ನ್ಯಾಯಾಲಯದ ಆದೇಶದ ಹೊರತಾಗಿಯೂ ಆಕಾರ್ ಪಟೇಲ್ ರನ್ನು ಅಮೆರಿಕಕ್ಕೆ ತೆರಳದಂತೆ ತಡೆದ ಅಧಿಕಾರಿಗಳು
ಬೆಂಗಳೂರು: ಆಮ್ನೆಸ್ಟಿ ಇಂಟರ್ನ್ಯಾಶನಲ್ ಇಂಡಿಯಾದ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್ ವಿರುದ್ಧ ಸಿಬಿಐ ಲುಕ್ ಔಟ್ ಸುತ್ತೋಲೆ (ಎಲ್ಒಸಿ) ಹಿಂಪಡೆಯಲು ದಿಲ್ಲಿ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದ್ದರೂ, ಗುರುವಾರ ತಡರಾತ್ರಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಟೇಲ್ ರನ್ನು ಅಮೆರಿಕಕ್ಕೆ ತೆರಳದಂತೆ ತಡೆಯಲಾಯಿತು.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಮ್ಮನ್ನು ಮತ್ತೆ ತಡೆದಿದ್ದಾರೆ ಎಂದು ಪಟೇಲ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ತನ್ನ ವಿರುದ್ಧದ ಲುಕ್ ಔಟ್ ಸುತ್ತೋಲೆಯನ್ನು ಸಿಬಿಐ ಹಿಂಪಡೆದಿಲ್ಲ ಎಂದರು.
“.. ವಲಸೆ ಅಧಿಕಾರಿಗಳು ಮತ್ತೊಮ್ಮೆ ನನ್ನನ್ನು ತಡೆದರು. ಸಿಬಿಐ ತನ್ನ ಕುರಿತ ಲುಕ್ ಔಟ್ ಸುತ್ತೋಲೆಯಿಂದ ಹಿಂತೆಗೆದುಕೊಂಡಿಲ್ಲ. ಅಗತ್ಯವಿದ್ದರೆ ಮತ್ತೆ ನ್ಯಾಯಾಲಯದ ಮೊರೆ ಹೋಗುವೆ’’ ಎಂದು ಪಟೇಲ್ ಹೇಳಿದ್ದಾರೆ.
Next Story