Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಆಕಾಶದಿಂದ ಉರಿಯುತ್ತಾ ಕೆಳಗೆ ಬಿದ್ದ...

ಆಕಾಶದಿಂದ ಉರಿಯುತ್ತಾ ಕೆಳಗೆ ಬಿದ್ದ ಸಿಲಿಂಡರ್‌ ರೀತಿಯ ಅಪರಿಚಿತ ವಸ್ತು: ವೀಡಿಯೊ ವೈರಲ್

ವಾರ್ತಾಭಾರತಿವಾರ್ತಾಭಾರತಿ3 April 2022 7:11 PM IST
share
ಆಕಾಶದಿಂದ ಉರಿಯುತ್ತಾ ಕೆಳಗೆ ಬಿದ್ದ ಸಿಲಿಂಡರ್‌ ರೀತಿಯ ಅಪರಿಚಿತ ವಸ್ತು: ವೀಡಿಯೊ ವೈರಲ್

ಹೊಸದಿಲ್ಲಿ,ಎ.3: ಮಹಾರಾಷ್ಟ್ರದ ಆಗಸದಲ್ಲಿ ಶನಿವಾರ ರಾತ್ರಿ ಭಾರೀ ಪ್ರಮಾಣದಲ್ಲಿ ಉಲ್ಕಾಪಾತದಂತಹ ದೃಶ್ಯಗಳು ಗೋಚರವಾದ ಬೆನ್ನಿಗೇ ಚಂದ್ರಾಪುರ ಜಿಲ್ಲೆಯಲ್ಲಿ ಬೃಹತ್ ಲೋಹದ ಬಳೆ ಮತ್ತು ಸಿಲಿಂಡರಾಕಾರದ ವಸ್ತು ಪತ್ತೆಯಾಗಿವೆ.‘ಸಿಂದೆವಾಹಿ ಗ್ರಾಮದಲ್ಲಿ ರಾತ್ರಿ ಸುಮಾರು ಮೂರು ಮೀಟರ್ ವ್ಯಾಸದ ಲೋಹದ ಬಳೆಯೊಂದು ಬಿದ್ದಿರುವ ಬಗ್ಗೆ ನಮಗೆ ಮಾಹಿತಿ ಲಭಿಸಿತ್ತು. ಬಳೆ ಬಿಸಿಯಾಗಿತ್ತು ಮತ್ತು ಆಗಸದಿಂದ ಬಿದ್ದಿರುವಂತೆ ಕಂಡು ಬಂದಿದೆ. ಸಮೀಪದ ಇನ್ನೊಂದು ಗ್ರಾಮದಲ್ಲಿ ಇಂದು ಬೆಳಿಗ್ಗೆ ಸಿಲಿಂಡರಾಕಾರದ ವಸ್ತುವೊಂದು ಪತ್ತೆಯಾಗಿದೆ ’ ಎಂದು ಚಂದ್ರಾಪುರದ ತಹಶೀಲ್ದಾರ್ ಗಣೇಶ ಜಗದಾಳೆ ಅವರು ರವಿವಾರ ಸುದ್ದಿಸಂಸ್ಥೆಗೆ ತಿಳಿಸಿದರು.


ಶನಿವಾರ ರಾತ್ರಿ ಖಾಲಿ ನಿವೇಶನವೊಂದರಲ್ಲಿ ಕಬ್ಬಿಣದ ಬೃಹತ್ ಬಳೆ ಬಿದ್ದಿರುವುದನ್ನು ಜನರು ನೋಡಿದ್ದರು. ಆ ಬಳೆ ಮೊದಲು ಅಲ್ಲಿರಲಿಲ್ಲ,ಹೀಗಾಗಿ ಅದು ಆಗಸದಿಂದ ಬಿದ್ದಿದೆ ಎನ್ನಲಾಗಿದೆ ಎಂದು ಚಂದ್ರಾಪುರ ಜಿಲ್ಲಾಧಿಕಾರಿ ಅಜಯ ಗುಲ್ಹಾನೆ ಅವರೂ ಹೇಳಿದರು.ಮುಂಬೈನ ವಿಪತ್ತು ನಿರ್ವಹಣೆ ನಿಯಂತ್ರಣ ಕೊಠಡಿಯ ತಜ್ಞರ ತಂಡವೊಂದು ಈ ವಸ್ತುಗಳನ್ನು ಪರೀಕ್ಷಿಸಲು ಚಂದ್ರಾಪುರಕ್ಕೆ ಭೇಟಿ ನೀಡಲಿದೆ ಎಂದರು.ಈ ಅವಶೇಷಗಳು ಉಪಗ್ರಹ ಉಡಾವಣೆಯ ಬಳಿಕ ರಾಕೆಟ್ ಬೂಸ್ಟರ್ಗಳ ತುಂಡುಗಳಾಗಿರಬಹುದು ಎಂದು ತಜ್ಞರು ಸೂಚಿಸಿದ್ದಾರೆ.ಶನಿವಾರ ನ್ಯೂಝಿಲಂಡ್ನ ಮಾಹಿಯಾ ಪೆನ್ಸುಲಾದಿಂದ ಎರಡು ಉಪಗ್ರಹಗಳನ್ನು ರಾಕೆಟ್ ಲ್ಯಾಬ್ ಎಲೆಕ್ಟ್ರಾನ್ ಲಾಂಚರ್ನಿಂದ ಉಡಾವಣೆಗೊಳಿಸಲಾಗಿತ್ತು. ಆದರೆ ಈ ಬೂಸ್ಟರ್ಗಳು ಆ ರಾಕೆಟ್ಗೆ ಸೇರಿದ್ದು ಎನ್ನುವುದು ದೃಢಪಟ್ಟಿಲ್ಲ.


‘ ಈ ಅವಶೇಷಗಳು ಭೂಮಿಯ ವಾತಾವರಣವನ್ನು ಮರುಪ್ರವೇಶಿಸಿದ ಚೀನಿ ರಾಕೆಟ್ನದ್ದಾಗಿರಬಹುದು. ಫೆ.2021ರಲ್ಲಿ ಉಡಾವಣೆಗೊಂಡಿದ್ದ ಚಾಂಗ್ ಝೆಂಗ್ 3ಬಿ ಸರಣಿ ಸಂಖ್ಯೆ ವೈ77ನ ಮೂರನೇ ಹಂತವಾಗಿದೆ. ಹೆಚ್ಚುಕಡಿಮೆ ಮುಂದಿನ ಒಂದು ಗಂಟೆಯಲ್ಲಿ ಅದು ಭೂಮಿಯ ವಾತಾವರಣವನ್ನು ಪ್ರವೇಶಿಸುವ ನಿರೀಕ್ಷೆಯಿತ್ತು ಮತ್ತು ಈಗ ಅವಶೇಷಗಳು ಪತ್ತೆಯಾಗಿರುವ ಸಮಯವು ಅದಕ್ಕೆ ತಾಳೆಯಾಗುತ್ತಿದೆ ’ ಎಂದು ಖಗೋಳಶಾಸ್ತ್ರಜ್ಞ ಜೋನಾಥನ್ ಮೆಕ್ಡೊವೆಲ್ ಅವರು ಶನಿವಾರ ರಾತ್ರಿ ಟ್ವೀಟಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ ಸಿಲಿಂಡರಾಕಾರದ ವಸ್ತುವು ಸುಮಾರು ಒಂದೂವರೆ ಮೀ.ವ್ಯಾಸವನ್ನು ಹೊಂದಿದೆ.
ವಾತಾವರಣದಲ್ಲಿ ವಸ್ತುಗಳು ಉರಿಯುತ್ತಿರುವ ವೀಡಿಯೊಗಳನ್ನು ಜನರು ಶನಿವಾರ ರಾತ್ರಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರು. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಈ ವಿದ್ಯಮಾನಗಳು ಗೋಚರಗೊಂಡಿದ್ದವು.

#WATCH | Maharashtra: In what appears to be a meteor shower was witnessed over the skies of Nagpur & several other parts of the state. pic.twitter.com/kPUfL9P18R

— ANI (@ANI) April 2, 2022
share
ವಾರ್ತಾಭಾರತಿ
ವಾರ್ತಾಭಾರತಿ
Next Story
X