Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಬಂದೂಕು ತೋರಿಸಿ ಮಕ್ಕಳು, ಮಹಿಳೆಯರನ್ನು...

ಬಂದೂಕು ತೋರಿಸಿ ಮಕ್ಕಳು, ಮಹಿಳೆಯರನ್ನು ಬೆದರಿಸಿದ ʼಜಾಮಿಯಾ ಶೂಟರ್‌ʼ ರಾಮ್‌ಭಕ್ತ್‌ ಗೋಪಾಲ್‌

ಗೋರಕ್ಷಕನ ಸೋಗಿನಲ್ಲಿ ಹಲವು ಕ್ರಿಮಿನಲ್‌ ಕೃತ್ಯಗಳು

ವಾರ್ತಾಭಾರತಿವಾರ್ತಾಭಾರತಿ25 April 2022 11:33 AM IST
share
ಬಂದೂಕು ತೋರಿಸಿ ಮಕ್ಕಳು, ಮಹಿಳೆಯರನ್ನು ಬೆದರಿಸಿದ ʼಜಾಮಿಯಾ ಶೂಟರ್‌ʼ ರಾಮ್‌ಭಕ್ತ್‌ ಗೋಪಾಲ್‌

ಮೇವಾತ್: 2020 ರಲ್ಲಿ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಬಳಿ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದ ರಾಮ್‌ಭಕ್ತ್‌ ಗೋಪಾಲ್‌ ಎಂಬಾತ ಇದೀಗ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾನೆ. ಬಂದೂಕು ಹಿಡಿದು ಪ್ರಚೋದನಾತ್ಮಕ ವಿಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಆತ ಪೋಸ್ಟ್‌ ಮಾಡಿದ್ದಾನೆ.

ಪೊಲೀಸರ ಸಮ್ಮುಖದಲ್ಲಿ ಬಹಿರಂಗವಾಗಿ ಗುಂಡು ಹಾರಿಸಿ, ಸದ್ಯ ಜಾಮೀನು ಮುಖಾಂತರ ಹೊರಬಂದಿರುವ ರಾಮ್‌ ಭಕ್ತ್‌ ಗೋಪಾಲ್‌, ಪಿಸ್ತೂಲ್‌ ತೋರಿಸಿ, ಮಕ್ಕಳನ್ನು, ಮಹಿಳೆಯರನ್ನು ಬೆದರಿಸುವ ವಿಡಿಯೋ ಮಾಡಿ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೋದ ವಿರುದ್ಧ ಹಲವಾರು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಬಳಿಕ ಆತ ತನ್ನ ಖಾತೆಯನ್ನು ಖಾಸಗಿ ಖಾತೆಯನ್ನಾಗಿ ಮಾಡಿಕೊಂಡಿದ್ದಾನೆ.
 
ಕಳೆದ ವರ್ಷ ಪಟೌಡಿಯಲ್ಲಿ ನಡೆದ 'ಮಹಾಪಂಚಾಯತ್' ವೇಳೆ ಮುಸ್ಲಿಂ ಸಮುದಾಯದ ವಿರುದ್ಧ ಕೋಮುವಾದಿ ಭಾಷಣ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ ಆತನಿಗೆ  ಹರಿಯಾಣ ನ್ಯಾಯಾಲಯವು ಜಾಮೀನು ನೀಡಿತ್ತು.
 
 ಆತನ ವೈರಲ್‌ ಆಗಿರುವ ಒಂದು ವಿಡಿಯೋದಲ್ಲಿ, ಚಲಿಸುತ್ತಿರುವ ಕಾರಿನಲ್ಲಿ ಬಂದೂಕು ತೋರಿಸಿ ಬಾಲಕನೊಬ್ಬನನ್ನು ಬೆದರಿಸುತ್ತಿರುವುದು ಕಂಡು ಬಂದಿದೆ. ಬಂದೂಕು ನೋಡಿದ ಬಾಲಕ ಕೊನೆಗೆ ಅಲ್ಲಿಂದ ಓಡಿ ಹೋದ ಮೇಲೆ, ಗೋಪಾಲ್‌ ನ ಕಾರು ಮುಂದೆ ಚಲಿಸುತ್ತದೆ. ನಂತರ, ಮಹಿಳೆಯರು ಮತ್ತು ಮಕ್ಕಳು ಮಾತ್ರ ಇರುವ ಮನೆಯೆದುರು ಕಾರು ನಿಲ್ಲಿಸಿ, ಅವರನ್ನು ಬೆದರಿಸುವುದು ಕಂಡು ಬರುತ್ತದೆ. ಅವರು ಮನೆಯೊಳಗೆ ತೆರಳಿ ಬಾಗಿಲು ಮುಚ್ಚುವವರೆಗೂ ರಾಮ್‌ಭಕ್ತ್‌ ತನ್ನ ಗಾಡಿಯನ್ನು ಅಲ್ಲಿ ನಿಲ್ಲಿಸಿರುತ್ತಾನೆ. ಈ ವಿಡಿಯೋಗೆ “ಗೋ ರಕ್ಷಾ ದಳ, ಮೇವತ್ ರಸ್ತೆ, ಹರಿಯಾಣ” ಎಂಬ ಶೀರ್ಷಿಕೆ ನೀಡಲಾಗಿದೆ ಎಂದು ndtv.com ವರದಿ ಮಾಡಿದೆ.  ಇಂತಹ ಹಲವಾರು ವಿಡಿಯೋಗಳು ಆತನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿದೆ. 

ಬಂದೂಕುಗಳೊಂದಿಗೆ, ವಿವಿಧ ಆಯುಧಗಳೊಂದಿಗೆ ಹಾಗೂ ಬೌನ್ಸರ್‌ಗಳೊಂದಿಗೆ ಇರುವ ಚಿತ್ರಗಳು, ವಿಡಿಯೋಗಳು ಹೇರಳವಾಗಿದ್ದು, ವಿಡಿಯೋಗಳಿಗೆ ರೋಮಾಂಚಕ ಸಂಗೀತಗಳನ್ನು ಬಳಸಿ ಪೋಸ್ಟ್‌ ಮಾಡಲಾಗಿದೆ. 

ಇನ್ನೊಂದು ವಿಡಿಯೋದಲ್ಲಿ ಬಂದೂಕುಧಾರಿ ಗುಂಪೊಂದು ವ್ಯಕ್ತಿಯೊಬ್ಬನನ್ನು ಬಲವಂತವಾಗಿ ಎಳೆದು ಕಾರಿನೊಳಗೆ ತುರುಕುವ ದೃಶ್ಯ ಸೆರೆಯಾಗಿದೆ. “ಗೋ ಕಳ್ಳಸಾಗಾಣಿಕೆದಾರನನ್ನು ಕರೆದುಕೊಂಡು ಹೋಗುವುದು" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಇದಕ್ಕೆ ಹಲವಾರು ಬಲಪಂಥೀಯರು ಬೆಂಬಲಿಸಿ ಕಮೆಂಟುಗಳನ್ನು ಹಾಕಿದ್ದಾರೆ ಎಂದು ವರದಿಯಾಗಿದೆ. 

ಇನ್‌ಸ್ಟಾಗ್ರಾಮ್‌ನಲ್ಲಿ 13,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ರಾಮ್‌ಬಕ್ತ್‌ ಗೋಪಾಲ್ ಉತ್ತರ ಪ್ರದೇಶದ ಜೇವಾರ್‌ನ ನಿವಾಸಿಯಾಗಿದ್ದು, ತನ್ನನ್ನು ತಾನು “ನಾಥುರಾಮ್‌ ಗೋಡ್ಸೆ 2.0” ಎಂದು ಕರೆದುಕೊಳ್ಳುತ್ತಾನೆ. ಖಾಸಗಿ ಅಂಗರಕ್ಷಕರು ಮತ್ತು ಶಸ್ತ್ರಾಸ್ತ್ರಗಳನ್ನು ಒಳಗೊಂಡಿರುವ ಪ್ರಚೋದನಕಾರಿ ಚಿತ್ರಗಳು ಮತ್ತು ವೀಡಿಯೊಗಳನ್ನು ನಿಯಮಿತವಾಗಿ ಪೋಸ್ಟ್ ಮಾಡುತ್ತಿರುವ ಆತ, ತನ್ನನ್ನು ತಾನು ಗೋರಕ್ಷಕ ಎಂದು ಬಿಂಬಿಸಿಕೊಂಡಿದ್ದಾನೆ. ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವ ಮೊದಲೇ ಆತ ಸಾಮಾಜಿಕ ಮಾಧ್ಯಮಗಳಲ್ಲಿ ಆಯುಧಗಳೊಂದಿಗೆ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದ. ಅಲ್ಲದೆ, “ಶಹೀನ್‌ ಭಾಗ್‌ ಗೇಮ್‌ ಓವರ್” “ನಾನು ಆಝಾದಿಯನ್ನು ಕೊಡುತ್ತೇನೆ” ಎಂದು ಸಿಎಎ ವಿರೋಧೀ ಪ್ರತಿಭಟನಾಕಾರರನ್ನು ಗುರಿಯಾಗಿಸಿ ಪೋಸ್ಟ್‌ ಮಾಡಿದ್ದ.  ಅಲ್ಲದೆ, ಜಾಮಿಯಾದ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಗುಂಡು ಹಾರಿಸುವ ಮೊದಲು ಫೇಸ್‌ಬುಕ್‌ ಲೈವ್‌ ನಲ್ಲಿ ಕೂಡಾ ಆತ ಬಂದಿದ್ದ ಎಂದು ndtv ವರದಿ ಮಾಡಿದೆ.

Hello @DGPHaryana ,

What is stopping you from arresting these extremist #RambhaktGopal who is T€rr0rising the state.#ArrestRambhaktGopalNow pic.twitter.com/jXK9czQqYl

— Hate Detector (@HateDetectors) April 24, 2022

Ownership details of the vehicle says "Development & Panchayat"

Pls look into this CC : @DGPHaryana @police_haryana https://t.co/WMJbndjL7A pic.twitter.com/YW0mDUMmDJ

— Mohammed Zubair (@zoo_bear) April 24, 2022

In another video uploaded by Rambhakt Gopal on his instagram, gun is being pointed at people. On the video it's written– Gau Raksha Dal, Mewat road, Haryana.

Insta link: https://t.co/2AYOfDhB2m pic.twitter.com/KjqaqA8j6U

— Kaushik Raj (@kaushikrj6) April 24, 2022
share
ವಾರ್ತಾಭಾರತಿ
ವಾರ್ತಾಭಾರತಿ
Next Story
X