ಯಡ್ತರೆ ಶಾಲೆಗೆ ನುಗ್ಗಿ ನಗದು ಕಳವು
ಬೈಂದೂರು : ಯಡ್ತರೆ ಗ್ರಾಮದ ರತ್ತುಬಾಯಿ ಜನತಾ ಪ್ರೌಢಶಾಲೆಗೆ ಎ.೧ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಶಾಲಾ ಕಚೇರಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕಪಾಟುಗಳನ್ನು ತೆರೆದು ಶಾಲಾ ದಾಖಲೆಗಳನ್ನು ಮತ್ತು ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಿದ್ದಾರೆ. ಬಳಿಕ ಮುಖ್ಯೋಪಧ್ಯಾಯರ ಕೊಠಡಿಯಲ್ಲಿರುವ ಸಿ.ಸಿ ಕ್ಯಾಮೆರಾದ ಡಿವಿಆರ್ ಹಾಳುಗೆಡವಿದ್ದು ಕಪಾಟಿನಲ್ಲಿದ್ದ 35000 ರೂ. ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story