ಸೈಯದ್ ಮಲೆ ಜುಮಾ ಮಸೀದಿ : ಪದಾಧಿಕಾರಿಗಳ ಆಯ್ಕೆ
ಅಧ್ಯಕ್ಷರಾಗಿ ನೂರುದ್ದೀನ್ ಸಾಲ್ಮರ, ಪ್ರ. ಕಾರ್ಯದರ್ಶಿಯಾಗಿ ಜುನೈದ್

ನೂರುದ್ದೀನ್ - ಜುನೈದ್
ಪುತ್ತೂರು: ಸೈಯದ್ ಮಲೆ ಜುಮಾ ಮಸೀದಿ ಸಾಲ್ಮರ ಇದರ ನೂತನ ಅಧ್ಯಕ್ಷರಾಗಿ ನೋಟರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಜುನೈದ್ ಸಾಲ್ಮರ ಪುನರಾಯ್ಕೆಗೊಂಡಿದ್ದಾರೆ.
ಸೈಯದ್ ಮಲೆ ಜುಮ್ಮಾ ಮಸೀದಿ ಸಮಿತಿಯ ಮಹಾಸಭೆಯು ಶುಕ್ರವಾರ ಮದರಸ ಸಭಾಂಗಣದಲ್ಲಿ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಸಾಲ್ಮರ ಮತ್ತು ಮೊಹಮ್ಮದ್ ಶರೀಫ್ ಸಾಲ್ಮರ, ಜೊತೆ ಕಾರ್ಯದರ್ಶಿಯಾಗಿ ಯೂಸುಫ್ ತಾರಿಗುಡ್ಡೆ ಮತ್ತು ಹಸನ್ ಮುದ್ದೋಡಿ, ಕೋಶಾಧಿಕಾರಿಯಾಗಿ ಮೊಹಮ್ಮದ್ ಕೋಲ್ಪೆ, ಸದಸ್ಯರಾಗಿ ಅಬ್ದುಲ್ ಹಮೀದ್ ಸಾಲ್ಮರ, ಲತೀಫ್ ಸಾಲ್ಮರ, ಅಬ್ದುಲ್ ರಝಾಕ್ ತಾರಿಗುಡ್ಡೆ, ಶಬೀರ್ ಸಾಲ್ಮರ, ಅಝೀಝ್ ಸುಪಾರಿ, ಉಮ್ಮರ್ ಕಟ್ಲೇರಿ, ಹಂಸತ್ ಸಾಲ್ಮರ, ಪುತ್ತುಹಾಜಿ ಬಾಯಾರು, ಉಮ್ಮರ್ ಹಾಜಿ ಕೆರೆಮೂಲೆ ಮತ್ತು ಡಾ. ರಿಯಾಝ್ ಆಯ್ಕೆಗೊಂಡರು.
ಮೊಹಮ್ಮದ್ ತಂಙಳ್ ದುವಾ ನೆರವೇರಿಸಿದರು. ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಮಲೆ ಮಸೀದಿ ಖತೀಬ್ ಹಾಜಿ ಉಮ್ಮರ್ ದಾರಿಮಿ ಮುಖ್ಯ ಪ್ರಭಾಷಣ ಮಾಡಿದರು.
ಅನ್ಸಾರುದ್ದೀನ್ ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿಯಾದ ಯಾಕೂಬ್ ಖಾನ್ ಮತ್ತು ಕೋಶಾಧಿಕಾರಿ ಇಸ್ಮಾಯಿಲ್ ಸಾಲ್ಮರ ವೀಕ್ಷಕರಾಗಿ ಆಗಮಿಸಿದ್ದರು. ಸೈಯದ್ ಮಲೆ ಮಸೀದಿ ಮಾಜಿ ಅಧ್ಯಕ್ಷ ಹಾಜಿ ಯು.ಅಬ್ದುಲ್ಲಾ, ಸುಲೈಮಾನ್ ಹಾಜಿ ಸಾಲ್ಮರ, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಉಪಾಧ್ಯಕ್ಷ ಕೆ.ಎಂ. ಅಬ್ದುಲ್ಲಾ ಕೂರ್ನಡ್ಕ ಮತ್ತಿತರರು ಉಪಸ್ಥಿತರಿದ್ದರು.