ಪೆರ್ಡೂರಿನಲ್ಲಿ ವಿದ್ಯಾಪೋಷಕ 23ನೇ ಮನೆ ಉದ್ಘಾಟನೆ

ಉಡುಪಿ : ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ವಿದ್ಯಾರ್ಥಿ ಗಳಾದ ಪೆರ್ಡೂರಿನ ಅಂತಿಮ ವರ್ಷದ ಇಂಜೀನಿಯರಿಗ್ ವಿದ್ಯಾರ್ಥಿ ಪ್ರಶಾಂತ್ ಕುಮಾರ್ ಹಾಗೂ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಪವಿತ್ರಾ ಅವರಿಗೆ ನಿರ್ಮಿಸಲಾದ ಅನಂತಪದ್ಮನಾಭ ನಿಲಯ ಮನೆಯ ಉದ್ಘಾಟನೆ ಜರಗಿತು.
ದಾನಿಗಳಾದ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಹಾಗೂ ಜಿ. ವಿಷ್ಣುಮೂರ್ತಿ ಭಟ್ ತಮ್ಮ ತೀರ್ಥರೂಪ ಅಚ್ಯುತ ಭಟ್ ನೆನಪಿನಲ್ಲಿ ಸುಮಾರು ೭ ಲಕ್ಷ ವೆಚ್ಚದ ನಿರ್ಮಿಸಿಕೊಟ್ಟ ನೂತನ ಮನೆಯನ್ನು ಅಚ್ಯುತ ಭಟ್ ಅವರ ಪತ್ನಿ ಲಕ್ಷ್ಮೀ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಈ ಸಂದಭರ್ದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಪಿ.ರಾಮಕೃಷ್ಣ ಐತಾಳ್, ಹರಿನಾರಾಯಣ ಭಂಡಿ, ರಾಘವೇಂದ್ರ ಅಡಿಗ, ಮೋಹನ್ ಪೆರ್ಡೂರು, ದಾನಿಗಳಾದ ಯು.ವಿಶ್ವನಾಥ ಶೆಣೈ, ಯಕ್ಷಗಾನ ಕಲಾರಂಗದ ಪದಾಧಿಕಾರಿ ಗಳಾದ ಎಸ್.ವಿ.ಭಟ್, ಕೆ.ಸದಾಶಿವ ರಾವ್, ಮನೋಹರ ಕೆ., ಎಚ್.ಎನ್ ಶೃಂಗೇಶ್ವರ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಇದು 23ನೇ ಮನೆಯಾಗಿದ್ದು ಮೇ ತಿಂಗಳ ಅಂತ್ಯದೊಳಗೆ 11 ಮನೆಗಳ ನಿರ್ಮಾಣ ಪೂರ್ಣಗೊಂಡು ಉದ್ಘಾಟನೆಗೊಳ್ಳಲಿವೆ ಎಂದು ತಿಳಿಸಿದರು. ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು.