ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ: ಮೂರು ಸ್ಥಾನಕ್ಕೆ ಅವಿರೋಧ ಆಯ್ಕೆ

ಶ್ರೀನಿವಾಸ ನಾಯಕ್ ಇಂದಾಜೆ / ಬಿ.ಎನ್.ಪುಷ್ಪರಾಜ್ / ಜಗನ್ನಾಥ ಶೆಟ್ಟಿ ಬಾಳ
ಮಂಗಳೂರು, ಫೆ.20: ದ.ಕ. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ 2022-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಗೆ ಫೆ.27ರಂದು ನಡೆಯುವ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಶನಿವಾರ ಅಂತಿಮ ದಿನವಾಗಿತ್ತು. ಅಂತಿಮವಾಗಿ 22 ಸ್ಥಾನಕ್ಕೆ 37ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ ನಾಯಕ್ ಇಂದಾಜೆ, ಕೋಶಾಧಿಕಾರಿ ಸ್ಥಾನಕ್ಕೆ ಬಿ.ಎನ್.ಪುಷ್ಪರಾಜ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಜಗನ್ನಾಥ ಶೆಟ್ಟಿ ಬಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಎಲ್ಲಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಪ್ರಧಾನ ಕಾರ್ಯದರ್ಶಿ ಒಂದು ಹುದ್ದೆಗೆ 2 ಅಭ್ಯರ್ಥಿಗಳು, 3 ಉಪಾಧ್ಯಕ್ಷ ಸ್ಥಾನಕ್ಕೆ 6 ಅಭ್ಯರ್ಥಿಗಳು, 3 ಕಾರ್ಯದರ್ಶಿ ಸ್ಥಾನಕ್ಕೆ 6 ಅಭ್ಯರ್ಥಿಗಳು, 15 ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಇಬ್ರಾಹೀಂ ಅಡ್ಕಸ್ಥಳ ಮತ್ತು ಜಿತೇಂದ್ರ ಕುಂದೇಶ್ವರ ಕಣದಲ್ಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ರವಿಚಂದ್ರ ಭಟ್ (ಆರ್.ಸಿ.ಭಟ್), ಹರೀಶ್ ಮಾಂಬಾಡಿ, ರಾಜೇಶ್ ಪೂಜಾರಿ, ಭಾಸ್ಕರ ರೈ ಕಟ್ಟ, ಆತ್ಮಭೂಷಣ್ ಭಟ್, ಅನ್ಸಾರ್ ಇನೋಳಿ ಅಭ್ಯರ್ಥಿಗಳಾಗಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ಗಂಗಾಧರ ಕಲ್ಲಪಳ್ಳಿ ಸುಳ್ಯ, ವಿಜಯ್ ಕೋಟ್ಯಾನ್ ಪಡು, ಹರೀಶ್ ಮೋಟುಕಾನ, ಭುವನೇಶ್ವರ ಗೇರುಕಟ್ಟೆ, ಸಿದ್ದೀಕ್ ನೀರಾಜೆ, ಶರತ್ ಶೆಟ್ಟಿ ಕಣದಲ್ಲಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರ 15 ಸ್ಥಾನಕ್ಕೆ 23 ಅಭ್ಯರ್ಥಿಗಳು ಕಣದಲ್ಲಿ:
ಅಶೋಕ್ ಶೆಟ್ಟಿ ಬಿ.ಎನ್., ರಾಜೇಶ್ ಕುಮಾರ್ ದಡ್ಡಂಗಡಿ, ಸತೀಶ್ ಇರಾ, ಲೋಕೇಶ್ ಪೆರ್ಲಂಪಾಡಿ, ಹಿಲರಿ ಕ್ರಾಸ್ತಾ ಪಿ., ರಾಜೇಶ್ ಶೆಟ್ಟಿ, ಮೋಹನ್ ಕುತ್ತಾರ್, ಭರತ್ ರಾಜ್, ಸತ್ಯವತಿ, ನರೇಂದ್ರ ಕೆರೆಕಾಡು, ನಿಶಾಂತ್ ಶೆಟ್ಟಿ ಕಿಲೆಂಬೂರು, ನವೀನ್ ಕುಮಾರ್ ಶೆಟ್ಟಿ, ಸಂದೇಶ್ ಜಾರ, ಶೇಕ್ ಝೈನುದ್ದೀನ್ ಪುತ್ತೂರು, ಮುಹಮ್ಮದ್ ಆರಿಫ್ ಪಡುಬಿದ್ರೆ, ದೇವಿಪ್ರಸಾದ್ ಬೆಳ್ತಂಗಡಿ, ಸುಖ್ಪಾಲ್ ಪೊಳಲಿ, ಶ್ರವಣ್ಕುಮಾರ್ ನಾಳ, ವಿಲ್ಫ್ರೆಡ್ ಡಿಸೋಜ, ಗಿರೀಶ್ ಅಡ್ಪಂಗಾಯ ಸುಳ್ಯ, ವಿದ್ಯಾಧರ ಶೆಟ್ಟಿ, ಹರೀಶ್ ಕುಲ್ಕುಂದ, ವಿನಯಕೃಷ್ಣ ಪಿ. ಅಭ್ಯರ್ಥಿಗಳಾಗಿ ಅಂತಿಮ ಕಣದಲ್ಲಿದ್ದಾರೆ.







