ಯಕ್ಷ ಕಲಾರಾಧಕ ವಿಠಲ ನಾಯಕ್ ನಿಧನ

ಶಿರ್ವ, ಮಾ.8: ತಮ್ಮ ಮನೆಯಲ್ಲಿಯೇ ಯಕ್ಷಾಂಗಣವನ್ನು ಸ್ಥಾಪಿಸಿ ಉಚಿತ ಯಕ್ಷಗಾನ ಶಾಲೆಯನ್ನು ತೆರೆದು ಆಸಕ್ತ ಮಕ್ಕಳಿಗೆ ಯಕ್ಷಗುರುಗಳ ಮೂಲಕ ಉಚಿತ ಯಕ್ಷಗಾನ ತರಬೇತಿ ನೀಡುತ್ತಿದ್ದ ಬೆಳ್ಳೆ ಗ್ರಾಪಂ ವ್ಯಾಪ್ತಿಯ ಕಟ್ಟಿಂಗೇರಿಯ ಯಕ್ಷ ಕಲಾರಾಧಕ ವಿಠಲ ನಾಯಕ್ (63) ಮಂಗಳವಾರ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಹಲವು ವರ್ಷಗಳ ಹಿಂದೆ ಪತ್ನಿ ನಿಧನರಾಗಿದ್ದು, ಒಂಟಿ ಜೀವನ ನಡೆಸುತ್ತಿ ದ್ದರು. ಇವರ ಸಮಾಜಸೇವೆ ಹಾಗೂ ಕಲಾಸೇವೆಯನ್ನು ಗುರುತಿಸಿ ಹಲವು ಸಂಘಟನೆಗಳು ಸನ್ಮಾನಿಸಿವೆ.
ಇವರ ನಿಧನಕ್ಕೆ ಕಟ್ಟಿಂಗೇರಿ ದೇವಳದ ಆಡಳಿತ ಧರ್ಮದರ್ಶಿ ದೇವದಾಸ್ ಹೆಬ್ಬಾರ್ ಕಟ್ಟಿಂಗೇರಿ, ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಅಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಬೆಳ್ಳೆ ಗ್ರಾಪಂ ಅಧ್ಯಕ್ಷ ಸುಧಾಕರ ಪೂಜಾರಿ, ಉದ್ಯಮಿ ಬೆಳ್ಳೆ ಪುಂಡಲೀಕ ನಾಯಕ್, ಉದ್ಯಮಿ ಕೃಷ್ಣ ಆಚಾರ್ಯ, ನ್ಯಾಯವಾದಿ ಸಂತೋಷ್ ಮೂಡುಬೆಳ್ಳೆ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story