ಸರಕಾರದ ತಪ್ಪು ನೀತಿಯಿಂದ ಕನ್ನಡದ ಮೌಲ್ಯ ಹಿಡಿದಿಡುವ ಪ್ರಯತ್ನ: ಬಾಲಕೃಷ್ಣ ಶೆಟ್ಟಿ
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ‘ತುರಾಯಿ’ ಸಮಾರೋಪ
ಕುಂದಾಪುರ : ಕನ್ನಡದಲ್ಲಿ ಬರಹಗಾರರ ಸಂಖ್ಯೆ ಕಡಿಮೆ ಇಲ್ಲ. ಆದರೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಸರಕಾರದ ತಪ್ಪಾದ ರೀತಿ-ನೀತಿಗಳು ಕನ್ನಡದ ಮೌಲ್ಯವನ್ನು ಹಿಡಿದಿಡುವ ಪ್ರಯತ್ನ ಮಾಡುತ್ತಿದೆ. ಸಂಸ್ಕೃತಿ ಯನ್ನು ಬಿಂಬಿಸುವ ನಮ್ಮ ಶಾಸನಗಳ ಸಂರಕ್ಷಣೆಯ ಕಾರ್ಯ ನಡೆಯಬೇಕು ಎಂದು ನಿವೃತ್ತ ಪ್ರಾಂಶುಪಾಲ ಎಂ.ಬಾಲಕೃಷ್ಣ ಶೆಟ್ಟಿ ಕಟೀಲು ಹೇಳಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದ ಕವಿ ಮುದ್ದಣ್ಣ ವೇದಿಕೆಯಲ್ಲಿ ಶನಿವಾರ ನಡೆದ ೧೫ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ’ತುರಾಯಿ’ ಇದರ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಕನ್ನಡ ಭಾಷೆಯ ಮೇಲೆ ಇತರೆ ಭಾಷೆಗಳಿಂದಾಗುತ್ತಿ ರುವ ಪ್ರಭಾವದಿಂದಾಗಿ, ಕೊಠಡಿಯ ಬಾಗಿಲು ಹಾಕಿ ಕೊಂಡು ಕನ್ನಡ ಕಲಿಯುವ ಹಾಗೂ ಮಾತನಾಡುವ ದುಸ್ಥಿತಿಗಳು ನಿರ್ಮಾಣವಾಗುತ್ತಿರುವುದು ಅತ್ಯಂತ ಗಂಭೀರವಾಗಿದೆ. ಭಾಷೆ ಸಂಸ್ಕೃತಿಯ ಪ್ರತಿಬಿಂಬ ಎಂಬುದನ್ನು ಅರಿಯ ಬೇಕಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮ್ಮೇಳನಕ್ಕೆ ಪ್ರತಿಸ್ಪಂದನ ನೀಡಿದ ಸಮ್ಮೇಳನಾಧ್ಯಕ್ಷ ಪ್ರೊ.ಎ.ವಿ.ನಾವಡ, ಕುಂದಾಪ್ರ ಭಾಷೆಯ ಉಳಿವು ಹಾಗೂ ಬೆಳವಣಿಗೆಗೆ ಕಟಿಬದ್ದತೆ ಇರಬೇಕು. ಇದಕ್ಕಾಗಿ ಈ ಭಾಗದ ಸಾಹಿತಿಗಳು ಹಾಗೂ ಬರವಣಿಗಾರರು ಕೈ ಜೋಡಿಸ ಬೇಕು. ಕುಂದಾಪುರ ಹಾಗೂ ಉಡುಪಿ ಜಿಲ್ಲೆಯ ಹಿರಿಯ ಸಾಹಿತಿಗಳ ಸಾಹಿತ್ಯ ಚಟುವಟಿಕೆಗಳ ಪರಿಚಯ ಮುಂದಿನ ತಲೆಮಾರಿಗೆ ಉಳಿಯುಂತಹ ದಾಖಲೆ ಸಂಗ್ರಹದ ಕಾರ್ಯ ನಡೆಯಬೇಕು ಎಂದು ತಿಳಿಸಿದರು.
ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಜಿಲ್ಲಾ ಕಸಾಪ ಸ್ಥಾಪಕಾಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್ ಮಾತನಾಡಿದರು. ಡಾ. ಗಾಯತ್ರಿ ವಿ ನಾವಡ, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕುಂದಾಪುರ ತಾಲ್ಲೂಕು ಕಸಾಪ ಘಟಕದ ಅಧ್ಯಕ್ಷ ಡಾ.ಉಮೆಶ್ ಪುತ್ರನ್, ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಉಮೇಶ್ ಶೆಟ್ಟಿ ಕೊತ್ತಾಡಿ, ಕಾಲೇಜಿನ ಉಪ ಪ್ರಾಂಶುಪಾಲೆ ವಿನುತಾ ಗಾಂವ್ಕರ್, ಕಸಾಪ ಪದಾ ಧಿಕಾರಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರಕುಮಾರ ಕೋಟ, ಮನೋಹರ ಪಿ., ದಿನಕರ್ ಶೆಟ್ಟಿ, ತಾಲ್ಲೂಕು ಘಟಕಾಧ್ಯಕ್ಷ ರವಿರಾಜ್ ಎಚ್.ಪಿ., ಪುಂಡಲೀಕ ಮರಾಠೆ, ಜಿ.ರಾಮಚಂದ್ರ ಐತಾಳ್, ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಶ್ರೀನಿವಾಸ ಭಂಡಾರಿ, ಮಂಜುನಾಥ ಕೆ.ಎಸ್., ಅಕ್ಷತಾ ಗಿರೀಶ್ ಉಪಸ್ಥಿತರಿದ್ದರು.
ಬೈಂದೂರು ಕಸಾಪ ಘಟಕದ ಅಧ್ಯಕ್ಷ ಡಾ.ರಘು ನಾಯಕ್ ಸ್ವಾಗತಿಸಿದರು. ಉಡುಪಿ ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಸತೀಶ್ ವಡ್ಡರ್ಸೆ ಕಾರ್ಯ ಕ್ರಮ ನಿರೂಪಿಸಿದರು, ಕೋ.ಚ.ನಾವಡ ವಂದಿಸಿದರು. ಭುವನ ಪ್ರಸಾದ್ ಹೆಗ್ಡೆ ನಿರ್ವಹಣೆ ಮಾಡಿದರು.
ಸಮ್ಮೇಳನದ ನಿರ್ಣಯ
ಕುಂದಾಪ್ರ ಕನ್ನಡ ಅಕಾಡೆಮಿ ಹಾಗೂ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಕುಂದಗನ್ನಡ ಅಧ್ಯಯನ ಪೀಠ ಸ್ಥಾಪನೆಯ ಹಕ್ಕೋತ್ತಾಯಕ್ಕಾಗಿ ಸಮ್ಮೇಳನದಲ್ಲಿ ನಿರ್ಣಯ ಮಂಡಿಸಲಾಯಿತು.
ಸಮ್ಮೇಳನದಲ್ಲಿ ಸಾಧಕರಿಗೆ ಸನ್ಮಾನ
ಸಮ್ಮೇಳನಾಧ್ಯಕ್ಷ ಪ್ರೊ.ಎ.ವಿ.ನಾವಡ ಹಾಗೂ ಗಾಯತ್ರಿ ನಾವಡ ದಂಪತಿ ಯನ್ನು ಸನ್ಮಾನಿಸಲಾಯಿತು. ಕಲಾಕ್ಷೇತ್ರ ಕುಂದಾಪುರ, ನಾರಾಯಣ ನಾಯಕ್ ನೇರಳಕಟ್ಟೆ, ಭಾಗವತ ರಾಘವೇಂದ್ರ ಮಯ್ಯ ಹಾಲಾಡಿ, ಗೋಪಾಲಕೃಷ್ಣ ನಾಯರಿ, ಕೊರಗ ಪೂಜಾರಿ, ಮೂರ್ತಿ ಬೈಂದೂರು, ವಲೇರಿಯನ್ ಮಿನೇಜಸ್, ಸೋಮ ಪೂಜಾರಿ, ಗಣೇಶ್ ಕುಲಾಲ್ ಪಂಜಿಮಾರು, ಪುಂಡಲೀಕ ನಾಯಕ್, ಯಾಮಿನಿ ಭಟ್, ಲಕ್ಷ್ಮೀ ಜಿ.ಭಟ್, ಶಾಂಭವಿ, ಆಯೇಷಾ ಭಾನು, ಬೇಳಂಜೆ ಸುಂದರ ನಾಯ್ಕ್, ಮೋಹನ್ ಶೆಣೈ, ಎಂ.ಎಸ್.ಭಟ್, ರಮೇಶ್ ಕಲ್ಮಾಡಿ, ವಿಜಯ್ ಗಂಗೊಳ್ಳಿ, ಡಾ.ಮೋಹನ್ದಾಸ್ ಪ್ರಭು, ಸಮೃದ್ಧಿ ಯುವಕ ಮಂಡಲ ಕುಳ್ಳುಂಜೆ, ಶಾಂತಿನಿಕೇತನ ಕುಚ್ಚೂರು ಕುದಿಬೈಲು ಹೆಬ್ರಿ, ಗುರುಕೃಪಾ ಮಹಿಳಾ ಮಂಡಳಿ ಕುಂದಾಪುರ, ವಸಂತ ನೃತ್ಯ ನಾಟ್ಯಾಲಯ ಕುಂದಾಪುರ, ಸುಮನಸಾ ಕೊಡವೂರು ಸಂಸ್ಥೆಗಳನ್ನು ಸನ್ಮಾನಿಸಲಾಯಿತು.