Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಗತ್ ಸಿಂಗ್ ನಮಗೆ ದಾರಿದೀಪವಾದಾರು

ಭಗತ್ ಸಿಂಗ್ ನಮಗೆ ದಾರಿದೀಪವಾದಾರು

ಜಿ. ರಾಮಕೃಷ್ಣಜಿ. ರಾಮಕೃಷ್ಣ15 April 2022 11:28 AM IST
share
ಭಗತ್ ಸಿಂಗ್ ನಮಗೆ ದಾರಿದೀಪವಾದಾರು

ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರೆಂದು ಮನ್ನಣೆ ನೀಡುತ್ತಲೇ ಅವರನ್ನು ಭಯೋತ್ಪಾದಕರೆಂದು ಕರೆಯುವ ರೂಢಿಯೊಂದಿದೆ. ಬ್ರಿಟಿಷರೇ ಆ ಅಂಕಿತ ನೀಡಿದ್ದವರು. ಯುವಕರಿಗೆ ನೀಡಿದ ಸಂದೇಶದಲ್ಲಿ ಅದರ ಕುರಿತು ವಿವರಣೆಯನ್ನು ನೀಡಿರುವ ಭಗತ್ ತಾನೆಂದೂ ಭಯೋತ್ಪಾದಕನಲ್ಲವೆಂದು ಸಮಜಾಯಿಷಿ ನೀಡಿದ್ದಾರೆ. ಇಂದಿನ ನಮ್ಮ ಸಂದರ್ಭ ಹೇಗಿದೆಯೆಂದರೆ ಕೇಂದ್ರ ಸರಕಾರದ ಆರ್ಥಿಕ ನೀತಿಯನ್ನು ವಿರೋಧಿಸಿದರೂ ರಾಷ್ಟ್ರದ್ರೋಹದ ಆಪಾದನೆ ಹೊರಿಸಿಬಿಡುತ್ತಾರೆ. ಸುಳ್ಳುಸುಳ್ಳೇ ಪಾಕಿಸ್ತಾನದ ಪರ ಘೋಷಣೆ ಕೂಗಿದರೆಂದು ಕೆಲವರ ಮೇಲೆ ಆಪಾದನೆ ಮಾಡಲಾಗುತ್ತಿದೆ; ಅಂತಹ ಹುರುಳಿಲ್ಲದ ಆಪಾದನೆ ಮಾಡುವವರ ಸಾಂಸ್ಕೃತಿಕ ಸೈನ್ಯದ ಕಟ್ಟಾಳುಗಳು ಮೆರವಣಿಗೆಗಳಲ್ಲಿ ಬೆರೆತು ಅಂತಹ ಘೋಷಣೆ ಕೂಗಿ ಇತರರನ್ನು ಬಂಧನಕ್ಕೆ ಸಿಲುಕಿಸಿರುವುದೂ ಉಂಟು. ಅಂತಹ ಸಂದರ್ಭಗಳಲ್ಲಿ ಭಗತ್ ಸಿಂಗ್ ನಮಗೆ ಸಾಂತ್ವನ ನೀಡಬಲ್ಲ.

ತನ್ನ ಯುಗವನ್ನು ಭಗತ್ ಸಿಂಗ್ ವಿಮೋಚನೆಯ ಯುಗವೆಂದು ಹೆಸರಿಸಿದ್ದಾರೆ. ಇಂದಿನ ಯುಗವನ್ನು ಹಾಗೆ ಕರೆಯಲು ಅಳುಕಿದೆ. ‘‘ಭಾರತ ಸರಕಾರದ ಮುಖ್ಯಸ್ಥ ಲಾರ್ಡ್ ರೆಡಿಂಗ್ ಆದರೇನು, ಸರ್ ಪುರುಷೋತ್ತಮ ದಾಸ್ ಠಾಕೂರ್ ದಾಸ್ ಆದರೇನು, ರೈತ-ಕಾರ್ಮಿಕರಿಗೆ ಅದು ಹೇಗೆ ಭಿನ್ನವಾಗಿ ತೋರಬಲ್ಲದು?’’ ಎಂಬ ಪ್ರಶ್ನೆಯನ್ನು ಭಗತ್ ಸಿಂಗ್ ಗಂಭೀರವಾಗಿ ಎತ್ತಿದ್ದಾರೆ. ಹೆಜ್ಜೆಹೆಜ್ಜೆಗೂ ನಾವಿದನ್ನು ಮನನ ಮಾಡಿಕೊಳ್ಳುತ್ತಾ ಬದಲಾವಣೆಯ ಹರಿಕಾರರಾಗುವ ಅಗತ್ಯವಿದೆ. ಗಾಂಧೀಜಿ ಒಮ್ಮೆ ಹೇಳಿದ್ದರು. ‘‘ದಿಮ್ಮಿ ದೊರೆಯನ್ನು ಓಡಿಸಿ ಹದ್ದು ದೊರೆಯನ್ನು ಆಯ್ಕೆ ಮಾಡಿಕೊಳ್ಳಲು ನಾನು ತಯಾರಿಲ್ಲ.’’ ಎಂದು. ಪ್ರಸ್ತುತ ಸಂದರ್ಭದಲ್ಲಿ ಭಗತ್ ಸಿಂಗ್‌ನ ಸಂದೇಶ ಅದರಲ್ಲಡಗಿದೆ.

 ಒಂದೆಡೆ ಅವರು ಹೇಳುತ್ತಾರೆ: ‘‘ವಿಮರ್ಶೆ ಮಾಡುವ ಪ್ರವೃತ್ತಿ ಮತ್ತು ಸ್ವತಂತ್ರ ಆಲೋಚನೆ ಇವೆರಡೂ ಯಾವುದೇ ಕ್ರಾಂತಿಕಾರಿಗೆ ಇರಬೇಕಾದ ಅತ್ಯವಶ್ಯ ಗುಣಲಕ್ಷಣಗಳು. ಮಹಾತ್ಮಾಜಿ ಶ್ರೇಷ್ಠ ವ್ಯಕ್ತಿ ಎಂದ ಮಾತ್ರಕ್ಕೆ ಯಾರೂ ಅವರನ್ನು ಟೀಕಿಸುವಂತಿಲ್ಲವೇ? ಅವರು ಎತ್ತರಕ್ಕೆ ಏರಿರುವ ಕಾರಣದಿಂದ ರಾಜಕೀಯ ಕ್ಷೇತ್ರದಲ್ಲೇ ಇರಲಿ, ಮತಧರ್ಮದಲ್ಲಿರಲಿ, ಅರ್ಥಶಾಸ್ತ್ರ ಅಥವಾ ನೈತಿಕತೆಯ ಬಗ್ಗೆಯಾಗಲಿ ಅವರು ಹೇಳುವುದೆಲ್ಲವೂ ಸರಿಯೇ .... ಇಂತಹ ಮನಸ್ಥಿತಿ ನಮ್ಮನ್ನು ಪ್ರಗತಿಯತ್ತ ಕೊಂಡೊಯ್ಯುವುದಿಲ್ಲ. ಇದು ತೀರಾ ಪ್ರತಿಗಾಮಿ ನಡವಳಿಕೆ.’’

 ಗಾಂಧೀಜಿಯ ಬಗ್ಗೆ ಇಷ್ಟು ಮುಕ್ತವಾಗಿ ಮಾತನಾಡಿದ ಭಗತ್ ಗಾಂಧೀಜಿಯದೇ ರಾಜ್ಯದ ಇಂದಿನ ಮುತ್ಸದ್ದಿಗಳ ಬಗ್ಗೆ ಏನು ಹೇಳಬಹುದಲ್ಲವೆ? ವಿಮರ್ಶೆ ಮತ್ತು ಸ್ವತಂತ್ರ ಆಲೋಚನೆ ರಾಷ್ಟ್ರದೋಹ ಎಂಬ ಹಣೆಪಟ್ಟಿ ಪಡೆಯುವ ದುರಂತದ ಹಂತದಲ್ಲಿ ನಾವಿರುವಾಗ ಭಗತ್ ಸಿಂಗ್ ನಮಗೆ ದಾರಿದೀಪ ನವಚೇತನ ಮತ್ತು ದಾರ್ಢ್ಯ ತುಂಬುವ ಪ್ರಚಂಡ ಸೆಲೆ. ಅವರ ಆಯ್ದ ಬರಹಗಳನ್ನು ಶ್ರೀಮತಿ ಜ್ಯೋತಿ ಎ. ಸುಂದರವಾಗಿ ಅನುವಾದಿಸಿದ್ದಾರೆ ಮತ್ತು ಸಮಯೋಚಿತವಾಗಿ ನಮ್ಮ ಮುಂದಿರಿಸಿದ್ದಾರೆ.

share
ಜಿ. ರಾಮಕೃಷ್ಣ
ಜಿ. ರಾಮಕೃಷ್ಣ
Next Story
X