ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಫೆ.16: ರಾಜ್ಯ ಸರಕಾರವು ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಿಸಿದೆ.
ಮೈಸೂರು ಜಿಲ್ಲೆ ದಕ್ಷಿಣ ವಲಯ ಐಜಿಪಿಯಾಗಿದ್ದ ಪವಾರ್ ಪ್ರವೀಣ್ ಮಧುಕರ್ ಅವರನ್ನು ಮೈಸೂರಿನ ರಾಜ್ಯ ಪೊಲೀಸ್ ಅಕಾಡೆಮಿಯ ನಿರ್ದೇಶಕರನ್ನಾಗಿ, ಬೆಂಗಳೂರು ಜಿಲ್ಲೆಯ ನೇಮಕಾತಿ ವಿಭಾಗದ ಡಿಐಜಿಪಿಯಾಗಿದ್ದ ಡಾ.ಕೆ.ತ್ಯಾಗರಾಜನ್ ಅವರನ್ನು ದಾವಣಗೆರೆ ಜಿಲ್ಲೆ ಪೂರ್ವ ವಲಯ ಐಜಿಪಿಯಾಗಿ ಹಾಗೂ ಕೆಪಿಸಿಎಲ್(ಜಾಗೃತ ದಳ) ಎಸ್ಪಿಯಾಗಿದ್ದ ಎಂ.ಎ.ಅಯ್ಯಪ್ಪ ಅವರನ್ನು ಕೊಡಗು ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
Next Story