Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ‘ಬಾಂಬ್ ದಾಳಿಯಿಂದ ಕಂಗೆಟ್ಟು ಉಕ್ರೇನ್...

‘ಬಾಂಬ್ ದಾಳಿಯಿಂದ ಕಂಗೆಟ್ಟು ಉಕ್ರೇನ್ ಬಿಡಲು ನಿರ್ಧರಿಸಿದೆವು’

ಉದ್ಯಾವರದ ಮನೆ ತಲುಪಿದ ವಿದ್ಯಾರ್ಥಿ ಮೃಣಾಲ್ ಆತಂಕದ ನುಡಿ

ವಾರ್ತಾಭಾರತಿವಾರ್ತಾಭಾರತಿ28 Feb 2022 9:48 PM IST
share
‘ಬಾಂಬ್ ದಾಳಿಯಿಂದ ಕಂಗೆಟ್ಟು ಉಕ್ರೇನ್ ಬಿಡಲು ನಿರ್ಧರಿಸಿದೆವು’

ಉಡುಪಿ, ಫೆ.28: ಯುದ್ಧ ಬಾಧಿತ ಉಕ್ರೇನ್‌ನಲ್ಲಿ ಸಿಲುಕಿರುವ ಉಡುಪಿ ಜಿಲ್ಲೆಯ ಏಳು ಮಂದಿ ವಿದ್ಯಾರ್ಥಿಗಳ ಪೈಕಿ ಉದ್ಯಾವರ ಸಂಪಿಗೆನಗರ ಸಾಲ್ಮರದ ನಿವಾಸಿ ರಾಜೇಶ್ ಹಾಗೂ ಸಂಧ್ಯಾ ದಂಪತಿ ಪುತ್ರ ಮೃಣಾಲ್ ಇಂದು ಸಂಜೆ  7ಗಂಟೆ ಸುಮಾರಿಗೆ ತನ್ನ ಮನೆ ತಲುಪಿದ್ದಾರೆ.

ಉಕ್ರೇನ್ ದೇಶದ ಇವಾನೋದ ನ್ಯಾಶನಲ್ ಮೆಡಿಕಲ್ ಯುನಿವರ್ಸಿಟಿಯ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಮೃಣಾಲ್, ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಉಡುಪಿಗೆ ಆಗಮಿಸಿದರು. ಮನೆಗೆ ತೆರಳಿದ ಮೃಣಾಲ್‌ನನ್ನು ತಂದೆತಾಯಿ ಆತ್ಮೀಯವಾಗಿ ಬರಮಾಡಿಕೊಂಡರು. ಮೃಣಾಲ್ ಅವರ ಅಜ್ಜಿ ವಸಂತಿ ಕೂಡ ತನ್ನ ಮೊಮ್ಮಗನನ್ನು ನೋಡಿ ಸಂತಸ ಪಟ್ಟರು.

‘ಖಾರ್ಕಿವ್ ಮತ್ತು ಕ್ವಿವ್‌ಗೆ ಹೋಲಿಸಿದರೆ, ಇವಾನೊದಲ್ಲಿ ಪರಿಸ್ಥಿತಿ ಅಷ್ಟು ಕೆಟ್ಟದಾಗಿರಲಿಲ್ಲ. ಫೆ.24ರಂದು ಇವಾನೊದಲ್ಲಿನ ತನ್ನ ಅಪಾರ್ಟ್‌ಮೆಂಟ್‌ನಿಂದ ಕೇವಲ ಐದು ಕಿ.ಮೀ ದೂರದಲ್ಲಿರುವ ವಿಮಾನ ನಿಲ್ದಾಣದ ಮೇಲೆ ರಷ್ಯಾ ಪಡೆ ಬಾಂಬ್ ದಾಳಿ ನಡೆದ ನಂತರ ನಾವೆಲ್ಲ ಹೆಚ್ಚು ಆತಂಕಕ್ಕೆ ಒಳಗಾದೆವು. ಆದ್ದರಿಂದ ನಾವು ಪೋಲೆಂಡ್ ಗಡಿಗೆ ಹೋಗಲು ನಿರ್ಧರಿಸಿದೆವು. ಆದರೆ ಪೋಲೆಂಡ್ ಗಡಿ ಆಗಲೇ ತುಂಬಿ ಹೋಗಿದ್ದುದರಿಂದ ನಾವು ರೊಮೇನಿಯಾ ಗಡಿಯತ್ತ ತೆರಳಲು ನಿರ್ಧರಿಸಿದೆವು’ ಎಂದು ಮೃಣಾಲ್ ತನ್ನ ಪಯಣವನ್ನು ವಿವರಿಸಿದರು.

ಟ್ರಾಫಿಕ್ ಸಮಸ್ಯೆಯಿಂದ ರೊಮೇನಿಯನ್- ಸೈರೆಟ್ ಗಡಿಯವರೆಗೆ ಬಸ್ಸಿನಲ್ಲಿ ಬರಲು ಸಾಧ್ಯವಾಗದ ಕಾರಣ, ನಾನು ಸೇರಿದಂತೆ ಹಲವು ವಿದ್ಯಾರ್ಥಿ ಗಳು ಕಠಿಣ ಚಳಿಯ ವಾತಾವರಣದಲ್ಲೂ ಸುಮಾರು ಆರು ಕಿ.ಮೀ. ನಡೆದು ಕೊಂಡೆ ಆಗಮಿಸಿ ಗಡಿ ತಲುಪಿದೆವು. ಸೈರೆಟ್ ಗಡಿ ದಾಟಿದ ನಂತರ, ರೊಮೇನಿಯನ್ ಸರಕಾರ ನಮಗೆ ಹೆಚ್ಚು ಮಾನವೀಯತೆಯನ್ನು ತೋರಿಸಿತು. ಅಲ್ಲಲ್ಲಿ ಆಹಾರ ಮತ್ತು ನೀರಿನ ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು. ಅದನ್ನು ಎಲ್ಲರಿಗೂ ಉಚಿತವಾಗಿ ನೀಡಲಾಯಿತು. ರೊಮೇನಿಯಾದಲ್ಲಿ ಎಲ್ಲವೂ ಉಚಿತವಾಗಿ ದೊರೆಯುತ್ತಿದ್ದ ಹಿನ್ನೆಲೆಯಲ್ಲಿ ನಮಗೆ ಕರೆನ್ಸಿ ವಿನಿಮಯದ ಅಗತ್ಯವೇ ಬರಲಿಲ್ಲ’

ರೊಮೇನಿಯಾ ಗಡಿಯನ್ನು ತಲುಪಿದ ಭಾರತೀಯ ವಿದ್ಯಾರ್ಥಿಗಳನ್ನು ಬುಕಾರೆಸ್ಟ್ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ಭಾರತೀಯ ರಾಯಭಾರ ಕಚೇರಿಯ ಬಸ್‌ಗಳು ಅಲ್ಲಿ ಸಿದ್ಧವಾಗಿದ್ದವು. ಬುಕಾರೆಸ್ಟ್‌ನಿಂದ ದೆಹಲಿ ಮತ್ತು ಅಲ್ಲಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸರಕಾರವೇ ವಿಮಾನದ ಶುಲ್ಕವನ್ನು ಭರಿಸಿದೆ. ಹಾಗಾಗಿ ನಾನು ಸರಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಉಕ್ರೇನ್‌ನಲ್ಲಿದ್ದ ಪರಿಸ್ಥಿತಿಯ ಪ್ರಕಾರ ಇಷ್ಟು ಬೇಗ ನಮ್ಮನ್ನು ಏರ್‌ಲಿಫ್ಟ್ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಅದರಲ್ಲೂ ಮೊದಲ ವಿಮಾನದಲ್ಲಿ ನಾನು ಬರುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದರು.

‘ರಷ್ಯಾ ಮತ್ತು ಉಕ್ರೇನ್‌ನಲ್ಲಿ ಭಾರತದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಲ್ಲಿಯ ಶಿಕ್ಷಣದ ಗುಣಮಟ್ಟ ಚೆನ್ನಾಗಿರುವುದ ರಿಂದ ನಾವು ಅಲ್ಲಿಗೆ ಹೋಗಿದ್ದೇವೆ. ಯುದ್ಧದ ವಾತಾವರಣ ತಣ್ಣಗಾದ ಕೂಡಲೇ ನಾನು ಉಕ್ರೇನ್ಗೆ ಹೋಗಲು ಬಯಸುತ್ತೇನೆ. ನನ್ನ ಶಿಕ್ಷಣಕ್ಕಾಗಿ ಪೋಷಕರು ಈಗಾಗಲೇ 7.5 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಆದ್ದರಿಂದ ಅವರಿಗೆ ನನ್ನ ಮುಂದಿನ ಭವಿಷ್ಯದ ಬಗ್ಗೆ ಸ್ವಲ್ಪಚಿಂತೆಯಾಗಿದೆ ಎಂದು ಮೃಣಾಲ್ ತಿಳಿಸಿದರು.

''ಗಡಿಭಾಗದಲ್ಲಿ ತುಂಬಾ ಸಮಸ್ಯೆ ಆಯಿತು. ಹತ್ತು ನಿಮಿಷದ ಕೆಲಸಕ್ಕೆ 12 ಗಂಟೆ ಕಾಯಬೇಕಾಯಿತು. ರೊಮೇನಿಯ ಗಡಿ ದಾಟುವವರೆಗೆ ತುಂಬಾ ಕಷ್ಟ ಪಟ್ಟೆವು. ಚಳಿ, ಹಸಿವು ನಿದ್ದೆಯಿಂದ ಕಂಗಾಲಾಗಿದ್ದೆವು. ಯುದ್ಧದ ಹಿಂದಿನ ರಾತ್ರಿ ಮೆಸ್ನಲ್ಲಿ ಫುಡ್ ಕೊಟ್ಟಿದ್ದರು. ಯುದ್ಧದ ವಾತಾವರಣದಿಂದ ಮಾರ್ಕೆಟ್‌ಗೆ ಹೋಗಲು ಆಗಲಿಲ್ಲ. 50 ರೂ. ಟೊಮೆಟೊಗೆ 300ರೂ. ಆಗಿತ್ತು. ಅಕ್ಕಿ, ಹಣ್ಣು ಎಣ್ಣೆ, ನೀರು ಸಿಗುತ್ತಿರಲಿಲ್ಲ''.
-ಮೃಣಾಲ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X