Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ʼಚೀನಾ ರಾಯಭಾರಿಯೊಂದಿಗೆ ಪಬ್‌ನಲ್ಲಿದ್ದ...

ʼಚೀನಾ ರಾಯಭಾರಿಯೊಂದಿಗೆ ಪಬ್‌ನಲ್ಲಿದ್ದ ರಾಹುಲ್‌ ಗಾಂಧಿʼ ಎಂಬ ವೀಡಿಯೊ ವೈರಲ್ ಮಾಡಿದ ಬಲಪಂಥೀಯರು: ವಾಸ್ತವವೇನು?

ವಾರ್ತಾಭಾರತಿವಾರ್ತಾಭಾರತಿ4 May 2022 1:18 PM IST
share
ʼಚೀನಾ ರಾಯಭಾರಿಯೊಂದಿಗೆ ಪಬ್‌ನಲ್ಲಿದ್ದ ರಾಹುಲ್‌ ಗಾಂಧಿʼ ಎಂಬ ವೀಡಿಯೊ ವೈರಲ್ ಮಾಡಿದ ಬಲಪಂಥೀಯರು: ವಾಸ್ತವವೇನು?

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಕಾಠ್ಮಂಡುವಿನ ನೈಟ್ ಕ್ಲಬ್ ನಲ್ಲಿದ್ದರೆನ್ನಲಾದ ವೀಡಿಯೋವೊಂದನ್ನು ಬಿಜೆಪಿ ಪೋಸ್ಟ್ ಮಾಡಿದ  ನಂತರ ಅದು ವೈರಲ್ ಆಗುವ ಜತೆಗೆ ವಿವಾದಕ್ಕೂ ಈಡಾದ ಬೆನ್ನಲ್ಲೇ ಹಲವಾರು ವದಂತಿಗಳೂ ಹರಿದಾಡುತ್ತಿದೆ.  ರಾಹುಲ್ ಅವರು ನೇಪಾಳದ ಕಾಠ್ಮಂಡುವಿನಲ್ಲಿ ನೇಪಾಳದ ಚೀನೀ ರಾಯಭಾರಿ ಹೌ ಯಾಂಖಿ ಅವರ ಜತೆಗೆ ಪಬ್‍ನಲ್ಲಿದ್ದರು ಎಂದೂ ಕೆಲವರು ಹೇಳಲಾರಂಭಿಸಿದ್ದು ವಾಸ್ತವವಾಗಿ ಇವುಗಳು ಆಧಾರರಹಿತವಾಗಿದೆ ಎಂದು indiatoday ಸತ್ಯಶೋಧನಾ ವರದಿಯಲ್ಲಿ ತಿಳಿಸಿದೆ.

ವಾಸ್ತವವಾಗಿ ರಾಹುಲ್ ಗಾಂಧಿ ಅವರ ಜತೆಗಿರುವ ಯುವತಿ ಅವರು ಭಾಗವಹಿಸಿದ್ದ ವಿವಾಹ ಸಮಾರಂಭದ ವಧುವಿನ ಸ್ನೇಹಿತೆ ಎಂದು ತಿಳಿದು ಬಂದಿದ್ದು ಆಕೆ ಚೀನಾ ರಾಜತಾಂತ್ರಿಕ ಅಧಿಕಾರಿಯಲ್ಲ ಎಂಬುದೂ ದೃಢಪಟ್ಟಿದೆ.

ವರದಿಗಳ ಪ್ರಕಾರ ರಾಹುಲ್ ಅವರು ತಮ್ಮ ಸ್ನೇಹಿತೆ ಹಾಗೂ ಸಿಎನ್‍ಎನ್ ಇಂಟರ್‍ನ್ಯಾಷನಲ್‍ನ ದಿಲ್ಲಿ  ವರದಿಗಾರ್ತಿ ಸುಮ್ನಿಮಾ ಉದಾಸ್ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಕಾಠ್ಮಂಡುವಿಗೆ ತೆರಳಿದ್ದರು. ಸುಮ್ನಿಮಾ ಅವರು  ಮ್ಯಾನ್ಮಾರ್ ನ ಮಾಜಿ ನೇಪಾಳಿ ರಾಯಭಾರಿ ಭೀಮ್ ಉದಾಸ್ ಅವರ ಪುತ್ರಿಯಾಗಿದ್ದಾರೆ.

ಕಠ್ಮಂಡು ಪೋಸ್ಟ್ ವರದಿ ಪ್ರಕಾರ ಸುಮ್ನಿಮಾ ಅವರ ವಿವಾಹವು ಮೇ 3ರಂದು ನಿಮಾ ಮಾರ್ಟಿನ್ ಶೆರ್ಪಾ ಅವರ ಜತೆಗೆ ನೆರವೇರಿತ್ತು ಹಾಗೂ ಔತಣಕೂಟ ಮೇ 5ರಂದು ನಡೆಯಲಿದೆ.

ವಿವಾದಾತ್ಮಕ ವೀಡಿಯೋ ಕಾಠ್ಮಂಡುವಿನ ಜನಪ್ರಿಯ ಪಬ್ ಲಾರ್ಡ್ ಆಫ್ ದಿ ಡ್ರಿಂಕ್ಸ್ ನದ್ದಾಗಿತ್ತು ಎಂದು ತಿಳಿದು ಬಂದಿದೆ. ಈ ಕುರಿತು ಇಂಡಿಯಾ ಟುಡೇ ಆ ಪಬ್ ಆಡಳಿತವನ್ನು ಸಂಪರ್ಕಿಸಿದಾಗ ರಾಹುಲ್ ಅವರು ಮೇ 2ರಂದು ವಧು ಮತ್ತು ವರರ ಕಡೆಯವರಾದ ಐದಾರು ಮಂದಿ ಜತೆಗೆ ಅಲ್ಲಿಗೆ ಆಗಮಿಸಿದ್ದರು ಹಾಗೂ ಆ ಸಂದರ್ಭ ಯಾವುದೇ ಚೀನೀ ರಾಯಭಾರಿ ಇರಲಿಲ್ಲ ಎಂದಿದ್ದಾಗಿ indiatoday ವರದಿ ತಿಳಿಸಿದೆ.

"ರಾಹುಲ್ ಸುಮಾರು ಒಂದೂವರೆ ಗಂಟೆ ತನಕ ಅಲ್ಲಿದ್ದರು ಅದೊಂದು ಖಾಸಗಿ ಭೇಟಿಯಾಗಿತ್ತು" ಎಂಬ ಮಾಹಿತಿಯನ್ನು ಲಾರ್ಡ್ ಆಫ್ ದಿ ಡ್ರಿಂಕ್ಸ್ ಸಿಇಒ ರಬಿನ್ ಶ್ರೇಷ್ಠ indiatoday ಗೆ ತಿಳಿಸಿದ್ದಾರೆ. ರಾಹುಲ್ ಜತೆಗಿದ್ದ ಯುವತಿ ವಧುವಿನ ಸ್ನೇಹಿತೆಯಾಗಿದ್ದರು ಎಂದು ಅವರು ಹೇಳಿದ್ದು ಯುವತಿ ನೇಪಾಳಿಯಾಗಿದ್ದಾರೆ ಆದರೆ ಆಕೆಯ ಹೆಸರು ಮತ್ತಿರ ಮಾಹಿತಿಯು ಅವರ ಖಾಸಗಿತನಕ್ಕೆ ಧಕ್ಕೆ ತರಬಹುದೆಂಬ ಸಲುವಾಗಿ ಪ್ರಕಟಿಸಲಾಗಿಲ್ಲ ಎಂದೂ ವರದಿ ಬೆಟ್ಟು ಮಾಡಿದೆ.

#RahulGandhi enjoying Party with Chinese Ambassador in Nepal
Pappu ka Hath Chinese Ke Sath pic.twitter.com/2PEMh4wrld

— अमित शर्मा (@AmitsharmaGRENO) May 3, 2022
share
ವಾರ್ತಾಭಾರತಿ
ವಾರ್ತಾಭಾರತಿ
Next Story
X