Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಉಳ್ಳಾಲ ರಹ್ಮಾನಿಯ ಜುಮಾ ಮಸೀದಿಯ ನವೀಕೃತ...

ಉಳ್ಳಾಲ ರಹ್ಮಾನಿಯ ಜುಮಾ ಮಸೀದಿಯ ನವೀಕೃತ ಮಸೀದಿ ಉದ್ಘಾಟನೆ

ವಾರ್ತಾಭಾರತಿವಾರ್ತಾಭಾರತಿ2 April 2022 2:15 PM IST
share
ಉಳ್ಳಾಲ ರಹ್ಮಾನಿಯ ಜುಮಾ ಮಸೀದಿಯ ನವೀಕೃತ ಮಸೀದಿ ಉದ್ಘಾಟನೆ

ಉಳ್ಳಾಲ: ರಹ್ಮಾನಿಯ ಜುಮಾ ಮಸೀದಿಯ ನವೀಕೃತ ಮಸೀದಿ ಉದ್ಘಾಟನೆ ಕಾರ್ಯಕ್ರಮ ಪೇಟೆ ಮಸೀದಿ ವಠಾರದಲ್ಲಿ ಗುರುವಾರ ನಡೆಯಿತ್ತು.

ಮಸೀದಿಯ ಉದ್ಘಾಟನೆಯನ್ನು ಕೆ.ಎಸ್ ಆಟಕೋಯ ತಂಙಳ್ ಕೊಂಬುಳ್ ಅವರು ನಿರ್ವಹಿಸಿ ದುವಾ ನೆರೆವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಉಳ್ಳಾಲ ಸಯ್ಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮಾತನಾಡಿ ಉಳ್ಳಾಲ ಪೇಟೆ ಮಸೀದಿ ಬಹಳಷ್ಟು ಇತಿಹಾಸವಿರುವ ಮಸೀದಿ. ಈ ಮಸೀದಿಯನ್ನು ಇದಕ್ಕೂ ಮೊದಲು ಕುಚ್ಚಿಕಾಡು ಮಸೀದಿ ಎಂದು ಕರೆಯುತ್ತಿದ್ದರು ಇದರ ಅರ್ಥ ಕುಚ್ಚಿ ಎಂಬ ಹೆಸರಿನ ಮರಗಳನ್ನು ಹೊಂದಿರುವ ಕಾಡು. ಆ ಸಮಯದಲ್ಲಿ ಸ್ಥಳೀಯ ಪರಿಸರದ ಜನರು ಕಟ್ಟಿಸಿದಂತಹ ಮಸೀದಿ ಪೇಟೆ ಮಸೀದಿ.

ಮಸೀದಿ ಹೊಸ ನವೀಕೃತ ಉದ್ಘಾಟನೆಯಾಗಳು ಮಸೀದಿಯ ಆಡಳಿತ ಮಂಡಳಿ ಮತ್ತು ಪರಿಸರದ ಸಂಘ ಸಂಸ್ಥೆಗಳು ಪಾತ್ರ ಬಹಳ ಮುಖ್ಯವಾದದ್ದು. ಉಳ್ಳಾಲ ಊರೂಸ್ ಸಮಯದಲ್ಲಿ ನಡೆದಂತಹ ಸರ್ವಧರ್ಮ ಮತ್ತು ಭೋಜನ ಕಾರ್ಯಕ್ರಮ ಆದನಂತರ ಉಳ್ಳಾಲ ಪೇಟೆ ಮಸೀದಿ ಚರಿತ್ರೆಯನ್ನು ನಿರ್ಮಾಣ ಮಾಡಿದೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ಸ್ಥಳೀಯ ವೀರಭದ್ರ ದೇವಸ್ಥಾನದ ಅಧ್ಯಕ್ಷ ಮತ್ತು ಸ್ಥಳೀಯ ಪರಿಸರದ ಹಿಂದೂ ಸಹೋದರರು ಭಾಗವಹಿಸಿದ್ದು ಉಳ್ಳಾಲ ಎಂಬುವುದು ಕೋಮುಸೂಕ್ಷ್ಮ ಪ್ರದೇಶವಲ್ಲಾ, ಉಳ್ಳಾಲ ಶಾಂತಿ ಪ್ರೀಯರ ನಾಡು ಎಂಬುವುದು ಮನಸ್ಸಿಗೆ ಶುಭವನ್ನು ತಂದಿದೆ ಎಂದು ಹೇಳಿದರು.

ಉಳ್ಳಾಲ ಶಾಸಕ ಯು.ಟಿ ಅಬ್ದುಲ್ ಖಾದರ್ ಅವರು ಮಾತನಾಡಿ, ಉಳ್ಳಾಲ ಪೇಟೆ ಭವ್ಯವಾದ ಜುಮಾ ಮಸೀದಿ ಸಮಾಜದಲ್ಲಿ ಮತ್ತು ಸಮುದಾಯದಲ್ಲಿ ಪ್ರೀತಿ ಸಂಪತ್ತು ತುಂಬಲಿ. ಈ ಪ್ರದೇಶದ ಯುವಕರು, ಹಿರಿಯ ಮತ್ತು ಉಲಮಾಗಳ ಮಾರ್ಗದರ್ಶನದಿಂದ ಪ್ರೀತಿ ಸೌಹಾರ್ದತೆಯಿಂದ ನಡೆಯಲು ಸಲಹೆ ನೀಡಿದರು.

ಮಸೀದಿ ಕಾಮಗಾರಿಗೆ ನಡೆಯುತ್ತಿರುವ ಸಂದರ್ಭದಲ್ಲಿ ಸ್ಥಳಾವಕಾಶ ನೀಡಿದ ಟಿ.ಡಿ. ಸ್ಟೋರ್ ಮಾಲಕರನ್ನು ಸನ್ಮಾನಿಸಲಾಯಿತು. ಹಾಗೂ ಇತರ ಕೆಲವು ಸಾಧಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೆ. ಎಸ್ ಶೈಖುನ ಉಸ್ಮಾನುಲ್ ಫೈಝಿ ತೋಡಾರು, ಇನಾಯತ್ ಆಲಿ, ಕೊಡಿ ಮಸೀದಿ ಖಾತಿಬ್ ಆದಂ ಫೈಝಿ, ಉಳ್ಳಾಲ ವೀರಭದ್ರ ದೇವಸ್ಥಾನದ ಅಧ್ಯಕ್ಷ ಆಯಿತಪ್ಪ ಶೆಟ್ಟಿಗಾರ್, ರವೀಂದ್ರನಾಥ್ ಉಳ್ಳಾಲ, ಸತೀಶ್ ಉಳ್ಳಾಲ, ಹೋಟೆಲ್ ಮಾಲಕ ಮಂಜುನಾಥ್, ಉಳ್ಳಾಲ ಜುಮಾ ಮಸೀದಿ ಉಪಾಧ್ಯಕ್ಷ ಯು.ಕೆ ಮೋನು, ಉಳ್ಳಾಲ ದರ್ಗಾ ಸಯ್ಯದ್ ಅರಬಿಕೆ ಟ್ರಸ್ಟ್ ಕಾರ್ಯದರ್ಶಿ ಆಸೀಫ್ ಅಬ್ದುಲ್ಲಾ, ಕೋಟೆಪುರ ಮಸೀದಿ ಅಧ್ಯಕ್ಷ ಅಬ್ಬಾಸ್, ಕೊಡಿ ಮಸೀದಿ ಅಧ್ಯಕ್ಷ ಹಮಿದ್ ಕೊಡಿ, ಉಳ್ಳಾಲ ಪೇಟೆ ಮಸೀದಿ ಜತೆ ಕಾರ್ಯದರ್ಶಿ ಪೋಡಿಮೋನು, ಇಲ್ಯಾಸ್, ಸದಸ್ಯ ಅಝೀಝ್, ಶರಫತ್, ಮುಸ್ತಾಫ ಕೊಟ್ಟಾರ, ಅಬ್ದುಲ್ಲಾ, ಉಳ್ಳಾಲ ದರ್ಗಾದ ಖಜಾಂಜಿ ಇಲ್ಯಾಸ್, ಪೇಟೆ ಮಸೀದಿ ಖಾತಿಬ್ ಲತೀಫ್ ಮದನಿ, ನಾಸಿರ್ ಮುಸ್ಲಿಯಾರ್, ಸದರ್ ಶರೀಫ್ ಮದನಿ ಮುಂದಾದವರು ಉಪಸ್ಥಿತರಿದ್ದರು.

ರಹ್ಮಾನಿಯ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮೊಹಿಯುದ್ದೀನ್ ಹಸನ್ ಸ್ವಾಗತ ಭಾಷಣ ಮಾಡಿ ಕಾರ್ಯದರ್ಶಿ ಮುಸ್ತಾಫಾ ಅಬ್ದುಲ್ಲಾ  ಪ್ರಸ್ಥಾಪನೆ ಮಾಡಿ ವಂದಿಸಿದರು.

ಶುಕ್ರವಾರ ಜುಮಾ ಖುತುಬಾ ಯೂಸುಫ್ ಮಿಸ್ಬಾಹಿ ಪಾರಾಯಣ ಮಾಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X