ಮಾ.18,19ರ ಯಶವಂತಪುರ-ಕಾರವಾರ ರೈಲು ಸಂಚಾರ ರದ್ದು

ಉಡುಪಿ : ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಲ್ಲಿ ಪಡೀಲ್ ಹಾಗೂ ಕುಲಶೇಖರ ನಿಲ್ದಾಣಗಳ ನಡುವೆ ದ್ವಿಪಥ ಹಳಿ ಕಾಮಗಾರಿಗಾಗಿ ಮೂಲಭೂತ ಸೌಕರ್ಯಗಳ ಉನ್ನತೀಕರಣ ಕಾರ್ಯ ಮಾ.17ರಿಂದ 21ರವರೆಗೆ ನಡೆಯಲಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸಂಚಾರವನ್ನು ರದ್ದಗೊಳಿಸಲಾಗಿದೆ, ಇಲ್ಲವೇ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರದ್ದುಗೊಂಡಿರುವ ರೈಲುಗಳ ಸಂಚಾರ: ರೈಲು ನಂ.೧೬೫೧೫ ಯಶವಂತಪುರ- ಕಾರವಾರ ಎಕ್ಸ್ಪ್ರೆಸ್ ರೈಲಿನ ಮಾ.೧೮ರ ಸಂಚಾರ, ರೈಲು ನಂ.೧೬೫೧೬ ಕಾರವಾರ- ಯಶವಂತಪುರ ಎಕ್ಸ್ಪ್ರೆಸ್ ರೈಲಿನ ಮಾ.೧೯ರ ಸಂಚಾರ, ರೈಲು ನಂ.೧೧೦೯೭ ಪುಣೆ ಜಂಕ್ಷನ್- ಎರ್ನಾಕುಲಂ ಜಂಕ್ಷನ್ ಎಕ್ಸ್ಪ್ರೆಸ್ ರೈಲಿನ ಮಾ.೧೯ರ ಪ್ರಯಾಣ ಕಂಪೂರ್ಣ ರದ್ದುಗೊಂಡಿದೆ.
ರೈಲು ನಂ.೧೬೫೯೫ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಸಿಟಿ ಜಂಕ್ಷನ್- ಕಾರವಾರ ಎಕ್ಸ್ಪ್ರೆಸ್ ರೈಲಿನ ಮಾ.೧೯ರ ಸಂಚಾರ ಹಾಗೂ ರೈಲು ನಂ.೧೬೫೯೬ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಾರವಾರ- ಬೆಂಗಳೂರು ಸಿಟಿ ಜಂಕ್ಷನ್ ಎಕ್ಸ್ಪ್ರೆಸ್ ರೈಲಿನ ಮಾ.೨೦ರ ಸಂಚಾರ ಸಂಪೂರ್ಣ ರದ್ದುಗೊಂಡಿವೆ.
ರೈಲು ನಂ. ೦೬೬೦೨(೫೬೬೪೦) ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ಎಕ್ಸ್ಪ್ರೆಸ್ ರೈಲಿನ ಮಾ.೨೦ರ, ರೈಲು ನಂ.೦೬೬೦೧ (೫೬೬೪೧) ಮಡಗಾಂವ್ ಜಂಕ್ಷನ್-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ರೈಲಿನ ಮಾ.೨೦ರ ಸಂಚಾರ ಸಂಪೂರ್ಣ ರದ್ದುಗೊಂಡಿದೆ. ರೈಲು ನಂ.೧೧೦೯೮ ಎರ್ನಾಕುಲಂ ಜಂಕ್ಷನ್- ಪುಣೆ ಜಂಕ್ಷನ್ ಎಕ್ಸ್ಪ್ರೆಸ್ ರೈಲಿನ ಮಾ.೨೧ರ ಸಂಚಾರ ರದ್ದಾಗಿದೆ.
ಸಮಯ ಬದಲಾವಣೆ: ಇನ್ನುಳಿದಂತೆ ಮಾ.೧೯ರ ಎಚ್.ನಿಝಾಮುದ್ದೀನ್- ಎರ್ನಾಕುಲಂ ಜಂಕ್ಷನ್ ಎಕ್ಸ್ಪ್ರೆಸ್ ರೈಲಿನ ಪ್ರಯಾಣ ೪ಗಂಟೆ, ಕೊಚ್ಚುವೇಲಿ-ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ ರೈಲಿನ ಮಾ.೨೦ರ ಪ್ರಯಾಣ ಆರು ಗಂಟೆ, ಎರ್ನಾಕುಲಂ ಜಂಕ್ಷನ್- ಎಚ್.ನಿಝಾಮುದ್ದೀನ್ ಎಕ್ಸ್ಪ್ರೆಸ್ ರೈಲಿನ ಮಾ.೨೦ಲ ಪ್ರಯಾಣ ನಾಲ್ಕು ಗಂಟೆ ಹಾಗೂ ಮಡಗಾಂವ್ ಜಂಕ್ಷನ್- ಎರ್ನಾಕುಲಂ ಜಂಕ್ಷನ್ ಎಕ್ಸ್ಪ್ರೆಸ್ ರೈಲಿನ ಮಾ.೨೦ರ ಪ್ರಯಾಣ ಒಂದೂವರೆ ಗಂಟೆ ವಿಳಂಬವಾಗಿ ಪ್ರಾರಂಭಗೊಳ್ಳಲಿವೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.