ಹನುಮ ಜಯಂತಿ, ರಾಮನವಮಿ ಕೋಮುಗಲಭೆ ಕುರಿತ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ
"ನ್ಯಾಯಾಲಯದಿಂದ ನೀಡಲು ಸಾಧ್ಯವಿಲ್ಲದ ಪರಿಹಾರಗಳನ್ನು ಕೇಳಬೇಡಿ"
![ಹನುಮ ಜಯಂತಿ, ರಾಮನವಮಿ ಕೋಮುಗಲಭೆ ಕುರಿತ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ ಹನುಮ ಜಯಂತಿ, ರಾಮನವಮಿ ಕೋಮುಗಲಭೆ ಕುರಿತ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ](https://www.varthabharati.in/sites/default/files/images/articles/2022/04/26/333073-1650957166.jpg)
ಹೊಸದಿಲ್ಲಿ: ದೇಶದ ವಿವಿಧ ಭಾಗಗಳಲ್ಲಿ ರಾಮನವಮಿ ಮತ್ತು ಹನುಮ ಜಯಂತಿ ಆಚರಣೆ ವೇಳೆ ನಡೆದ ಕೋಮುಗಲಭೆಯ ಘಟನೆಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. "ನ್ಯಾಯಾಲಯದಿಂದ ನೀಡಲಾಗದ ಇಂತಹ ಪರಿಹಾರಗಳನ್ನು ಕೇಳಬೇಡಿ" ಎಂದು ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಹೇಳಿದೆ ಎಂದು indianexpress.com ವರದಿ ಮಾಡಿದೆ.
ತಿವಾರಿ ಅವರು ತಮ್ಮ ಮನವಿಯಲ್ಲಿ, ರಾಮನವಮಿ ಸಂದರ್ಭದಲ್ಲಿ ರಾಜಸ್ಥಾನ, ದೆಹಲಿ, ಮಧ್ಯಪ್ರದೇಶ ಮತ್ತು ಗುಜರಾತ್ನಲ್ಲಿ ನಡೆದ ಘರ್ಷಣೆಗಳ ಬಗ್ಗೆ ತನಿಖೆ ನಡೆಸಲು ನಿರ್ದೇಶನಗಳನ್ನು ಕೋರಿದ್ದರು.
ಮಧ್ಯಪ್ರದೇಶ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ 'ಬುಲ್ಡೋಜರ್ ಜಸ್ಟೀಸ್'ನ ಅನಿಯಂತ್ರಿತ ಕ್ರಮದ ಬಗ್ಗೆ ತನಿಖೆ ನಡೆಸಲು ಇದೇ ರೀತಿಯ ಸಮಿತಿಯನ್ನು ಸ್ಥಾಪಿಸಲು ನಿರ್ದೇಶನಗಳನ್ನು ಅರ್ಜಿಯು ಕೇಳಿದೆ. "ಇಂತಹ ಕ್ರಮಗಳು ಸಂಪೂರ್ಣವಾಗಿ ತಾರತಮ್ಯ ಮತ್ತು ಪ್ರಜಾಪ್ರಭುತ್ವ ಮತ್ತು ಕಾನೂನಿನ ನಿಯಮಕ್ಕೆ ಹೊಂದಿಕೆಯಾಗುವುದಿಲ್ಲ" ಎಂದು ಮನವಿ ಸಲ್ಲಿಸಲಾಗಿದೆ.