Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಉಕ್ರೇನ್ ಮೇಲೆ ರಶ್ಯಾ ಏಕೆ ದಾಳಿ...

ಉಕ್ರೇನ್ ಮೇಲೆ ರಶ್ಯಾ ಏಕೆ ದಾಳಿ ನಡೆಸಿದೆ?: ಇಲ್ಲಿವೆ ಕೆಲವು ಮಹತ್ವಪೂರ್ಣ ಮಾಹಿತಿ

ವಾರ್ತಾಭಾರತಿವಾರ್ತಾಭಾರತಿ24 Feb 2022 6:58 PM IST
share
ಉಕ್ರೇನ್ ಮೇಲೆ ರಶ್ಯಾ ಏಕೆ ದಾಳಿ ನಡೆಸಿದೆ?: ಇಲ್ಲಿವೆ ಕೆಲವು ಮಹತ್ವಪೂರ್ಣ ಮಾಹಿತಿ

ಮಾಸ್ಕೋ: ರಶ್ಯಾ ತಾನು ಹೇಳಿದಂತೆ ಕೊನೆಗೂ ಉಕ್ರೇನ್ ಮೇಲೆ ದಾಳಿ ನಡೆಸಿದೆ. ಪೂರ್ವ ಯುರೋಪ್‍ನಲ್ಲಿ ನೇಟೋ ವಿಸ್ತರಣೆಗೆ ಅಂತ್ಯ ಹಾಡಬೇಕೆಂಬ ರಶ್ಯಾದ ಬೇಡಿಕೆ ಹಿನ್ನೆಲೆಯಲ್ಲಿ ಇದು ಯುರೋಪ್‍ನಲ್ಲಿ ಯುದ್ಧದ ಆರಂಭಕ್ಕೂ ಕಾರಣವಾಗಬಹುದು ಮತ್ತು ಅದು ಏಶ್ಯಾದ ಮೇಲೂ ಭಾರೀ ಪರಿಣಾಮಕ್ಕೆ ಕಾರಣವಾಗಬಹುದು ಎಂದು ವರದಿಯಾಗಿದೆ.

ಈ ಸಂಘರ್ಷದ ಹಿನ್ನೆಲೆಯೇನು?

►ಮಾಜಿ ಸೋವಿಯತ್ ಗಣರಾಜ್ಯವಾಗಿದ್ದ ಉಕ್ರೇನ್ ಮತ್ತು ರಶ್ಯಾ ನಡುವೆ ಬಹಳ ಹಿಂದಿನಿಂದಲೂ ಉದ್ವಿಗ್ನತೆ ನೆಲೆಯೂರಿತ್ತು. ಆದರೆ 2021ರ ಆರಂಭದಲ್ಲಿ ಇದು ಬಿಗಡಾಯಿಸಿತ್ತು. ನೇಟೋ ಸೇರಲು ಉಕ್ರೇನ್‍ಗೆ ಅವಕಾಶ ನೀಡಬೇಕೆಂದು ಕಳೆದ ವರ್ಷದ ಜನವರಿಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡೈಮೈರ್ ಝೆಲೆನ್‍ಸ್ಕಿ ಅವರು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರಿಗೆ ಮನವಿ ಮಾಡಿದ್ದರು.

►ಇದು ರಶ್ಯಾದ ಆಕ್ರೋಶಕ್ಕೆ ಕಾರಣವಾಗಿ ಅದು ಉಕ್ರೇನ್ ಗಡಿ ಸಮೀಪ ತನ್ನ ಸೇನೆಯನ್ನು 'ತರಬೇತಿ ಕವಾಯತು'ಗಳಿಗಾಗಿ ಕಳುಹಿಸಲಾರಂಭಿಸಿತ್ತಲ್ಲದೆ ಡಿಸೆಂಬರ್ ಒಳಗಾಗಿ ಸೇನೆಯ ಜಮಾವಣೆ ಏರಿಕೆಯಾಗಿತ್ತು. ಉಕ್ರೇನ್ ಅನ್ನು ರಶ್ಯಾ ಆಕ್ರಮಿಸಿದರೆ ಕಠಿಣ ನಿರ್ಬಂಧಗಳ ಎಚ್ಚರಿಕೆಯನ್ನೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ನೀಡಿದ್ದರು.

►ಪೂರ್ವ ಯುರೋಪ್ ಮತ್ತು ಉಕ್ರೇನ್‍ನಲ್ಲಿ ನೇಟೋ ಯಾವುದೇ ಮಿಲಿಟರಿ ಚಟುವಟಿಕೆಯನ್ನು ನಡೆಸುವುದಿಲ್ಲವೆಂಬ ಕಾನೂನಾತ್ಮಕ ಖಾತರಿಯನ್ನು ಪೂರ್ವ ಯುರೋಪ್ ದೇಶಗಳು ನೀಡಬೇಕೆಂದು ರಶ್ಯಾ ಬೇಡಿಕೆಯಿಟ್ಟಿದೆ. ಉಕ್ರೇನ್ ದೇಶವು ಪಾಶ್ಚಿಮಾತ್ಯ ರಾಷ್ಟ್ರಗಳ ಕೈಗೊಂಬೆಯಾಗಿದೆ ಹಾಗೂ ಯಾವತ್ತೂ ಸರಿಯಾದ ಒಂದು ದೇಶವಾಗಿರಲಿಲ್ಲ ಎಂದು ಪುಟಿನ್ ಹೇಳಿಕೊಂಡಿದ್ದಾರೆ.

►ಉಕ್ರೇನ್ ಮತ್ತು ರಶ್ಯಾ ನಡುವೆ ಉದ್ವಿಗ್ನತೆ ಇದು ಮೊದಲ ಬಾರಿಯೇನಲ್ಲ. 2014ರಲ್ಲಿ ರಶ್ಯಾ ಆ ದೇಶದ ಮೇಲೆ ಆಕ್ರಮಣ ನಡೆಸಿತ್ತಲ್ಲದೆ ಪುಟಿನ್ ಬೆಂಬಲಿತ ಬಂಡುಕೋರರು ಉಕ್ರೇನ್‍ನ ಪೂರ್ವ ಭಾಗದ ಬಹುಪಾಲನ್ನು ಆಕ್ರಮಿಸಿಕೊಂಡಿದ್ದರಲ್ಲದೆ ಅಂದಿನಿಂದ ಉಕ್ರೇನ್ ಸೇನೆ ಜತೆ ಕಾದಾಟ ನಡೆಸುತ್ತಲೇ ಬಂದಿದ್ದಾರೆ. ಆ ಸಂದರ್ಭ ಕ್ರಿಮಿಯಾವನ್ನು ರಶ್ಯಾ ಆಕ್ರಮಿಸಿತ್ತು.

►ಮಾಜಿ ಸೋವಿಯತ್ ಗಣರಾಜ್ಯವಾಗಿರುವ ಉಕ್ರೇನ್ ವಾಸ್ತವವಾಗಿ ರಶ್ಯಾ ಜತೆ ನಿಕಟ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಹೊಂದಿದೆ ಹಾಗೂ ಅಲ್ಲಿ ಹೆಚ್ಚಿನ ಜನರು ರಶ್ಯನ್ ಭಾಷೆಯನ್ನೇ ಮಾತನಾಡುತ್ತಾರೆ. ಆದರೆ ರಶ್ಯಾ ಉಕ್ರೇನ್ ಮೇಲೆ 2014ರಲ್ಲಿ ದಾಳಿ ನಡೆಸಿದ ನಂತರ ಸಂಬಂಧಗಳು ಹದಗೆಟ್ಟಿವೆ.

►ಉಕ್ರೇನ್‍ನ ರಶ್ಯಾ ಪರ ಅಧ್ಯಕ್ಷರನ್ನು 2014ರಲ್ಲಿ ಅಧಿಕಾರದಿಂದ ಕೆಳಗಿಳಿಸಿದ ನಂತರ ರಶ್ಯಾ ಉಕ್ರೇನ್ ಮೆಲೆ ದಾಳಿ ನಡೆಸಿತ್ತು. ಪೂರ್ವ ಉಕ್ರೇನ್‍ನಲ್ಲಿನ ಯುದ್ಧ ಇಲ್ಲಿಯ ತನಕ 14,000 ಕ್ಕೂ ಅಧಿಕ ಜೀವಗಳನ್ನು ಬಲಿತೆಗೆದುಕೊಂಡಿದೆ.

►ಪೂರ್ವ ಉಕ್ರೇನ್‍ನಲ್ಲಿನ ಸಂಘರ್ಷವನ್ನು ನಿಲ್ಲಿಸಲು ರಶ್ಯಾ ಮತ್ತು ಉಕ್ರೇನ್ ಮಿನ್ಸ್ಕ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ ಸಂಘರ್ಷ ಮುಂದುವರಿದಾಗ ತಾನು ಶಾಂತಿಪಾಲಕರನ್ನು ಕಳುಹಿಸುತ್ತಿರುವುದಾಗಿ ರಶ್ಯಾ ಹೇಳಿತ್ತು. ಆದರೆ ಉಕ್ರೇನ್ ಆಕ್ರಮಿಸಲು ರಶ್ಯಾ ಮಾಡಿದ ತಂತ್ರವಿದೆಂದೇ ಆರೋಪಿಸಲಾಗಿದೆ.

►ರಶ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಯುರೋಪಿಯನ್ ಯೂನಿಯನ್ ಅನ್ನೂ ಬಾಧಿಸಲಿದೆ. ಇದೇ ಕಾರಣಕ್ಕೆ ನೇಟೋ ಗೆ ಸಹಿ ಹಾಕಿರುವ ಹೆಚ್ಚಿನ ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ಅಮೆರಿಕಾ ಜತೆಗೂಡಿ ರಶ್ಯಾ ಮೇಲೆ ನಿರ್ಬಂಧಗಳನ್ನು ಘೋಷಿಸಿವೆ.

►ಕೆಲ ವಾರಗಳ ಹಿಂದೆಯಷ್ಟೇ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರಾನ್ ಅವರು ಮಾಸ್ಕೋಗೆ ತೆರಳಿ ಉದ್ವಿಗ್ನತೆ ಕಡಿಮೆ ಮಾಡುವ ಉದ್ದೇಶದಿಂದ ಪುಟಿನ್ ಅವರನ್ನು ಭೇಟಿಯಾಗಿದ್ದರು.

►ಪ್ರಸಕ್ತ ರಶ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರಕ್ಕಾಗಿ ಭಾರತ ಆಗ್ರಹಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X