Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅವರ ಬಳಿ ಹೋದವರನ್ನು ಪ್ರಶ್ನಿಸಿ

ಅವರ ಬಳಿ ಹೋದವರನ್ನು ಪ್ರಶ್ನಿಸಿ

-ಸಂತೋಷ್ ಎಸ್., ಮಂಗಳೂರು-ಸಂತೋಷ್ ಎಸ್., ಮಂಗಳೂರು3 April 2022 11:01 PM IST
share

ಮಾನ್ಯರೇ,

ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಅಲ್ಲಿನ ಕೆಲವು ಮುಸ್ಲಿಮರು ಭೇಟಿಯಾಗಿದ್ದು ಚರ್ಚೆಯಾಗುತ್ತಿದೆ. ಅವರು ಆರೆಸ್ಸೆಸ್ ವಿಚಾರಧಾರೆಯ, ಬಿಜೆಪಿ ಬೆಂಬಲಿಗ ಹಾಗೂ ಮುಸ್ಲಿಮರ ಬಗ್ಗೆ ಅಸಹನೆ ವ್ಯಕ್ತಪಡಿಸುವ ಸ್ವಾಮೀಜಿ. ಇದನ್ನು ಅವರೇ ತಮ್ಮ ಮಾತು ಹಾಗೂ ವರ್ತನೆಗಳ ಮೂಲಕ ಹಲವು ಬಾರಿ ಸಾಬೀತುಪಡಿಸಿದ್ದಾರೆ. ಅವರಿಗೆ ತಮ್ಮ ಧೋರಣೆಯ ಬಗ್ಗೆ ಯಾವುದೇ ಕೀಳರಿಮೆ ಇಲ್ಲ. ತಾವು ನಂಬುವ ಸಿದ್ಧಾಂತದ ಬಗ್ಗೆ ಇಂತಹ ಸ್ಪಷ್ಟತೆ ಎಲ್ಲರಿಗೂ ಬೇಕು. ಆದರೆ ಅಂತಹ ಸ್ವಾಮೀಜಿಯ ಕಾಲ ಬುಡಕ್ಕೆ ಹೋಗಿ ಸಿಎಂಗೆ, ಗೃಹ ಸಚಿವರಿಗೆ, ಜಿಲ್ಲಾ ಎಸ್ಪಿಗೆ ಸಲ್ಲಿಸಬೇಕಾದ ಮನವಿಯನ್ನು ಅವರಿಗೆ ಸಲ್ಲಿಸಿ ದಯವಿಟ್ಟು ಶಾಂತಿ ಸೌಹಾರ್ದದ ಭಿಕ್ಷೆ ದಯಪಾಲಿಸಿ ಎಂದು ಗೋಗರೆದಿದ್ದಾರಲ್ಲ ಈ ಕೆಲವರು, ಇವರನ್ನು ಮುಸ್ಲಿಮ್ ಸಮುದಾಯ ಪ್ರಶ್ನಿಸಬೇಕಾಗಿದೆ. ಯಾರನ್ನು ಕೇಳಿ ನೀವು ಅಲ್ಲಿಗೆ ಹೋಗಿದ್ದೀರಿ? ಅವರಲ್ಲಿ ಹೋಗಿ ಅವರಿಂದ ‘‘ನಿಮ್ಮದೇ ತಪ್ಪು, ಅದರಿಂದ ನಾವು ಸಾಕಷ್ಟು ನೊಂದಿದ್ದೇವೆ, ಆ ಅಸಮಾಧಾನ ಈಗ ಸ್ಫೋಟವಾಗಿದೆ’’ ಎಂದೆಲ್ಲ ಮಂಗಳಾರತಿ ಮಾಡಿಸಿಕೊಂಡು ಕೊನೆಗೆ ಕಾದು ನಿಂತು ಅವರು ಕೊಟ್ಟ ಕಿತ್ತಳೆ ಹಣ್ಣಿಗೆ ಕೈ ಚಾಚಿ ತೆಗೆದುಕೊಂಡು ಬಂದರಲ್ಲ, ಅವರನ್ನು ಸಮಸ್ತ ಶಾಂತಿ, ಸೌಹಾರ್ದ ಪ್ರೇಮಿಗಳು ಕೇಳಬೇಕಾಗಿದೆ. ನಿಮಗೆ ಅಲ್ಲಿಗೆ ಹೋಗಲು ಹೇಳಿದ್ದು ಯಾರು ಸ್ವಾಮಿ?

ಸಂಘ ಪರಿವಾರದ ನಾಯಕರ ಹಾಗೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಆ ಸ್ವಾಮೀಜಿಯ ನಿಲುವನ್ನು ಖಂಡಿಸಬೇಕಾಗಿತ್ತು. ‘‘ಇಂತಹ ಹೇಳಿಕೆ ನೀಡುವುದು ನಿಮ್ಮ ಸ್ಥಾನಕ್ಕೆ ಘನತೆ ತರುವ ವಿಷಯವಲ್ಲ ಸ್ವಾಮೀಜಿ’’ ಎಂದು ನಿಷ್ಠುರವಾಗಿ ಹೇಳಬೇಕಿತ್ತು. ಅದನ್ನು ಬಿಟ್ಟು ಅವರಲ್ಲೇ ಹೋಗಿ ಏನಾದರೂ ಮಾಡಿ ಸ್ವಾಮಿ ಎಂದು ಅಂಗಲಾಚುವ ದೈನೇಸಿ ಸ್ಥಿತಿಗೆ ಮುಸ್ಲಿಮರು ಬಂದಿದ್ದಾರೆ ಎಂಬಂತಹ ಸುಳ್ಳು ಚಿತ್ರಣ ಮೊನ್ನೆಯ ಭೇಟಿಯಿಂದ ಬಂದಿದೆ. ಇದಕ್ಕೆ ಕಾರಣರಾದವರನ್ನು ಖಂಡಿಸಬೇಕಾಗಿದೆ. ಪೇಜಾವರ ಸ್ವಾಮೀಜಿ ಎಲ್ಲ ಹಿಂದೂಗಳ ಪ್ರತಿನಿಧಿಯಲ್ಲ. ಉಡುಪಿಯ ಡಿಸಿ, ಎಸ್ಪಿಯೂ ಅಲ್ಲ. ಹಾಗೆ ಅವರಲ್ಲಿ ಶಾಂತಿ ಭಿಕ್ಷೆ ಬೇಡಲು ಹೋದವರು ಸಮಸ್ತ ಮುಸ್ಲಿಮರ ಪ್ರತಿನಿಧಿಗಳೂ ಅಲ್ಲ. ಇದು ಎಲ್ಲರಿಗೂ ಸ್ಪಷ್ಟವಾಗಬೇಕು. 

share
-ಸಂತೋಷ್ ಎಸ್., ಮಂಗಳೂರು
-ಸಂತೋಷ್ ಎಸ್., ಮಂಗಳೂರು
Next Story
X