Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಲುಗಾಡುತ್ತಿದೆ ಬಹುತ್ವ ಭಾರತದ ಅಡಿಪಾಯ

ಅಲುಗಾಡುತ್ತಿದೆ ಬಹುತ್ವ ಭಾರತದ ಅಡಿಪಾಯ

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ14 March 2022 10:03 AM IST
share
ಅಲುಗಾಡುತ್ತಿದೆ ಬಹುತ್ವ ಭಾರತದ ಅಡಿಪಾಯ

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿಗೆ ಕಾರಣ ಕೋಮುವಾದದ ಬಗೆಗಿನ ಅದರ ಇಬ್ಬಂದಿತನ. ಪಿ.ವಿ.ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಬಾಬರಿ ಮಸೀದಿ ಕೆಡವಲು ಅವಕಾಶ ನೀಡಿದ್ದು ಹಳೆಯ ಕತೆ. ಆದರೆ, ಇತ್ತೀಚೆಗೆ ಅಯೋಧ್ಯೆಯಲ್ಲಿ ವಿಎಚ್‌ಪಿ ನಿರ್ಮಿಸಲು ಹೊರಟಿರುವ ರಾಮ ಮಂದಿರದ ಶಿಲಾನ್ಯಾಸ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಶಿಲಾನ್ಯಾಸ ಕಾರ್ಯಕ್ರಮ ತಮ್ಮದೇ ಎಂಬಂತೆ ಸಂಭ್ರಮ ಪಟ್ಟರು. ಈ ರೀತಿಯ ತಾತ್ವಿಕ ದಿವಾಳಿಕೋರತನ ಕಾಂಗ್ರೆಸ್ ಪಕ್ಷದ ಇಮೇಜಿಗೆ ಧಕ್ಕೆ ಉಂಟು ಮಾಡಿತು.

ಉತ್ತರ ಪ್ರದೇಶ ಸೇರಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಮತ್ತು ಪ್ರತಿಪಕ್ಷಗಳ ಸೋಲು ಬರೀ ಚುನಾವಣೆಯ ಸೋಲು ಗೆಲುವು ಮಾತ್ರವಲ್ಲ, ಇದು ಮತನಿರಪೇಕ್ಷ ಭಾರತವನ್ನು ಮನುವಾದಿ ಹಿಂದೂರಾಷ್ಟ್ರ ಆಗಿಸುವತ್ತ ಮತ್ತೊಂದು ಹೆಜ್ಜೆ. ಸಂಸದೀಯ ಪ್ರಜಾಪ್ರಭುತ್ವದ ಜನಾದೇಶದ ಮೂಲಕವೇ ನಿಧಾನವಾಗಿ ಸಂವಿಧಾನಕ್ಕೆ ಚಟ್ಟ ಕಟ್ಟುವ ಮಸಲತ್ತು.

ಈ ಚುನಾವಣೆಯಲ್ಲಿ ಪ್ರತಿಪಕ್ಷಗಳ ಸೋಲಿಗೆ ಬರೀ ಇವಿಎಂ ಬೈದರೆ, ಇಲ್ಲವೇ ಮಾಯಾವತಿ, ಅಸದುದ್ದೀನ್ ಉವೈಸಿ ಅವರನ್ನು ದೂರಿದರೆ ಉಪಯೋಗವಿಲ್ಲ. ಬರೀ ಚುನಾವಣೆಯ ಮತ ವಿಭಜನೆಯ ಲೆಕ್ಕಾಚಾರ ಗಳಿಂದ ಈ ಚುನಾವಣೆಯ ಫಲಿತಾಂಶವನ್ನು ವ್ಯಾಖ್ಯಾನಿಸುವುದು ಸಾಧ್ಯವಿಲ್ಲ.

ಚುನಾವಣೆ ಬಂದಾಗ ಕಾರ್ಯಾಚರಣೆಗೆ ಇಳಿಯುವ ಪ್ರತಿಪಕ್ಷಗಳ ಸೋಮಾರಿತನ, ಒಬ್ಬರ ಮುಖ ಇನ್ನೊಬ್ಬರು ನೋಡದ ಸಣ್ಣತನ, ಸಂಘ ಪರಿವಾರವನ್ನು ಪ್ರಬಲವಾದ ಸೈದ್ಧಾಂತಿಕ ಅಸ್ತ್ರದೊಂದಿಗೆ ಎದುರಿಸುವಲ್ಲಿ ಪ್ರತಿಪಕ್ಷಗಳ ವೈಫಲ್ಯ, ಎಲ್ಲಕ್ಕಿಂತ ಮುಖ್ಯವಾಗಿ ಒಟ್ಟು ಮತದಾರರ ಸಂಖ್ಯೆಯಲ್ಲಿ ಅರ್ಧದಷ್ಟಿರುವ ಇಪ್ಪತೈದು ವರ್ಷದೊಳಗಿನ ಯುವಕರ ಮೆದುಳಿನ ಸುತ್ತ ಕೋಮುವಾದಿಗಳು ಹೆಣೆದ ಜೇಡರ ಬಲೆಯನ್ನು ಹರಿದು ಬಿಸಾಡುವಲ್ಲಿ ವಿಫಲಗೊಂಡ ಸೆಕ್ಯುಲರ್ ಪಕ್ಷಗಳು, ಇವೆಲ್ಲವೂ ಬಿಜೆಪಿ ಗೆಲುವಿಗೆ ಕಾರಣ.

ಕೇವಲ ಮೋದಿ, ಯೋಗಿ ಭಾಷಣಗಳಿಂದ, ಜನಪ್ರಿಯ ಘೋಷಣೆಗಳಿಂದ ಬಿಜೆಪಿಗೆ ಈ ಗೆಲುವು ಸಾಧ್ಯವಾಗಿಲ್ಲ. ಈ ಸೋಲು ಗೆಲುವಿನ ಹಿಂದಿನ ಮೂರು ದಶಕಗಳ ಇತಿಹಾಸದ ಪುಟಗಳನ್ನು ತೆರೆದು ನೋಡಬೇಕಾಗುತ್ತದೆ.

ಇತರ ಹಿಂದುಳಿದ ವರ್ಗಗಳಿಗಾಗಿ ವಿ.ಪಿ.ಸಿಂಗ್ ಸರಕಾರ ತಂದ ಮಂಡಲ ಆಯೋಗದ ಮೀಸಲು ವ್ಯವಸ್ಥೆ, ಅದಕ್ಕೆ ಪ್ರತಿಯಾಗಿ ಸಂಘ ಪರಿವಾರ ಬಳಸಿದ ಅಯೋಧ್ಯೆಯ ಮಂದಿರ ಎಂಬ ಕಮಂಡಲ ಅಸ್ತ್ರ, ಹಲವಾರು ದಶಕಗಳ ಕಾಲದ ಸಂಘಟನಾತ್ಮಕ ಕಾರ್ಯತಂತ್ರ, ಹಿಂದುತ್ವದ ಹೆಸರಿನಲ್ಲಿ ರಚಿಸಲಾದ ನಿರೂಪಣೆಗಳು ಫಲಿತಾಂಶದಲ್ಲಿ ಮಹತ್ವದ ಪಾತ್ರ ವಹಿಸಿವೆ.

ಒಂದೂವರೆ ವರ್ಷದಷ್ಟು ಸುದೀರ್ಘವಾಗಿ ನಡೆದ ಉತ್ತರ ಭಾರತದ ರೈತ ಹೋರಾಟ ಕೂಡ ಈ ಚುನಾವಣೆಯ ಮೇಲೆ ಹೆಚ್ಚಿನ ಪರಿಣಾಮ ಬೀರಲಿಲ್ಲ. ಬಿಜೆಪಿ ವಿರುದ್ಧ ಕಾಪ್ ಪಂಚಾಯತ್‌ಗಳ ತೀರ್ಮಾನಗಳೂ ಕೆಲಸಕ್ಕೆ ಬರಲಿಲ್ಲ. ಪಂಜಾಬ್‌ನಲ್ಲೇನೋ ಆಮ್ ಆದ್ಮಿ ಪಕ್ಷ ಬಂತು. ಆದರೆ ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಗೋವಾಗಳಲ್ಲಿ ಬಿಜೆಪಿ ಗೆಲುವಿನ ಬಾವುಟ ಹಾರಿಸಿತು. ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಜೀಪು ಹರಿಸಿ ಕೊಂದ ಲಖಿಂಪುರ ಖೇರಿಯಲ್ಲಿ ಕೂಡ ಎಂಟರಲ್ಲಿ ಏಳು ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದು ಕೊಂಡಿದೆ ಎಂಬುದೇ ಇದಕ್ಕೊಂದು ಉದಾಹರಣೆ.

ಬರೀ ಜನ ಚಳವಳಿಗಳಿಂದ ಚುನಾವಣೆಯ ಗೆಲುವು ಸಾಧ್ಯವಿಲ್ಲ ಎಂಬುದು ಈ ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿದೆ. ಭಾರತದಲ್ಲಿ ರೈತ, ಕಾರ್ಮಿಕರ ಹೋರಾಟಗಳು ನಡೆಯುತ್ತಲೇ ಇವೆ. ಮೋದಿ ಸರಕಾರದ ಜನವಿರೋಧಿ ನೀತಿಯ ವಿರುದ್ಧ ಧಿಕ್ಕಾರದ ಘೋಷಣೆಗಳು ಮೊಳಗುತ್ತಲೇ ಇವೆ. ಆದರೆ, ಚುನಾವಣೆಯಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸುತ್ತಲೇ ಇದೆ.

ಇನ್ನು ಸಂಘಟಿತ ಕಾರ್ಮಿಕ ವರ್ಗ ಪ್ರತಿವರ್ಷ ಮುಷ್ಕರ, ಭಾರತ ಬಂದ್ ನಡೆಸುತ್ತಲೇ ಬಂದಿದೆ. ಹೋರಾಟದಲ್ಲಿ ಭಾಗವಹಿಸುವವರೆಲ್ಲ ಬಿಜೆಪಿ ವಿರುದ್ಧ ಮತ ಹಾಕುವುದಿಲ್ಲ ಎಂದು ಐದಾರು ದಶಕಗಳ ಕಾಲ ಟ್ರೇಡ್ ಯುನಿಯನ್ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಎಡಪಂಥೀಯ ಕಾರ್ಮಿಕ ನಾಯಕರೊಬ್ಬರು ನನಗೆ ಹೇಳಿದರು. ಅನೇಕ ಸಂದರ್ಭಗಳಲ್ಲಿ ಯುನಿಯನ್ ಚುನಾವಣೆಗಳಲ್ಲಿ ಕಮ್ಯುನಿಸ್ಟರನ್ನು ಬೆಂಬಲಿಸುವ ಕಾರ್ಮಿಕರು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಾರೆ. ಇಂಥ ಕಳವಳಕಾರಿ ವಿಷಯಗಳ ಬಗ್ಗೆ ಪರಾಮರ್ಶೆ ನಡೆಸಬೇಕಾದ ಸಂಗಾತಿಗಳು ಪ್ರಶ್ನೆಗಳನ್ನು ಇಷ್ಟ ಪಡುವುದಿಲ್ಲ. ವೈಯಕ್ತಿಕ ದಾಳಿಗೆ ಇಳಿಯುತ್ತಾರೆ.

ಉತ್ತರ ಪ್ರದೇಶ ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರ ಕೋಟೆ.ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ರಾಜ್ಯ. ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾ ಇದೇ ರಾಜ್ಯದವರು. ಎಂಬತ್ತರ ದಶಕದ ಕೊನೆಯವರೆಗೆ ಕಮ್ಯುನಿಸ್ಟ್ ಚಳವಳಿ ಕೆಲವು ಕಡೆ ಅತ್ಯಂತ ಪ್ರಭಾವಶಾಲಿಯಾಗಿತ್ತು. ಕಾನಪುರ ಲೋಕಸಭಾ ಕ್ಷೇತ್ರದಿಂದ ಹಿರಿಯ ಕಮ್ಯುನಿಸ್ಟ್ ನಾಯಕ ಎಸ್.ಎಂ.ಬ್ಯಾನರ್ಜಿ 30 ವರ್ಷ ನಿರಂತರವಾಗಿ ಚುನಾಯಿತರಾಗಿ ಬಂದಿದ್ದರು. ನಂತರ ಈ ಮತಕ್ಷೇತ್ರದಿಂದ ಸಿಪಿಎಂ ನಾಯಕಿ ಸುಭಾಷಿಣಿ ಅಲಿ ಆರಿಸಿ ಬಂದಿದ್ದರು. ಸ್ವಾತಂತ್ರ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಮ್ಯುನಿಸ್ಟ್ ನಾಯಕ ಝಾರ್ಖಂಡ ರಾಯ್ ಅನೇಕ ಬಾರಿ ಲೋಕಸಭೆಗೆ ಚುನಾಯಿತರಾಗಿ ಬಂದಿದ್ದರು. ಅಯೋಧ್ಯೆಯ ಬಾಬರಿ ಮಸೀದಿ ಕೆಡವಿದ ಪ್ರಕ್ಷುಬ್ಧ ಸನ್ನಿವೇಶದಲ್ಲೂ ಅಯೋಧ್ಯೆಯನ್ನು ಒಳಗೊಂಡ ಫೈಝಾಬಾದ್ ಲೋಕಸಭಾ ಕ್ಷೇತ್ರದಿಂದ ಸಿಪಿಐನ ಮಿತ್ರಸೇನ್ ಯಾದವ್ ಲೋಕಸಭೆಗೆ ಆರಿಸಿ ಬಂದಿದ್ದರು. ಇನ್ನು ಲೋಹಿಯಾರ ಪಟ್ಟಶಿಷ್ಯ ಮುಲಾಯಂ ಸಿಂಗ್ ಯಾದವ್ ಕೋಮುವಾದಿಗಳು ನೆಲೆಯೂರಲು ಬಿಟ್ಟಿರಲಿಲ್ಲ. ಆದರೆ ಇವರಾರೂ ತಮ್ಮ ನೆಲೆಗಳನ್ನು ಉಳಿಸಿಕೊಳ್ಳಲು ಆಗಲಿಲ್ಲ.

ಸದಾ ದ್ವೇಷವನ್ನು ಕಕ್ಕುವ ಆದಿತ್ಯನಾಥರಂಥವರು ಅಲ್ಲಿನ ಜನರ ಆಯ್ಕೆಯಾಗಿದ್ದಾರೆ.

ಯಾರನ್ನಾದರೂ ಟೀಕಿಸಲು ಈ ಮಾತನ್ನು ಹೇಳುತ್ತಿಲ್ಲ. ಸ್ಥಗಿತತೆಯಿಂದ ಹೊರಬಂದು ಈ ಬಿಕ್ಕಟ್ಟಿನಿಂದ ಹೊರಗೆ ಬರಲಿ ಎಂಬ ಆಶಯ ನನ್ನಂಥ ಅನೇಕರದು. ಬರೀ ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನು ಎತ್ತಿಕೊಂಡು ಸರಕಾರದ ಮುಂದೆ ಬೇಡಿಕೆ ಪಟ್ಟಿ ಮಂಡಿಸುವುದರಿಂದ ಫ್ಯಾಶಿಸ್ಟ್ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಇವೆಲ್ಲಕ್ಕಿಂತ ಮುಖ್ಯವಾಗಿ ಬಹುದೊಡ್ಡ ಸೈದ್ಧಾಂತಿಕ, ವೈಚಾರಿಕ ರಾಜಿ ರಹಿತ ಸಮರ ಮಾತ್ರ ಹೊಸ ದಾರಿ ತೋರಿಸಬಲ್ಲದು.

ಉತ್ತರ ಪ್ರದೇಶ ಜಾತಿವಾದಿಗಳ, ಕೋಮುವಾದಿಗಳ, ಕಂದಾಚಾರಿಗಳ ಪ್ರಾಬಲ್ಯದ ರಾಜ್ಯ. ಆದರೂ ಬಾಬಾಸಾಹೇಬರ ನಂತರ ದಲಿತ ಚಳವಳಿಗೆ ಹೊಸ ಚೈತನ್ಯ ನೀಡಿದ ಕಾನ್ಶೀರಾಮ್‌ಜಿ ಅವರ ಕಾರ್ಯ ಕ್ಷೇತ್ರವೂ ಹೌದು. ಸೈಕಲ್ ಮೇಲೆ ಇಡೀ ರಾಜ್ಯವನ್ನು ಸುತ್ತಾಡಿ ಪಕ್ಷ ಕಟ್ಟಿದ ಅವರು ರಾಜ್ಯಾಧಿಕಾರ ವಶಪಡಿಸಿಕೊಂಡು ಮಾಯಾವತಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಈ ಬಾರಿ ಬಹುಜನ ಸಮಾಜ ಪಕ್ಷವೂ ಶೋಚನೀಯವಾಗಿ ಸೋತಿದೆ.

ಇದರ ಜೊತೆಗೆ ಕೋವಿಡ್ ಕಾಲದಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ಉಚಿತ ಪಡಿತರದಂಥ ಯೋಜನೆಗಳು ಯೋಗಿಯ ನೆರವಿಗೆ ಬಂದವು. ಕರ್ನಾಟಕದಲ್ಲಿ ಅನ್ನಭಾಗ್ಯ ತಂದ ಸಿದ್ದರಾಮಯ್ಯನವರಿಗೆ ಮತ್ತೆ ಅಧಿಕಾರ ನೀಡದ ಜನ ಉತ್ತರ ಪ್ರದೇಶದಲ್ಲಿ ಯೋಗಿ ಕೈ ಹಿಡಿದರು.

ಬಿಜೆಪಿ ಗೆಲುವಿನ ಮೂಲ ಆರೆಸ್ಸೆಸ್. ಅದರ ಸಂಘಟನಾ ಸಾಮರ್ಥ್ಯ, ತಂತ್ರಗಾರಿಕೆ ಊಹಾತೀತ. ಸಮಾಜವಾದಿಗಳು ಮಂಡಲ ಅಸ್ತ್ರ ಪ್ರಯೋಗಿಸಿದರೆ, ಸಂಘ ಪರಿವಾರ ಸೋಶಿಯಲ್ ಇಂಜಿನಿಯರಿಂಗ್ ಮಾಡಿ ಹಿಂದುಳಿದವರಲ್ಲೇ ನಿರ್ಲಕ್ಷಿಸಲ್ಪಟ್ಟ ಯಾದವೇತರ ಕುರ್ಮಿ ಮುಂತಾದ ಸಮುದಾಯಗಳಿಗೆ ಬಲೆ ಬೀಸಿತು. ದಲಿತರಲ್ಲಿ ಕರ್ನಾಟಕದಲ್ಲಿ ಎಡಗೈ, ಬಲಗೈ ಎಂದು ಹುಳಿ ಹಿಂಡಿದಂತೆ ಉತ್ತರ ಪ್ರದೇಶದಲ್ಲಿ ಕೂಡ ದಲಿತರ ಮತಗಳನ್ನು ಒಡೆದು ಲಾಭ ಮಾಡಿಕೊಂಡಿದೆ.

ಒಟ್ಟಾರೆ ಇಡೀ ಭಾರತದ ಚುನಾವಣಾ ಫಲಿತಾಂಶಗಳ ಸಮೀಕ್ಷೆ ಮಾಡಿದರೆ ದಕ್ಷಿಣದ ರಾಜ್ಯಗಳು ಮುಖ್ಯವಾಗಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಬಿಜೆಪಿಯ ಕೋಮುವಾದಿ ರಾಜಕಾರಣ ಕಾಲೂರಲು ಮತದಾರರು ಅವಕಾಶ ನೀಡಿಲ್ಲ. ಆದರೆ ಬಸವಣ್ಣ, ಕನಕದಾಸ, ಕುವೆಂಪು ಜನಿಸಿದ ಕರ್ನಾಟಕವೊಂದೇ ದಕ್ಷಿಣದಲ್ಲಿ ಹಿಂದುತ್ವದ ಪ್ರಯೋಗ ಶಾಲೆಯಾಗುವ ಸೂಚನೆಗಳು ಗೋಚರಿಸುತ್ತಿವೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಒಂದಾಗಿ ಸೆಣಸಿದರೆ ಮತ್ತೆ ಇಲ್ಲಿ ಕಾಂಗ್ರೆಸ್‌ಗೆ ಅವಕಾಶವಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಮುಖ್ಯವಾಹಿನಿ ಮಾಧ್ಯಮಗಳು ಹಿಂದಿನಂತೆ ಈ ಬಾರಿಯೂ ಬಿಜೆಪಿಯ ತುತ್ತೂರಿಯಾದವು. ಭೂಮಾಲಕರು, ಬಂಡವಾಳಶಾಹಿಗಳು, ಧರ್ಮಗುರುಗಳು, ಜನಾಂಗ ದ್ವೇಷ ಎಲ್ಲ ಸೇರಿ ಬಿಜೆಪಿ ಗೆಲ್ಲಲು ಅನುಕೂಲವಾಯಿತು.

ಚುನಾವಣೆಗಳು ಬರುತ್ತವೆ ಹೋಗುತ್ತವೆ. ಚುನಾವಣಾ ಲೆಕ್ಕಾಚಾರದಿಂದ ಈಗ ಹೊರಟಿರುವ ನಾಝಿ ಮಾದರಿಯ ಹಿಂದುತ್ವದ ರಥವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳು ಚುನಾವಣೆಯ ರಾಜಕೀಯದ ಆಚೆಗೂ ಜನರ ನಡುವೆ ಬಿರುಕು ಮೂಡಿಸುವ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ನಿರಂತರವಾಗಿ ಜನ ಜಾಗೃತಿಯ ಆಂದೋಲನ ಕೈಗೊಳ್ಳಬೇಕು. ಇದರಲ್ಲಿ ಕಾಂಗ್ರೆಸ್ ಪಾತ್ರ ಮುಖ್ಯವಾಗಿದೆ. ಕಾಂಗ್ರೆಸ್‌ನ ಕೆಲ ನಾಯಕರಿಗೆ, ಪದಾಧಿಕಾರಿಗಳಿಗೆ ತಮ್ಮ ಪಕ್ಷದ ಸಿದ್ಧಾಂತವೇ ಗೊತ್ತಿಲ್ಲ. ಇನ್ನು ಕೆಲವರು ವಿಶ್ವ ಹಿಂದೂ ಪರಿಷತ್‌ನ ಪದಾಧಿಕಾರಿಗಳಾಗಿ ನಿಧಿ ಸಂಗ್ರಹಿಸಿ ಕೊಡುತ್ತಾರೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿಗೆ ಕಾರಣ ಕೋಮುವಾದದ ಬಗೆಗಿನ ಅದರ ಇಬ್ಬಂದಿತನ. ಪಿ.ವಿ.ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಬಾಬರಿ ಮಸೀದಿ ಕೆಡವಲು ಅವಕಾಶ ನೀಡಿದ್ದು ಹಳೆಯ ಕತೆ. ಆದರೆ, ಇತ್ತೀಚೆಗೆ ಅಯೋಧ್ಯೆಯಲ್ಲಿ ವಿಎಚ್‌ಪಿ ನಿರ್ಮಿಸಲು ಹೊರಟಿರುವ ರಾಮ ಮಂದಿರದ ಶಿಲಾನ್ಯಾಸ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಶಿಲಾನ್ಯಾಸ ಕಾರ್ಯಕ್ರಮ ತಮ್ಮದೇ ಎಂಬಂತೆ ಸಂಭ್ರಮ ಪಟ್ಟರು. ಈ ರೀತಿಯ ತಾತ್ವಿಕ ದಿವಾಳಿಕೋರತನ ಕಾಂಗ್ರೆಸ್ ಪಕ್ಷದ ಇಮೇಜಿಗೆ ಧಕ್ಕೆ ಉಂಟು ಮಾಡಿತು.

ಆದರೆ ಇಲ್ಲಿಗೆ ಎಲ್ಲಾ ಮುಗಿಯಿತೆಂದಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದರೂ ಭಾರತದ ಬಹುತೇಕ ರಾಜ್ಯಗಳಲ್ಲಿ ಅದರ ಸಂಘಟನಾ ಜಾಲ ಇನ್ನೂ ಬಿಗಿಯಾಗಿದೆ. ಏಳು ರಾಜ್ಯಗಳಲ್ಲಿ ಅದು ಅಧಿಕಾರದಲ್ಲಿ ಇದೆ. ಅದು ಅಹಂ ಬಿಟ್ಟು ಎಲ್ಲ ಜಾತ್ಯತೀತ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾಣ್ಮೆಯಿಂದ ತಂತ್ರ ರೂಪಿಸಿದರೆ ಭವಿಷ್ಯವಿದೆ.

ಬಹುತ್ವ ಭಾರತ ಅಪಾಯದಲ್ಲಿದೆ. ಪ್ರಜಾಪ್ರಭುತ್ವದ ಬುಡ ಅಲ್ಲಾಡುತ್ತಿದೆ. ಸಂವಿಧಾನದ ವಿರುದ್ಧ ಸಂಚು ನಡೆದಿದೆ ಎಂದು ಹೇಳುತ್ತಲೇ ಇದ್ದೇವೆ. ಆದರೆ ಜನರು ವಿಶೇಷವಾಗಿ ಯುವಜನರು ಯಾಕೆ ನಮ್ಮ ಮಾತು ಕೇಳಿಸಿಕೊಳ್ಳುತ್ತಿಲ್ಲ? ಯಾಕೆ ನಮ್ಮ ಜೊತೆಗೆ ಬರುತ್ತಿಲ್ಲ? ಮುಷ್ಕರ, ಮೆರವಣಿಗಳಲ್ಲಿ ಬರುವವರ ಮತ್ತು ಅವರ ಮನೆಯವರ ಓಟುಗಳು ಯಾರಿಗೆ ಹೋಗುತ್ತವೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ತಡಕಾಡಬೇಕಿಲ್ಲ. ಸವಲತ್ತುಗಳನ್ನು ಕೊಡಿಸುವ ಕಾಟಾಚಾರದ ಹೋರಾಟಗಳಲ್ಲಿ ಸಿದ್ಧಾಂತಗಳು ಸೊರಗಿ ಹೋಗುತ್ತಿವೆ ಎಂದರೆ ಅತಿಶಯೋಕ್ತಿಯಲ್ಲ.

ಇದು ಯಾವುದೇ ಪಕ್ಷದ ಸೋಲು ಗೆಲುವಿನ ಪ್ರಶ್ನೆ ಮಾತ್ರವಲ್ಲ. ಭಾರತದ ಪ್ರಜಾಪ್ರಭುತ್ವದ, ಸಂವಿಧಾನದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಬಿಜೆಪಿಗೆ ಮತ ಹಾಕುವ ಅನೇಕರು ವಿಶೇಷವಾಗಿ ಮೇಲ್ವರ್ಗಕ್ಕೆ ಸೇರಿದವರು ಬಿಜೆಪಿ ಗೆದ್ದು ಮೋದಿ ಪ್ರಧಾನಿಯಾಗಿ ಮುಂದುವರಿದರೆ ತಳ ಸಮುದಾಯಗಳಿಗೆ ಇರುವ ಮೀಸಲಾತಿ ಸೌಕರ್ಯಗಳನ್ನು ರದ್ದು ಮಾಡುತ್ತಾರೆ. ಸರ್ವರಿಗೂ ಸಮಾನ ಅವಕಾಶ ನೀಡಿರುವ ಸಂವಿಧಾನವನ್ನು ಬದಲಿಸುತ್ತಾರೆ ಎಂದು ನಿರೀಕ್ಷೆ ಹಾಗೂ ಭರವಸೆ ಇಟ್ಟುಕೊಂಡು ಬಿಜೆಪಿಗೆ ಮತ ಹಾಕಿದ್ದಾರೆ. ಹೀಗಾಗಿ ಬರಲಿರುವ ದಿನಗಳು ಅತ್ಯಂತ ನಿರ್ಣಾಯಕ ದಿನಗಳಾಗಿವೆ.

ಈಗಲೂ ಕಾಲ ಮಿಂಚಿಲ್ಲ. ಬಿಜೆಪಿಯೇತರ ಪ್ರತಿಪಕ್ಷಗಳು (ಕಾಂಗ್ರೆಸ್ ಸಹಿತ) ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸುವ ಏಕೈಕ ಗುರಿಯಿಟ್ಟುಕೊಂಡು ಕನಿಷ್ಠ ಕಾರ್ಯಕ್ರಮದ ಆಧಾರದಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಹುತ್ವ ಶತ್ರುಗಳ ರಥಯಾತ್ರೆ ತಡೆಯಲು ಸಾಧ್ಯ.

ಭಾರತದ ಇಂದಿನ ಪರಿಸ್ಥಿತಿಗೆ ಕಾಂಗ್ರೆಸೇತರ ಪ್ರತಿಪಕ್ಷಗಳು ಕಾರಣ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅವರ ಸರಕಾರದ ವಿರುದ್ಧ ಟೆಲಿಕಾಂ ಹಗರಣದ ಸುಳ್ಳು ಕತೆ ಕಟ್ಟಿ ಅಣ್ಣಾ ಹಝಾರೆಯನ್ನು ಮತ್ತು ಬಾಬಾ ರಾಮದೇವರನ್ನು ಮುಂದಿಟ್ಟುಕೊಂಡ ನಡೆದ ಸಂಘ ಪರಿವಾರ ಸೃಷ್ಟಿತ ಚಳವಳಿಯಲ್ಲಿ ಎರಡೂ ಕಮ್ಯುನಿಸ್ಟ್ ಪಕ್ಷಗಳ ನಾಯಕರು ಉತ್ಸಾಹದಿಂದ ಪಾಲ್ಗೊಂಡರು. ಇದರಿಂದ ಮೋಹನ್ ಭಾಗವತರು ಖುಷಿಗೊಂಡರು. ಕಾಂಗ್ರೆಸ್, ಬಿಜೆಪಿ ಒಂದೇ ನಾಣ್ಯದ ಮುಖಗಳು ಎಂದು ಹೇಳುತ್ತಲೇ ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ತರುವ ಮಸಲತ್ತು ನಡೆಯಿತು. ಆಗ ಕಾರ್ಯಾಚರಣೆ ಗೆ ಇಳಿದ ಆರೆಸ್ಸೆಸ್ ಕಾರ್ಯಕರ್ತರ ಪಡೆ ಯುವಜನರ ಮೆದುಳಿಗೆ ವಿಷ ಬೆರೆಸುವಲ್ಲಿ ಯಶಸ್ವಿಯಾಯಿತು.

ಇದಕ್ಕೆ ಅಂಬಾನಿ, ಅದಾನಿ ಮುಂತಾದ ಕಾರ್ಪೊರೇಟ್‌ಗಳ ಹಣ ಹರಿದು ಬಂತು. ಆದರೆ ಟೆಲಿಕಾಂ ಹಗರಣದ ಆರೋಪ ಸುಳ್ಳೆಂದು ಇತ್ತೀಚೆಗೆ ಬಯಲಾಗಿದೆ. ಅಧಿಕಾರ ಫ್ಯಾಶಿಸ್ಟ್ ಶಕ್ತಿಗಳ ಕೈಗೆ ಸಿಕ್ಕಿದೆ.

ಕಾಂಗ್ರೆಸ್ ತನ್ನ ಆರ್ಥಿಕ ನೀತಿಗಳನ್ನು ಬದಲಿಸಿಕೊಳ್ಳಬೇಕೆಂಬ ಎಡಪಂಥೀಯ ಪಕ್ಷಗಳ ಆಗ್ರಹ ಸರಿಯಾಗಿದೆ. ಆದರೆ ಕಾಂಗ್ರೆಸನ್ನು ದುರ್ಬಲಗೊಳಿಸಿ ಬಿಜೆಪಿಯನ್ನು ಬಲಪಡಿಸುವುದು ಸರಿಯಾದ ದಾರಿಯಲ್ಲ.

ಈಗಲೂ ಕಾಲ ಮಿಂಚಿಲ್ಲ ಬಿಜೆಪಿಯೇತರ ಪ್ರತಿಪಕ್ಷಗಳು (ಕಾಂಗ್ರೆಸ್ ಸಹಿತ) ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸುವ ಏಕೈಕ ಗುರಿಯಿಟ್ಟುಕೊಂಡು ಕನಿಷ್ಠ ಕಾರ್ಯಕ್ರಮದ ಆಧಾರದಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಹುತ್ವದ ಶತ್ರುಗಳ ರಥಯಾತ್ರೆ ತಡೆಯಲು ಸಾಧ್ಯ.

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X