Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ....

ಓ ಮೆಣಸೇ....

ಪಿ.ಎ.ರೈಪಿ.ಎ.ರೈ18 April 2022 12:05 AM IST
share
ಓ ಮೆಣಸೇ....

ನಮ್ಮದು ಯಾವುದೇ ಒಂದು ಧರ್ಮದ ಸರಕಾರ ಅಲ್ಲ
-ಡಾ.ಕೆ.ಸುಧಾಕರ್, ಸಚಿವ
ಹೌದು ಸಾರ್. ನಿಮ್ಮದು ಒಂದು ಜಾತಿಯವರ ಸರಕಾರವಾದ್ದರಿಂದ ಈ ಸ್ಪಷ್ಟನೆಯ ತುರ್ತು ಅಗತ್ಯವಿತ್ತು.

ಅಧಿಕಾರದ ಶಕ್ತಿ ಸ್ಥಾನದಲ್ಲೇ ಜನಿಸಿದೆ. ಆದರೆ ಆದರ ಬಗ್ಗೆ ಆಸಕ್ತಿಯೇ ಬೆಳೆಯಲಿಲ್ಲ
-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಜನರಿಗೂ ಅಷ್ಟೇ. ಒಂದು ಕಾಲದಲ್ಲಿ ನಿಮ್ಮ ಪಕ್ಷದ ಬಗ್ಗೆ ಆಸಕ್ತಿ ಇತ್ತು. ಕ್ರಮೇಣ ಕಳೆದುಕೊಂಡರು.

ಪ್ರಧಾನಿ ಮೋದಿ ಹೇಳಿದಂತೆ ಎಲ್ಲರೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು -ಡಾ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ
ಅವರ ಮಾತನ್ನು ನಂಬಿ ಪ್ರಶ್ನಿಸಲು ಹೊರಟ ಅನೇಕರು ಪಾಪ ಜೈಲಲ್ಲಿದ್ದಾರೆ.

ಟಿಪ್ಪು ಸುಲ್ತಾನ್ ಕುರಿತ ಸತ್ಯಗಳನ್ನು ಸುಳ್ಳಾಗಿಸಲು ಸಾಧ್ಯವಿಲ್ಲ -ಎಚ್.ವಿಶ್ವನಾಥ್, ವಿ.ಪ. ಸದಸ್ಯ
ಸುಳ್ಳುಗಳ ದಟ್ಟಡವಿಯಲ್ಲಿ ಆ ಸತ್ಯಗಳನ್ನು ಜನತೆಗೆ ತಲುಪಿಸುವುದು ಹೇಗೆಂಬುದೇ ಸವಾಲು.

ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ವಿಶ್ವಾಸ ಮೂಡಿಸಲು 'ಒಂದು ರಾಷ್ಟ್ರ ಒಂದು ಚುನಾವಣೆ ಪದ್ಧತಿ ಅಗತ್ಯ' -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಒಂದು ಪಕ್ಷ ಎಂಬೊಂದು ಪದವನ್ನೂ ಸೇರಿಸಿದರೆ ಘೋಷಣೆ ಪರ್ಫೆಕ್ಟ್ ಆಗಿ ಬಿಡುತ್ತೆ.

ಯಾರೇ ಇರಲಿ ಸಮಾಜದ ಸಾಮರಸ್ಯ ಕದಡುವ ಪ್ರಯತ್ನ ಮಾಡಿದರೆ ಅವರನ್ನು ಮಟ್ಟ ಹಾಕುತ್ತೇವೆ -ಆರಗ ಜ್ಞಾನೇಂದ್ರ, ಸಚಿವ
ಮಟ್ಟ ಹಾಕುವುದೆಂದರೆ ಪಟ್ಟಾಭಿಷೇಕ ಮಾಡುವುದೆಂದು ಅರ್ಥವಲ್ಲವೇ?

ಮುಂದಿನ ಲೋಕಸಭಾ ಚುನಾವಣೆಗೆ ಮುನ್ನ ಶೋಭಾ ಕರಂದ್ಲಾಜೆಯವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು -ವಿನಯಕುಮಾರ್ ಸೊರಕೆ, ಮಾಜಿ ಸಚಿವ
ಅಷ್ಟು ಕಾಲ ಕಾಯಬೇಕೆ?

ನಾನಿನ್ನೂ ಬಿಜೆಪಿ ಸೇರುವ ಬಗ್ಗೆ ಖಚಿತ ನಿರ್ಧಾರ ಮಾಡಿಲ್ಲ -ಬಸವರಾಜ ಹೊರಟ್ಟಿ, ವಿ.ಪ. ಸಭಾಪತಿ
ಡೀಲ್ ಪೂರ್ತಿಯಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿ.

ದೊಡ್ಡವರು ಆಡುವ ಕೆಲವು ಸಣ್ಣ ಮಾತಿಗೆ ಉತ್ತರ ಕೊಡಬೇಕಾದ ಅಗತ್ಯವಿಲ್ಲ -ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಸಣ್ಣ ಮಾತುಗಳನ್ನಾಡುವವರನ್ನು ದೊಡ್ಡವರೆಂದು ಕರೆಯುವವರಿಗೆ ಉತ್ತರ ಸಿಗಲೇಬೇಕು.


ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆಡಳಿತ ಪಕ್ಷಕ್ಕೆ ಶೋಭೆ ತರುವುದಿಲ್ಲ -ಜೆ.ಸಿ.ಮಾಧುಸ್ವಾಮಿ, ಸಚಿವ
ಯಾವುದೇ ಬೆಳವಣಿಗೆ ಓಟು ತಂದರೆ ಸಾಕು. ಶೋಭೆ ಯಾರಿಗೆ ಬೇಕು?


ಪಾಕಿಸ್ತಾನದ ನಿಜವಾದ ಸ್ವಾತಂತ್ರ ಹೋರಾಟ ಇನ್ನು ಪ್ರಾರಂಭ -ಇಮ್ರಾನ್ ಖಾನ್, ಪಾಕ್ ಮಾಜಿ ಪ್ರಧಾನಿ
ಇಲ್ಲಿ 2014ರಲ್ಲೇ ಸ್ವಾತಂತ್ರ ಸಿಕ್ಕಿದೆ. ನೀವಿನ್ನೂ ಹಿಂದೆಯೇ ಉಳಿದಿದ್ದೀರಿ.

ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಶಾಲು ಧರಿಸಿ ರಾಮನವಮಿ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಕೈಯಲ್ಲೊಂದು ತ್ರಿಶೂಲವನ್ನೂ ಹಿಡಿದುಕೊಂಡು ಜೈ ಮೋದಿ ಎಂದು ಘೋಷಣೆ ಕೂಗತೊಡಗಿದರೆ ಕಾಯಕ ಪೂರ್ತಿಯಾಗುತ್ತೆ.


ಕರ್ನಾಟಕಕ್ಕೆ ತಾಳ್ಮೆ, ಗಾಂಭೀರ್ಯದಿಂದ ಆಡಳಿತ ನಡೆಸುವ ಅತ್ಯುತ್ತಮ ಮುಖ್ಯಮಂತ್ರಿ ಸಿಕ್ಕಿದ್ದಾರೆ -ಶ್ರೀನಿವಾಸಪ್ರಸಾದ್, ಸಂಸದ
ಈ ಬಗೆಯ ತಾಳ್ಮೆ ಮತ್ತು ಗಾಂಭೀರ್ಯ ಶವಗಳಲ್ಲಿ ಮಾತ್ರ ಕಾಣಸಿಗುತ್ತದೆ.


ಸಣ್ಣಪುಟ್ಟ ಕಾರಣಕ್ಕೆ ಪಕ್ಷ ತೊರೆದವರು ಮರಳಿ ಬಂದರೆ ಸ್ವಾಗತಿಸುತ್ತೇನೆ -ಕುಮಾರಸ್ವಾಮಿ, ಮಾಜಿ ಸಿಎಂ|
ಬಿಜೆಪಿಗೆ ಬೆಂಬಲ ನೀಡಿದ್ದನ್ನು ವಿರೋಧಿಸಿ ಹೊರನಡೆದವರನ್ನು ಸ್ವಾಗತಿಸಿದರೆ ಅವರೇನು ಮತ್ತೆ ಹೊರ ನಡೆಯುವ ಸಾಧ್ಯತೆ ಇದೆಯೇ?

ಬಿಜೆಪಿ ಸೇರಿದಂತೆ ಯಾವುದೇ ಪಕ್ಷ ಸೇರುವ ಬಗ್ಗೆ ಮಂಡ್ಯದ ಜನ ಹೇಳಬೇಕು -ಸುಮಲತಾ, ಸಂಸದೆ
ಸುಮಲತಾರಲ್ಲಿ ಕಮಲದ ವಾಸನೆ ಹೊಡೆಯುತ್ತಿದೆ ಎಂದು ಮಂಡ್ಯ ಕೂಗಿ ಹೇಳುತ್ತಿದೆ.

ಇತ್ತೀಚೆಗೆ ರಾಜ್ಯದಲ್ಲಿ ಕಂಡುಬರುತ್ತಿರುವ ಅಹಿತಕರ ಬೆಳವಣಿಗೆಗಳಿಗೆ ನನ್ನ ಬೆಂಬಲವಿಲ್ಲ -ಯಡಿಯೂರಪ್ಪ, ಮಾಜಿ ಸಿಎಂ
ಪಟ್ಟ ಕಳೆದುಕೊಂಡ ನಂತರ ಬೊಮ್ಮಾಯಿ ಸಾರ್ ಕೂಡಾ ಇದನ್ನೇ ಹೇಳಲಿದ್ದಾರೆ.

ನೈತಿಕ ಶಿಕ್ಷಣಕ್ಕೆ ಒತ್ತುನೀಡುವ ಉದ್ದೇಶದಿಂದ ಈ ವರ್ಷದಿಂದಲೇ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸಲಾಗುವುದು -ಬಿ.ಸಿ.ನಾಗೇಶ್, ಸಚಿವ
ಜೊತೆಗೆ ಮನು ಸ್ಮತಿಯನ್ನೂ ಅಳವಡಿಸಿದರೆ ಭಗವದ್ಗೀತೆಯನ್ನು ಅರ್ಥ ಮಾಡಿಕೊಳ್ಳಲು ಅನುಕೂಲವಾಗುತ್ತೆ.

ಜನ ಬಯಸಿದರೆ ರಾಜಕೀಯಕ್ಕೆ ಧುಮುಕುಲು ಸಿದ್ಧ -ರಾಬರ್ಟ್ ವಾದ್ರಾ, ಪ್ರಿಯಾಂಕಾ ಗಾಂಧಿ ಪತಿ
ಮುಳುಗುವುದಕ್ಕೆ ಬೇರೆ ಜಾಗ ಸಿಗಲಿಲ್ಲವೇ?


ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ಅದೇನು ಕೊತ್ತಂಬರಿ ಸೊಪ್ಪಲ್ಲ -ಶ್ರೀರಾಮುಲು, ಸಚಿವ
ತುರಿಕೆ ಸೊಪ್ಪು ಎನ್ನುವುದು ಜನರಿಗೂ ಗೊತ್ತಾಗಿ ಬಿಟ್ಟಿದೆ.

ಹಿಂದೂ ಮತ ಬ್ಯಾಂಕ್ ಕ್ರೋಡೀಕರಣ ಮಾಡುವಂತಹ ಅವಶ್ಯಕತೆ ಬಿಜೆಪಿಗಿಲ್ಲ -ನಳಿನ್ ಕುಮಾರ್ ಕಟೀಲು, ಸಂಸದ
ಮುಸ್ಲಿಮ್ ದ್ವೇಷ ಹಬ್ಬಿದರೆ ಸಾಕು, ಬೇರೆಲ್ಲವೂ ತನ್ನಿಂತಾನೇ ಆಗಿ ಬಿಡುತ್ತದೆ.


ಯಾವುದೇ ಕಾರಣಕ್ಕೂ ವಿದೇಶಿ ಶಕ್ತಿಗಳಿಗೆ ರಶ್ಯವನ್ನು ಏಕಾಂಗಿಯಾಗಿಸಲು ಸಾಧ್ಯವಿಲ್ಲ -ವ್ಲಾದಿಮಿರ್ ಪುಟಿನ್, ರಶ್ಯ ಅಧ್ಯಕ್ಷ
ನೀವಿರುವಾಗ ವಿದೇಶಿ ಶಕ್ತಿಗಳ ಅಗತ್ಯವೂ ಇಲ್ಲ.

ದೇಶದ ಜನತೆಯ ಕಲ್ಯಾಣಕ್ಕಾಗಿ ಪಕ್ಷಭೇದ ಮೀರಿ ಶ್ರಮಿಸೋಣ -ಅಮಿತ್ ಶಾ, ಕೇಂದ್ರ ಸಚಿವ
ಪಕ್ಷ ಭೇದಗಳನ್ನು ಸೃಷ್ಟಿಸಿ ಜನತೆಯ ಕೊಲ್ಲೋಣ ಎಂದು ಕೇಳಿಸುತ್ತಿದೆ.

ನಾವು ಮಾತನಾಡಬಾರದು ನಮ್ಮ ಕೆಲಸ ಮಾತನಾಡಬೇಕು -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ರಾಜ್ಯದಲ್ಲಿ ನಡೆಯುತ್ತಿರುವ ದೊಂಬಿ, ಗಲಾಟೆಯ ಬಗ್ಗೆ ಮೌನವಾಗಿರುವ ಕಾರಣ ತಿಳಿಯಿತು ಬಿಡಿ

share
ಪಿ.ಎ.ರೈ
ಪಿ.ಎ.ರೈ
Next Story
X