Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ....

ಓ ಮೆಣಸೇ....

ಪಿ.ಎ.ರೈಪಿ.ಎ.ರೈ25 April 2022 12:05 AM IST
share
ಓ ಮೆಣಸೇ....

ಬಿಜೆಪಿ ತನ್ನ ತಪ್ಪನ್ನು ಸಮರ್ಥಿಸಿಕೊಳ್ಳುವುದು ಕೆಟ್ಟ ಬೆಳವಣಿಗೆ -ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ
ಇತ್ತೀಚೆಗೆ ಬಿಜೆಪಿಯ ತಪ್ಪುಗಳನ್ನು ಕಾಂಗ್ರೆಸ್ ನಾಯಕರು ಸಮರ್ಥಿಸುತ್ತಿದ್ದಾರಲ್ಲ, ಇದು ಯಾವ ಬೆಳವಣಿಗೆ?

ನಾನು ಯಾವ ಪಕ್ಷದವರ ವಿರುದ್ಧವೂ ಪರ್ಸೆಂಟೇಜ್ ಆರೋಪ ಮಾಡುವುದಿಲ್ಲ -ದೇವೇಗೌಡ, ಮಾಜಿ ಪ್ರಧಾನಿ
ಬಹುಶಃ ನಿಮ್ಮ ಪರ್ಸೆಂಟೇಜ್ ವಿವರ ಹೊರಬೀಳುವ ಭಯವಿರಬೇಕು.

ಮುಂದಿನ ಚುನಾವಣೆ ತಯಾರಿಗಾಗಿ ಕಾಂಗ್ರೆಸ್‌ನವರು ಈಶ್ವರಪ್ಪರನ್ನು ಟಾರ್ಗೆಟ್ ಮಾಡುತ್ತಿದ್ದಾರೆ -ಆರ್.ಅಶೋಕ್, ಸಚಿವ
ಆತ್ಮಹತ್ಯೆ ಪತ್ರದಲ್ಲಿ ಈಶ್ವರಪ್ಪರ ಹೆಸರನ್ನು ಕಾಂಗ್ರೆಸ್‌ನವರೇ ಬರೆದಿರಬಹುದೆ?

ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಧಾನಿ ಮೋದಿ ಹೆಸರೊಂದೇ ಸಾಲದು -ಬಿ.ಎಲ್.ಸಂತೋಷ್, ಬಿಜೆಪಿ ನಾಯಕ
ಶೇ.40 ಪರ್ಸೆಂಟೇಜ್‌ನಲ್ಲಿ ನಿಮ್ಮ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಎಷ್ಟು ಕೊಡಬೇಕು, ಹೇಳಿ.

5 ವರ್ಷ ಜೆಡಿಎಸ್‌ಗೆ ಅಧಿಕಾರ ಕೊಡಿ, 75 ವರ್ಷಗಳಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುತ್ತೇನೆ -ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಬಿಜೆಪಿ ತನ್ನ ಏಳು ವರ್ಷಗಳಲ್ಲಿ ರಾಜ್ಯಕ್ಕೆ ಮಾಡಿದ ಅನ್ಯಾಯವನ್ನು ಸರಿಪಡಿಸುವ ಉತ್ಸಾಹವೇಕೆ ಇಲ್ಲ?

ಕಾಂಗ್ರೆಸ್ ಹೇಳಿದವರನ್ನೆಲ್ಲ ಬಂಧಿಸುತ್ತಾ ಹೋದರೆ ಅವರನ್ನು ಇಡಲು ರಾಜ್ಯದ ಜೈಲುಗಳು ಸಾಕಾಗುವುದಿಲ್ಲ -ಕೋಟ ಶ್ರೀನಿವಾಸ ಪುಜಾರಿ, ಸಚಿವ
ರೆಸಾರ್ಟ್‌ಗಳನ್ನೇ ಜೈಲುಗಳನ್ನಾಗಿ ಪರಿವರ್ತಿಸಿದರೆ ಹೇಗೆ?

ಸಣ್ಣ ಸಣ್ಣ ವಿಷಯಕ್ಕೆ ಮುಸ್ಲಿಮರು ಕೆರಳದಂತೆ ಸಮುದಾಯದ ಮುಖಂಡರು ಅವರಿಗೆ ತಿಳಿ ಹೇಳಬೇಕು -ಸಿ.ಟಿ.ರವಿ, ಶಾಸಕ
ಒಟ್ಟಿನಲ್ಲಿ ಕೆರಳಿಸುವುದು ನಿಮ್ಮ ಹಕ್ಕು , ಅಲ್ಲವೆ?

ಇನ್ನು ಮುಂದೆ ಜೆಡಿಎಸ್ ಪಕ್ಷವನ್ನು ಯಾರೂ ಒಕ್ಕಲಿಗ ಪಕ್ಷ ಎಂದು ಹೇಳಬಾರದು -ದೇವೇಗೌಡ, ಮಾಜಿ ಪ್ರಧಾನಿ
ಅಪ್ಪ-ಮಕ್ಕಳ ಪಕ್ಷ ಎಂದು ಅಧಿಕೃತವಾಗಿ ಘೋಷಿಸಲಾಗುತ್ತದೆಯೆ?

ಮೇ 4ರ ಬಳಿಕ ನಮ್ಮ (ಜೆಡಿಎಸ್) ಕೆಲಸ ಆರಂಭವಾದರೆ ವಿಧಾನಸಭೆ ಚುನಾವಣೆ ಬಳಿಕ ನಿಲ್ಲಲಿದೆ -ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ಚುನಾವಣೆಯಲ್ಲಿ ಗೆದ್ದ ಬಳಿಕ ಜನರ ಕೆಲಸ ಮಾಡುವ ಅಗತ್ಯವಾದರೂ ಏನಿದೆ?

ಗೃಹ ಸಚಿವರು ಆ ಹುದ್ದೆಗೆ ತಕ್ಕಂತೆ ಖಡಕ್ ಇಲ್ಲದಿರುವುದರಿಂದ ಅವರನ್ನು ಶೀಘ್ರ ಬದಲಿಸಬೇಕು -ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಮನೆ ಒಡೆಯುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿಲ್ಲ ಎನ್ನುವ ಖೇದವಿರಬೇಕು.

ದೇಶದ ಪ್ರತಿಯೊಬ್ಬ ನಾಗರಿಕರಿಗೂ ಅವರವರಿಗೆ ಇಷ್ಟದ ಆಹಾರವನ್ನು ತಿನ್ನಲು ಸ್ವಾತಂತ್ರವಿದೆ -ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ
ಆಹಾರವನ್ನೆಲ್ಲ ಹಂತಹಂತವಾಗಿ ಕಿತ್ತುಕೊಂಡ ಬಳಿಕ ಮಾಡುವ ಸಮಾಧಾನವಿದು.

ಇ-ಸಂಜೀವಿನಿ ಸೇವೆಯಲ್ಲಿ ರಾಜ್ಯ ಮೈಲುಗಲ್ಲು ಸಾಧಿಸಿದೆ -ಡಾ.ಸುಧಾಕರ್, ಸಚಿವ
ಕೊರೋನದಿಂದ ಸತ್ತವರ ಸಂಖ್ಯೆ ನೋಡಿದರೆ ಗೋರಿಗಲ್ಲು ನೆನಪಾಗುತ್ತದೆ.

ಭಾರತ ಹಿಂದೂ ರಾಷ್ಟ್ರವಾಗಿ ಉಳಿಯಲು ಪ್ರತಿ ಹಿಂದೂ ದಂಪತಿ ಕನಿಷ್ಠ ನಾಲ್ಕು ಮಕ್ಕಳನ್ನು ಹೆರಬೇಕು -ಸಾದ್ವಿ ರಿತಂಬರಾ, ಹಿಂದುತ್ವವಾದಿ ನಾಯಕಿ
ಸನ್ಯಾಸತ್ವ ತ್ಯಜಿಸುವ ಉದ್ದೇಶವೇನಾದರೂ ಇದೆಯೆ?

ಮಾಜಿ ಸಚಿವ ಈಶ್ವರಪ್ಪರ ಮೇಲೆ ಶ್ರೀರಾಮ ದೇವರ ಶ್ರೀರಕ್ಷೆ ಸದಾ ಇರಲಿ -ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
40 ಶೇಕಡ ಕಮಿಶನ್‌ನಲ್ಲಿ ನಿಮ್ಮ ಪಾಲೆಷ್ಟು?

ಕಳ್ಳನಿಗೆ ಸಹಾಯ ಮಾಡುವುದೇ ಜೆಡಿಎಸ್ ಸಂಸ್ಕೃತಿ -ಸಿದ್ದರಾಮಯ್ಯ, ಮಾಜಿ ಸಿಎಂ
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಸಹಾಯ ಮಾಡಿರುವುದನ್ನು ನೆನಪಿಸಿಕೊಳ್ಳಿ.

ಮಠಗಳಿಂದ ಕಮಿಷನ್ ಪಡೆಯುವ ವಿಚಾರ ನನ್ನ ಕಣ್ಣಿಗಂತೂ ಗೋಚರಿಸಿಲ್ಲ -ಮುರುಗೇಶ್ ನಿರಾಣಿ, ಸಚಿವ
ಕಣ್ಣಿಗೆ ಕಾಣುವಂತೆ ಯಾರಾದರೂ ಕಮಿಷನ್ ಪಡೆಯುತ್ತಾರೆಯೆ?

ಸರಣಿ ಸೋಲುಗಳಿಂದ ಸೊರಗಿರುವ ಕಾಂಗ್ರೆಸ್‌ಗೆ ಪ್ರಶಾಂತ್ ಕಿಶೋರ್‌ರಂತಹ ಚುನಾವಣಾ ರಣತಂತ್ರ ನಿಪುಣರ ಅಗತ್ಯ ಇದೆ -ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ
ಸರಣಿ ಸೋಲುಗಳಿಗೆ ಕಾರಣರಾಗಿರುವ ಕೆಲವು ಮಾಜಿಗಳನ್ನು ಕಾಂಗ್ರೆಸ್‌ನಿಂದ ಹೊರಗಿಡುವುದು ರಣತಂತ್ರದ ಮೊದಲ ಭಾಗವಾಗಬೇಕು.

ಶಾಲಾ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಿಂದ ನೈತಿಕ ಶಿಕ್ಷಣ ಬೋಧನೆ ಆರಂಭಿಸಲಾಗುವುದು -ಬಿ.ಸಿ.ನಾಗೇಶ್, ಸಚಿವ
ಅನೈತಿಕ ಸಿಡಿಗಳ ಮೂಲಕ ಸಿಕ್ಕಿ ಬಿದ್ದ ಬಿಜೆಪಿ ನಾಯಕರಿಗೆ ಈ ಬೋಧನೆಯ ಅಗತ್ಯ ತುಂಬಾ ಇದೆ.

ಧಾರ್ಮಿಕ ಕೇಂದ್ರಗಳು ಸಮಾಜ ವಿರೋಧಿ ಕೃತ್ಯಕ್ಕೆ ಬಳಸುವ ಸ್ಥಳವಲ್ಲ -ಸುನೀಲ್ ಕುಮಾರ್, ಸಚಿವ
ಮತ್ತೇಕೆ ಅವುಗಳನ್ನು ಸಮಾಜ ವಿರೋಧಿ ಕೃತ್ಯಕ್ಕೆ ಬಳಸುತ್ತಿದ್ದೀರಿ?

ರಶ್ಯ ಸೇನೆ ವಿಶ್ವದ ಅತ್ಯಂತ ಅನಾಗರಿಕ, ಅಮಾನವೀಯ ಸೇನೆಯಾಗಿ ವಿಶ್ವದ ಇತಿಹಾಸದಲ್ಲಿ ಗುರುತಿಸಲ್ಪಡಲಿದೆ -ವೊಲೊಡಿಮಿರ್ ಝೆಲೆನ್‌ಸ್ಕಿ, ಉಕ್ರೇನ್ ಅಧ್ಯಕ್ಷ
ಆದರೆ ಅದಕ್ಕಾಗಿ ಉಕ್ರೇನ್ ತೆರಬೇಕಾದ ಶುಲ್ಕ ಮಾತ್ರ ತುಂಬಾ ದುಬಾರಿಯಾದುದು.

ಉತ್ತರ ಪ್ರದೇಶ ಮಾದರಿಯಲ್ಲಿ ದೇಶದ್ರೋಹಿಗಳ ಹೆಡೆಮುರಿ ಕಟ್ಟುವ ಕೆಲಸವಾಗಬೇಕು -ರೇಣುಕಾಚಾರ್ಯ, ಶಾಸಕ
ಕೇರಳದ ಮಾದರಿಯಲ್ಲಿ ರಾಜ್ಯವನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವ ಬಗ್ಗೆ ಮಾತನಾಡಿ.

ರಾಷ್ಟ್ರಭಕ್ತಿ ಕಾಂಗ್ರೆಸ್‌ನವರ ರಕ್ತದ ಕಣದಲ್ಲಿ ಬೆರೆತಿದೆ -ಸಿದ್ದರಾಮಯ್ಯ, ಮಾಜಿ ಸಿಎಂ
ಯಾವ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಕೊಂಡಿರಿ?

ನನಗೆ ಗೃಹಖಾತೆ ಕೊಟ್ಟರೆ ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಇದೆ -ಬಿ.ಸಿ.ಪಾಟೀಲ್, ಸಚಿವ
ಇರುವ ಖಾತೆಯನ್ನು ಎಷ್ಟರಮಟ್ಟಿಗೆ ನಿಭಾಯಿಸುತ್ತಿದ್ದೀರಿ, ಎನ್ನುವುದನ್ನು ಹೇಳಿ.

ಭಾರತದಲ್ಲಿ ಎಲ್ಲೆಡೆ ಸ್ವಾಗತಕ್ಕೆ ನನ್ನ ಪೋಸ್ಟರ್ ನೋಡಿ ನಾನೇ ಸಚಿನ್ ತೆಂಡೂಲ್ಕರ್, ಅಮಿತಾಬ್ ಬಚ್ಚನ್ ಆಗಿದ್ದೇನೆ ಎಂದು ಭಾಸವಾಯಿತು -ಬೋರಿಸ್ ಜಾನ್ಸನ್, ಬ್ರಿಟನ್ ಪ್ರಧಾನಿ
ನೀವೇ ಬಿತ್ತಿ ಹೋದ ಗುಲಾಮಗಿರಿಯ ಸಂಕೇತ ಅದು.

share
ಪಿ.ಎ.ರೈ
ಪಿ.ಎ.ರೈ
Next Story
X