ಬೆಂಗಳೂರು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿ ವಿಳಂಬ ಖಂಡಿಸಿ ಧರಣಿ

ಬೆಂಗಳೂರು, ಮೇ 1: ಹಲವು ದಿನಗಳಿಂದ ನಗರದ ಮಲ್ಲೇಶ್ವರಂ ಕ್ಷೇತ್ರದಲ್ಲಿ ಕಾಮಗಾರಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಇಲ್ಲಿನ ನಿವಾಸಿಗಳು ಮೌನ ಧರಣಿ ನಡೆಸಿ ಬಿಬಿಎಂಪಿ, ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ರವಿವಾರ ನಗರದ ಸದಾಶಿವನಗರ ಶಿವಾಜಿ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಕಾರರು, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಳಂಬ ಕಾಮಗಾರಿ ಖಂಡಿಸಿದರು.
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ, ಟೆಂಡರ್ ಅವ್ಯವಹಾರ ಮತ್ತು ಕಾಮಗಾರಿಗಳ ನಿಧಾನಗತಿಯಿಂದ ಕ್ಷೇತ್ರದ ನಾಗರಿಕರಿಗೆ ಆಗುತ್ತಿರುವ ಆನಾನುಕೂಲವನ್ನು ಸರಕಾರ ಗಮನಿಸಬೇಕು ಎಂದು ಆಗ್ರಹಿಸಿದರು.
ಧರಣಿಯನ್ನುದ್ದೇಶಿಸಿ ಮಾತನಾಡಿದ ನಿವಾಸಿ ಅನೂಪ್ ಅಯ್ಯಂಗಾರ್, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 15ವರ್ಷಗಳಿಂದ ಮೂಲಭೂತ ಸೌಲಭ್ಯಗಳಾದ ರಸ್ತೆ,ಒಳಚರಂಡಿ ಮತ್ತು ಪಾದಚಾರಿ ಮಾರ್ಗಗಳು ಸಮರ್ಪಕವಾಗಿಲ್ಲದೇ ಸಾರ್ವಜನಿಕರು ಪ್ರಾಣಪಾಯದಿಂದ ಜೀವನ ಸಾಗಿಸುತ್ತಿದ್ದಾರೆ. ಸ್ಯಾಂಕಿ ಟ್ಯಾಂಕ್ ಕೆರೆ ಅಭಿವೃದ್ದಿ ಎಂದು ಕಳೆದ 12 ವರ್ಷಗಳಿಂದ ದುರಸ್ತಿ ,ಅಭಿವೃದ್ದಿ ಮಾಡುತ್ತಿದ್ದು ಇದುವರೆಗೂ ಕಾಮಗಾರಿಗಳು ಪೂರ್ಣಗೊಂಡಿಲ್ಲ ಎಂದರು.
ಸ್ಯಾಂಕಿ ಕೆರೆ ಪುಟ್ ಪಾತ್ ಕಳೆದ ನಾಲ್ಕು ತಿಂಗಳಲ್ಲಿ ಎರಡು ಬಾರಿ ಕಾಮಗಾರಿ ನಡೆಸಲಾಗಿದೆ.ಹಳೆ ಕಲ್ಲು,ಹೊಸ ಬಿಲ್ಲು ಎಂಬತಾಗಿದೆ. ಮಲ್ಲೇಶ್ವರಂ ಮುಖ್ಯರಸ್ತೆ ,ಪ್ಯಾಲೇಸ್ ಗುಟ್ಟಹಳ್ಳಿ ರಾಜಕಾಲುವೆ ಕಾಮಗಾರಿ ಮತ್ತು ಗುಂಡಿಗಳ ನಗರವಾಗಿದೆ ಮಲ್ಲೇಶ್ವರಂ ಕ್ಷೇತ್ರ. ಮಲ್ಲೇಶ್ವರಂ ನಡೆಯುತ್ತಿರುವ ಪ್ರತಿಯೊಂದು ಕಾಮಗಾರಿಗಳು ಕಳಪೆ ಕಾಮಗಾರಿ ಮತ್ತು ನಿಧಾನಗತಿ ಮತ್ತು ಎಲ್ಲ ಗುತ್ತಿಗೆಯನ್ನು ಒಬ್ಬನೆ ಗುತ್ತಿಗೆ ಪಡೆದಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರಕಾರ ಪಾರದರ್ಶಕ ಆಡಳಿತ ಏನ್ನುತ್ತಾರೆ.ಆದರೆ, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಮಾಹಿತಿ ಕೇಳಿದರೆ ಅಧಿಕಾರಿಗಳು ಕೊಡುವುದಿಲ್ಲ. ಸಾರ್ವಜನಿಕರ ತೆರಿಗೆ ಹಣ, ಪೋಲು ಮಾಡುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರು ಯಾವುದೇ ಪ್ರಯೋಜನವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.






.jpg)
.jpg)

