Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ7 March 2022 12:05 AM IST
share
ಓ ಮೆಣಸೇ...

ಭಾಷೆ, ಸಂಸ್ಕೃತಿ, ನಡವಳಿಕೆ ಮತ್ತು ನಾಗರಿಕತೆ ಕೊಂಡಿಯಾಗಿ ಕೆಲಸ ಮಾಡಿದರೆ ಮಾತ್ರ ಸಮಾಜ ಚೆನ್ನಾಗಿ ನಡೆಯಲು ಸಾಧ್ಯ -ಸುನೀಲ್ ಕುಮಾರ್, ಸಚಿವ

ಆದ್ದರಿಂದ ಸಮಾಜವನ್ನು ಛಿದ್ರಗೊಳಿಸುವುದರಲ್ಲೇ ಸಾರ್ಥಕ್ಯ ಕಾಣುವವರು ಕೊಂಡಿಗಳನ್ನು ಕಡಿಯುವ ಸಾಧನೆ ಮಾಡಿ ಸಚಿವರಾಗುತ್ತಾರೆ.

ನಮ್ಮದು ಒಂದೇ ಭಾಷೆ, ಒಂದೇ ದೇಶ, ನಾವೆಲ್ಲರೂ ಒಂದೇ ಎಂಬ ಭಾವನೆಯಲ್ಲಿ ಬದುಕುತ್ತಿರುವ ದೇಶ -ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

ಮನುವಾದಿಗಳ ವಿಚ್ಛಿದ್ರವಾದವನ್ನು ನಿಭಾಯಿಸುವ ಕಲೆಯನ್ನು ಕರಗತ ಮಾಡಿಕೊಂಡರೆ ಭವಿಷ್ಯದಲ್ಲೂ ನಾವು ಆ ರೀತಿ ಬದುಕುತ್ತಿರಬಹುದು.

ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಸರಕಾರದ ಪರಿಸ್ಥಿತಿ ನಿರ್ಮಾಣವಾದೀತು -ಪ್ರತಾಪಸಿಂಹ, ಸಂಸದ

ಕೇಂದ್ರ ಸರಕಾರದಿಂದ ಆ ಕಾರಣಕ್ಕಾದರೂ ರಾಜ್ಯಕ್ಕೆ 200 ಕೋಟಿ ರೂ. ಅನುದಾನ ಸಿಗುತ್ತಿತ್ತು.

ಜಗತ್ತಿನ ಯಾವುದೇ ದೇಶದ ಒಂದಿಚು ನೆಲವನ್ನೂ ಆಕ್ರಮಿಸದ ವಿಶ್ವದ ಏಕೈಕ ದೇಶ ಭಾರತವಾಗಿದೆ -ರಾಜನಾಥ್ ಸಿಂಗ್, ಕೇಂದ್ರ ಸಚಿವ

ನಮ್ಮ ನೆಲವನ್ನು ಇನ್ನೊಬ್ಬರು ಆಕ್ರಮಿಸದಂತೆ ತಡೆಯುವಲ್ಲಿ ಆದ ಸರಕಾರದ ವೈಫಲ್ಯಕ್ಕೆ ಇದು ಸಮರ್ಥನೆಯೇ?

ಹಾಲು ಕುಡಿದು ಸಾಯುವವರಿಗೆ ಯಾರಾದರೂ ವಿಷ ಹಾಕಿ ಕೊಲ್ಲುತ್ತಾರಾ? -ಗೋವಿಂದ ಕಾರಜೋಳ, ಸಚಿವ

ವಿಷ ಕುಡಿದರೂ ಸಾಯದವರು ಹಾಲು ಕುಡಿದು ಸಾಯುತ್ತಾರೆಯೇ?

2023ರಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಬಿಜೆಪಿಯೊಳಗಿರುವವರಿಗೆ ನೀವು ಮಾಡಲಿರುವ ಕೆಲಸದ ಬಗ್ಗೆ ತೀವ್ರವಾದ ಭಯವಿದ್ದಂತಿದೆ.

ನಾನು ಬರೆದಿರುವ ‘ಬಾಂಬೆ ಡೇಸ್’ ಪುಸ್ತಕ ಹೊರಬಂದರೆ ಕೆಲವು ಮಾಜಿ ಮುಖ್ಯಮಂತ್ರಿಗಳು ಬೆತ್ತಲಾಗುತ್ತಾರೆ -ಎಚ್.ವಿಶ್ವನಾಥ್, ವಿ.ಪ.ಸದಸ್ಯ

ಇದನ್ನೆಲ್ಲಾ ಘೋಷಿಸಿ ನೀವು ಯಾವುದಕ್ಕಾಗಿಯೋ ಚೌಕಾಶಿ ಮಾಡುತ್ತಿದ್ದೀರಿ ಎಂಬ ನಿಮ್ಮ ಇರಾದೆ ಮಾತ್ರ ಈಗಾಗಲೇ ಬೆತ್ತಲಾಗಿದೆ.

ಹಿಂದೂಗಳು ಮತ್ತು ಮುಸ್ಲಿಮರು ಬೇರೆಯಾಗಬೇಕು ಎನ್ನುವುದೇ ಕಾಂಗ್ರೆಸ್‌ನ ಉದ್ದೇಶ -ಕೆ.ಎಸ್.ಈಶ್ವರಪ್ಪ, ಸಚಿವ

ಅವರು ಅಷ್ಟು ಕಾಲ ಸಂಘಪರಿವಾರವನ್ನು ಸಹಿಸಿದ್ದು ಮತ್ತು ಪೋಷಿಸಿದ್ದು ಇದೇ ಕಾರಣಕ್ಕೆ ಎಂಬ ಒಳಗುಟ್ಟನ್ನೂ ಉಗುಳಿ ಬಿಡಿ.

 ಸರಕಾರಿ ಶಾಲೆಗಳು ಭಾರತೀಯ ಶಿಕ್ಷಣದ ಸೊಗಡು ಹೊಂದಿದ್ದು, ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಚಿಂತನೆ ಬೆಳೆಸುತ್ತದೆ -ನಳಿನ್ ಕುಮಾರ್ ಕಟೀಲು, ಸಂಸದ

ಸ್ವತಃ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಮಾತ್ರ ಕಲಿಸುತ್ತೇವೆಂದು ಸಂಘಿಗಳೆಲ್ಲ ಪ್ರಮಾಣ ಮಾಡಿದರೂ ಈ ಬಗೆಯ ಬೊಗಳೆಯನ್ನು ಜನರೆಲ್ಲಿ ನಂಬುತ್ತಾರೆ?

ನಾನು ಜಲ ಸಂಪನ್ಮೂಲ ಸಚಿವನಾಗಿದ್ದ ಸಂದರ್ಭದಲ್ಲಿ ಕರ್ನಾಟಕ-ಮಹಾರಾಷ್ಟ್ರ ನಡುವಿನ ಜಲ ವಿವಾದ ಪರಿಹರಿಸಲು ನನಗೆ ಸಾಧ್ಯವಾಗಲಿಲ್ಲ -ನಿತಿನ್ ಗಡ್ಕರಿ, ಕೇಂದ್ರ ಸಚಿವ

ವಿವಾದ ಹುಟ್ಟಿಸಿ ಹಾಕುವಲ್ಲಿ ನೀವು ಬ್ಯುಸಿ ಆಗಿದ್ದಿರಬೇಕು.

ಯುವ ಜನರಲ್ಲಿ ಪ್ರಾರಂಭದಿಂದಲೇ ವೈಜ್ಞಾನಿಕ ಕುತೂಹಲ ಬೆಳೆಸಬೇಕು -ಡಿ.ವಿ.ಸದಾನಂದಗೌಡ, ಕೇಂದ್ರದ ಮಾಜಿ ಸಚಿವ

ಮುಚ್ಚಿದ ಕೋಣೆಯೊಳಗಿನ ದೃಶ್ಯಗಳ ರೆಕಾರ್ಡಿಂಗ್ ಅಸಾಧ್ಯಗೊಳಿಸುವಂತಹ ತಂತ್ರಜ್ಞಾನವನ್ನು ಅವರ ಕೈಯಿಂದ ಬೆಳೆಸಬೇಕು.

ಉಕ್ರೇನ್‌ನಲ್ಲಿ ನಮ್ಮ ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದರೆ ಕಾಂಗ್ರೆಸ್‌ನವರು ಬಿರಿಯಾನಿ ತಿನ್ನುತ್ತಾ, ಡ್ಯಾನ್ಸ್ ಮಾಡುತ್ತಾ ಪಾದಯಾತ್ರೆ ಮಾಡುತ್ತಿದ್ದಾರೆ -ಆರ್ .ಅಶೋಕ್, ಸಚಿವ

ನಿಮ್ಮ ಪಾಳಯದವರ ಮಕ್ಕಳು ಅಮೆರಿಕ ಮತ್ತು ಬ್ರಿಟನ್‌ಗಳನ್ನು ಬಿಟ್ಟು ಉಕ್ರೇನ್‌ಗೆ ಹೋಗಿದ್ದು ಯಾವಾಗ?

ಹೇಗಾದರೂ ಮಾಡಿ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂಬ ಹುಚ್ಚು ಡಿಕೆಶಿ ಅವರನ್ನು ಆವರಿಸಿಕೊಂಡಿದೆ -ಡಾ.ಅಶ್ವತ್ಥನಾರಾಯಣ, ಸಚಿವ

ನಿಮ್ಮ ಹುಚ್ಚು ಬಿಟ್ಟಿದೆಯೇ?

ಕೇಂದ್ರ ಸಚಿವ ನಿತಿನ್ ಗಡ್ಕರಿ ಜನಪರ ಕಾಳಜಿಯುಳ್ಳ ಅಪರೂಪದ ರಾಜಕಾರಣಿ -ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ

ಯಾವುದಾದರೂ ರಸ್ತೆ ಕಾಂಟ್ರಾಕ್ಟ್ ಬಗ್ಗೆ ಮಾತುಕತೆಗೆ ಇದು ಪೀಠಿಕೆ ಅಲ್ಲ ತಾನೇ?

ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯ್ದೆಯಿಂದ ಶಿಕ್ಷಕರು ಖುಷಿಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಪ್ರಯೋಗಗಳನ್ನು ಮಾಡಲಾಗುವುದು -ಬಿ.ಸಿ.ನಾಗೇಶ್, ಸಚಿವ

ಒಂದೊಂದು ವರ್ಗಾವಣೆಗಾಗಿ ಎಷ್ಟೆಷ್ಟು ಕೊಟ್ಟು ಅವರು ನಿಮ್ಮನ್ನು ಖುಷಿ ಪಡಿಸಬೇಕು?

ಉ.ಪ್ರ. ಸಿಎಂ ಭಾರತದ ಮುಂದಿನ ಪ್ರಧಾನಿ ಎಂದು ಜನರು ಚರ್ಚೆ ನಡೆಸುತ್ತಿರುವುದು ತೀರಾ ಸಹಜವಾಗಿದೆ -ಅಮಿತ್ ಶಾ, ಕೇಂದ್ರ ಸಚಿವ

ಮೋದಿ ಮತ್ತು ಯೋಗಿಯನ್ನು ಜಗಳಾಡಿಸಿ ನೀವು ಸಾಧಿಸಲು ಹೊರಟಿರುವುದು ಏನನ್ನು?

ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ವಿಷಯದಲ್ಲಿ ನಮ್ಮ ದೇಶದ ರಾಜಕೀಯ ಪಕ್ಷಗಳ ನಡುವೆ ಒಗ್ಗಟ್ಟಿಲ್ಲ ಎನ್ನುವಂತೆ ಹೊರಗಿನವರಿಗೆ ತೋರಿಸಿಕೊಳ್ಳುವುದು ಬೇಡ -ದೇವೇಗೌಡ, ಮಾಜಿ ಪ್ರಧಾನಿ

ರಾಜಕೀಯ ಪಕ್ಷಗಳಲ್ಲಿ ಒಮ್ಮತವಿದೆ, ಆಳುವ ಪಕ್ಷ ಮತ್ತು ಸರಕಾರ ಮಾತ್ರ ಸೋಮಾರಿಯಾಗಿವೆ ಎಂಬುದನ್ನು ಜಗತ್ತೆಲ್ಲ ನೋಡುತ್ತಿರುವಾಗ ಬಚ್ಚಿಡುವುದಕ್ಕೆ ಏನು ತಾನೇ ಉಳಿದಿದೆ?

ನೀಟ್ ವ್ಯವಸ್ಥೆಯನ್ನು ವಿರೋಧಿಸುವವರು ಧನದಾಹಿಗಳು, ದ್ರೋಹಿಗಳು -ಡಾ.ಅಶ್ವತ್ಥನಾರಾಯಣ, ಸಚಿವ

ಒಂದು ಕಾಲದದಲ್ಲಿ ಸಂಘವಲಯದಲ್ಲಿ, ಬ್ರಿಟಿಷರನ್ನು ವಿರೋಧಿಸುವವರ ಬಗ್ಗೆಯೂ ಇಂತಹ ಅಭಿಮತವಿತ್ತು.

ರೈತರು ಅಸಮಾಧಾನಗೊಂಡಿರುವುದರಿಂದ ಉ.ಪ್ರ.ದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಕಡಿಮೆ -ಪ್ರವೀಣ್ ತೊಗಾಡಿಯಾ, ವಿಎಚ್‌ಪಿ ಮಾಜಿ ಅಧ್ಯಕ್ಷ

ಈಗಲೂ ನಿಮಗೆ ರೈತರ ಸಮಾಧಾನಕ್ಕಿಂತ ಬಿಜೆಪಿ ಗೆಲುವೇ ಹೆಚ್ಚು ಚಿಂತೆಯ ವಿಷಯವೇ?

ಉಕ್ರೇನ್ ಯುದ್ಧದಿಂದ ಭವಿಷ್ಯದಲ್ಲಿ ಏನಾಗಬಹುದು ಎಂಬ ಯಾವ ಕಲ್ಪನೆಯೂ ರಶ್ಯ ಅಧ್ಯಕ್ಷ ಪುಟಿನ್‌ಗೆ ಇಲ್ಲ -ಜೋ ಬೈಡನ್, ಅಮೆರಿಕ ಅಧ್ಯಕ್ಷ

ನಿಮ್ಮ ಭವಿಷ್ಯವಂತೂ ಚಿಂತಾಜನಕವಾಗಿದೆ.

ವಿದೇಶಗಳಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೆರಳಿರುವ ವಿದ್ಯಾರ್ಥಿ ಗಳಲ್ಲಿ ಶೇ.90ರಷ್ಟು ನೀಟ್ ಪರೀಕ್ಷೆಯಲ್ಲಿ ಅನುತೀರ್ಣರಾದವರು -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ

ಪರೀಕ್ಷೆಯನ್ನೇ ಎದುರಿಸಿರಲಿಲ್ಲ ಎಂದಾದರೆ ಅವರಲ್ಲೊಬ್ಬನನ್ನು ಪ್ರಧಾನಿ ಪಟ್ಟಕ್ಕೆ ಪರಿಗಣಿಸಬಹುದಿತ್ತು.

ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಬಿಹಾರಿ ಡಿಎನ್‌ಎ ಹೊಂದಿದ್ದಾರೆ -ರೇವಂತ ರೆಡ್ಡಿ, ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ

ಬಿಹಾರವೆಂದರೆ ಎಲ್ಲಿ, ಅಂಟಾರ್ಟಿಕಾದಲ್ಲಿದೆಯೇ?

ಬಿಜೆಪಿಯದ್ದು ಡಬಲ್ ಇಂಜಿನ್ ಸರಕಾರ ಅಲ್ಲ, ಡಬ್ಬಾ ಇಂಜಿನ್ ಸರಕಾರ -ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ

 ಹಾಗೆಲ್ಲ ಹಂಗಿಸುವ ಬದಲು ಎರಡು ತದ್ವಿರುದ್ಧ ದಿಕ್ಕುಗಳೆಡೆಗೆ ಎಳೆಯುವ ಡಬಲ್ ಇಂಜಿನ್ ಸರಕಾರ ಎನ್ನಬಹುದಲ್ಲಾ?

ಕಾಂಗ್ರೆಸ್‌ನವರು ಈಗಾಗಾಲೇ ಅಧಿಕಾರಕ್ಕೆ ಬಂದಂತೆ ಎಲ್ಲ ಕಡೆ ಪೋಸ್ ಕೊಡುತ್ತಿದ್ದಾರೆ -ಬಸವರಾಜ ಬೊಮ್ಮಾಯಿ, ಸಿಎಂ

ನೀವೇಕೆ ಅಧಿಕಾರ ಕಳೆದು ಕೊಂಡವರಂತೆ ಫೋಸ್ ಕೊಡುತ್ತಿರುವುದು?

ರಾಮನಾಮ ಜಪಿಸಿ ಅಧಿಕಾರಕ್ಕೆ ಬಂದವರು ರಾಮನ ಭಕ್ತ ಆಂಜನೇಯನನ್ನೇ ಮರೆತು ಬಿಟ್ಟಿದ್ದಾರೆ -ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ನಾಯಕ

ಅವನ ಹೆಸರಲ್ಲೂ ಜನರ ನಡುವೆ ಜಗಳ ಹಚ್ಚಬೇಕೇ ?

ಮುಂದಿನ ಚುನಾವಣೆಯಲ್ಲಿ ಗೆದ್ದರೆ ನಾಯಕ ಆಗಬೇಕೆಂಬ ಉದ್ದೇಶದಿಂದ ಪಾದಯಾತ್ರೆ ಮಾಡಲಾಗುತ್ತಿದೆ -ಶ್ರೀರಾಮುಲು, ಸಚಿವ

ಈಗಲೇ ಅವರ ಭವಿಷ್ಯದ ನಾಯಕತ್ವದ ಬಗ್ಗೆ ಚಿಂತಿಸುವಷ್ಟು ನಿಮ್ಮ ಪರಿಸ್ಥಿತಿ ಚಿಂದಿಯಾಗಿದೆಯೇ?

ಸಜ್ಜನರ ಜೊತೆಗಿರಬೇಕು ಎಂದು ಕೊಂಡಿದ್ದೇನೆ -ಸಿ.ಎಂ. ಇಬ್ರಾಹೀಂ, ವಿ.ಪ. ಸದಸ್ಯ

ಅವರು ಒಪ್ಪುತ್ತಾರೆಯೇ?

ಮುಂದೊಂದು ದಿನ ಕೇಸರಿ ಪೇಟಕ್ಕೆ ತಲೆಬಾಗುವ ದಿನ ಬರುತ್ತದೆ -ಕೆ.ಎಸ್.ಈಶ್ವರಪ್ಪ, ಸಚಿವ

ಚಂದದ ಕೇಸರಿ ಬಣ್ಣಕ್ಕೆ ಪೌರೋಹಿತ್ಯದ ಸೆಗಣಿ ಬಳಿದವರು ತಮ್ಮ ವಿನಾಶದ ದಿನಗಳನ್ನು ಹೀಗೆಲ್ಲ ವೈಭವೀಕರಿಸಿ ಸಾಂತ್ವನ ಪಡೆಯುತ್ತಿರುತ್ತಾರೆ.

ಯುದ್ಧಪೀಡಿತ ಉಕ್ರೇನ್‌ನಿಂದ ಒಂದು ಶವ ತರುವ ಜಾಗದಲ್ಲಿ 8-10 ಜನರನ್ನು ಕರೆತರಬಹುದು -ಅರವಿಂದ ಬೆಲ್ಲದ, ಶಾಸಕ

ಒಳಗಿನ ಮನುಷ್ಯತ್ವ ಸಂಪೂರ್ಣ ಸತ್ತಮೇಲೆ ಲೆಕ್ಕಾಚಾರಗಳೆಲ್ಲಾ ಹೀಗೆಯೇ ಇರುತ್ತವೆ.

share
ಪಿ.ಎ.ರೈ
ಪಿ.ಎ.ರೈ
Next Story
X