ಯುದ್ಧ ಪೀಡಿತ ಉಕ್ರೇನ್ನಿಂದ ದ.ಕ.ಜಿಲ್ಲೆಯ 18 ವಿದ್ಯಾರ್ಥಿಗಳೂ ಭಾರತಕ್ಕೆ ಆಗಮನ

ಫೈಲ್ ಫೋಟೊ
ಮಂಗಳೂರು, ಮಾ.8: ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ದ.ಕ.ಜಿಲ್ಲೆಯ 18 ಮಂದಿ ವೈದ್ಯಕೀಯ ವಿದ್ಯಾರ್ಥಿಗಳಲ್ಲರೂ ಕೂಡ ಭಾರತಕ್ಕೆ ಆಗಮಿಸಿದ್ದಾರೆ. ಆ ಪೈಕಿ ಕೆಲವರು ಮನೆ ತಲುಪಿದ್ದರೆ ಇನ್ನು ಕೆಲವರು ದೇಶದ ಪ್ರಮುಖ ನಗರ ತಲುಪಿದ್ದಾರೆ. ಎಲ್ಲರೂ ಶೀಘ್ರ ಮನೆ ಸೇರಲಿದ್ದಾರೆ ಎಂದು ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾಹಿತಿ ನೀಡಿದ್ದಾರೆ.
ಭಾರತ ಸರಕಾರದ ‘ಆಪರೇಷನ್ ಗಂಗಾ’ ಕಾರ್ಯಾಚರಣೆಯಲ್ಲಿ ನೈಮಿಶಾ, ಹೀನಾ ಫಾತಿಮಾ, ಡೇಲ್ ಅಂದ್ರಾದೆ ಲುವಿಸ್ , ಜೆ. ಅನುಷಾ ಭಟ್ , ಪ್ರಣವ್ ಕುಮಾರ್ ಎಸ್., ಲಾಯ್ಡಾ ಆ್ಯಂಟನಿ ಪಿರೇರಾ , ಅನೈನಾ ಅನ್ನಾ, ಕ್ಲೇಟನ್ ಓಸ್ಮಂಡ್ ಡಿಸೋಜ, ಅಹ್ಮದ್ ಸಾದ್ ಅರ್ಷದ್, ಪೃಥ್ವಿರಾಜ್ ಭಟ್, ಸಾಕ್ಷಿ ಸುಧಾಕರ್,ಪ್ರೀತಿ ಪೂಜಾರಿ, ಲಕ್ಷಿತಾ ಪುರುಷೋತ್ತಮ್, ಶಲ್ವಿನ್ ಪ್ರೀತಿ ಅರಾನ್ಹಾ, ಮನೆ ತಲುಪಿದ್ದಾರೆ. ಪೂಜಾ ಮಲ್ಲಪ್ಪ ಅತಿವಾಳ್ ಬೆಂಗಳೂರಿನ ಮನೆ ತಲುಪಿದ್ದಾರೆ.
ಮುಹಮ್ಮದ್ ಮಿಸಾಲ್ ಅರೀಫ್ ಮತ್ತುಶೇಖ್ ಮುಹಮ್ಮದ್ ತ್ವಾಹಾ ಹೊಸದಿಲ್ಲಿ ಹಾಗೂ ಅಂಶಿತಾ ರೆಶಾಲ್ ಪದ್ಮಶಾಲಿ ಮುಂಬೈ ತಲುಪಿದ್ದಾರೆ.