ಭೂಮಿ ಯೋಜನೆ: ರಾಜ್ಯದಲ್ಲೇ ಉಡುಪಿ ಜಿಲ್ಲೆ ಪ್ರಥಮ
ಉಡುಪಿ: ಸರಕಾರದ ಭೂಮಿ ಯೋಜನೆಯಡಿ ಫೆಬ್ರವರಿ-2022 ರ ತಿಂಗಳಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಭೂಮಿ ಸಂಬಂಧಿತ ಅರ್ಜಿಗಳ ಪಹಣಿ ಕಾಲಂ3 ಮತ್ತು 9, ವಿವಾದಾಸ್ಪದ/ ವಿವಾದಾಸ್ಪದವಲ್ಲದ ಮ್ಯುಟೇಶನ್ ಪ್ರಕ್ರಿಯೆಗಳ ವಿಲೇವಾರಿ, ಪೈಕಿ ಪಹಣಿ ತಿದ್ದುಪಡಿ, ಭೂ ಪರಿವರ್ತನೆ, ಕಂದಾಯ ನ್ಯಾಯಾಲಯದ ಕೋರ್ಟ್ ಪ್ರಕರಣ ಇತ್ಯಾದಿಗಳನ್ನು ನಿಗದಿತ ಅವಧಿಯೊಳಗೆ ಶೀಘ್ರ ವಿಲೇವಾರಿ ಮಾಡಿ 2.19 ವಿಲೇವಾರಿ ಸೂಚ್ಯಂಕವನ್ನು ಸಾಧಿಸಿ ಸತತವಾಗಿ ಎಪ್ರಿಲ್- 2020ರಿಂದ ಫೆಬ್ರವರಿ-2022 ತಿಂಗಳವರೆಗೆ ಉಡುಪಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಪಡೆದಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳು ಉತ್ತಮ ಸಾಧನೆ ಮಾಡಿರುವುದನ್ನು ಪರಿಗಣಿಸಿ ಬೆಂಗಳೂರು ಭೂಮಾಪನಾ ಇಲಾಖೆ ಆಯುಕ್ತರು ಹಾಗೂ ಭೂಮಿ ಮತ್ತು ಯುಪಿಓಆರ್ ನಿರ್ದೇಶಕರು ಅಭಿನಂದನಾ ಪತ್ರವನ್ನು ನೀಡಿ ಜಿಲ್ಲೆಯ ಸಾಧನೆಯ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
Next Story