Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಜುವೆನೈಲ್ ಜಸ್ಟಿಸ್: ನ್ಯಾಯ ಪಾಲಕರ ಭಾವ...

ಜುವೆನೈಲ್ ಜಸ್ಟಿಸ್: ನ್ಯಾಯ ಪಾಲಕರ ಭಾವ ಸಂಘರ್ಷ

ಮುಸಾಫಿರ್ಮುಸಾಫಿರ್18 April 2022 11:40 AM IST
share
ಜುವೆನೈಲ್ ಜಸ್ಟಿಸ್: ನ್ಯಾಯ ಪಾಲಕರ ಭಾವ ಸಂಘರ್ಷ

ಜುವೆನೈಲ್ ಜಸ್ಟಿಸ್’ ಹಾಂಗ್ ಜಾಂಗ್ ಚಾಂಗ್ ನಿರ್ದೇಶಿಸಿದ ಈ ವರ್ಷದ ಜನಪ್ರಿಯ ಕೊರಿಯನ್ ಸಿರೀಸ್. ಇದೊಂದು ಕೋರ್ಟ್ ರೂಂ ಥ್ರಿಲ್ಲರ್. ಒಟ್ಟು ಹತ್ತು ಕಂತುಗಳನ್ನು ಇದು ಹೊಂದಿದೆ. ಈ ಸರಣಿ ಬಾಲಾಪರಾಧಿಗಳನ್ನು ನಿರ್ವಹಿಸುವ ನ್ಯಾಯಾಲಯದ ಕಾರ್ಯವಿಧಾನಗಳನ್ನು ಚರ್ಚಿಸುತ್ತದೆ. ಬಾಲಾಪರಾಧಿಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಇದು ವಿಶ್ಲೇಶಿಸುವ ಪ್ರಯತ್ನವನ್ನು ಮಾಡುತ್ತದೆ. ಮೇಲ್ನೋಟಕ್ಕೆ ಬಾಲಾಪರಾಧಿಗಳು ಮತ್ತು ಅವರನ್ನು ಆ ಸ್ಥಿತಿಗೆ ತಳ್ಳುವ ಸಮಾಜವನ್ನು ಕೇಂದ್ರವಾಗಿಟ್ಟು ಈ ಚಿತ್ರ ಮಾಡಲಾಗಿದೆಯಾದರೂ, ಬಾಲಾಪರಾಧಿಗಳ ವಿಚಾರಣೆಯನ್ನು ನಿರ್ವಹಿಸುವ ನ್ಯಾಯಾಧೀಶರ ಮಾನಸಿಕ ಸಂಘರ್ಷಕ್ಕೆ ಹೆಚ್ಚಿನ ಆದ್ಯತೆಗಳನ್ನು ಕೊಡಲಾಗಿದೆ. ಬಾಲಾಪರಾಧಗಳ ಬೇರೆ ಬೇರೆ ಪ್ರಕರಣಗಳನ್ನು ನ್ಯಾಯಾಲಯಗಳು ನಿರ್ವಹಿಸುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳೇ ಸರಣಿಯನ್ನು ಕುತೂಹಲಕರವಾಗಿಸುತ್ತದೆ. ಹಲವು ಕತೆಗಳ ಗೊಂಚಲಿನಂತಿದ್ದರೂ, ಆರಂಭದಿಂದ ಕೊನೆಯವರೆಗೂ ಒಂದಕ್ಕೊಂದು ಬೆಸೆದುಕೊಂಡಿರುವುದು ವಿಶೇಷ. ಯೋನ್ಹಾ ಜಿಲ್ಲೆಯ ಬಾಲಾಪರಾಧಿಗಳ ನ್ಯಾಯಾಲಯಕ್ಕೆ ಹೊಸ ನ್ಯಾಯಾಧೀಶೆಯೊಬ್ಬರ ಪ್ರವೇಶದೊಂದಿಗೆ ಸರಣಿ ತೆರೆದುಕೊಳ್ಳುತ್ತದೆ. ಹಿಮದಷ್ಟು ತಣ್ಣಗಿನ ವ್ಯಕ್ತಿತ್ವ, ಚುಟುಕು ಮಾತು, ತೀಕ್ಷ್ಣ ಕಣ್ಣೋಟ ಇವುಗಳ ಮೂಲಕ ಬಂದ ದಿನದಿಂದಲೇ ನ್ಯಾಯಾಧೀಶೆ ಶಿಮ್ ಹ್ಯೂನ್ ಸಿಯೋಕ್ ಸುದ್ದಿಯಾಗುತ್ತಾಳೆ. ಇವಳಿಗೆ ಸಹಾಯಕ ನ್ಯಾಯಾಧೀಶನಾಗಿ ಚಾ ತಾಯ್ ಜೂ ಕಾರ್ಯನಿರ್ವಹಿಸುತ್ತಿರುತ್ತಾನೆ. ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಕಾಂಗ್ ವೋನ್ ಜೂಂಗ್. ಬಾಲಾಪರಾಧಗಳನ್ನು ನಿರ್ವಹಿಸುವಾಗ ನ್ಯಾಯಾಲಯ ಹೊಂದಿರಬೇಕಾದ ಸೂಕ್ಷ್ಮತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಸರಣಿಯಲ್ಲಿ ಕಟ್ಟಿಕೊಡಲಾಗಿದೆ. ಇಡೀ ಸರಣಿ ನ್ಯಾಯಾಧೀಶರ ಭಾವ ಸಂಘರ್ಷಗಳಿಗೆ ಆದ್ಯತೆಯನ್ನು ನೀಡಿದೆ. ಮುಖ್ಯ ನ್ಯಾಯಾಧೀಶನ ಪುತ್ರನೇ ಆರೋಪಿಯಾಗಿ ಆತನ ಮುಂದೆ ನಿಂತಾಗ ಆತನ ಹುದ್ದೆಗೆ ಎದುರಾಗುವ ಸವಾಲು, ಯಾವ ಬಾಲಕನಿಂದ ತನ್ನ ಖಾಸಗಿ ಕುಟುಂಬಕ್ಕೆ ಅನ್ಯಾಯವಾಗಿದೆಯೋ ಆ ಬಾಲಕನಿಗೆ ನ್ಯಾಯ ಕೊಡುವ ಅಗ್ನಿ ಪರೀಕ್ಷೆ ಎದುರಾದರೆ ನ್ಯಾಯಾಧೀಶ ಏನು ಮಾಡಬೇಕು? ಇಂತಹ ಅಗ್ನಿಪರೀಕ್ಷೆಗಳನ್ನು ನ್ಯಾಯಾಧೀಶರು ಯಶಸ್ವಿಯಾಗಿ ದಾಟುತ್ತಾರೆಯೇ ಇಲ್ಲ ವಿಫಲವಾಗುತ್ತಾರೆಯೇ? ಎನ್ನುವುದನ್ನು ಕುತೂಹಲಕರವಾಗಿ ನಿರೂಪಿಸಲಾಗಿದೆ. ಬಾಲಾಪರಾಧಿಯಾಗಿ ಜೈಲು ಪಾಲಾಗಿ, ಮುಂದೆ ಜೈಲಲ್ಲಿ ಹಿರಿಯ ನ್ಯಾಯಾಧೀಶರೊಬ್ಬರ ಸಹಾಯದಿಂದ ವಕೀಲನಾಗಿ, ನ್ಯಾಯಾಧೀಶನಾಗಿ, ಮುಂದೆ ತನ್ನ ಬದುಕಿಗೆ ಆಸರೆಯಾದ ನ್ಯಾಯಾಧೀಶರ ವಿರುದ್ಧವೇ ತೀರ್ಪು ನೀಡಬೇಕಾಗಿ ಬಂದರೆ? ಇಂತಹ ಹಲವು ಸನ್ನಿವೇಶಗಳನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಡಲಾಗಿದೆ. ಪತ್ತೇದಾರಿ ಕಥನ ರೂಪದಲ್ಲಿ ಸರಣಿ ಸಾಗುತ್ತದೆ. ಇಲ್ಲಿ ನ್ಯಾಯಾಧೀಶರು ಕೇವಲ ಆದೇಶ ನೀಡುವ ಯಂತ್ರಗಳಲ್ಲ. ಇರುವ ಬಾಲಾಪರಾಧಿ ಕಾನೂನಿನ ಬಗ್ಗೆ ಅವರಿಗೆ ಅಪಾರ ಅಸಹನೆಯಿದೆ. ಮಕ್ಕಳನ್ನು ಶಿಕ್ಷಿಸುವುದು ಅವರ ಗುರಿಯಲ್ಲ. ಮಕ್ಕಳ ಅಪರಾಧಗಳ ಹಿಂದೆ ಸಮಾಜದ ಪಾತ್ರವಿರುವುದರ ಬಗ್ಗೆ ಅವರಿಗೆ ಅರಿವಿದೆ. ‘ಪ್ರಶ್ನೆ ಪತ್ರಿಕೆ ಸೋರಿಕೆ’ ಪ್ರಕರಣದ ವಿಚಾರಣೆಯನ್ನು ಮಾಡುತ್ತಾ, ಕೊರಿಯಾದ ಇಡೀ ಶಿಕ್ಷಣ ವ್ಯವಸ್ಥೆಯ ಕ್ರೌರ್ಯಗಳನ್ನು ಸರಣಿಯಲ್ಲಿ ಪರಿಣಾಮಕಾರಿಯಾಗಿ ಅನಾವರಣ ಮಾಡಲಾಗಿದೆ. ಮಕ್ಕಳ ಕುರಿತಂತೆ, ಸಮಾಜದ ಕುರಿತಂತೆ ಕಾಳಜಿಯಿರುವ ಎಲ್ಲರೂ ನೋಡಬೇಕಾದ ಒಂದು ಅತ್ಯುತ್ತಮ ಸರಣಿ. ಕ್ಷಣಕ್ಷಣವೂ ಕುತೂಹಲ ಕೆರಳಿಸುತ್ತಾ ಹೋಗುವ ‘ಜುವೆನೈಲ್ ಜಸ್ಟಿಸ್’ ನೆಟ್‌ಫ್ಲಿಕ್‌ನಲ್ಲಿ ಸದ್ಯಕ್ಕೆ ಸದ್ದು ಮಾಡುತ್ತಿರುವ ಸರಣಿ.

share
ಮುಸಾಫಿರ್
ಮುಸಾಫಿರ್
Next Story
X