Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅರಿವುಗೇಡಿತನ

ಅರಿವುಗೇಡಿತನ

ಮನೋ ಚರಿತ್ರೆ

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್20 Feb 2022 12:33 PM IST
share
ಅರಿವುಗೇಡಿತನ

ತನ್ನ ಮಗುವಿಗೆ ಮೆಡ್ಯುಲೋ ಬ್ಲಾಸ್ಟೊಮಾ ಅಂತ ಡಾಕ್ಟರ್ ತಾಯಿಗೆ ಹೇಳಿದರು. ತನ್ನ ಮಗುವಿಗೆ ಕ್ಯಾನ್ಸರ್ ಇದೆ ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲದ ತಾಯಿ, ಬಹುಶಃ ತಪ್ಪುತಪಾಸಣೆಯಿಂದ ಅಥವಾ ಆ ವೈದ್ಯರ ಅಧ್ಯಯನ ದೋಷದಿಂದ ಈ ರಿಪೋರ್ಟ್ ಬಂದಿರಬಹುದು, ಬೇರೆ ಕಡೆ ತೋರಿಸೋಣ ಎಂದು ಬೇರೆ ಡಾಕ್ಟರ್ ಬಳಿಗೆ ತನ್ನ ಮಗುವನ್ನು ಕೊಂಡೊಯ್ದಳು. ಇದು ಸಹಜ. ಮಾರಣಾಂತಕವಾಗಿರಬಹುದಾದ ಒಂದು ಕಾಯಿಲೆ ತನ್ನ ಮಗುವಿಗೆ ವಕ್ಕರಿಸಿದೆ ಎಂದು ಒಪ್ಪಿಕೊಳ್ಳಲು ಅವಳಿಗೆ ಆಗದು. ಆ ಮಗುವು ಸದೃಢವಾಗಿ, ಆರೋಗ್ಯವಾಗಿ, ಚೆಂದವಾಗಿ ಇರಬೇಕೆಂದು ಬಯಸುವವಳು ಮತ್ತು ಆ ಬಗೆಯದೇ ಕನಸುಗಳನ್ನು ಕಾಣುವವಳು.

ತಮಗೇ ಏನಾದರೂ ಈ ಬಗೆಯ ಸಮಸ್ಯೆ ಇದೆ ಎಂದರೆ ಒಪ್ಪಿಕೊಳ್ಳಲು ಸಾಮಾನ್ಯವಾದ ಮನಸ್ಥಿತಿಯು ಸಿದ್ಧವಿರುವುದಿಲ್ಲ. ಸೆಕೆಂಡರಿ ಒಪೀನಿಯನ್ ತೆಗೆದುಕೊಳ್ಳುವ ನೆಪದಲ್ಲಿ ಅದನ್ನು ಸುಳ್ಳಾಗಿಸಿಕೊಳ್ಳಲು ಬೇರೆ ಬೇರೆ ತಪಾಸಣೆಗಳಿಗೆ ಮುಂದಾಗುತ್ತಾರೆ. ಇದು ಸಹಜ ಬದುಕಿನ ಪ್ರೀತಿ. ಆದರೆ ಸಮಸ್ಯೆಯ ವಾಸ್ತವತೆಯನ್ನು ಅರಿತುಕೊಂಡು ನಂತರ ಅದನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಾರೆ.

ಆದರೆ ಕೆಲವರ ವಿಷಯದಲ್ಲಿ ಪ್ರಾರಂಭದಲ್ಲಿ ಒಪ್ಪದಿರುವುದು ಮಾತ್ರವಲ್ಲ, ಯಾವಾಗಲೂ ಒಪ್ಪರು. ತಾವೊಂದು ಸ್ಥಿತಿಯನ್ನು ಭಾವಿಸಿಕೊಂಡಿರುತ್ತಾರೆ, ಅದು ಹೇಗೇ ಬದಲಾಗಿದ್ದರೂ ತಮ್ಮ ಪೂರ್ವನಿರ್ಧಾರಿತ ಅಥವಾ ಪೂರ್ವನಿರ್ಮಿತ ಮನಸ್ಥಿತಿಯಿಂದ ಹೊರಗೆ ಬರಲಾರರು. ಒಂದು ಸಣ್ಣ ಉದಾಹರಣೆ. ಆತನಿಗೆ ನಾವೇನು ಹೇಳಿದರೂ ಕೇಳಿಸುತ್ತಿರಲಿಲ್ಲ. ಆತ ನಮಗೇ ಹೇಳುತ್ತಿದ್ದ ‘‘ಸರಿಯಾಗಿ ಮಾತಾಡಿ. ಅದ್ಯಾಕೆ ಮೆಲ್ಲಮೆಲ್ಲಗೆ ಗೊಣಗಿಕೊಳ್ಳುತ್ತೀರಿ’’ ಅಂತ. ನಾವು ಸರಿಯಾದ ಎತ್ತರದ ಧ್ವನಿಯಲ್ಲಿ ಹೇಳಿದರೂ ಆತ ದೂರುವುದು ನಮ್ಮನ್ನೇ, ‘‘ನೀವು ಸರಿಯಾಗಿ ಮಾತಾಡುತ್ತಿಲ್ಲ!’’ ಎಂದು. ಏಕೆಂದರೆ ತಾನು ಕಿವುಡೆಂದು ಆತನಿಗೆ ಒಪ್ಪಿಕೊಳ್ಳಲಾಗಲಿ, ತಪಾಸಣೆಗೊಳಗಾಗುವುದಾಗಲಿ, ಕಿವಿಗೊಂದು ಶ್ರವಣ ಯಂತ್ರವನ್ನು ಸಿಗಿಸಿಕೊಳ್ಳುವುದಾಗಲಿ ಸುತಾರಾಂ ಸಾಧ್ಯವಿಲ್ಲ. ಇದನ್ನೇ ಅರಿವುಗೇಡಿತನ ಎನ್ನುವುದು. ಮನೋವಿಜ್ಞಾನದಲ್ಲಿ ಇದನ್ನು ತಮ್ಮ ಬಗೆಗಿನ ವಾಸ್ತವತೆಯನ್ನು ಅರಿತುಕೊಳ್ಳಲು ಸಾಧ್ಯವಾಗದ ಈ ದೌರ್ಬಲ್ಯವನ್ನು ಅನೊಸೊಗ್ನೇಶಿಯಾ ಎಂದು ಕರೆಯುತ್ತಾರೆ. ಒಪ್ಪಿಕೊಳ್ಳಲು ಇರುವ ಮನಸ್ಸಿನ ಹಟಮಾರಿತನ ಮಾತ್ರವಲ್ಲ. ಅದು ಅವರ ಮೆದುಳಿನಲ್ಲಿಯೇ ಆಗಿರುವಂತಹ ಬದಲಾವಣೆ. ವಾಸ್ತವವನ್ನು ಒಪ್ಪಲಾಗದಂತಹ ಭ್ರಮಾಧೀನ ಸಮಸ್ಯೆ (ಸ್ಕಿಸೋಫ್ರೇನಿಯಾ) ಅಥವಾ ಅತಿಮೇನಿಯಾ (ಬೈಪೋಲಾರ್ ಸಮಸ್ಯೆ) ಇರುವಂತಹವರಿಗೆ ಇದು ಸಾಮಾನ್ಯವಾಗಿರುವಂತಹ ಲಕ್ಷಣ.

ಯಾವಾಗ ಓರ್ವ ವ್ಯಕ್ತಿ ಉಂಟಾಗಿರುವ ಬದಲಾವಣೆಯನ್ನು ತನಗೆ ಇಷ್ಟವಿಲ್ಲದ ಕಾರಣ ನೋಡಲು ಅಥವಾ ಗ್ರಹಿಸಲು ನಿರಾಕರಿಸುತ್ತಿರುತ್ತಾನೋ, ಅದು ದೀರ್ಘಕಾಲ ಮುಂದುವರಿದರೆ, ಅವನ ಮೆದುಳು ಬದಲಾವಣೆಯನ್ನು ಗ್ರಹಿಸುವ ಸಾಮರ್ಥ್ಯವನ್ನೇ ಕಳೆದುಕೊಂಡುಬಿಡುತ್ತದೆ. ಇದು ಅವರ ಸಮಸ್ಯೆ. ಹಾಗೆಯೇ ವ್ಯಕ್ತಿಗತವಾದ ಮಾನಸಿಕ ಸಮಸ್ಯೆಗಳು ಸಂಕಲಿತವಾಗಿ ಸಮಾಜದಲ್ಲಿಯೂ ಕೂಡಾ ಪ್ರತಿಫಲಿಸುತ್ತಿರುತ್ತದೆ. ಏಕೆಂದರೆ ಸಮಾಜವೆಂಬುದು ವ್ಯಕ್ತಿಗಳ ಸಮೂಹ ತಾನೇ!

ಈ ಹೊತ್ತಿಗೆ ನಮ್ಮ ಸಾಮಾಜಿಕ ಪರಿಸರದಲ್ಲಿ ಉಂಟಾಗಿರುವಂತಹ ಹಿಜಾಬಿನ ವಿವಾದವನ್ನು ಗಮನಿಸಿ. ಮೊದಲನೆಯದಾಗಿ ಬಹಳಷ್ಟು ಮಂದಿಗೆ ಈ ಹಿಜಾಬ್ ವಿವಾದವನ್ನು ನೋಡುವ ಬಗೆಯೇ ತಿಳಿದಿಲ್ಲ ಅಥವಾ ತಾವು ನೋಡುವ ಬಗೆಯನ್ನು ಬದಲಿಸಿಕೊಳ್ಳಲು ಸಿದ್ಧವಿಲ್ಲ. ಅವರವರದೇ ಆದಂತಹ ಪೂರ್ವನಿರ್ಧಾರಿತ ಅಥವಾ ಹಳೆಯ ರೂಢಿಗತ ದೃಷ್ಟಿಯಿಂದಲೇ ನೋಡಲಾಗುವುದು. ಸಾರ್ವಜನಿಕ ವಿದ್ಯಾಸಂಸ್ಥೆಗಳಲ್ಲಿ ಧಾರ್ಮಿಕ ಸಂಕೇತಗಳಿಗೆ ಅವಕಾಶವಿಲ್ಲ ಎಂದೂ, ಹಿಜಾಬ್ ಸಮವಸ್ತ್ರ ಸಂಹಿತೆಗೆ ಭಂಗ ತರುವುದೆಂದೂ ಕಾರಣಗಳನ್ನು ನೀಡಿ, ತಮ್ಮ ಅಜ್ಜಿ, ತಾಯಿ ಮತ್ತು ತಮ್ಮ ಕುಟುಂಬದ ಇತರ ಮಹಿಳೆಯರು ತೊಡುವ ಧಾರ್ಮಿಕ ರೂಢಿಯಲ್ಲಿರುವ ಹಿಜಾಬನ್ನು ಧರಿಸಿಕೊಂಡು ಎಂದಿನಂತೆ ಕಲಿಯಲು ಬಂದವರನ್ನು ಗೇಟಿನಲ್ಲಿ ತಡೆಯಲಾಯಿತು. ಅವರು ಹಾಗೆ ಬಂದರೆ ನಾವು ಕೇಸರಿ ಶಾಲನ್ನು ಧರಿಸಿ ಬರುತ್ತೇವೆ ಎಂದು ಹುಡುಗರು ತಮ್ಮ ತಾತಂದಿರು, ಅಪ್ಪಂದಿರು ಮತ್ತು ಹಿರಿಯರು ತೊಡುವ ರೂಢಿಯೇನೂ ಇಲ್ಲದ ಹೊಸ ರುಮಾಲನ್ನು ಕುತ್ತಿಗೆಗೆ ಹಾಕಿಕೊಂಡು ಬಂದರು.

ಇದು ಸಂಘರ್ಷದ ಭಾಗ. ಈ ಸಂಘರ್ಷಕ್ಕೆ ಕಾರಣ ಬಹಳಷ್ಟು ಮಂದಿ ವಿವರಿಸುವಂತೆ ಧಾರ್ಮಿಕ ಮೂಲಭೂತವಾದದ ಹಟಮಾರಿತನ. ಹಿಜಾಬಿನ ಹೆಣ್ಣು ಮಕ್ಕಳೂ ಮತ್ತು ಕೇಸರಿ ಶಾಲಿನ ಗಂಡು ಮಕ್ಕಳೂ ತಮ್ಮ ಧಾರ್ಮಿಕ ಖಡ್ಗಗಳನ್ನು ಝಳಪಿಸುತ್ತಿದ್ದಾರೆ ಎಂದು ಅವರ ವಾದ. ಹಾಗೆಯೇ ಬಹಳಷ್ಟು ಮಂದಿ ಹಿಜಾಬನ್ನು ಸಮರ್ಥಿಸುವವರು ಮತ್ತು ನಿರಾಕರಿಸುವವರು ಇಬ್ಬರೂ ಧಾರ್ಮಿಕತೆಯ ಹಕ್ಕು ಮತ್ತು ದಬ್ಬಾಳಿಕೆಯ ದೃಷ್ಟಿಯಿಂದಲೇ ನೋಡುತ್ತಿದ್ದಾರೆ.

ಆದರೆ ಇಲ್ಲಿ ತೊಡಕಾಗಿದ್ದು ಸಾಮಾಜಿಕ ನ್ಯಾಯಕ್ಕೆ ಮತ್ತು ಬಹುತ್ವದ ವ್ಯವಸ್ಥೆಯ ಸಾಮಾಜಿಕ ಯಂತ್ರದಲ್ಲಿ ಉಂಟಾಗುತ್ತಿರುವ ತೊಡಕು ಎಂದು ತಿಳಿಯುತ್ತಿಲ್ಲ. ಸಿಖ್ಖರ ಧಾರ್ಮಿಕ ಮುಖಂಡ ಗುರು ಗೋವಿಂದ್ ಸಿಂಗ್ 1699ರಲ್ಲಿ ಪ್ರಾರಂಭಿಸಿದ ಸಂಪ್ರದಾಯವಾದ ತನ್ನ ನೀಳವಾದ ಕೇಶವನ್ನು ಪಗೋಡದಲ್ಲಿ ಕಟ್ಟಿಕೊಳ್ಳುವ, ಗಡ್ಡ ಬೆಳೆಸಿಕೊಂಡಿರುವ, ಕಿರುಗತ್ತಿ, ಬಾಚಣಿಕೆ, ಬಳೆ ಮತ್ತು ಬಿಳಿಯ ಒಳವಸ್ತ್ರವನ್ನು ಇಂದಿಗೂ ಹೊಂದಿರುವ ಯಾವುದೇ ಸಿಂಗ್ ಒಬ್ಬ ಅವನ ಶಿರವಸ್ತ್ರ, ಕತ್ತಿ ಒಳಗೊಂಡಂತಹ ಐದು ‘ಕ’ಗಳ ಸಮೇತ ವಿಂಗ್ ಕಮ್ಯಾಂಡರ್ ಆಗಬಹುದು, ಪ್ರಧಾನಿ, ರಾಷ್ಟ್ರಪತಿ ಆಗಬಹುದು, ದೇಶದ ಅತ್ಯುನ್ನತ ಹುದ್ದೆಗಳನ್ನಾವುದನ್ನಾದರೂ ಅಲಂಕರಿಸಬಹುದು. ಆದರೆ ಈ ಮುಸಲ್ಮಾನ ಹೆಣ್ಣುಮಗು ತನ್ನ ಮೈ ಮುಚ್ಚಿಕೊಳ್ಳುವಂತೆ ಬಂದರೆ ಆಗುವ ಸಮಸ್ಯೆ ಏನೆಂದು ಗುರುತಿಸುವಲ್ಲಿ ವಿಫಲರಾಗಿ ಧಾರ್ಮಿಕತೆಯನ್ನು ದೂರುತ್ತಿರುವರು ಅಥವಾ ಅದನ್ನು ಸಮರ್ಥಿಸುತ್ತಿರುವರು ಈ ಹುಡುಗಿಯರು ಕಲಿಕೆಯನ್ನು ಬಿಡದ ಮನಸ್ಥಿತಿಯನ್ನು, ಈ ಹುಡುಗರ ಜಿದ್ದುಗೇಡಿತನದ ಮನಸ್ಥಿತಿಯನ್ನು ಗುರುತಿಸದಾದರು.

ಸಾಂಪ್ರದಾಯಿಕ ಮುಸ್ಲಿಮ್ ದ್ವೇಷದ ಪೋಷಣೆ, ಸಾಮಾಜಿಕ ನ್ಯಾಯದ ಉಲ್ಲಂಘನೆ, ಸರಕಾರದ ವೈಫಲ್ಯಗಳಿಂದ ಗಮನ ಪಲ್ಲಟ, ಯಾವುದೇ ಧಾರ್ಮಿಕ, ಸಾಂಸ್ಕೃತಿಕ, ಕೌಟುಂಬಿಕ ಹಿನ್ನೆಲೆಯುಳ್ಳ ಮಗುವು ಶಿಕ್ಷಣ ಪಡೆಯಬೇಕಾದ ರಾಷ್ಟ್ರೀಯ ಅಗತ್ಯ; ಇವುಗಳ ದಿಕ್ಕಿನಲ್ಲಿ ನೋಡುವುದರಲ್ಲಿ ಎಡವುತ್ತಿವೆ. ಏಕೆಂದರೆ ಧಾರ್ಮಿಕತೆಯ ಅನೊಸೊಗ್ನೇಶಿಯಾ ಅಥವಾ ಅರಿವುಗೇಡಿತನದಿಂದ ಹೊರಗೆ ಬರಲು ಇಬ್ಬರಿಗೂ ಆಗುತ್ತಿಲ್ಲ.

share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X