿಸಿದಾಗ, ಅದು ಧರ್ಮದ ಅವಿಭಾಜ್ಯ ಅಂಗವೇ ಎಂಬ ಪ್ರಶ್ನೆಗೆ ಒಳಪಡುವ ಅಗತ್ಯವಿಲ್ಲ. ಧರ್ಮದ ಅವಿಭಾಜ್ಯ ಅಂಗದ ಬಗ್ಗೆ ಪ್ರಶ್ನೆಯು 26 ನೇ ವಿಧಿಯ ಅಡಿಯಲ್ಲಿ  ಉದ್ಭವಿಸುತ್ತದೆ ಮತ್ತು ಒಬ್ಬ ವ್ಯಕ್ತಿಯು ಆರ್ಟಿಕಲ್ 25 ರ ಅಡಿಯಲ್ಲಿ ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು ಪ್ರತಿಪಾದಿಸುವಾಗ ಅಲ್ಲ. ಆತ್ಮಸಾಕ್ಷಿಯು ಬಹಳ ವಿಶಾಲವಾದ ಪದವಾಗಿದೆ. ದೇವರನ್ನು ನಂಬದ ಆದರೆ ಆತ್ಮಸಾಕ್ಷಿಯನ್ನು ನಂಬುವ ಜನರಿದ್ದಾರೆ. ಎಲ್ಲಾ ಧರ್ಮಗಳ ಸಾರ್ವತ್ರಿಕತೆಯನ್ನು ನಂಬುವ ಕೆಲವರು ಇದ್ದಾರೆ.

ಮುಖ್ಯ ನ್ಯಾಯಮೂರ್ತಿಗಳು: ಆರ್ಟಿಕಲ್‌ 25ನ್ನು ಮುಂದಿಡಲು ಅಗತ್ಯ ಧಾರ್ಮಿಕ ಆಚರಣೆಯಾಗಿರುವುದು ಅನಿವಾರ್ಯವಲ್ಲ ಎಂದು ನಾವು ಅರ್ಥ ಮಾಡಿಕೊಂಡಿದ್ದೇವೆ. 

ಅಡ್ವೊಕೇಟ್‌ ಯೂಸುಫ್‌ ಮುಚ್ಚಾಲ: ನಂಬಿಕೆಯನ್ನು ಕಾಪಾಡಬೇಕಾಗಿದೆ.


ಹಿರಿಯ ಅಡ್ವೊಕೇಟ್‌ ಯೂಸುಫ್‌ ಮುಚ್ಚಾಲ: ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಶಾಲೆಗೆ ಸೇರಿದಾಗಿನಿಂದ ತಲೆಗೆ ಸ್ಕಾರ್ಫ್‌ ಅನ್ನು ಧರಿಸುತ್ತಿದ್ದರು.

ಸಿಜೆ: ಇದು ಸಮವಸ್ತ್ರದ ಭಾಗವೇ?

ಅ. ಯೂಸುಫ್‌ ಮುಚ್ಚಾಲ: ವಿದ್ಯಾರ್ಥಿನಿ ಕನ್ನಡಕ ಹಾಕಿಕೊಂಡರೆ ಅದು ಸಮವಸ್ತ್ರದ ಭಾಗವಲ್ಲ ಎಂದು ಒತ್ತಾಯಿಸಬಹುದೇ? ನೀವು ಈ ವಿಚಾರವನ್ನೆಲ್ಲಾ ತುಂಬಾ ಕಟ್ಟುನಿಟ್ಟಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರು ತಮ್ಮ ತಲೆಯ ಮೇಲೆ ಒಂದು ವಸ್ತ್ರವನ್ನು ಅನ್ನು ಮಾತ್ರ ಹಾಕುತ್ತಿದ್ದಾರೆ. ನಾವು ಸಮವಸ್ತ್ರ ಎಂದು ಹೇಳುವಾಗ, ನಾವು ಕಟ್ಟುನಿಟ್ಟಾಗಿ ಡ್ರೆಸ್ ಕೋಡ್‌ಗೆ ಸೀಮಿತಗೊಳಿಸಲಾಗುವುದಿಲ್ಲ. ಶಾಲೆಯಲ್ಲಿ ಯಾವ ಪದ್ಧತಿಯನ್ನು ಅಳವಡಿಸಲಾಗಿದೆ ಎಂಬುದನ್ನು ನೋಡಬೇಕು. ಸೂಚನೆ ನೀಡದೆ ಇಲಿ ಬದಲಾವಣೆಗಳನ್ನು ಮಾಡಲಾಗಿದೆ. ನ್ಯಾಯಸಮ್ಮತತೆಗೆ ಸೂಚನೆಯ ಅಗತ್ಯವಿದೆ. ನ್ಯಾಯಸಮ್ಮತತೆಯನ್ನು ಕೇಳುವ ಅಗತ್ಯವಿದೆ. ಶಾಲೆಯಲ್ಲಿ ಯಾವುದೇ ತೊಂದರೆಯಾಗದಂತೆ ಪಿಟಿಎ (ಶಿಕ್ಷಕ-ರಕ್ಷಕ ಸಂಘ) ಸಮಿತಿಯನ್ನು ರಚಿಸಲಾಗಿದೆ, ಈ ವಿಚಾರದಲ್ಲಿ ಅವರನ್ನು ಸಂಪರ್ಕಿಸುವುದಿಲ್ಲ. ಆದರೆ ನ್ಯಾಯಸಮ್ಮತ ಸೂಚನೆ ನೀಡಬೇಕು.


ಅಡ್ವೊಕೇಟ್‌ ರವಿವರ್ಮ ಕುಮಾರ್: ಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಧಾರ್ಮಿಕ ಚಿಹ್ನೆಯನ್ನು ಹೊಂದಿರುವ ವ್ಯಕ್ತಿಯನ್ನು ತರಗತಿಗಳಿಗೆ ಏಕೆ ಹಾಜರಾಗಲು ಅನುಮತಿಸಬಾರದು ಎಂಬುದು ನನ್ನ ಸಲ್ಲಿಕೆಯಾಗಿದೆ. ಮುಸ್ಲಿಂ ಹೆಣ್ಣುಮಕ್ಕಳಿಳು ತರಗತಿಗಳಲ್ಲಿ ಕನಿಷ್ಠ ಪ್ರಾತಿನಿಧ್ಯದಲ್ಲಿ ಹಾಜರಾಗುತ್ತಿದ್ದಾರೆ ಎಂಬುದನ್ನು ನ್ಯಾಯಾಂಗ ಗಮನಿಸಬೇಕು. ಈ ನೆಪದಲ್ಲಿ ಅವರ ಶಿಕ್ಷಣವನ್ನು ಮುಚ್ಚಿಬಿಟ್ಟರೆ ಅದು ತುಂಬಾ ಕ್ರೂರವಾಗಿರುತ್ತದೆ.

ಅಡ್ವೊಕೇಟ್‌ ರವಿವರ್ಮ ಕುಮಾರ್ ತಮ್ಮ ವಾದವನ್ನು ಮುಕ್ತಾಯಗೊಳಿಸಿದರು. ಹಿರಿಯ ನ್ಯಾಯವಾದಿ ಯೂಸುಫ್ ಮುಚ್ಚಾಲ ಅವರು ತಮ್ಮ ಸಲ್ಲಿಕೆಗಳನ್ನು ಪ್ರಾರಂಭಿಸಿದರು.

ನನ್ನ ಸ್ನೇಹಿತರು ವಾದಿಸಿದ್ದನ್ನು ನಾನು ಅನುಮೋದಿಸುತ್ತೇನೆ. ಶ್ರೀ ಹೆಡ್ಗೆ, ದೇವದತ್ತ ಕಾಮತ್ ಮತ್ತು ಪ್ರೊಫೆಸರ್ ರವಿವರ್ಮ ಕುಮಾರ್. ಅವರು ಹೇಳದ ಎರಡು-ಮೂರು ಅಂಶಗಳನ್ನು ವಿವರಿಸಲು ನಾನು ಆಸಕ್ತನಾಗಿದ್ದೇನೆ.


ಅಡ್ವೊಕೇಟ್‌ ರವಿವರ್ಮ ಕುಮಾರ್: ನಮಗೆ ಅನುಮತಿ ಇಲ್ಲ, ನಮ್ಮ ಮಾತುಗಳನ್ನು ಕೇಳುವುದಿಲ್ಲ ಆದರೆ ತಕ್ಷಣ ಶಿಕ್ಷೆ ವಿಧಿಸಲಾಗುತ್ತದೆ. ಇದು ಹೆಚ್ಚು ಕ್ರೂರವಲ್ಲವೇ? ಅವರನ್ನು ಶಿಕ್ಷಕರು ಎಂದು ಕರೆಯಬಹುದೇ? ಇಲ್ಲಿ ಧರ್ಮದ ಕಾರಣದಿಂದ ಪೂರ್ವಾಗ್ರಹ ತುಂಬಿದೆ. ಯಾವುದೇ ಸೂಚನೆ ಇಲ್ಲ, ಕಾಯಿದೆ ಅಥವಾ ನಿಯಮಗಳ ಅಡಿಯಲ್ಲಿ ಅಧಿಕಾರವಿಲ್ಲದ ವ್ಯಕ್ತಿಗಳಿಂದ ಮಕ್ಕಳನ್ನು ನೇರವಾಗಿ ತರಗತಿಯಿಂದ ಹೊರಗೆ ಕಳುಹಿಸಲಾಗಿದೆ. ಮೂರನೆಯ ಸಲ್ಲಿಕೆ ಎಂದರೆ ಶಿಕ್ಷಣದ ಗುರಿಯು ಬಹುತ್ವವನ್ನು ಉತ್ತೇಜಿಸುವುದಾಗಿದೆ. ಏಕರೂಪತೆಯನ್ನು ಉತ್ತೇಜಿಸುವುದು ಅಲ್ಲ, ವೈವಿಧ್ಯತೆಯನ್ನು ಉತ್ತೇಜಿಸುವುದಾಗಿದೆ. ಸಮಾಜವು ವೈವಿಧ್ಯತೆಯನ್ನು ಗುರುತಿಸುವ ಮತ್ತು ಪ್ರತಿಬಿಂಬಿಸುವ ಸ್ಥಳವಾಗಬೇಕು.

ಅಡ್ವೊಕೇಟ್‌ ರವಿವರ್ಮ ಕುಮಾರ್ NALSA ತೀರ್ಪು (ತೃತೀಯ ಲಿಂಗಿಗಳ ಹಕ್ಕುಗಳ ಮೇಲೆ) ಮತ್ತು ನವತೇಜ್ ಸಿಂಗ್ ಜೋಹರ್ ತೀರ್ಪನ್ನು ಉಲ್ಲೇಖಿಸುತ್ತಾರೆ. ಅವರು "ರೋಸಮ್ಮ ಎ.ವಿ ವರ್ಸಸ್ ದಿ ಯೂನಿವರ್ಸಿಟಿ ಆಫ್ ಕ್ಯಾಲಿಕಟ್" ತೀರ್ಪನ್ನು ಉಲ್ಲೇಖಿಸುತ್ತಾರೆ. ಈ ತೀರ್ಪುಗಳು ವೈವಿಧ್ಯತೆಯು ವಿಶ್ವವಿದ್ಯಾನಿಲಯಗಳ ಧ್ಯೇಯವಾಗಿರಬೇಕು ಮತ್ತು ವೈವಿಧ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳುತ್ತದೆ.


ಮುಖ್ಯ ನ್ಯಾಯಮೂರ್ತಿ: ನೀವು ಆರ್ಟಿಕಲ್ 15 ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ ಎಂದು ಹೇಳುತ್ತಿದ್ದೀರಿ. ಆದರೆ ಎಲ್ಲಾ ಧರ್ಮಗಳ ಶಿರಸ್ತ್ರಾಣವನ್ನು ಧರಿಸುವುದನ್ನು ನಿಷೇಧಿಸಲಾಗಿದೆ.

ಅಡ್ವೊಕೇಟ್‌ ರವಿವರ್ಮ ಕುಮಾರ್: ಹಿಜಾಬ್ ಅನ್ನು ಮುಸ್ಲಿಮರು ಮಾತ್ರ ಧರಿಸುತ್ತಾರೆ. ಘೂಂಗಟ್‌ಗಳನ್ನು ಅನುಮತಿಸಲಾಗಿದೆ. ಬಳೆಗಳನ್ನು ಅನುಮತಿಸಲಾಗಿದೆ. ಇದೊಂದೇ ಏಕೆ, ಸಿಖ್ಖರ ಪೇಟ, ಕ್ರಿಶ್ಚಿಯನ್ನರ ಶಿಲುಬೆ ಏಕೆ ಪರಿಗಣಿಸುವುದಿಲ್ಲ?

ನ್ಯಾಯಮೂರ್ತಿ ದೀಕ್ಷಿತ್: ಅಕೇಶಿಯಾದಿಂದ ಬಳಲುತ್ತಿರುವ ಅನ್ಯ ಧರ್ಮದ ಹುಡುಗಿ ತನ್ನ ರೋಗವನ್ನು ಮುಚ್ಚಿಕೊಳ್ಳಲು ಶಿರೋವಸ್ತ್ರವನ್ನು ಧರಿಸಿದ್ದರೂ ಸಹ ಅವಳನ್ನು ಅನುಮತಿಸಲಾಗುವುದಿಲ್ಲವೇ?.

ಅಡ್ವೊಕೇಟ್‌ ರವಿವರ್ಮ ಕುಮಾರ್: ಅವಳು ವಿನಾಯಿತಿಗಾಗಿ ಅರ್ಜಿ ಸಲ್ಲಿಸಬಹುದು. ಆ ಉದಾಹರಣೆ ಇಲ್ಲಿ ಅನ್ವಯವಾಗದಿರಬಹುದು. ಇದೊಂದು ಮಾನವೀಯ ಪ್ರಕರಣವಾಗಿದ್ದು ಇದನ್ನು ಪರಿಗಣಿಸಲಾಗುವುದು.


ಕುಮಾರ್: ನಾನು ಸಮಾಜದ ಎಲ್ಲಾ ವರ್ಗಗಳಲ್ಲಿ ಧಾರ್ಮಿಕ ಸಂಕೇತಗಳ ವ್ಯಾಪಕ ವೈವಿಧ್ಯತೆಯನ್ನು ಮಾತ್ರ ತೋರಿಸುತ್ತಿದ್ದೇನೆ. ಸರ್ಕಾರವು ಕೇವಲ ಹಿಜಾಬ್ ಅನ್ನು ಏಕೆ ಆರಿಸುತ್ತಿದೆ ಮತ್ತು ಈ ಪ್ರತಿಕೂಲ ತಾರತಮ್ಯವನ್ನು ಏಕೆ ಮಾಡುತ್ತಿದೆ? ಬಳೆಗಳನ್ನು ಧರಿಸಲಾಗುತ್ತದೆಯಲ್ಲವೇ? ಅವು ಧಾರ್ಮಿಕ ಸಂಕೇತಗಳಲ್ಲವೇ? ಈ ಬಡ ಮುಸ್ಲಿಂ ಹುಡುಗಿಯರನ್ನು ಏಕೆ ಆರಿಸುತ್ತಿದ್ದೀರಿ?

ಮುಖ್ಯ ನ್ಯಾಯಮೂರ್ತಿ: ಸರಿ. ನಾವು ಇದನ್ನು ಗಮನಿಸಿದ್ದೇವೆ.

ಕುಮಾರ್: ಅರ್ಜಿದಾರರನ್ನು ತರಗತಿಯಿಂದ ಹೊರಗೆ ಕಳುಹಿಸುತ್ತಿರುವುದು ಆಕೆಯ ಧರ್ಮದ ಕಾರಣದಿಂದ ಮಾತ್ರ. ಬಿಂದಿ ಹಾಕಿದ ಹುಡುಗಿಯನ್ನು ಹೊರಗೆ ಕಳುಹಿಸುವುದಿಲ್ಲ, ಬಳೆ ತೊಟ್ಟ ಹುಡುಗಿಯನ್ನು ಹೊರಗೆ ಕಳುಹಿಸುವುದಿಲ್ಲ. ಶಿಲುಬೆಯನ್ನು ಧರಿಸಿರುವ ಕ್ರಿಶ್ಚಿಯನ್ ಹುಡುಗಿಯನ್ನು ಮುಟ್ಟುವುದಿಲ್ಲ. ಈ ಹುಡುಗಿಯರು ಮಾತ್ರ ಏಕೆ? ಇದು ಕಲಂ 15ರ ಉಲ್ಲಂಘನೆಯಾಗಿದೆ


ಕುಮಾರ್: ಕಾಲೇಜಿಗೆ ಹೋಗುವ ಹುಡುಗಿಯರು ಹಿಂದೂ, ಮುಸ್ಲಿಂ ಅಥವಾ ಕ್ರಿಶ್ಚಿಯನ್ ಆಗಿರಲಿ ದುಪ್ಪಟ್ಟಾವನ್ನು ಧರಿಸುತ್ತಾರೆ ಎಂಬ ಅಂಶವನ್ನು ದಯವಿಟ್ಟು ನ್ಯಾಯಾಂಗ ಗಮನಿಸಿ.

ನ್ಯಾಯಮೂರ್ತಿ ದೀಕ್ಷಿತ್: ಈ ಸಂಶೋಧನಾ ಪತ್ರಿಕೆಯ ನೈಜತೆ ಮತ್ತು ಸತ್ಯಾಸತ್ಯತೆ ಏನು? ಪ್ರತಿನಿಧಿ ಮಾದರಿ ಎಂದರೇನು? 

ಕುಮಾರ್:‌ ಇದನ್ನು ಒಪ್ಪಿಕೊಳ್ಳುವಂತೆ ನಾನು ಒತ್ತಾಯಿಸುತ್ತಿಲ್ಲ. ಧಾರ್ಮಿಕ ವೈವಿಧ್ಯತೆಯನ್ನು ತೋರಿಸಲು ಮಾತ್ರ ನಾನು ನ್ಯಾಯಾಲಯದ ಗಮನಕ್ಕೆ ತರುತ್ತಿದ್ದೇನೆ. ನೂರಾರು ಧಾರ್ಮಿಕ ಚಿಹ್ನೆಗಳಿರುವಾಗ ಏಕೆ ಹಿಜಾಬನ್ನು ಮಾತ್ರ ಆರಿಸಲಾಗುತ್ತದೆ? ಬಳೆಗಳನ್ನೂ ಧರಿಸಲಾಗುತ್ತಿದೆ ಅದು ಧಾರ್ಮಿಕ ಸಂಕೇತವಲ್ಲವೇ?

ನ್ಯಾಯಮೂರ್ತಿ ದೀಕ್ಷಿತ್ ಮಧ್ಯಪ್ರವೇಶಿಸುತ್ತಾರೆ: ಈ ಸಂಶೋಧನಾ ಪ್ರಬಂಧದ ಸತ್ಯಾಸತ್ಯತೆಯನ್ನು ಹೇಳದ ಹೊರತು ಅದು ಏನು ಹೇಳುತ್ತದೆ ಎಂಬುದನ್ನು ನಾವು ಅನುಸರಿಸಲು ಸಾಧ್ಯವಿಲ್ಲ


ಕುಮಾರ್: ಅನುದಾನವನ್ನು ಬಳಸಿಕೊಳ್ಳಲು ಮತ್ತು ಶಿಕ್ಷಣ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಕಾಲೇಜು ಅಭಿವೃದ್ಧಿ ಸಮಿತಿಯನ್ನು ರಚಿಸಲಾಗುವುದು ಎಂದು ಸುತ್ತೋಲೆ ಹೇಳುತ್ತದೆ. ಈ ಕಾಲೇಜು ಅಭಿವೃದ್ಧಿ ಸಮಿತಿಯನ್ನು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಅಲ್ಲ. ಇದು ಶೈಕ್ಷಣಿಕ ಮಾನದಂಡಗಳಿಗೆ ಮಾತ್ರ.

ಸಿಜೆ: ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಮವಸ್ತ್ರವನ್ನು ಶಿಫಾರಸು ಮಾಡಲಾಗುವುದಿಲ್ಲವೇ?

ಕುಮಾರ್: ಶೈಕ್ಷಣಿಕ ಮಾನದಂಡಗಳು ವಿದ್ಯಾರ್ಥಿ-ಶಿಕ್ಷಕ, ಪಠ್ಯಕ್ರಮ ಇತ್ಯಾದಿಗಳೊಂದಿಗೆ ವ್ಯವಹರಿಸುತ್ತದೆ. ಕಾಲೇಜು ಅಭಿವೃದ್ಧಿ ಸಮಿತಿ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಅಧಿಕಾರವನ್ನು ಹೊಂದಿರುವುದಿಲ್ಲ.

ನ್ಯಾಯಮೂರ್ತಿ ದೀಕ್ಷಿತ್: ಪೋಲೀಸ್ ಶಕ್ತಿ ಎಂದರೇನು ಸಾರ್? ಸಂಸ್ಕೃತ ಪಾಠಶಾಲೆಗಳು ಸಮವಸ್ತ್ರವನ್ನು ಸೂಚಿಸುತ್ತವೆ, ಅದು ಪೊಲೀಸ್ ಅಧಿಕಾರವಾಗಿರಬಹುದೇ?

ಕುಮಾರ್: ವಿದ್ಯಾರ್ಥಿಗಳ ಮೇಲಿನ ಮೇಲ್ವಿಚಾರಣೆಯನ್ನು ಪೊಲೀಸ್ ಅಧಿಕಾರ ಎಂದು ಕರೆಯಲಾಗುತ್ತದೆ.

ನ್ಯಾಯಮೂರ್ತಿ ದೀಕ್ಷಿತ್: ನ್ಯಾಯಾಂಗದ ಅಭಿಪ್ರಾಯ ವಿಭಿನ್ನವಾಗಿದೆ. ಇದನ್ನು ಪೋಲೀಸ್ ಶಕ್ತಿಯಲ್ಲ ಪೋಷಕರ ಶಕ್ತಿ ಎಂದು ಕರೆಯಲಾಗುತ್ತದೆ.


ನ್ಯಾಯಮೂರ್ತಿ ದೀಕ್ಷಿತ್: ಅದು ಸರಿಯಾದ ಪ್ರಶ್ನೆ ಅಲ್ಲದಿರಬಹುದು. ಆ ದೃಷ್ಟಿಕೋನವನ್ನು ತೆಗೆದುಕೊಂಡರೆ, ಯಾವುದೇ ನಿಷೇಧವಿಲ್ಲದ ಕಾರಣ ತರಗತಿಯಲ್ಲಿ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಯಾವುದೇ ಪರವಾನಗಿ ಅಗತ್ಯವಿಲ್ಲ ಎಂದು ಯಾರಾದರೂ ಹೇಳಬಹುದು. ನಿಮ್ಮ ಪ್ರತಿಪಾದನೆಯು ನಮ್ಮನ್ನು ಎಲ್ಲಿಗೆ ಕೊಂಡೊಯ್ಯಬಹುದು ಎಂಬುದನ್ನು ನಾನು ತಾರ್ಕಿಕವಾಗಿ ವಿಶ್ಲೇಷಿಸುತ್ತಿದ್ದೇನೆ.

ಕುಮಾರ್:‌ ನಾನು ಹಿಜಾಬ್‌ ವಿರುದ್ಧ ಯಾವುದೇ ನಿಷೇಧವಿಲ್ಲ ಎಂದು ಹೇಳುತ್ತಿದ್ದೇನೆ. ಆಗ ಮೂಡುವ ಪ್ರಶ್ನೆಯೇನೆಂದರೆ ಯಾವ ಅಧಿಕಾರ ಅಥವಾ ನಿಯಮಗಳ ಅಡಿಯಲ್ಲಿ ನನ್ನನ್ನು ತರಗತಿಯಿಂದ ಹೊರಗಿಡಲಾಗಿದೆ ಎಂಬುದಾಗಿದೆ. 

ಕುಮಾರ್: ಶಿಕ್ಷಣ ಕಾಯಿದೆಯ ಸೆಕ್ಷನ್ 143 ಆಕ್ಟ್ ಅಡಿಯಲ್ಲಿ ಅಧಿಕಾರಿಗಳಿಗೆ ನಿಯೋಗದ ಬಗ್ಗೆ ವ್ಯವಹರಿಸುವಂತೆ ಸೂಚಿಸುತ್ತದೆ. ಆದರೆ ಕಾಲೇಜು ಅಭಿವೃದ್ಧಿ ಸಮಿತಿಯು ಅಧಿಕಾರವಲ್ಲ, ಅಧೀನ ಪ್ರಾಧಿಕಾರ ಎಂದು ನಾನು ಈಗಾಗಲೇ ತೋರಿಸಿದ್ದೇನೆ. ಕಾಲೇಜು ಅಭಿವೃದ್ಧಿ ಸಮಿತಿಗಳನ್ನು 2014 ರಲ್ಲಿ ಸುತ್ತೋಲೆ ಮೂಲಕ ರಚಿಸಲಾಗಿದೆ. ಈ ಬಗ್ಗೆ ಆದೇಶವನ್ನೂ ಹೊರಡಿಸಲಾಗಿಲ್ಲ. "ಈ ಸುತ್ತೋಲೆ, ಅಧೀನ ಕಾರ್ಯದರ್ಶಿ ಹೊರಡಿಸಿದ ಆದೇಶವಲ್ಲ, ಸರ್ಕಾರದ ಹೆಸರಿನ ಆದೇಶವೂ ಅಲ್ಲ"


ಮು. ನ್ಯಾಯಮೂರ್ತಿ: ಇದನ್ನು ಯಾರು ಹೊರಡಿಸಿದ್ದಾರೆ? ಯಾವುದನ್ನೂ ನೀವು ಬಹಿರಂಗಪಡಿಸಿಲ್ಲ. 

ಕುಮಾರ್: ಇದು ಎಲ್ಲಾ ಪಿಯು ಕಾಲೇಜುಗಳಿಗೆ ಇಲಾಖೆ ಹೊರಡಿಸಿದ ಮಾರ್ಗಸೂಚಿಯ ಸ್ವರೂಪದಲ್ಲಿದೆ.
ಮು.ನ್ಯಾ: ಇದು ನಿಯಮವಾಗಿರಲು ಸಾಧ್ಯವಿಲ್ಲ.

ಕುಮಾರ್:‌ ಇದು ನಿಯಮವಲ್ಲ. ಆದರೆ ಪಿಯು ಕಾಲೇಜುಗಳಿಗೆ ಸಮವಸ್ತ್ರ ನಿಗದಿ ಮಾಡಿಲ್ಲ ಎನ್ನುವುದನ್ನು ಪುಷ್ಠೀಕರಿಸುತ್ತದೆ.  ನಾನು ಈ ದಾಖಲೆಯನ್ನು ಜಾರಿಗೊಳಿಸುವ ಬಗ್ಗೆ ಹೇಳುತ್ತಿಲ್ಲ. ಇಲಾಖೆಯೇ ಹೇಳಿದ್ದನ್ನು ತೋರಿಸಲು ಮಾತ್ರ ನಾನು ಈ ದಾಖಲೆಯನ್ನು ಇರಿಸುತ್ತಿದ್ದೇನೆ. ಸಮವಸ್ತ್ರವನ್ನು ಸೂಚಿಸಲಾಗಿಲ್ಲ, ಪ್ರಾಂಶುಪಾಲರು ಸಮವಸ್ತ್ರಕ್ಕಾಗಿ ಒತ್ತಾಯಿಸಬಾರದು ಮತ್ತು ಸಮವಸ್ತ್ರವನ್ನು ಒತ್ತಾಯಿಸಿದರೆ ಶಿಸ್ತು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂಬ ದೃಢವಾದ ಹೇಳಿಕೆ ಇದರಲ್ಲಿದೆ.


ಅಡ್ವೊಕೇಟ್‌ ಕುಮಾರ್:‌ ಕಾಲೇಜು ಅಭಿವೃದ್ಧಿ ಮಂಡಳಿಯು ನಿಯಮಗಳ ಅಡಿಯಲ್ಲಿ ಸ್ಥಾಪಿಸಲಾದ ಅಥವಾ ಮಾನ್ಯತೆ ಪಡೆದ ಪ್ರಾಧಿಕಾರವಲ್ಲ ಎಂಬ ಅಂಶವನ್ನು ಗಮನಿಸುವುದು ಬಹಳ ಮುಖ್ಯ. ಸರಕಾರದ ಆದೇಶದಲ್ಲಿ ಪಿಯು ಕಾಲೇಜುಗಳಿಗೆ ಯಾವುದೇ ಸಮವಸ್ತ್ರವನ್ನು ಸೂಚಿಸಿಲ್ಲ ಎಂದು ಉಲ್ಲೇಖಿಸಲಾಗಿದೆ. ಸರಕಾರಿ ಪಿಯು ಕಾಲೇಜುಗಳಲ್ಲಿ ಸಮವಸ್ತ್ರವನ್ನು ಧರಿಸುವಂತೆ ಆದೇಶಿಸುವುದೇ ನಿಯಮ ಉಲ್ಲಂಘನೆಯಾಗಿದೆ. 

ಸಿಜೆ: ಇದು ಪದವಿಪೂರ್ವ ಸರ್ಕಾರಿ ಕಾಲೇಜಿಗೆ ಅನ್ವಯಿಸುತ್ತದೆಯೇ?.

ಕುಮಾರ್: ಹೌದು.

ಸಿಜೆ: ಈ ದಾಖಲೆ ಏನು?

ಕುಮಾರ್: ಇದು 2021-22ರ ಶೈಕ್ಷಣಿಕ ವರ್ಷಕ್ಕೆ ಸರ್ಕಾರಿ ಇಲಾಖೆ, ಅಂದರೆ ಪಿಯು ಶಿಕ್ಷಣ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳು.


ಸಹಾಯದ ಅವಶ್ಯಕತೆಯಿದೆ ಎಂದು ಪೀಠವು ಭಾವಿಸಿದರೆ ಮಧ್ಯಸ್ಥಗಾರ ವಾದಗಳನ್ನು ಆಲಿಸಲಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿಕೆ ನೀಡುತ್ತಾರೆ.

‌ಹಿರಿಯ ವಕೀಲರಾದ ಪ್ರೊ. ರವಿವರ್ಮ ಕುಮಾರ್ ಈಗ ಸಲ್ಲಿಕೆಗಳನ್ನು ಪುನರಾರಂಭಿಸಿದ್ದಾರೆ. ಅವರು ಶಿಕ್ಷಣ ಕಾಯ್ದೆಯನ್ನು ಉಲ್ಲೇಖಿಸುತ್ತಿದ್ದಾರೆ.

ಸಮವಸ್ತ್ರವನ್ನು ಬದಲಾಯಿಸಲು ಶಿಕ್ಷಣ ಸಂಸ್ಥೆಯು ಪೋಷಕರಿಗೆ ಒಂದು ವರ್ಷದ ಮುಂಚಿತವಾಗಿ ನೋಟಿಸ್ ನೀಡಬೇಕು ಎಂದು ಹೇಳುವ ಶಿಕ್ಷಣ ನಿಯಮಗಳ 11 ನೇ ನಿಯಮವನ್ನು ಅವರು ಉಲ್ಲೇಖಿಸುತ್ತಾರೆ. ಹಿಜಾಬ್ ಮೇಲೆ ನಿಷೇಧ ಹೇರಬೇಕಾದರೆ ಒಂದು ವರ್ಷ ಮೊದಲೇ ನೋಟಿಸ್ ನೀಡಬೇಕಿತ್ತು. 1995 ರಲ್ಲಿ ಮಾಡಲಾದ ಈ ನಿಬಂಧನೆಗಳು ಸಾಮಾನ್ಯ ಗುಣಲಕ್ಷಣಗಳಾಗಿವೆ. ಪಿಯು ಕಾಲೇಜುಗಳು ಬೇರೆ ನಿಯಮದಡಿ ಬರುತ್ತವೆ. 


ಮುಖ್ಯ ನ್ಯಾಯಮೂರ್ತಿ: ಅರ್ಜಿದಾರರನ್ನು ಹಿರಿಯ ವಕೀಲರು ಪ್ರತಿನಿಧಿಸುತ್ತಿದ್ದಾರೆ. ಮಧ್ಯಸ್ಥಿಕೆಗಳನ್ನು ಪರಿಗಣಿಸುವ ಪ್ರಶ್ನೆ ಎಲ್ಲಿದೆ? ಈ ಅರ್ಜಿಗಳು ನ್ಯಾ�

share
ವಾರ್ತಾಭಾರತಿ
ವಾರ್ತಾಭಾರತಿ
Next Story
X