ಉಡುಪಿ: ಡಿವೈಎಸ್ಪಿ ರಾಘವೇಂದ್ರ ನಾಯಕ್, ಎಚ್ಸಿ ವಿಜಯ ಕುಮಾರ್ಗೆ ಮುಖ್ಯಮಂತ್ರಿ ಪದಕ

ರಾಘವೇಂದ್ರ ನಾಯಕ್, ವಿಜಯ ಕುಮಾರ್
ಉಡುಪಿ : 2021ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕಾಗಿ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ರಾಘವೇಂದ್ರ ಆರ್.ನಾಯಕ್ ಹಾಗೂ ಉಡುಪಿ ಡಿಸಿಆರ್ಬಿಯ ಹೆಡ್ಕಾನ್ಸ್ಟೇಬಲ್ ಬಿ.ವಿಜಯ ಕುಮಾರ್ ಆಯ್ಕೆಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿ ರಾಘವೇಂದ್ರ ನಾಯಕ್ 2006ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆ ಗೊಂಡಿದ್ದು, 2007ರಿಂದ ಮಂಗಳೂರಿನಲ್ಲಿ ಕರ್ತವ್ಯ ಆರಂಭಿಸಿದರು. ಬಳಿಕ 2019ರಲ್ಲಿ ಉಡುಪಿ ಡಿಎಆರ್ಗೆ ವರ್ಗಾವಣೆ ಗೊಂಡ ಇವರು, ಎರಡು ವರ್ಷಗಳ ಹಿಂದೆ ಡಿವೈಎಸ್ಪಿಯಾಗಿ ಭಡ್ತಿ ಪಡೆದಿದ್ದರು.
ಬೆಳ್ತಂಗಡಿಯ ಕಲ್ಲಗುತ್ತು ನಿವಾಸಿ ವಿಜಯ ಕುಮಾರ್ 1993ರಲ್ಲಿ ಇಲಾಖೆಗೆ ಸೇರ್ಪಡೆಗೊಂಡಿದ್ದು, ಬಳಿಕ ಮಂಗಳೂರು, ಕುಂದಾಪುರ, ಹಿರಿಯಡ್ಕ, ಉಡುಪಿ ನಗರ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2011ರಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಭಡ್ತಿ ಹೊಂದಿರುವ ಇವರು ಪ್ರಸ್ತುತ ಜಿಲ್ಲಾ ತಕ್ಷೀರು ಅಭಿಲಾಖೆ ಸಂಗ್ರಹಾಲಯ(ಡಿಸಿಆರ್ಬಿ)ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Next Story