ಇತರ ಧರ್ಮೀಯರ ವ್ಯಾಪಾರಕ್ಕೆ ನಿರ್ಬಂಧ: ಲಾಯರ್ಸ್ ಅಸೋಶಿಯನ್ ಫಾರ್ ಜಸ್ಟಿಸ್ ಖಂಡನೆ; ಸಿಎಂ ಬೊಮ್ಮಾಯಿಗೆ ಮನವಿ

ಬೆಂಗಳೂರು, ಮಾ.26: ರಾಜ್ಯದ ಹಿಂದೂ ದೇವಸ್ಥಾನ ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಸ್ಥರ ವ್ಯವಹಾರಕ್ಕೆ ಬಹಿಷ್ಕಾರ ಹಾಕಿದ್ದನ್ನು ಆಲ್ ಇಂಡಿಯಾ ಲಾಯರ್ಸ್ ಅಶೋಶಿಯನ್ ಫಾರ್ ಜಸ್ಟಿಸ್ ಖಂಡನೆ ವ್ಯಕ್ತಪಡಿಸಿದೆ. ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮುಸ್ಲಿಮ್ ವ್ಯಾಪಾರಿಗಳ ವ್ಯವಹಾರಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಜಸ್ಟಿಸ್ ಮನವಿ ಪತ್ರವನ್ನು ಸಲ್ಲಿಸಿದೆ.
ದೇವಸ್ಥಾನಗಳ ಸುತ್ತಮುತ್ತ ಮುಸ್ಲಿಮ್ ವ್ಯಾಪಾರಿಗಳಿಗೆ ತಡೆಯೊಡ್ಡಿದ ಕ್ರಿಯೆಯು ಕಾನೂನುಬಾಹಿರ ಮತ್ತು ಅಸಂವಿಧಾನಿಕ ಆರ್ಥಿಕ ಬಹಿಷ್ಕಾರ ಎಂದು ಹೇಳಿದೆ.
ಇಂತಹ ಬಹಿಷ್ಕಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಅಲ್ ಇಂಡಿಯಾ ಅಸೋಶಿಯನ್ ಫಾರ್ ಜಸ್ಟಿಸ್, ಸಿಎಂ ಬೊಮ್ಮಾಯಿ, ಹಿಂದೂ ಧಾರ್ಮಿಕ ಸಂಸ್ಥೆಗಳ ಆಯುಕ್ತರು ಹಾಗೂ ದತ್ತಿ ಇಲಾಖೆಗೆ ಮನವಿ ಮಾಡಿದೆ.
Next Story





