ನಂತೂರು ಸರ್ಕಲ್ ಬಳಿ ಅಪಘಾತ; ಟ್ಯಾಂಕರ್ ಹರಿದು ಬೈಕ್ ಸವಾರ ಮೃತ್ಯು
![ನಂತೂರು ಸರ್ಕಲ್ ಬಳಿ ಅಪಘಾತ; ಟ್ಯಾಂಕರ್ ಹರಿದು ಬೈಕ್ ಸವಾರ ಮೃತ್ಯು ನಂತೂರು ಸರ್ಕಲ್ ಬಳಿ ಅಪಘಾತ; ಟ್ಯಾಂಕರ್ ಹರಿದು ಬೈಕ್ ಸವಾರ ಮೃತ್ಯು](https://www.varthabharati.in/sites/default/files/images/articles/2022/04/29/333507-1651252420.jpg)
ಮಂಗಳೂರು : ನಗರದ ನಂತೂರು ಸರ್ಕಲ್ ಬಳಿ ಟ್ಯಾಂಕರೊಂದು ಹರಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮೃತಪಟ್ಟವರನ್ನು ಸಲ್ಬಿನ್ ಜಾನ್ (21) ಎಂದು ಗುರುತಿಸಲಾಗಿದೆ.
ಈ ಅಪಘಾತದಲ್ಲಿ ಥಾಮಸ್ ಎಂಬವರು ಗಾಯಗೊಂಡಿದ್ದಾರೆ. ಕೆಪಿಟಿ ಕಡೆಯಿಂದ ನಂತೂರಿಗೆ ಬರುತ್ತಿದ್ದ ಬೈಕ್ಗೆ ಬುಲೆಟ್ ಬೈಕ್ ಢಿಕ್ಕಿ ಹೊಡೆಯಿತು. ಇದರಿಂದ ಬೈಕ್ ಸವಾರಿ ಮಾಡುತ್ತಿದ್ದ ಸಲ್ಬಿನ್ ಜಾನ್ ರಸ್ತೆಗೆ ಬಿದ್ದರು. ಈ ಸಂದರ್ಭ ಹಿಂದಿನಿಂದ ಬಂದ ಟ್ಯಾಂಕರ್ ಅವರ ಮೇಲೆಯೇ ಹರಿಯಿತು ಎನ್ನಲಾಗಿದೆ. ಪರಿಣಾಮವಾಗಿ ಸಲ್ಬಿನ್ ಜಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಸಂಚಾರಿ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story