ಮಾನವೀಯತೆಯೇ ಎಲ್ಲಾ ಧರ್ಮಗಳ ತಿರುಳು: ಡಾ. ಮೋಹನ್ ಆಳ್ವ
ಉಳ್ಳಾಲ ಉರೂಸ್ ಪ್ರಯುಕ್ತ ಸರ್ವ ಧರ್ಮ ಸಮ್ಮೇಳನ

ಉಳ್ಳಾಲ : ಯಾವ ಧರ್ಮವೂ ದ್ವೇಷ ಸಾಧನೆಗೆ ಪ್ರೋತ್ಸಾಹ ಕೊಡುವುದಿಲ್ಲ, ಕೂಡಿ ಬಾಳಲು ಉತ್ತೇಜಿಸುತ್ತದೆ. ಮನುಷ್ಯರು ಪರಸ್ಪರ ಸ್ನೇಹದಿಂದ ಇರಬೇಕು ಎಂದು ಬಯಸುತ್ತದೆ ಎಂದು ಆಳ್ವಾಸ್ ವಿದ್ಯಾಸಂಸ್ಥೆಗಳ ಸ್ಥಾಪಕ ಡಾ. ಮೋಹನ್ ಆಳ್ವ ಹೇಳಿದರು.
ಅವರು ಉಳ್ಳಾಲ ಉರೂಸ್ ಪ್ರಯುಕ್ತ ಏರ್ಪಡಿಸಿದ ಸರ್ವ ಧರ್ಮ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಭಾರತೀಯ ಪರಂಪರೆಯಲ್ಲಿ ಸೌಹಾರ್ದ ಬದುಕು ಎಂಬ ವಿಷಯದಲ್ಲಿ ಮೌಲಾನ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕ ಬೊಟ್ಟು ಮತ್ತು ಪ್ರೊ. ಅಬ್ದುಲ್ ರಝಾಕ್ ಅನಂತಾಡಿ ನೆಲದ ಭಾವೈಕ್ಯತೆ ಯ ಕೊಡು-ಕೊಳ್ಳುವಿಕೆಯ ಕುರಿತು, ಜನಪದ ಕತೆಗಳನ್ನು, ಐತಿಹ್ಯ ಎನಿಸಿರುವ ಘಟನೆಗಳನ್ನು ಉದಾಹರಣೆ ನೀಡಿ ವಿವರಿಸಿದರು.
ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀ ಚೀರುಂಭ ಭಗವತಿ ದೇವಸ್ಥಾನ ಮತ್ತು ಮಲಯಾಳಿ ಬಿಲ್ಲವ ಸಮಾಜ ಮುಂದಾಳು ಚಂದ್ರಹಾಸ್ ಉಳ್ಳಾಲ್, ಸಂತ ಸಬಸ್ಟಿಯನ್ ಚರ್ಚ್ ನ ಧರ್ಮ ಗುರು ಸಿಪ್ರಿಯನ್ ಪಿಂಟೋ, ಕಮ್ಯುನಿಸ್ಟ್ ನಾಯಕ ಸುಕುಮಾರ್, ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ನ್ಯಾಯವಾದಿ ಸುಲೈಮಾನ್, ಪೊಸಕುರಲ್ ಸುದ್ದಿ ವಾಹಿನಿಯ ಸಂಸ್ಥಾಪಕ ವಿದ್ಯಾಧರ ಶೆಟ್ಟಿ, ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸೋಮೇಶ್ವರ ದೇವಸ್ಥಾನದ ಮೊಕ್ತೇಸರ ನ್ಯಾಯವಾದಿ ರವೀಂದ್ರನಾಥ್ ಶೆಟ್ಟಿ, ಮಲಯಾಳಿ ಬಿಲ್ಲವ ಸಮಾಜದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಮೊಗವೀರ ಸಮಾಜದ ಅಧ್ಯಕ್ಷ ಮನೋಜ್ ಸಾಲಿಯಾನ್, ಹಿರಿಯ ನಾಯಕರಾದ ಸದಾನಂದ ಬಂಗೇರ, ಬಿಜೆಪಿ ಪಕ್ಷದ ಹಿರಿಯ ನೇತಾರ ಕೆಟಿ.ಸುವರ್ಣ, ವೈದ್ಯನಾಥ ದೈವ ಸ್ಥಾನದ ಅಧ್ಯಕ್ಷ ಪ್ರವೀಣ್ ಕುಮಾರ್, ವೀರ ಭದ್ರ ದೇವಸ್ಥಾನದ ಅಧ್ಯಕ್ಷ ಐತಪ್ಪ ಶೆಟ್ಟಿಗಾರ್, ಉಮಾಮಹೇಶ್ವರಿ ದೇವಸ್ಥಾನದ ಮೊಕ್ತೇಸರ್ ಈಶ್ವರ್ ಉಳ್ಳಾಲ್, ಹಿರಿಯ ರಾಜಕಾರಣಿ ದಿನಕರ್ ಉಳ್ಳಾಲ್, ಕೃಷ್ಣಪ್ಪ ಸಾಲಿಯಾನ್, ಸುಲ್ತಾನ್ ಜುವೆಲ್ಲರ್ಸ್ ಮಾಲಕ ರವೂಫ್ ಸುಲ್ತಾನ್, ಯಾದವ ಯಾನೆ ಗೊಲ್ಲರ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್, ಕುಲಾಲ ಸಂಘದ ಮುಖಂಡ ಅನಿಲ್ ದಾಸ್, ಕ್ರೈಸ್ತ ಮುಖಂಡ ಆಲ್ವಿನ್ ಡಿಸೋಜಾ, ಉದ್ಯಮಿ ಇಸ್ಮಾಯಿಲ್ ಹಾರೂನ್ ರನ್ನು ಉಳ್ಳಾಲ ದರ್ಗಾ ಆಡಳಿತ ಸಮಿತಿಯ ಪರವಾಗಿ ಉಳ್ಳಾಲ ದರ್ಗಾ ಅಧ್ಯಕ್ಷ. ಹಾಜಿ ಅಬ್ದುಲ್ ರಶೀದ್ ಮತ್ತು ಉಪಾಧ್ಯಕ್ಷ ಯು.ಕೆ.ಮೋನು ಸನ್ಮಾನಿಸಿದರು.
ಮುತ್ತು ಪೇಟೆ ದರ್ಗಾದ ಖಲೀಫರಾದ ಬರ್ಕತ್ತಲಿ ಲಬ್ಬೆ, ಪ್ರಮೋದ್ ಕುಮಾರ್ ಕಲ್ಲಿಮಾರ್, ಪದ್ಮಾವತಿ ಶೆಟ್ಟಿ, ವಿನಯ ಎನ್ ಶೆಟ್ಟಿ, ವರದರಾಜ್ ಉಳ್ಳಾಲ್, ಸೋಮೇಶ್ವರ ದೇವಸ್ಥಾನದ ಟ್ರಸ್ಟಿ ರಾಮದಾಸ್, ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ ತ್ವಾಹ ಹಾಜಿ, ನ್ಯಾಯವಾದಿ ರಾಮಚಂದ್ರ ಬಬ್ಬಕಟ್ಟೆ, ಎಚ್ .ಮುಹಮ್ಮದ್ ಆಲಿ ಪುತ್ತೂರು, ಶಿವಾಜಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಸದಾನಂದ ಒಂಭತ್ತುಕೆರೆ, ಕಾರ್ಯದರ್ಶಿ ಅಲ್ತಾಫ್ ಹಳೇಕೋಟೆ, ಆದರ್ಶ್, ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ, ಕೌನ್ಸಿಲರ್ ಅಬ್ದುಲ್ ಜಬ್ಬಾರ್, ನಿಝಾಂ, ಬಾಝಿಲ್ ಡಿಸೋಜಾ, ಉಳ್ಳಾಲ ದರ್ಗಾ ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಕೋಶಾಧಿಕಾರಿ ಅಬ್ಬಾಸ್ ಹಾಜಿ ಕೆನರಾ, ದರ್ಗಾ ಆಡಳಿತ ಸಮಿತಿ ಸದಸ್ಯರುಗಳಾದ ಹಮೀದ್ ಕೋಡಿ, ಅಬ್ದುಲ್ ಖಾದರ್ ಮುಸ್ಲಿಯಾರ್, ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ಯು.ಕೆ.ಅಬ್ಬಾಸ್, ಟ್ರಸ್ಟಿಗಳಾದ ಯುಸೂಫ್ ಉಳ್ಳಾಲ್, ಜಮಾಲ್ ಬಾರ್ಲಿ, ಅಹ್ಮದ್ ಬಾವ ಕೋಡಿ, ಹನೀಫ್ ಕೋಡಿ, ಕಬೀರ್ ಚಾಯಬ್ಬ, ಉಪಸ್ಥಿತರಿದ್ದರು.
ಫಾರೂಕ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಎ.ಕೆ. ಮೊಯ್ದಿನ್ ಹಾದಿ ವಂದಿಸಿದರು.







