ಫೆ. 22ರಿಂದ ಮುಕ್ವೆ ಮಖಾಂ ಉರೂಸ್
![ಫೆ. 22ರಿಂದ ಮುಕ್ವೆ ಮಖಾಂ ಉರೂಸ್ ಫೆ. 22ರಿಂದ ಮುಕ್ವೆ ಮಖಾಂ ಉರೂಸ್](https://www.varthabharati.in/sites/default/files/images/articles/2022/02/21/325771-1645436887.jpg)
ಪುತ್ತೂರು: ಮುಕ್ವೆ ರಹ್ಮಾನಿಯಾ ಜುಮ್ಮಾ ಮಸೀದಿಯಲ್ಲಿನ ವಲಿಯುಲ್ಲಾಹಿ ದರ್ಗಾ ಶರೀಫ್ನಲ್ಲಿ 3 ವರ್ಷಕ್ಕೊಮ್ಮೆ ನಡೆಯುತ್ತಿರುವ ಮಖಾಂ ಉರೂಸ್ ಸಮಾರಂಭ ಫೆ. 22ರಿಂದ 27ರ ತನಕ ನಡೆಯಲಿದೆ ಎಂದು ಮಸೀದಿಯ ಖತೀಬ್ ಅಸ್ಸಯ್ಯದ್ ಹಬೀಬುರ್ರಹ್ಮಾನ್ ತಂಙಳ್ ತಿಳಿಸಿದ್ದಾರೆ.
ಅವರು ಸೋಮವಾರ ಪುತ್ತೂರು ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉರೂಸ್ ಪ್ರಯುಕ್ತ ಮಖಾಂ ಝಿಯಾರತ್, ಧಾರ್ಮಿಕ ಮತಪ್ರವಚನ, ದುಅಃ ಮಜ್ಲಿಸ್, ಮೌಲಿದ್ ಪಾರಾಯಣ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಫೆ.22ರಂದು ಎಂ.ಎಸ್. ತಂಙಳ್ ಓಲೆಮುಂಡೋವು ಧ್ವಜಾರೋಹಣ ನರೆವೇರಿಸಿ, ದರ್ಗಾ ಝಿಯಾರತ್ನೊಂದಿಗೆ ಕಾರ್ಯಕ್ರಮವಕ್ಕೆ ಚಾಲನೆ ನೀಡಲಿದ್ದಾರೆ. ಧಾರ್ಮಿಕ ಮತಪ್ರವಚನವನ್ನು ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಜಮಾಅತ್ ಅಧ್ಯಕ್ಷ ಅಬ್ದುಲ್ಲಾ ಹಾಜಿ ಮೈಸೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಥಳೀಯ ಖತೀಬ್ ಅಸ್ಸಯ್ಯದ್ ಹಬೀಬುರ್ರಹ್ಮಾನ್ ತಂಙಳ್ ಧಾರ್ಮಿಕ ಪ್ರವಚನ ನೀಡಲಿದ್ದಾರೆ.
ಫೆ. 23ರಂದು ಮಹಮ್ಮದ್ ಸ್ವಾಲಿಹ್ ಹುದವಿ ಮಲಪ್ಪುರಂ ಕೇರಳ, ಫೆ.24ರಂದು ಹನೀಫ್ ನಿಝಾಮಿ ಮೊಗ್ರಾಲ್, ಫೆ.25ರಂದು ಸಿ.ಕೆ. ರಾಶಿದ್ ಬುಖಾರಿ ಇರಿಂಗಣ್ಣೂರ್ ಧಾರ್ಮಿಕ ಮತಪ್ರವಚನ ನೀಡಲಿದ್ದಾರೆ.
ಫೆ. 26ರಂದು ಜಮಾಅತ್ ಅಧ್ಯಕ್ಷ ಅಬ್ದುಲ್ಲಾ ಹಾಜಿ ಮೈಸೂರು ಅಧ್ಯಕ್ಷತೆಯಲ್ಲಿ ಉರೂಸ್ ಸಮಾರಂಭ ನಡೆಯಲಿದೆ. ಖತೀಬ್ ಅಸ್ಸಯ್ಯದ್ ಹಬೀಬುರ್ರಹ್ಮಾನ್ ತಂಙಳ್ ಉದ್ಘಾಟಿಸಲಿದ್ದಾರೆ. ಹುಸೈನ್ ದಾರಿಮಿ ರೆಂಜಲಾಡಿ ದಿಕ್ಸೂಚಿ ಭಾಷಣ ಹಾಗೂ ಅಬೂಬಕ್ಕರ್ ಹುದವಿ ಮಂಡಂಪರಂಬು ಮುಖ್ಯ ಪ್ರಭಾಷಣ ಮಾಡಿದ್ದಾರೆ. ಸಯ್ಯದ್ ಅಬ್ದುಲ್ ರಶೀದ್ ಅಲಿ ಸಿಹಾಬ್ ತಂಙಳ್ ಸಾಮೂಹಿಕ ಪ್ರಾರ್ಥನೆ ನಡೆಸಲಿದ್ದಾರೆ.
ಫೆ. 27ರಂದು ಜಮಾಅತ್ ಅಧ್ಯಕ್ಷ ಅಬ್ದುಲ್ಲಾ ಹಾಜಿ ಮೈಸೂರು ಅಧ್ಯಕ್ಷತೆಯಲ್ಲಿ ಉರೂಸ್ ಸಮಾರೋಪ ಸಮಾರಂಭ ನಡೆಯಲಿದ್ದು, ಖಾಝಿ ಬಂಬ್ರಾಣ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಉದ್ಘಾಟಿಸಲಿದ್ದಾರೆ. ಮೂಡಿಗೆರೆ ಖಾಜಿ ಕೊಯ್ಯೊಡ್ ಉಮರ್ ಮುಸ್ಲಿಯಾರ್ ಮುಖ್ಯ ಪ್ರಭಾಷಣ ನೀಡಲಿದ್ದಾರೆ. ಎಸ್ಕೆಎಸ್ಸಸ್ಸೆಫ್ ರಾಜ್ಯ ಅಧ್ಯಕ್ಷ ಅನೀಸ್ ಕೌಸರಿ, ಮುಫ್ತಿ ರಫೀಕ್ ಅಹ್ಮದ್ ಹುದವಿ ಕೋಲಾರಿ ಪ್ರಭಾಷಣ ನೀಡಲಿದ್ದಾರೆ. ಸಮಸ್ತ ಕರ್ನಾಟಕ ಮುಶಾವರ ಅಧ್ಯಕ್ಷ ಎನ್ಪಿಎಂ ಝೈನುಲ್ ಆಬಿದೀನ್ ತಂಙಳ್ ಸಾಮೂಹಿಕ ಪ್ರಾರ್ಥನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಸೀದಿ ಅಧ್ಯಕ್ಷ ಅಬ್ದುಲ್ಲಾ ಹಾಜಿ ಮೈಸೂರು, ಉರೂಸ್ ಸಮಿತಿ ಅಧ್ಯಕ್ಷ ಹಾಜಿ ಯೂಸುಫ್ ಅಳಕೆ, ಕೋಶಾಧಿಕಾರಿ ಹಾಜಿ ಅಬ್ದುರ್ರಹ್ಮಾನ್ ಬಾಳಾಯ, ಜೊತೆ ಕಾರ್ಯದರ್ಶಿ ರಫೀಕ್ ಸಿಬಾರ, ಮಸೀದಿ ಕಮಿಟಿ ಜೊತೆ ಕಾರ್ಯದರ್ಶಿ ಹಾಜಿ ಮಹಮ್ಮದ್ ಕುಂಞÂ, ಮಸೀದಿ ಮುಅಲ್ಲಿಂ ರಿಯಾಝ್ ಫೈಝಿ ಉಪಸ್ಥಿತರಿದ್ದರು.