ಮಾ.20ರಿಂದ ‘ರಾಷ್ಟ್ರೀಯ ರಂಗಹಬ್ಬ’ ಬಹುಬಾಷಾ ನಾಟಕೋತ್ಸವ
ಉಡುಪಿ : ಸುಮನಸಾ ಕೊಡವೂರು ವತಿಯಿಂದ ೨೦ರ ಸಂಭ್ರಮದ ಪ್ರಯುಕ್ತ ರಾಷ್ಟ್ರೀಯ ರಂಗಹಬ್ಬ -೧೦ ಬಹುಬಾಷಾ ನಾಟಕೋತ್ಸವ ವನ್ನು ಮಾ.೨೦ರಿಂದ ೨೯ರವರೆಗೆ ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಾ.೨೦ರಂದು ಸಂಜೆ ೬.೩೦ಕ್ಕೆ ಸಾಹಿತಿ ಮತ್ತು ನಾಟಕಕಾರ ಡಾ.ರಾಜಪ್ಪ ದಳವಾಯಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಮಾ.೨೯ರಂದು ಸಂಜೆ ೬.೩೦ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸುಮಧುರ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ. ಅಧ್ಯಕ್ಷತೆಯನ್ನು ಸಚಿವ ಸುನೀಲ್ ಕುಮಾರ್ ವಹಿಸ ಲಿರುವರು. ಪ್ರತಿದಿನ ಸಾಧಕರೊಬ್ಬರಿಗೆ ರಂಗ ಸಾಧಕ ಸನ್ಮಾನ ನೀಡಲಾಗುವುದು ಎಂದು ಸಂಸ್ಥೆಯ ಗೌರವಾಧ್ಯಕ್ಷ ಎಂ.ಎಸ್.ಭಟ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಾ.೨೦ರಂದು ಉಡುಪಿ ರಂಗಭೂಮಿ ತಂಡದಿಂದ ವಿಶಾಂಕೇ (ಕನ್ನಡ), ೨೧ರಂದು ತಮಿಳುನಾಡು ಆದಿಶಕ್ತಿ ಥಿಯೇಟರ್ಸ್ ತಂಡದಿಂದ ‘ಭೂಮಿ’ (ಇಂಗ್ಲಿಷ್), ೨೨ರಂದು ಸುಮನಸಾ ಕೊಡವೂರು ತಂಡದಿಂದ ‘ವಾಹ್ ತಾಜ್’(ಕನ್ನಡ), ೨೩ರಂದು ಗೋವಾ ರುದ್ರೇಶ್ವರ ತಂಡದಿಂದ ‘ಮಿತ್ರಾಂಚಿ ಕಣಿ’(ಕೊಂಕಣಿ), ೨೪ರಂದು ಮಧ್ಯಪ್ರದೇಶ ಸಮಾಗಮ್ ರಂಗ್ ಮಂಡಲ್ ತಂಡದಿಂದ ಅಗ್ನಿ ಔರ್ ಬರ್ಕಾ(ಹಿಂದಿ) ಮತ್ತು ೨೫ರಂದು ಅಗರಬತ್ತಿ (ಬೋಂದೆಲಿ), ೨೬ರಂದು ಸಮನಸಾ ತಂಡದಿಂದ ಶ್ವೇತಕುಮಾರ ಚರಿಕ್ರೆ (ಯಕ್ಷಗಾನ), ೨೭ರಂದು ಮುಂಬಯಿ ಕರ್ನಾಟಕ ಸಂಘ ದಿಂದ ಆಟಿ ತಿಂಗೊಳ್ದ ಒಂಜಿ ದಿನ(ತುಳು), ೨೮ರಂದು ಹಾರಾಡಿ ಭೂಮಿಕಾ ತಂಡದಿಂದ ಆರದಿರಲಿ ಬೆಳಕು(ಕನ್ನಡ), ೨೯ರಂದು ಕೇರಳದ ತ್ರಿಶೂರ್ ನಾಟಕ್ ಸಂಘ ದಿಂದ ಚಕ್ಕ(ಮಾಲಯಾಳಂ) ನಾಟಕ ಪ್ರದರ್ಶನಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಪ್ರಕಾಶ್ ಕೊಡವೂರು, ಸಂಚಾಲಕ ಭಾಸ್ಕರ್ ಪಾಲನ್, ಉಪಾಧ್ಯಕ್ಷರಾದ ವಿನಯ್ ಕುಮಾರ್ ಕಲ್ಮಾಡಿ, ಕೋಶಾಧಿಕಾರಿ ಚಂದ್ರಕಾಂತ್ ಕುಂದರ್, ಜೊತೆ ಕಾರ್ಯದರ್ಶಿ ಪ್ರಜ್ಞಾ ಅಮೀನ್ ಉಪಸ್ಥಿತರಿದ್ದರು.