ಸಾಲ ಮತ್ತು ಸಾರಾಯಿಗೆ ಅವಲಂಬಿತವಾದ ಬಜೆಟ್: ವಿಪಕ್ಷ ಉಪ ನಾಯಕ ಯು.ಟಿ.ಖಾದರ್

ವಿಪಕ್ಷ ಉಪ ನಾಯಕ ಯು.ಟಿ.ಖಾದರ್
ಮಂಗಳೂರು: ಮುಖ್ಯಮಂತ್ರಿ ಬಸರವಾಜ್ ಬೊಮ್ಮಾಯಿ ಅವರು ಇಂದು ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ವಿಪಕ್ಷ ಉಪ ನಾಯಕ ಯು.ಟಿ.ಖಾದರ್, "ಈ ಬಜೆಟ್ ಸಾಲ ಮತ್ತು ಸಾರಾಯಿಗೆ ಅವಲಂಬಿತವಾದ ಬಜೆಟ್, ರಾಜ್ಯದ ಅಭಿವೃದ್ಧಿಗೆ ಯಾವುದೇ ದೂರದೃಷ್ಟಿ ರೂಪಿಸದೆ, ನಿಖರತೆ ಹಾಗೂ ಸ್ವಚ್ಛತೆಯಿಲ್ಲದೆ ಬಜೆಟ್ ಮಂಡಿಸಿದಂತಿದೆ. ಈ ಬಜೆಟ್ ನಿಂದ ರಾಜ್ಯ ಅಭಿವೃದ್ಧಿಯಲ್ಲಿ ಮುನ್ನಡೆಯಾಗುವ ಬದಲು ಹಿನ್ನಡೆಯಾಗಲು ಹೊರಟಂತಿದೆ" ಎಂದು ಅವರು ಹೇಳಿದ್ದಾರೆ.
ಕರಾವಳಿಗರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬಹುತೇಕ ಅವಲಂಬಿಸಿದರೂ ಅವರ ವಿಶ್ವಾಸಕ್ಕೆ ಈ ಬಜೆಟ್ ದಕ್ಕೆ ತಂದಿದೆ. ಮೀನುಗಾರಿಕೆಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ಪೂರಕವಾದ ಯಾವುದೇ ಅಂಶಗಳು ಈ ಬಜೆಟ್ ನಲ್ಲಿಲ್ಲ ಎಂದು ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದಾರೆ.
Next Story