ಮಂಗಳೂರು : ಸಂಚಾರಕ್ಕೆ ಬದಲಿ ವ್ಯವಸ್ಥೆ

ಫೈಲ್ ಫೋಟೊ
ಮಂಗಳೂರು : ಸ್ಮಾಟ್ ಸಿಟಿ ವತಿಯಿಂದ ನಗರದ ನೂರ್ ಮಸೀದಿ ರಸ್ತೆ ಹಾಗೂ ಕೊಡಿಯಾಲ್ಗುತ್ತು ಜೈಲು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿರುವುದರಿಂದ ಈ ರಸ್ತೆಗಳಲ್ಲಿ ಮೋಟಾರು ವಾಹನ ಕಾಯ್ದೆ ಪ್ರಕಾರ ಮೇ 30ರವರೆಗೆ (60 ದಿನಗಳ ಕಾಲ) ರಸ್ತೆ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
*ನೂರ್ ಮಸೀದಿ ರಸ್ತೆ ಕಾಮಗಾರಿ ನಡೆಯುವ ವೇಳೆ ಹಂಪನಕಟ್ಟೆಯಿಂದ ನೂರು ಮಸೀದಿ ರಸ್ತೆಯ ಮೂಲಕ ಅತ್ತಾವರ ಕಡೆಗೆ ಸಂಚರಿಸುವ ಎಲ್ಲಾ ಘನ ವಾಹನಗಳು ಕ್ಲಾಕ್ ಟವರ್ ಜಂಕ್ಷನ್ಗೆ ತೆರಳಿ ರೈಲ್ವೆ ನಿಲ್ದಾಣ ರಸ್ತೆಯ ಮೂಲಕ ಸಂಚರಿಸಬೇಕು.
*ಹಂಪನಕಟ್ಟೆಯಿಂದ ನೂರು ಮಸೀದಿ ರಸ್ತೆಯ ಮೂಲಕ ಅತ್ತಾವರ ಕಡೆಗೆ ಸಂಚರಿಸುವ ಎಲ್ಲಾ ಲಘು ವಾಹನಗಳು ಫಳ್ನೀರು ರಸ್ತೆಯಲ್ಲಿ ಮುಂದುವರಿದು ಅವೇರಿ ಜಂಕ್ಷನ್ನಲ್ಲಿ ಬಲಕ್ಕೆ ತಿರುಗಿ ಅತ್ತಾವರ ಕಡೆಗೆ ಸಂಚರಿಸಬೇಕು.
*ಕೋಡಿಯಾಲ್ ಗುತ್ತು ಜೈಲುರಸ್ತೆ ಕಾಮಗಾರಿ ನಡೆಯುವ ವೇಳೆ ಬಿಜೈ ಜಂಕ್ಷನ್ ಕಡೆಯಿಂದ ಬಂದು ಜೈಲು ರಸ್ತೆ ಮೂಲಕ ಎಂಜಿ ರಸ್ತೆಯನ್ನು ಪ್ರವೇಶಿಸುವ ಎಲ್ಲಾ ವಾಹನಗಳು ಬಿಜೈ ಜಂಕ್ಷನ್ ಕಡೆಯಿಂದ ನೇರವಾಗಿ ಕರಂಗಲ್ಪಾಡಿ ಜಂಕ್ಷನ್ ಕಡೆಗೆ ಚಲಿಸಿ ನಂತರ ಬಲಕ್ಕೆ ತಿರುಗಿ ಪಿ.ವಿ.ಎಸ್ ಜಂಕ್ಷನ್ ಮೂಲಕ ಎಂಜಿ ರಸ್ತೆಯನ್ನು ಪ್ರವೇಶಿಸಿ ಮುಂದಕ್ಕೆ ಸಂಚರಿಸಬೇಕು.
*ಕರಂಗಲ್ಪಾಡಿ ಕಡೆಯಿಂದ ಬಂದು ಜೈಲು ರಸ್ತೆಯ ಮೂಲಕ ಎಂ.ಜಿ ರಸ್ತೆಯನ್ನು ಪ್ರವೇಶಿಸುವ ಎಲ್ಲಾ ವಾಹನಗಳು ಕರಂಗಲ್ಪಾಡಿ ಜಂಕ್ಷನ್ನಲ್ಲಿ ನೇರವಾಗಿ ಪಿ.ವಿ.ಎಸ್ ಕಡೆಗೆ ಚಲಿಸಿ ಎಂಜಿ ರಸ್ತೆಯನ್ನು ಪ್ರವೇಶಿಸಿ ಮುಂದಕ್ಕೆ ಸಂಚರಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.







