ಪಟಿಯಾಲಾದಲ್ಲಿ ಗುಂಪು ಘರ್ಷಣೆ: ರಾಜ್ಯ ಪೊಲೀಸರ ವಿರುದ್ಧ ಕಠಿಣ ಕ್ರಮ, ಇಂಟರ್ನೆಟ್ ಸೇವೆ ಸ್ಥಗಿತ
![ಪಟಿಯಾಲಾದಲ್ಲಿ ಗುಂಪು ಘರ್ಷಣೆ: ರಾಜ್ಯ ಪೊಲೀಸರ ವಿರುದ್ಧ ಕಠಿಣ ಕ್ರಮ, ಇಂಟರ್ನೆಟ್ ಸೇವೆ ಸ್ಥಗಿತ ಪಟಿಯಾಲಾದಲ್ಲಿ ಗುಂಪು ಘರ್ಷಣೆ: ರಾಜ್ಯ ಪೊಲೀಸರ ವಿರುದ್ಧ ಕಠಿಣ ಕ್ರಮ, ಇಂಟರ್ನೆಟ್ ಸೇವೆ ಸ್ಥಗಿತ](https://www.varthabharati.in/sites/default/files/images/articles/2022/04/30/333538-1651296620.gif)
Photo: PTI
ಚಂಡೀಗಢ: ಪಟಿಯಾಲದಲ್ಲಿ ಖಾಲಿಸ್ತಾನ್ ವಿರೋಧಿ ಮೆರವಣಿಗೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿ ನಾಲ್ವರು ಗಾಯಗೊಂಡಿರುವ ಒಂದು ದಿನದ ನಂತರ ಪಂಜಾಬ್ ಸರಕಾರ ಶನಿವಾರ ರಾಜ್ಯ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಜಿಲ್ಲೆಯಲ್ಲಿ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ವಿಫಲರಾದ ಇಲಾಖೆಯ ಮೂವರು ಉನ್ನತ ಅಧಿಕಾರಿಗಳನ್ನು ತೆಗೆದುಹಾಕಿದೆ.
ಹಿಂಸಾಚಾರದ ಬಗ್ಗೆ ಪೊಲೀಸ್ ಪ್ರತಿಕ್ರಿಯೆಯ ಬಗ್ಗೆ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಆದೇಶದ ನಂತರ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಪಟಿಯಾಲ ರೇಂಜ್), ಪಟಿಯಾಲಾ ಹಿರಿಯ ಪೊಲೀಸ್ ಅಧೀಕ್ಷಕರು ಮತ್ತು ಪೊಲೀಸ್ ಸೂಪರಿಂಟೆಂಡೆಂಟ್ ಅವರನ್ನು ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ಎನ್ಡಿಟಿವಿಗೆ ತಿಳಿಸಿವೆ.
ಮುಖ್ವಿಂದರ್ ಸಿಂಗ್ ಚಿನ್ನಾ ಅವರನ್ನು ಪಟಿಯಾಲ ರೇಂಜ್ಗೆ ಹೊಸ ಐಜಿ ಆಗಿ ನೇಮಿಸಲಾಗಿದೆ ಹಾಗೂ ದೀಪಕ್ ಪಾರಿಕ್ ಅವರು ಪಟಿಯಾಲದ ಹೊಸ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
ವಝಿರ್ ಸಿಂಗ್ ಅವರನ್ನು ಪಟಿಯಾಲದ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ.
ಇಂದು ಬೆಳಗ್ಗೆ 9:30ರಿಂದ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಹಾಗೂ ಎಸ್ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಸಂಜೆ 6ರವರೆಗೆ ನಿರ್ಬಂಧಿಸಲಾಗಿದೆ.