Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕನಿಷ್ಠ ಸಾಮಾಜಿಕ ಲಜ್ಜೆಯನ್ನೂ,...

ಕನಿಷ್ಠ ಸಾಮಾಜಿಕ ಲಜ್ಜೆಯನ್ನೂ, ಸಾರ್ವಜನಿಕವಾಗಿ ಈ ರೀತಿ ಸುಳ್ಳು ಹೇಳಬಾರದು ಎಂದು ತಮಗೆ ಆರೆಸ್ಸೆಸ್‌ ಕಲಿಸಿಲ್ಲವೇ?

ಆರಗ ಜ್ಞಾನೇಂದ್ರ ವಿರುದ್ಧ ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ಬಿ.ವಿ ಕಿಡಿ

ವಾರ್ತಾಭಾರತಿವಾರ್ತಾಭಾರತಿ6 April 2022 6:26 PM IST
share
ಕನಿಷ್ಠ ಸಾಮಾಜಿಕ ಲಜ್ಜೆಯನ್ನೂ, ಸಾರ್ವಜನಿಕವಾಗಿ ಈ ರೀತಿ ಸುಳ್ಳು ಹೇಳಬಾರದು ಎಂದು ತಮಗೆ ಆರೆಸ್ಸೆಸ್‌ ಕಲಿಸಿಲ್ಲವೇ?

ಬೆಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಚಂದ್ರು ಸಾವು ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ ಹೇಳಿಕೆ ಹಾಗೂ ಅದರಿಂದ ಉಲ್ಟಾ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಆರಗ ಜ್ಞಾನೇಂದ್ರರನ್ನು ತೀವ್ರವಾಗಿ ಟೀಕಿಸಿದ್ದಾರೆ. 

ಯುವ ಕಾಂಗ್ರೆಸ್‌ ರಾಷ್ಟ್ರೀಯಾಧ್ಯಕ್ಷ ಶ್ರೀನಿವಾಸ್‌ ಬಿ.ವಿ ಫೇಸ್‌ಬುಕ್‌ ನಲ್ಲಿ ಆರಗ ಜ್ಞಾನೇಂದ್ರ ಹೇಳಿಕೆಯನ್ನು ಖಂಡಿಸಿದ್ದಾರೆ. ಗೃಹಸಚಿವರಾದ ಮೇಲೆ ಆರಗ ಜ್ಞಾನೇಂದ್ರ ಅವರು ನೀಡಿರುವ ಹಲವು ವಿವಾದಾತ್ಮಕ ಹೇಳಿಕೆಗಳನ್ನು ಉಲ್ಲೇಖಿಸಿರುವ ಶ್ರೀನಿವಾಸ್‌, ಆರಗ ಜ್ಞಾನೇಂದ್ರ ಅವರಿಗೆ ಯಾವ ನಾಗರಿಕ ನಡವಳಿಕೆಗಳಿಲ್ಲ ಎಂದು ಹೇಳಿದ್ದಾರೆ. 

ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್‌, “ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾದಾಗ ನನ್ನ ಜಿಲ್ಲೆಯ ಮರ್ಯಾದೆ ಉಳಿಸಬಹುದು, ಮಲೆನಾಡಿನ ಸಂಸ್ಕೃತಿಗೆ ತಕ್ಕಂತೆ ನಾಗರಿಕ ನಡವಳಿಕೆಗಳಿಂದ ಮಾನವೀಯವಾಗಿ ವರ್ತಿಸಬಹುದು ಎನ್ನುವ ಸಣ್ಣ ನಂಬಿಕೆ ನನಗಿತ್ತು. ಆದರೆ ತಮಗೆ ಯಾವ ನಾಗರಿಕ ನಡವಳಿಕೆಗಳಾಗಲೀ, ಮಾನವೀಯತೆಯ ಸ್ಪರ್ಷವಾಗಲೀ ಇಲ್ಲ. ಮಲೆನಾಡಿನ ಸಂಸ್ಕೃತಿಯಂತೂ ಇಲ್ಲವೇ ಇಲ್ಲ ಎಂದು ಮತ್ತೆ ಮತ್ತೆ ಪ್ರೂವ್ ಮಾಡುತ್ತಿದ್ದಾರೆ.” ಎಂದು ಬರೆದಿದ್ದಾರೆ. 

ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಾಗ ಗೃಹ ಸಚಿವರು ನೀಡಿದ್ದ ವಿವಾದಾತ್ಮಕ ಹೇಳಿಕೆ, ಪೊಲೀಸರ ಕುರಿತು ಹಾಗೂ ಗೃಹ ಇಲಾಖೆಯ ಬಗ್ಗೆ ನೀಡಿದ್ದ ನಿಂದನಾತ್ಮಕ ಹೇಳಿಕೆ ಹಾಗೂ ಬಜರಂಗದಳ ಕಾರ್ಯಕರ್ತ ಹರ್ಷ ಹಾಗೂ ಬೆಂಗಳೂರಿನಲ್ಲಿ ಹತ್ಯೆಗೀಡಾದ ಚಂದ್ರು ಪ್ರಕರಣದವರೆಗೆ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆಗಳನ್ನು ಶ್ರೀನಿವಾಸ್‌ ಉಲ್ಲೇಖಿಸಿದ್ದಾರೆ. 

ಅಲ್ಲದೆ, ಇಷ್ಟೊಂದು ಪ್ರಮಾಣದಲ್ಲಿ ಸುಳ್ಳು ಹೇಳಲು ಆರ್‌ಎಸ್‌ಎಸ್‌ ಕಲಿಸಿದೆಯೇ ಎಂದು ಪ್ರಶ್ನಿಸಿದ ಶ್ರೀನಿವಾಸ್, ಕನಿಷ್ಠ ಸಾಮಾಜಿಕ ಲಜ್ಜೆಯನ್ನೂ, ಸಾರ್ವಜನಿಕವಾಗಿ ಈ ಪ್ರಮಾಣದ ಸುಳ್ಳು ಹೇಳಬಾರದು ಎನ್ನುವ ಸಾಮಾನ್ಯ ಜ್ಞಾನವನ್ನೂ  RSS ಕಲಿಸಿ ಕೊಡಲಿಲ್ಲವೇ  ಎಂದು ಪ್ರಶ್ನಿಸಿದ್ದಾರೆ.

ಬಿ.ವಿ ಶ್ರೀನಿವಾಸ್‌ ರವರ ಬರಹದ ಪೂರ್ಣ ಪಠ್ಯ ಇಂತಿದೆ.

Accidental Home Minister

ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾದಾಗ ನನ್ನ ಜಿಲ್ಲೆಯ ಮರ್ಯಾದೆ ಉಳಿಸಬಹುದು, ಮಲೆನಾಡಿನ ಸಂಸ್ಕೃತಿಗೆ ತಕ್ಕಂತೆ ನಾಗರಿಕ ನಡವಳಿಕೆಗಳಿಂದ ಮಾನವೀಯವಾಗಿ ವರ್ತಿಸಬಹುದು ಎನ್ನುವ ಸಣ್ಣ ನಂಬಿಕೆ ನನಗಿತ್ತು. ಆದರೆ ತಮಗೆ ಯಾವ ನಾಗರಿಕ ನಡವಳಿಕೆಗಳಾಗಲೀ, ಮಾನವೀಯತೆಯ ಸ್ಪರ್ಷವಾಗಲೀ ಇಲ್ಲ. ಮಲೆನಾಡಿನ ಸಂಸ್ಕೃತಿಯಂತೂ ಇಲ್ಲವೇ ಇಲ್ಲ ಎಂದು ಮತ್ತೆ ಮತ್ತೆ ಪ್ರೂವ್ ಮಾಡುತ್ತಿದ್ದಾರೆ.

ಘಟನೆ 1) ಮೈಸೂರು ಗ್ಯಾಂಗ್ ರೇಪ್. 

ಸಚಿವರ ಮಾತು: ಕಾಂಗ್ರೆಸ್ಸಿಗರೇ ನನ್ನನ್ನು ಗ್ಯಾಂಗ್ ರೇಪ್ ಮಾಡುತ್ತಿದ್ದಾರೆ. 
* ಅತ್ಯಾಚಾರಕ್ಕೆ ಒಳಗಾದ ಯುವತಿ ಅಷ್ಟೊತ್ತಿಗೆ ಅಲ್ಲಿಗೆ ಏಕೆ ಹೋಗಬೇಕಿತ್ತು. 

ಘಟನೆ 2) ಗೃಹ ಸಚಿವರಾಗಿದ್ದಕ್ಕೆ ಶಿವಮೊಗ್ಗದಲ್ಲಿ ಸನ್ಮಾನ ಸಮಾರಂಭ.

ಸಚಿವರ ಮಾತು: ಗೃಹ ಇಲಾಖೆ ಅಂದ್ರೆ ದೊಡ್ಡ ಇಲಾಖೆ ಅಂದ್ಕೊಂಡಿದ್ದೆ. ಆದ್ರೆ ಪೊಲೀಸರು ಸರಿಯಾಗಿ ನಿದ್ದೆ ಮಾಡೋಕೂ ಬಿಡೋದಿಲ್ಲ. 

ಘಟನೆ 3): ಚಿಕ್ಕಮಗಳೂರು SP ಜತೆ ಮಾತನಾಡುತ್ತಾ ? 
ಸಚಿವರ ಮಾತು: ಪೊಲೀಸರು ಎಂಜಲು ತಿನ್ನುತ್ತಾ ನಾಯಿಯಂತೆ ಬಿದ್ದಿರ್ತಾರೆ. 
(ತಮ್ಮದೇ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಎಂಜಲು ತಿನ್ನುವ ನಾಯಿಗಳು ಎಂದು ಕರೆದ ಸ್ವತಂತ್ರ ಭಾರತದ ಮೊದಲ ಗೃಹ ಮಂತ್ರಿ). 

ಘಟನೆ 4): ಶಿವಮೊಗ್ಗ ಹರ್ಷ ಪ್ರಕರಣ- ಕೊಲೆಯಾದ ಹರ್ಷನ ಮೇಲೂ ಕ್ರಿಮಿನಲ್ ಪ್ರಕರಣಗಳಿದ್ದವು ಎಂದು ಮಾಧ್ಯಮಗಳಿಗೆ ಹೇಳಿಕೆ. ಬಳಿಕ ವಿಧಾನಸಭೆಯಲ್ಲಿ ತಾನು ಹಾಗೆ ಹೇಳಿಯೇ ಇಲ್ಲ ಎಂದು ಸುಳ್ಳು ಹೇಳಿದರು. 

ಘಟನೆ 5) : ಬೆಂಗಳೂರು ಯುವಕ ಚಂದ್ರು ಕೊಲೆ ಪ್ರಕರಣ. ಉರ್ದು ಭಾಷೆ ಮಾತನಾಡಲಿಲ್ಲವೆಂದು ಚಂದ್ರುನನ್ನು ಕೊಲೆ ಮಾಡಲಾಗಿದೆ. ( ಮೊದಲ ಹೇಳಿಕೆ)

* ಇಲ್ಲ ಇಲ್ಲ. ನನಗೆ ಸರಿಯಾದ ಮಾಹಿತಿ ಇರಲಿಲ್ಲ. ಚಂದ್ರು ಕೊಲೆ ಉರ್ದು ಕಾರಣಕ್ಕೆ, ಭಾಷೆ ಕಾರಣಕ್ಕೆ ಆಗಿರುವುದಲ್ಲ. ಆಕ್ಸಿಡೆಂಟ್ ಜಗಳದಲ್ಲಿ ಕೊಲೆ ಆಗಿದ್ದು. ನನ್ನ ಮೊದಲಿನ ಹೇಳಿಕೆಗೆ ಕ್ಷಮೆ ಕೇಳುತ್ತೇನೆ. 

ಸನ್ಮಾನ್ಯ ಗೃಹ ಸಚಿವರೇ ತಾನು RSS ನಿಂದಲೇ ಎಲ್ಲವನ್ನೂ ಕಲಿತಿದ್ದು, RSS ನಿಂದಲೇ ನಾನು ಬೆಳೆದದ್ದು ಎನ್ನುವ ನೀವು RSS ನಿಂದ ಇದನ್ನೇ ಕಲಿತಿದ್ದಾ ? ಕನಿಷ್ಠ ಸಾಮಾಜಿಕ ಲಜ್ಜೆಯನ್ನೂ, ಸಾರ್ವಜನಿಕವಾಗಿ ಈ ಪ್ರಮಾಣದ ಸುಳ್ಳು ಹೇಳಬಾರದು ಎನ್ನುವ ಕಾಮನ್ ಸೆನ್ಸ್ ಅನ್ನೂ‌ RSS ಕಲಿಸಿ ಕೊಡಲಿಲ್ಲವೇ ನಿಮಗೆ ? 
Shame..Shame...ಪಪ್ಪಿ Shame.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X