Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕುಂದಾಪ್ರ ಕನ್ನಡಕ್ಕೆ ಭಾಷಾ ಸಾಹಿತ್ಯ...

ಕುಂದಾಪ್ರ ಕನ್ನಡಕ್ಕೆ ಭಾಷಾ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಲಿ: ಪ್ರೊ.ಎ.ವಿ.ನಾವಡ ಪ್ರತಿಪಾದನೆ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ವಾರ್ತಾಭಾರತಿವಾರ್ತಾಭಾರತಿ15 April 2022 6:16 PM IST
share
ಕುಂದಾಪ್ರ ಕನ್ನಡಕ್ಕೆ ಭಾಷಾ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಲಿ: ಪ್ರೊ.ಎ.ವಿ.ನಾವಡ ಪ್ರತಿಪಾದನೆ

ಕುಂದಾಪುರ : ಕುಂದಾಪ್ರ ಕನ್ನಡಕ್ಕೆ ಒಂದು ಭಾಷಾ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಬೇಕು. ಜನಭಾಷೆಯಲ್ಲಿ ಕುಂದಾಪ್ರ ಕನ್ನಡ ಸೃಜನಶೀಲ ಸಾಹಿತ್ಯದ ರಚನೆಗೆ ಇಂಬು ಕೊಡಬೇಕು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಂದಾಪ್ರ ಕನ್ನಡ ಅಧ್ಯಯನಪೀಠವೊಂದು ಆರಂಭಗೊಳ್ಳಬೇಕು.ಈ ಮೂಲಕ ‘ಕನ್ನಡಂಗಳ’ ಅಭಿವೃದ್ಧಿಯಾಗ ಬೇಕು ಎಂದು ಹಂಪಿ ಕನ್ನಡ ವಿವಿಯ ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಹಾಗೂ ಸಂಶೋಧಕ ಪ್ರೊ.ಎ.ವಿ. ನಾವಡ ಪ್ರತಿಪಾದಿಸಿದ್ದಾರೆ.

ಶುಕ್ರವಾರ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ಕಲಾ ಮಂದಿರದ ಕವಿಮುದ್ದಣ್ಣ ವೇದಿಕೆಯಲ್ಲಿ ನಡೆದ ಉಡುಪಿ ಜಿಲ್ಲಾ ಹದಿನೈದನೆಯ ಕನ್ನಡ ಸಾಹಿತ್ಯ ಸಮ್ಮೇಳನ ‘ತುರಾಯಿ’ಯ ಸಮ್ಮೇಳನಾಧ್ಯಕ್ಷ ಸ್ಥಾನ ದಿಂದ ಅವರು  ಮಾತನಾಡುತಿದ್ದರು.

ಕುಂದಾಪುರ ಕನ್ನಡಕ್ಕೆ ಹೊಸ ಕಸುವು ತುಂಬಬೇಕು ಎಂದು ನಾವು ಬಹುಕಾಲ ದಿಂದ ಸರಕಾರವನ್ನು ಒತ್ತಾಯಿಸುತ್ತಲೇ ಬಂದ್ದಿದ್ದೇವೆ. ಈ ದಿಸೆಯಲ್ಲಿ ಭಾಷಾ ಅನನ್ಯತೆಯನ್ನು ಉಳಿಸಿಕೊಂಡಿರುವ ಕುಂದಾಪ್ರ ಕನ್ನಡಕ್ಕೆ ಒಂದು ಭಾಷಾ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಬೇಕು ಹಾಗೂ ಮಂಗಳೂರು ವಿವಿಯಲ್ಲಿ ಕುಂದಾಪ್ರ ಕನ್ನಡ ಅಧ್ಯಯನ ಪೀಠವೊಂದನ್ನು ಆರಂಭಿಸಬೇಕು ಎಂದವರು ಒತ್ತಾಯಿಸಿದರು.

ಇನ್ನೊಂದು ಕನ್ನಡದ ಸೃಜನಶೀಲ ಕೃತಿಗಳು ಆಡುಮಾತುಗಳಿಗೆ ಭಾಷಿಕ ರೂಪಾಂತರವಾಗಬೇಕು. ಉದಾಹರಣೆಗೆ, ಪ್ರಾದೇಶಿಕ ಸಂಸ್ಕೃತಿಯನ್ನು ಕಟ್ಟಿಕೊಟ್ಟ ಕಾರಂತರ ‘ಮರಳಿ ಮಣ್ಣಿಗೆ’ಯಂತಹ ಕಾದಂಬರಿ ಯನ್ನು ಕುಂದಾಪ್ರ ಕನ್ನಡಕ್ಕೆ ರೂಪಾಂತರಿಸಬೇಕು. ಜೊತೆಗೆ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಸಮಾಜಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ಮಹನೀಯರ ಹೆಸರಲ್ಲಿ ಸರಕಾರ ಪ್ರತಿಷ್ಠಾನಗಳನ್ನು ಸ್ಥಾಪಿಸಬೇಕು. ಆ ಮೂಲಕ ಒಂದು ಪ್ರಾದೇಶಿಕ ಸಂಸ್ಕೃತಿಯ ಶೋಧದ ಕೆಲಸ ಇಲ್ಲಿ ನಡೆಯಬೇಕು. ಇದು ಕನ್ನಡ ಮರುಕಟ್ಟುವ ಕೆಲಸಗಳಲ್ಲಿ ಬಹಳ ಮುಖ್ಯ ಎಂದು ಭಾಷಾ ಸಂಶೋಧಕರೂ ಆಗಿರುವ ಪ್ರೊ.ನಾವಡ ಹೇಳಿದರು.

ಶಾಲಾ-ಕಾಲೇಜುಗಳು, ಸಂಘಸಂಸ್ಥೆಗಳು ತಮ್ಮ ಸಮಾರಂಭಗಳಲ್ಲಿ ವಿದೇಶಿ ಡ್ರಮ್ ಡ್ಯಾನ್ಸ್‌ಗಳ ಬದಲಾಗಿ ಸ್ಥಳೀಯ ಜನಭಾಷೆಯಲ್ಲಿ ಹಾಡು, ನೃತ್ಯ, ನಾಟಕ, ಯಕ್ಷಗಾನ ಪ್ರದರ್ಶನಗೊಳ್ಳಬೇಕು. ಇಂದು ನಮ್ಮ ಬದುಕು, ಓದುವ ಸಂಸ್ಕೃತಿಯಿಂದ ಕೇಳುವ ಸಂಸ್ಕೃತಿಗೆ, ಕೇಳುವ ಸಂಸ್ಕೃತಿಯಿಂದ ನೋಡುವ ಸಂಸ್ಕೃತಿಗೆ ಬದಲಾಗಿದೆ ಎಂದವರು ನುಡಿದರು.

ತಂತ್ರಜ್ಞಾನಕ್ಕೆ ತೆರೆದುಕೊಳ್ಳಿ: ಇಂದು ಡಿಜಿಟಲ್ ತಂತ್ರಜ್ಞಾನದ ಬಹುರೂಪಿ ಬೆಳಕಿಂಡಿ ಓದುವ ಲೋಕಕ್ಕೆ ತೆರೆದಿದೆ. ಅನೇಕರಲ್ಲಿ ಇದು ಒಂದು ಆತಂಕ, ತಲ್ಲಣವನ್ನು ಸೃಷ್ಟಿಸಿದ್ದು ನಿಜ. ಪುಸ್ತಕ ಲೋಕವನ್ನು ತೀರಾ ಭಾವನಾತ್ಮಕತೆಗೆ ಎಳೆದುನೋಡುವ ನೋಟಕ್ಕೆ ಬದಲಾಗಿ ಇದನ್ನು ಹೊಸತಂತ್ರಜ್ಞಾನದ ಗುಣಾತ್ಮಕತೆಯ ಅರಿವಿನಲ್ಲಿ ನೋಡಬೇಕು. ಅಂದರೆ ಡಿಜಿಟಲ್ ತಂತ್ರಜ್ಞಾನದ ಇ-ಬುಕ್, ಆಡಿಯೋ ಬುಕ್, ಫೇಸ್ಬುಕ್, ಟ್ವಿಟರ್, ಇನ್‌ಸ್ಟ್ಟಾಗ್ರಾಂ, ಯುಟ್ಯೂಬ್, ವಾಟ್ಸಪ್‌ಗಳನ್ನು ಓದು, ಬರೆವ ಸಂಸ್ಕೃತಿಗೆ ತೆರೆದ ಹೊಸ ಬಾಗಿಲಾಗಿ ಕಂಡುಕೊಳ್ಳಬೇಕಾಗಿದೆ ಎಂದರು.

ಈ ಬುಕ್‌ವರ್ಲ್ಡ್‌ನ್ನು ಪುಸ್ತಕಕ್ಕೆ ಪರ್ಯಾಯ, ಮಸ್ತಕ ರೂಪದ ಪಲ್ಲಟವೆಂದು ಗ್ರಹಿಸಬೇಕೇ ಹೊರತು ಪುಸ್ತಕ ಲೋಕದ ಮುಂದಿರುವ ಆತಂಕ, ಕುಂದು ಎಂದು ತಿಳಿಯಬೇಕಿಲ್ಲ. ಅದು ‘ಚರಿತ್ರೆಯ ಹಿಂದಿನ ಪುಟಗಳ ಮುಂದಿನ ಹಾಳೆಯಂತೆ’ ಎನ್ನುವುದು ನನ್ನ ನಿಲುವಾಗಿದೆ ಎಂದರು.

ರಾಜ್ಯೋತ್ಸವಕ್ಕೆ ಸೀಮಿತವಾಗದಿರಲಿ: ಕನ್ನಡ ರಾಜ್ಯೋತ್ಸವಕ್ಕಷ್ಟೇ ಕನ್ನಡ ಸೀಮಿತವಾಗದಿರಲಿ. ಕನ್ನಡಪ್ರಜ್ಞೆ ಬರಿಯ ಒಂದು ದಿನದ ರಾಜ್ಯೋತ್ಸವವನ್ನು ವೈಭವದಲ್ಲಿ ಆಚರಿಸಿ ಕನ್ನಡ ಬಾವುಟ ಹಾರಿಸಿ ಕನ್ನಡದ ಉದ್ಧಾರದ ಉದ್ದುದ್ದ ಘೋಷಣೆ ಕೂಗಿದರೆ ಕನ್ನಡದ ಅಭಿವೃದ್ಧಿಯಾಗುವುದಿಲ್ಲ. ಕನ್ನಡಪ್ರಜ್ಞೆ ಕಟ್ಟುವ ಕಾರ್ಯ ನಿರಂತರ ಯಜ್ಞವಾಗಬೇಕು. ಅದು ತಪಸ್ಸಿನ ಶ್ರದ್ಧೆಯಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ನಾಡು, ನುಡಿ, ಬದುಕಿನ ಮುಂದಿರುವ ಸವಾಲುಗಳ ಬಗೆಗೆ ಗಂಭೀರವಾದ ಚರ್ಚೆ ನಡೆದು ಕನ್ನಡ ಮರುಕಟ್ಟುವ ಸಂಕಥನಗಳು, ಕಾರ್ಯ ಯೋಜನೆಗಳು ರೂಪುಗೊಳ್ಳಬೇಕು. ಕನ್ನಡದ ಸಬಲೀಕರಣ, ಮರುಕಟ್ಟುವ ಕಾರ್ಯ ಎಂದರೆ ರಾಜ್ಯಭಾಷೆ ಕನ್ನಡದ ಗ್ರಹಿಕೆಯಷ್ಟೇ ಅಲ್ಲ. ಜನಭಾಷೆ ‘ಕನ್ನಡಂಗಳ’ ಅಸ್ಮಿತೆಯನ್ನು ಕಟ್ಟುವುದೂ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಕುವೆಂಪು ಕವಿವಾಣಿಯೊಂದಿಗೆ ಪ್ರಾರಂಭ

೧೫ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಕನ್ನಡ ವಿದ್ವಾಂಸ ಪ್ರೊ.ಎ.ವಿ.ನಾವಡ ಅವರು ರಾಷ್ಟ್ರಕವಿ ಕುವೆಂಪು ಅವರ ಕವಿವಾಣಿಯೊಂದಿಗೆ ಮಾತನ್ನು ಪ್ರಾರಂಭಿಸಿದರು. 

ಕುವೆಂಪು ಅವರ ‘ಸತ್ತಂತಿಹರನು ಬಡಿದೆಚ್ಚರಿಸು... ಕಚ್ಚಾಡುವರನು ಕೂಡಿಸಿ ಒಲಿಸು’ ಕವಿವಾಣಿ ಎಲ್ಲ ಕನ್ನಡಿಗರ ಸಂಕಲ್ಪವಾಗಲಿ ಎಂದು ಅಧ್ಯಕ್ಷ ಭಾಷಣ ಪ್ರಾರಂಭಿಸಿದ ಅವರು, ಈಗಷ್ಟೆ ಮೂರ್ತಗೊಂಡ ಉಡುಪಿ ಜಿಲ್ಲಾ ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ’ಶುಭನುಡಿಯೆ ಶುಭನುಡಿಯೆ ಶಕುನದ ಹಕ್ಕಿ’ ಎಂದು ಹಾರೈಸಿ ಕನ್ನಡತನಕ್ಕೆ ಹೊಸ ಮುಗಿಲ್ ತೆರೆಯಲಿ ಎಂದು ಆಶಿಸುತ್ತೇನೆ ಎಂದರು.

ನನಗೆ ನುಡಿ ಕೊಟ್ಟ ಕನ್ನಡಾಂಬೆಯ ಪದತಲಕ್ಕೆ ತಲೆಯಿಟ್ಟು, ಪೊಡವಿಗೊಡೆಯ ಕೃಷ್ಣನಿಗೆ ಪೊಡಮಟ್ಟು, ಊರ ಅಧಿದೈವ ಕುಂದೇಶ್ವರ, ಗುರುನರಸಿಂಹ, ಮೂಕಾಂಬಿಕೆಗೆ ಮತ್ತು ಎಲ್ಲ ದೈವದೇವರಿಗೆ ಮಣಿದು, ದೇಶಕ್ಕೆ ಸ್ವಾತಂತ್ರ್ಯದ ಸವಿಯನ್ನು ಉಣಿಸಿದ ಈ ನೆಲದ ವೀರಚೇತನಕ್ಕೆ ಕೈಮುಗಿದು ಪೂರ್ವಸೂರಿಗಳನ್ನು ನೆನೆದು, ‘ರಕ್ಷಿಸಲಿ ನಮ್ಮನನವರತ’ ಎಂದು ಪ್ರಾರ್ಥಿಸುತ್ತೇನೆ ಎಂದರು.

‘ಕನ್ನಡ ನಮ್ಮ ಹೆಮ್ಮೆಯಾಗಬೇಕು. ಕನ್ನಡ ನಮ್ಮ ಸ್ವಾಭಿಮಾನವಾಗಬೇಕು. ನಮ್ಮ ಬದುಕಿನ ಪ್ರೀತಿಯಾಗಬೇಕು. ಬದುಕಿನ ರೀತಿಯಾಗಬೇಕು. ಬದುಕಿನ ಭಾಗವಾಗಬೇಕು. ಅದು ಬದುಕಾಗಬೇಕು.’
-ಪ್ರೊ.ಎ.ವಿ.ನಾವಡ, ೧೫ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X