Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಸಿನಿಗಣ್ಣು
  4. ‘ಮೂವ್ ಟು ಹೆವೆನ್’ ಒಂದು ಸ್ವರ್ಗೀಯ...

‘ಮೂವ್ ಟು ಹೆವೆನ್’ ಒಂದು ಸ್ವರ್ಗೀಯ ಅನುಭವ

ಮುಸಾಫಿರ್ಮುಸಾಫಿರ್20 Feb 2022 12:05 AM IST
share
‘ಮೂವ್ ಟು ಹೆವೆನ್’ ಒಂದು ಸ್ವರ್ಗೀಯ ಅನುಭವ

‘ಮೂವ್ ಟು ಹೆವೆನ್’ ಕಳೆದ ವರ್ಷ ಬಿಡುಗಡೆಗೊಂಡಿರುವ ಕೊರಿಯನ್ ಸರಣಿ. ನೆಟ್‌ಫ್ಲಿಕ್ಸ್‌ನಲ್ಲಿ ಇದು ಸುದ್ದಿ ಮಾಡುತ್ತಿದೆ. ಹಲವು ಭಾವನೆಗಳ ಸಂಗಮವಿದು. ಮೃತನ ಕೊಠಡಿಗಳನ್ನು ಕ್ಲೀನ್ ಮಾಡಿಕೊಡುವ ಸಂಸ್ಥೆಯ ಹೆಸರು ‘ಮೂವ್ ಟು ಹೆವೆನ್’. ತಂದೆ ಮತ್ತು ವಿಶೇಷ ಚೇತನವುಳ್ಳ ಆತನ ಮಗ ಈ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದಾರೆ. ಕೊಠಡಿಯನ್ನು ಶುಚಿ ಮಾಡಿಕೊಂಡುವುದಷ್ಟೇ ಅವರ ಕೆಲಸವಲ್ಲ. ಇದರ ಜೊತೆಜೊತೆಗೆ ಸಾವು, ಬದುಕು ಮತ್ತು ಸಾವಿನಾಚೆಯ ಮಾತುಗಳನ್ನು ಆಲಿಸಿ ಅದನ್ನು ತಲುಪಿಸಬೇಕಾದವರಿಗೆ ತಲುಪಿಸುವ ಹೊಣೆಗಾರಿಕೆಯನ್ನು ಇವರು ಹೊತ್ತಿದ್ದಾರೆ. ಒಂದು ದಿನ ತಂದೆ ಆಕಸ್ಮಿಕವಾಗಿ ಸಾಯುತ್ತಾರೆ. ಸಾಯುವ ಮೊದಲು ತನ್ನ ಮಗನ ಗಾರ್ಡಿಯನ್ ಆಗಿ, ಈಗಾಗಲೇ ಕೊಲೆಗಾರನ ಆರೋಪದಲ್ಲಿ ಜೈಲು ಕಂಬಿ ಎಣಿಸಿರುವ ತಮ್ಮನನ್ನೇ ನೇಮಿಸಿರುತ್ತಾನೆ. ಆತನ ಪ್ರವೇಶದ ಬಳಿಕ ನಡೆಯುವ ಒಂದೊಂದು ಬೆಳವಣಿಗೆಗಳು ನಿಮ್ಮನ್ನು ಭಾವ ವಿಸ್ಮಯಕ್ಕೆ ತಳ್ಳಿ ಬಿಡುತ್ತವೆ. ತಂದೆ-ಮಗ, ಅಣ್ಣ-ತಮ್ಮ, ಪತಿ-ಪತ್ನಿ, ತಾಯಿ-ಮಗ, ಗೆಳೆಯ-ಗೆಳತಿ ಹೀಗೆ ಹಲವು ಸಂಬಂಧಗಳನ್ನು ಹೃದಯಸ್ಪರ್ಶಿಯಾಗಿ ಈ ಸರಣಿ ಕಟ್ಟಿಕೊಡುತ್ತದೆ. ಇದರ ನಿರೂಪಣೆಯೂ ಅತ್ಯಂತ ಉಲ್ಲಾಸದಾಯಕವಾಗಿದೆ. ಕುತೂಹಲ, ಹಾಸ್ಯ, ವಿಸ್ಮಯ, ವಿಷಾದ ಒಂದಕ್ಕೊಂದು ಬೆಸೆದುಕೊಂಡಿವೆ. ಒಂದು ರೀತಿಯಲ್ಲಿ ಇದು ಪುಟ್ಟ ಪುಟ್ಟ ಕತೆಗಳ ಗೊಂಚಲಂತೆ ಕಾಣುತ್ತದೆ. ಆದರೆ ಒಟ್ಟಾರೆಯಾಗಿ ಇಡೀ ಸಿನೆಮಾವಾಗಿ ಬೆಳೆಯುತ್ತದೆ. ನೀವು ಪತ್ತೇದಾರಿಕೆಯನ್ನು ಇಷ್ಟಪಡುವವರಾದರೆ ಇದೊಂದು ಪತ್ತೇದಾರಿ ಸರಣಿ. ನೀವು ಭಾವನಾತ್ಮಕ ಕತೆಗಳನ್ನು ಇಷ್ಟಪಡುವವರಾದರೆ ಇದೊಂದು ಭಾವನಾತ್ಮಕ ಸರಣಿ. ಥ್ರಿಲ್ಲರ್ ಕತೆಯನ್ನು ಇಷ್ಟ ಪಡುವವರಾದರೆ ಇದೊಂದು ಥ್ರಿಲ್ಲರ್ ಸರಣಿ. ದುರಂತ ಕತೆಗಳನ್ನು ಇಷ್ಟಪಡುವವರಾದರೆ ಮನುಷ್ಯರ ದುರಂತಗಳ ಸಾಲುಸಾಲುಗಳನ್ನು ನೀವಿಲ್ಲಿ ನೋಡಬಹುದು. ಈ ಸರಣಿ ದುಃಖಾಂತವೂ ಹೌದು. ಸುಖಾಂತ್ಯವೂ ಹೌದು. ನಿರೂಪಣಾ ತಂತ್ರವೇ ಸರಣಿಯ ಹೆಗ್ಗಳಿಕೆ.

ಕಿಂ ಸಂಗ್ ಹೋ ಈ ಸರಣಿಯನ್ನು ನಿರ್ದೇಶಿಸಿದ್ದಾರೆ. ಹಿಂದಿಯಲ್ಲೂ ಸರಣಿಯ ಡಬ್ಬಿಂಗ್ ಇದೆ. ನಿಮಗೊಂದು ಸ್ವರ್ಗೀಯ ಅನುಭವವನ್ನು ತಂದುಕೊಡುವ ಈ ಸರಣಿಯನ್ನು ಅವಶ್ಯ ನೋಡಬಹುದು.

share
ಮುಸಾಫಿರ್
ಮುಸಾಫಿರ್
Next Story
X