ಬಾವಿಗೆ ಬಿದ್ದು ಮೃತ್ಯು
ಬ್ರಹ್ಮಾವರ : ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಎ.೪ರಂದು ಸಂಜೆ ವೇಳೆ ಯಡ್ತಾಡಿ ಗ್ರಾಮದ ಸಾಯಿಬ್ರಕಟ್ಟೆ ಎಂಬಲ್ಲಿ ನಡೆದಿದೆ.
ಮೃತರನ್ನು ಶುಕ್ರ ಪೂಜಾರಿ(೬೫) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ಗೋಪಾಲ ಕೃಷ್ಣ ಸೋಮಯಾಜಿ ಎಂಬವರ ತೋಟದ ಬಾವಿಯಲ್ಲಿರುವ ಒಣಗಿದ ಮಡಲುಗಳನ್ನು ತೆಗೆಯಲು ಹೋಗಿ ಆಕಸ್ಮಿಕ ವಾಗಿ ಕಾಲು ಜಾರಿ ಬಾವಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story