Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ28 Feb 2022 12:07 AM IST
share
ಓ ಮೆಣಸೇ...

ವಿಶ್ವ ಪ್ರಕ್ಷುಬ್ಧ ಸ್ಥಿತಿಯಲ್ಲಿದ್ದು ಈ ಸಂದರ್ಭದಲ್ಲಿ ಭಾರತಕ್ಕೆ ಕಠಿಣ ನಾಯಕನ ಅಗತ್ಯವಿದೆ

-ನರೇಂದ್ರ ಮೋದಿ, ಪ್ರಧಾನಿ

ಹೌದು. ದಯವಿಟ್ಟು ರಾಜೀನಾಮೆ ಕೊಟ್ಟು ಸಮರ್ಥನಾಯಕನಿಗೆ ಅವಕಾಶ ಮಾಡಿಕೊಡಿ.

ಕುಂಕುಮ,ಬಳೆ ,ವಿಭೂತಿ ವೈಜ್ಞಾನಿಕವಾಗಿದೆ.ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ

-ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಅಧ್ಯಕ್ಷ

ವಿಧವೆಯರು ಕುಂಕುಮ ಅಳಿಸುವುದು, ಬಳೆ ಒಡೆಯುವುದು ಎಲ್ಲವೂ ವಿಜ್ಞಾನದ ಭಾಗವೇ ಆಗಿರಬೇಕು ಹಾಗಾದರೆ.

ರಾಜ್ಯ ಸರಕಾರಕ್ಕೆ (ಕೇರಳ)ರಾಜಭವನವನ್ನು ನಿಯಂತ್ರಿಸುವ ಹಕ್ಕಿಲ್ಲ

-ಆರಿಫ್ ಮುಹಮ್ಮದ್ ಖಾನ್, ಕೇರಳ ರಾಜ್ಯಪಾಲ

ನಿಮ್ಮನ್ನು ನಿಯಂತ್ರಿಸುವ ಹಕ್ಕೇನಿದ್ದರೂ ಇರುವುದು ಕೇಂದ್ರದವರಿಗೆ ಎನ್ನುವುದು ನಿಮ್ಮ ಮಾತಿನಲ್ಲೇ ಗೊತ್ತಾಗಿ ಬಿಡುತ್ತದೆ.

ಬಾಯಿ, ನಾಲಗೆ ಇದೆ ಎಂದು ಯುವಕರಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಯಾರೂ ಮಾಡಬಾರದು

-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ

ಬಾಯಿ, ನಾಲಗೆ ಇರುವ ಜಾತ್ಯತೀತರು ಮಾತನಾಡದಿರುವುದೇ ಎಲ್ಲದಕ್ಕೂ ಕಾರಣ.

ಹನುಮನ ಜನ್ಮ ಸ್ಥಳ ಕುರಿತು ವಿವಾದ ಏನೇ ಇರಲಿ,ಅದರಲ್ಲಿ ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸುವುದಿಲ್ಲ

-ಕಿಶನ್ ರೆಡ್ಡಿ, ಕೇಂದ್ರ ಸಚಿವ

ಯಾಕೆಂದರೆ ವಿವಾದಗಳು ಸದಾ ಜೀವಂತ ಇದ್ದರೆ ಮಾತ್ರ ಕೇಂದ್ರ ಸರಕಾರಕ್ಕೆ ನೆಮ್ಮದಿ.

ಆರೆಸ್ಸೆಸ್‌ನಲ್ಲಿ ದೇಶ ಭಕ್ತರಿದ್ದಾರೆ

-ಗೋವಿಂದ ಕಾರಜೋಳ, ಸಚಿವ

ಅವರು ದ್ವೇಷವನ್ನು ದೇಶವೆಂದು ಭಾವಿಸಿದವರು.

ಈ ದೇಶದ ಅನ್ನ ನೀರು ಕುಡಿಯುವವರಿಗೆ ಧರ್ಮಕ್ಕಿಂತ ದೇಶವೇ ದೊಡ್ಡದು

-ಆರ್.ಅಶೋಕ್, ಸಚಿವ

ನೀವು ದೇಶದ ಅನ್ನ, ನೀರು ಕುಡಿಯುತ್ತಿಲ್ಲವೇ?

ಕೊರೋನ ಬಳಿಕ ಇಡೀ ವಿಶ್ವವೇ ಸದ್ಯ ಯುದ್ಧದ ಕಾರ್ಮೊಡದಿಂದ ಆವೃತವಾಗಿದೆ

-ಬೋರಿಸ್ ಜಾನ್ಸನ್, ಬ್ರಿಟನ್ ಪ್ರಧಾನಿ

ಯುದ್ಧ ದಾಹ ಕೊರೋನ ವೈರಸನ್ನೇ ಜಗತ್ತಿನಿಂದ ಓಡಿಸಿದೆ.

ನಮಗೆ ಛತ್ರಪತಿ ಶಿವಾಜಿ ಮತ್ತು ಬಾಳಾ ಸಾಹೇಬ್ ಠಾಕ್ರೆ ಅವರ ದಿಟ್ಟ ತನವೇ ಆದರ್ಶ

 -ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಸಿಎಂ

ಶಿವಾಜಿ ಅಂಗರಕ್ಷಕ ಮತ್ತು ಠಾಕ್ರೆಯವರ ಕಾರಿನ ಚಾಲಕ ಮುಸ್ಲಿಮ್ ಸಮುದಾಯಕ್ಕೆ ಸೇರಿದವರೆನ್ನುವ ಸತ್ಯ ಮರೆಯದಿರಿ.

ಚುನಾವಣೆಗಳೆಂದರೆ ಬಿಜೆಪಿಗೆ ಜನರ ಸಾಮಾಜಿಕ -ಆರ್ಥಿಕ ನಿರೀಕ್ಷೆಗಳನ್ನು ಈಡೇರಿಸಲು ಸಿಗುವ ಅವಕಾಶ

-ಅಮಿತ್ ಶಾ, ಕೆಂದ್ರ ಸಚಿವ

 ಚುನಾವಣೆ ನಡೆದ ಬಳಿಕ ಈಡೇರಿಸಬೇಕಾಗಿಲ್ಲ ಎಂದು ಅರ್ಥವೇ?

ನಮ್ಮ ಸರಕಾರ ಬಂದ ಮೇಲೂ ಹಿಂದೂ ಕಾರ್ಯಕರ್ತನ ಕೊಲೆ ಆಗಿರುವುದು ನಾಚಿಕೆ ಗೇಡು

-ಪ್ರತಾಪಸಿಂಹ, ಸಂಸದ

 ಮತ್ತೇಕೆ ನಿಮಗೆ ನಾಚಿಕೆಯಾಗುತ್ತಿಲ್ಲ?

ಮಾಜಿ ಸಿಎಂ ಸಿದ್ದರಾಮಯ್ಯರಲ್ಲಿದ್ದ ಸಮಾಜವಾದಿ ಚಿಂತನೆಗಳು ಹೊರಹೋಗಿ, ಅಧಿಕಾರವಾದಿ ಚಿಂತನೆಗಳು ಒಳಗೆ ಬಂದಿದೆ

-ನಳೀನ್ ಕುಮಾರ್ ಕಟೀಲು, ಸಂಸದ

ನೀವು ಸಮಾಜವಾದಿಯಾಗಿದ್ದು ಯಾವಾಗ?

ಶೈಕ್ಷಣಿಕ ವ್ಯವಸ್ಥೆ ಸುಧಾರಿಸಬೇಕು ಎಂಬುದು ನಮ್ಮ ಕನಸು

-ಬಿ.ಸಿ.ನಾಗೇಶ್, ಸಚಿವ ಶಾಲೆ

ಕಲಿಯಲು ಬಂದ ಹೆಣ್ಣು ಮಕ್ಕಳನ್ನು ಧಿರಿಸಿನ ಹೆಸರಿನಲ್ಲಿ ಹೊರ ಹಾಕುವುದು ಸುಧಾರಣೆಯ ಭಾಗವೇ?

ವಿಭಜನ ಮನಸ್ಥಿತಿಯೇ ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನದ ಹುಟ್ಟಿಗೆ ಕಾರಣ

-ಸಿ.ಟಿ ರವಿ,ಶಾಸಕ

ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೂ ಅದೇ ಅಲ್ಲವೆ ಕಾರಣ.

ಹೇಡಿಗಳಿಗೆ ಹೋರಾಟಗಾರನ ಹೋರಾಟ ಅರ್ಥವಾಗುವುದಿಲ್ಲ

-ಲಾಲುಪ್ರಸಾದ್ ಯಾದವ್, ಆರ್ ಜೆಡಿ ಅಧ್ಯಕ್ಷ

ಸದ್ಯಕ್ಕೆ ಜೈಲಿನಿಂದ ಬಿಡುಗಡೆಯಾಗಲು ನೀವು ನಡೆಸುತ್ತಿರುವ ಹೋರಾಟ ಅರ್ಥವಾಗುತ್ತಿದೆ.

ವಯಸ್ಸಾದ ನಮ್ಮ ತಾಯಿಯನ್ನು ಸಾಕುವಂತೆ ಗೋವುಗಳನ್ನು ಪ್ರೀತಿಯಿಂದ ಸಾಕಬೇಕು

-ಈಶ್ವರಪ್ಪ, ಸಚಿವ

ಅಂದರೆ ಪರೋಕ್ಷವಾಗಿ ತಾಯಿಯಂದಿರನ್ನು ಗೋಶಾಲೆಗಳಿಗೆ ರವಾನಿಸುವ ಸಂದೇಶ ನೀಡುತ್ತಿದ್ದೀರಿ.

ರಶ್ಯ -ಉಕ್ರೇನ್ ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಬಗೆಹರಿಸಬೇಕು

-ರಾಜನಾಥ್ ಸಿಂಗ್, ಕೇಂದ್ರ ಸಚಿವ

ಚೀನಾ-ಭಾರತ ಬಿಕ್ಕಟ್ಟಿನ ಕತೆ ಏನಾಯಿತು, ಅದನ್ನು ಸ್ವಲ್ಪ ವಿವರಿಸಿ.

ಸಮಾಜದಲ್ಲಿ ಆತಂಕ ಸೃಷ್ಟಿಸಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಸಮಾಜ ಘಾತುಕ ಶಕ್ತಿಗಳನ್ನು ಎನ್‌ಕೌಂಟರ್ ಮಾಡಬೇಕು-ಎಂ.ಪಿ.ರೇಣುಕಾಚಾರ್ಯ,ಶಾಸಕ

ಹಾಗಾದರೆ ಬಹುತೇಕ ರಾಜಕಾರಣಿಗಳು ಎನ್‌ಕೌಂಟರ್‌ಗಳಿಗೆ ಬಲಿಯಾಗಬೇಕಾಗುತ್ತದೆ.

ಸಚಿವ ಈಶ್ವರಪ್ಪರ ಬೇಜವಾಬ್ದಾರಿ ಹೇಳಿಕೆಯನ್ನು ಬಿಜೆಪಿ ಸಹಿಸುವುದಿಲ್ಲ

-ಜೆ.ಪಿ.ನಡ್ಡಾ,ಬಿಜೆಪಿ ಅಧ್ಯಕ್ಷ

ಸದ್ಯಕ್ಕೆ ಅವರ ಬೇಜವಾಬ್ದಾರಿ ಹೇಳಿಕೆಯೇ ರಾಜ್ಯ ಬಿಜೆಪಿಯ ಬಂಡವಾಳವಂತೆ.

ಯಾವ ಸರಕಾರದಿಂದಲೂ ದಿನದ 2ಗಂಟೆ ಸಮಾಜದ ಕಾವಲು ಕಾಯಲು ಸಾಧ್ಯವಿಲ್ಲ

-ಆರಗ ಜ್ಞಾನೇಂದ್ರ,ಸಚಿವ

ಸದ್ಯಕ್ಕೆ ರಾಜಕಾರಣಿಗಳಿಂದ ಅಪಾಯವಾಗದ ಹಾಗೆ ಸಮಾಜಕ್ಕೆ ಕಾವಲು ಸಿಕ್ಕಿದರೆ ಸಾಕು.

ಭಿನ್ನಾಭಿಪ್ರಾಯ ಇಲ್ಲ ಅಂದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿರುವುದಿಲ್ಲ

-ಸಿದ್ದರಾಮಯ್ಯ, ಮಾಜಿ ಸಿಎಂ

  ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವುದಕ್ಕಾಗಿ ಕಾಂಗ್ರೆಸ್‌ನೊಳಗೆ ಭಿನ್ನಾಭಿಪ್ರಾಯಗಳನ್ನು ಜೀವಂತ ಇಡಲಾಗಿದೆಯೇ?

ಅಧಿಕಾರ,ಸ್ಥಾನಮಾನ ನೀಡಿದ ಬಿಜೆಪಿಯನ್ನು ತೊರೆಯುವ ಪ್ರಶ್ನೆಯೇ ಇಲ್ಲ

-ಕೆ.ಗೋಪಾಲಯ್ಯ, ಸಚಿವ

ಅಧಿಕಾರ ಸ್ಥಾನಮಾನ ಕೊಟ್ಟಿರುವುದು ಬಿಜೆಪಿಯಲ್ಲ, ಮತ ಹಾಕಿದ ಜನರು.

ರಾಷ್ಟ್ರ ಧ್ವಜ ತೆಗೆದು ಕೇಸರಿ ಧ್ವಜ ಹಾರಿಸುವುದಾಗಿ ಕೆ.ಎಸ್.ಈಶ್ವರಪ್ಪ ಹೇಳಿಯೇ ಇಲ್ಲ

-ಎಚ್.ವಿಶ್ವನಾಥ್,ವಿ.ಪ.ಸದಸ್ಯ

   ಇಲ್ಲ ನಾನು ಹಾಗೆಯೇ ಹೇಳಿದ್ದು ಎಂದು ಈಶ್ವರಪ್ಪ ಅವರು ಆರೆಸ್ಸೆಸ್ ಮುಖಂಡರ ಮುಂದೆ ಆಣೆ ಮಾಡುತ್ತಿದ್ದಾರಂತೆ.

ವಕ್ಫ್ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡಿರುವವರ ಹಿನ್ನೆಲೆಯನ್ನು ಲೆಕ್ಕಿಸದೆ ಕಾನೂನು ಕ್ರಮ ಕೈಗೊಳ್ಳಲಾಗುವುದು

-ಮುಹಮ್ಮದ್ ಶಾಫಿ ಸಅದಿ, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ

ಬಿಜೆಪಿ ನಿಮ್ಮನ್ನು ಒತ್ತುವರಿ ಮಾಡದಂತೆ ಜಾಗರೂಕರಾಗಿರಿ.

ರಾಜ್ಯದಲ್ಲಿ ಶಾಂತಿ,ಭದ್ರತೆಗೆ ದೊಡ್ಡ ಅಪಾಯ ಎದುರಾಗಿದ್ದು ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

 ನಿಮ್ಮ ಕುಟುಂಬದ ಶಾಂತಿ ಮತ್ತು ಭದ್ರತೆಗೆ ಧಕ್ಕೆಯಾಗಿರಬೇಕು.

share
ಪಿ.ಎ.ರೈ
ಪಿ.ಎ.ರೈ
Next Story
X