ಕಾರ್ಪೆಂಟರ್ ವೃತ್ತಿದಾರರಿಗೆ ನೋಂದಣಿ ಶಿಬಿರ

ಉಡುಪಿ : ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ವಿಶ್ವಕರ್ಮ ಕಾರ್ಪೆಂಟರ್ ಯೂನಿಯನ್ ಉಡುಪಿ ಇವರ ಸಹಯೋಗದೊಂದಿಗೆ ನಗರದ ಕುಂಜಿಬೆಟ್ಟು ಜಿಲ್ಲಾ ವಿಶ್ವಕರ್ಮ ಕಾರ್ಪೆಂಟರ್ ಯೂನಿಯನ್ನಲ್ಲಿ ಪಿಂಚಣಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಕಾರ್ಪೆಂಟರ್ ವೃತ್ತಿದಾರರಿಗೆ ನೋಂದಣಿ ಶಿಬಿರ ನಡೆಯಿತು.
ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆ, ಕಾರ್ಮಿಕ ಇಲಾಖೆಯ ಯೋಜನೆ ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ವಿಶ್ವಕರ್ಮ ಕಾರ್ಪೇಂಟರ್ ಯೂನಿಯನ್ನ ಗೌರವಾಧ್ಯಕ್ಷ ಡಾ. ಬಳ್ಕೂರು ಗೋಪಾಲ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಯೂನಿಯನ್ನ ಅಧ್ಯಕ್ಷ ಗೋಕುಲ ಆಚಾರ್ಯ, ವಸಂತ ಆಚಾರ್ಯ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಜಯಕರ ಬೈಲೂರು ಶಿಬಿರವನ್ನು ಸಂಯೋಜಿಸಿ ನಿರೂಪಿಸಿದರು.
Next Story