ಹಿರಿಯ ವಿದ್ವಾಂಸ ಕೆ.ಎನ್. ಅಬ್ದುಲ್ಲಾ ಮುಸ್ಲಿಯಾರ್ ತಾಝೆಕ್ಕೋಡ್ ನಿಧನ
ಎಸ್.ವೈ.ಎಸ್. ಸಂತಾಪ
ಉಳ್ಳಾಲ : ಸಯ್ಯಿದ್ ಮದನಿ ಅರಬಿಕ್ ಕಾಲೇಜಿನಲ್ಲಿ ನಾಲ್ಕು ದಶಕಗಳ ಕಾಲ ಮುದರ್ರಿಸ್ ಆಗಿದ್ದ ಪ್ರಮುಖ ವಿದ್ವಾಂಸ ಕೆ.ಎನ್. ಅಬ್ದುಲ್ಲಾ ಮುಸ್ಲಿಯಾರ್ ತಾಝೆಕ್ಕೋಡ್ (ಪೆರಿಂದಲ್ ಮಣ್ಣ, ಮಲಪ್ಪುರಂ ಜಿಲ್ಲೆ, ಕೇರಳ) ತಾಝೆಕ್ಕೋಡಿನ ವಸತಿಯಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಅಬ್ದುಲ್ಲಾ ಮುಸ್ಲಿಯಾರ್ ತಾಝೆಕ್ಕೋಡ್ ಮೊಹಲ್ಲಾ ಖಾಝಿ ಮತ್ತು ಅಧ್ಯಕ್ಷರಾಗಿದ್ದರು. ಅವರ ನಿಧನಕ್ಕೆ ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಮೃತರು ಪತ್ನಿ, ಪುತ್ರ-ಪುತ್ರಿಯರು, ಅಳಿಯ ಮಂಗಳೂರು ಜೆಪ್ಪು ಮುದರ್ರಿಸ್ ಮುಹಮ್ಮದ್ ಮದನಿ ಸಮೇತ ಅಪಾರ ಬಂಧು ಬಳಗ ಮತ್ತು ಸಾವಿರಾರು ಶಿಷ್ಯಂದಿರನ್ನು ಅವರು ಅಗಲಿದ್ದಾರೆ. ದಫನ ಕಾರ್ಯವು ಇಂದು ಸಂಜೆ ನಾಲ್ಕು ಗಂಟೆಗೆ ತಾಝೆಕ್ಕೋಡ್ ಜುಮಾ ಮಸ್ಜಿದ್ ಖಬರ್ಸ್ಥಾನದಲ್ಲಿ ನಡೆಯಲಿದೆ ಮೂಲಗಳು ತಿಳಿಸಿವೆ.
ಅವರ ಹೆಸರಲ್ಲಿ ಎಸ್.ವೈ.ಎಸ್.ಶಾಖೆಗಳಲ್ಲಿ ಪ್ರಾರ್ಥನಾ ಸಂಗಮಗಳನ್ನು ಏರ್ಪಡಿಸಲು ಮತ್ತು ಮಯ್ಯಿತ್ ನಮಾಝ್ ನಿರ್ವಹಿಸಲು ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ವಿನಂತಿಸಿದ್ದಾರೆ.