Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಒಳ ಮೀಸಲಾತಿ ಹೀಗೊಂದು ಪ್ರತಿಕ್ರಿಯೆ

ಒಳ ಮೀಸಲಾತಿ ಹೀಗೊಂದು ಪ್ರತಿಕ್ರಿಯೆ

ದೇವನೂರ ಮಹಾದೇವದೇವನೂರ ಮಹಾದೇವ5 May 2022 12:03 AM IST
share
ಒಳ ಮೀಸಲಾತಿ ಹೀಗೊಂದು ಪ್ರತಿಕ್ರಿಯೆ

ಪ್ರಿಯ ರಮೇಶ್ ಡಿ.ಈ.

ವಂದನೆಗಳು.
ನೀವು ಕಮ್ಮಿ ಪ್ರಶ್ನೆ ಕೇಳಿ ಅಂದರೆ ಹೆಚ್ಚು ಪ್ರಶ್ನೆ ಕೇಳಿದ್ದೀರಿ! ಪ್ರಶ್ನೆಗಳ ಕ್ರಮಾಂಕದಲ್ಲಿ ನಾನು ಉತ್ತರಿಸುತ್ತಿಲ್ಲ. ಮೊದಲನೆಯದಾಗಿ ಕೊನೆಯ 11ನೇ ಪ್ರಶ್ನೆಯಾದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಬಗ್ಗೆ ನನ್ನ ಅಭಿಪ್ರಾಯ: ಈ ವರದಿ ಅಧಿಕೃತವಾಗಿ ಸಾರ್ವಜನಿಕರಿಗೆ ಬಿಡುಗಡೆಯೂ ಆಗಿಲ್ಲ. ಸದನದಲ್ಲಿ ಚರ್ಚೆಯಾಗಿಲ್ಲ. ಆ ವರದಿಯಲ್ಲಿ ದಲಿತ ಒಳ ಪಂಗಡದ ಜನಸಂಖ್ಯಾ ಜನಗಣತಿ ವಿಸ್ತೃತವಾಗಿ ನಡೆದಿರುವ ಬಗ್ಗೆ ಅನುಮಾನವಿದೆ. ಹಾಗೂ ಒಳ ಪಂಗಡದ ಉದ್ಯೋಗಸ್ಥರ ಗಣತಿ ಹಾಗೂ ಶೇಕಡಾವಾರು ಪ್ರಮಾಣವನ್ನು, ವರದಿಯನ್ನು ನೋಡಿ ಖಚಿತ ಪಡಿಸಿಕೊಳ್ಳಬೇಕಾಗಿದೆ. ವರದಿಯು ತನ್ನ ವ್ಯಾಪ್ತಿ ಮೀರಿ ಏನಾದರೂ ಪ್ರಸ್ತಾಪಿಸಿದ್ದರೆ, ಅದನ್ನೂ ನೋಡಬೇಕಿದೆ. ಯಾವುದೇ ಒಂದು ವರದಿ ಅಧಿಕೃತವಾಗಿ ಬಹಿರಂಗವಾಗದಿದ್ದರೆ ಅದು ಇದ್ದರೂ ಒಂದೇ, ಇಲ್ಲದಿದ್ದರೂ ಒಂದೇ. ಅದಕ್ಕಾಗಿ ಮೊದಲು ಅದನ್ನು ಬಹಿರಂಗಪಡಿಸಬೇಕು. ಇದಿಷ್ಟನ್ನು ಹೇಳಲು ಬಯಸುತ್ತೇನೆ.

ಪ್ರಶ್ನೆ 8ರಲ್ಲಿ:
‘ಒಳ ಮೀಸಲಾತಿ ಹೋರಾಟ ಸಂವಿಧಾನ ವಿರೋಧಿ ನಡೆಯೋ, ಸಾಮಾಜಿಕ ನ್ಯಾಯಪರ ಚಿಂತನೆಯೋ?’ ಎನ್ನುವುದಕ್ಕೆ- ನಾನು ಒಳ ಮೀಸಲಾತಿ ಹೋರಾಟವನ್ನು ಸಂವಿಧಾನ ವಿರೋಧಿ ಎಂದಾಗಲಿ ಅಥವಾ ಸಾಮಾಜಿಕ ನ್ಯಾಯಪರ ಚಿಂತನೆ ಅಲ್ಲ ಎಂದಾಗಲಿ ಹೇಳಲು ಬಯಸುವುದಿಲ್ಲ. ಆದರೆ ಹೋರಾಟ ಮಾಡಬೇಕಾದದ್ದು ಎಲ್ಲಿ? ಒಳ ಮೀಸಲಾತಿಗೆ ಸಂವಿಧಾನ ತಿದ್ದುಪಡಿಯಾಗಬೇಕು. ಸಂಸತ್‌ನ ಬಹುಮತ ಬೇಕು. ಎಲ್ಲಾ ಪಕ್ಷಗಳ ಸಂಸತ್ ಸದಸ್ಯರಿಗೆ ಮನವರಿಕೆ ಮಾಡಿ ಒತ್ತಡ ತರುವ ಹೋರಾಟ ಆಗಬೇಕಿತ್ತು. ಆದರೆ ಆದದ್ದು ಏನು? ಈ ಒಳ ಮಿಸಲಾತಿ ಹೋರಾಟ ದಲಿತ ಪಂಗಡಗಳ ಒಳಗೇನೆ ಕಿಚ್ಚು ಹಚ್ಚಿತು. ದ್ವೇಷದಿಂದ ಕುದಿಯುವಂತೆ ಮಾಡಿಬಿಟ್ಟಿತು. ಪರಿಣಾಮವಾಗಿ ಅಸ್ಪಶ್ಯ ಸಮುದಾಯವು ರಾಜಕೀಯವಾಗಿ ಅಸ್ಪಶ್ಯ ಆಗುವ ಪ್ರಕ್ರಿಯೆ ಆರಂಭವಾಯಿತು. ಮೀಸಲಾತಿ ಹೋರಾಟಗಾರರು ವಿವೇಕ, ವಿವೇಚನೆ ಕಳೆದುಕೊಂಡಿದ್ದರಿಂದಾದ ಈ ಆತ್ಮಾಹುತಿ ಬೆಳವಣಿಗೆ ಅವರಿಗೆ ಕಾಣುತ್ತಿಲ್ಲ. ವಿವೇಕ, ವಿವೇಚನೆ ಇದ್ದರೆ ಕಾಣುತ್ತಿತ್ತು; ‘ಅರೆ, ಕೆಟಗರಿ I, II, III ಯಾವುದರಲ್ಲೂ ಶೇಕಡ 15 ಭರ್ತಿಯೇ ಆಗಿಲ್ಲ. ಜೊತೆಗೆ ನಕಲಿ ಸರ್ಟಿಫಿಕೇಟ್ ಹಾವಳಿ ಬೇರೆ. ಇಂಥದರಲ್ಲಿ ‘ನಮ್ಮ ಪಾಲನ್ನು ಅವರು ಕಬಳಿಸಿದರು’ ಮಾತಿಗೆ ಅರ್ಥ ಇದೆಯೆ ? ಕೆನೆಪದರ ಪ್ರಶ್ನೆ ಯಾಕೆ ಬರುತ್ತಿದೆ ? ಎಂದೆಲ್ಲಾ ಅನ್ನಿಸುತ್ತಿತ್ತು.(ಉದ್ಯೋಗ ಪ್ರಮಾಣ ದಾಖಲೆಗಾಗಿ ISEC ಅಧ್ಯಯನದ ವರದಿ ನೀಡಿರುವೆ).

ಪ್ರಶ್ನ್ನೆ 7ರಲ್ಲಿ ಸ್ಪಶ್ಯ ಸೇರ್ಪಡೆಯಿಂದ ಅಸ್ಪಶ್ಯರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗಿನ ಬಗ್ಗೆ: ಇನ್ನೂ ಶೇ.15 ಮೀಸಲಾತಿ ಭರ್ತಿಯಾಗದಿರುವ ಈ ಸಂದರ್ಭದಲ್ಲಿ ಈ ಮಾತು ಅಪ್ರಸ್ತುತ. ಈ ಬಗ್ಗೆ ನನ್ನ ಅಭಿಪ್ರಾಯವೆಂದರೆ, SC ಗುಂಪಿಗೆ ದಿಕ್ಕುದೆಸೆ ಇಲ್ಲದ ಹಾಗೂ ಸಂಖ್ಯಾ ಬಲವಿಲ್ಲದೆ ಮೂಕವಾಗಿರುವ ಸಣ್ಣಪುಟ್ಟ ಸಮುದಾಯಗಳ ಎಲ್ಲವನ್ನೂ ಸೇರ್ಪಡೆ ಮಾಡಿ ಒಟ್ಟಾಗಬಹುದಾದ ಜನಸಂಖ್ಯೆ ಪ್ರಮಾಣಕ್ಕೆ ತಕ್ಕಂತೆ ಮೀಸಲಾತಿ ಪ್ರಮಾಣವನ್ನು ಹೆಚ್ಚು ಮಾಡಿ ನಿಗದಿಯಾಗಲಿ, ಏನಂತೆ? ಒಳ ಪಂಗಡದ ಪ್ರಾತಿನಿಧ್ಯದ ಅಸಮತೋಲನಕ್ಕೆ ಬ್ಯಾಕ್‌ಲಾಗ್ ಸಮತೋಲನ ಪದ್ಧತಿಯೇ ಪರಿಹಾರ ಎಂದು ಮತ್ತೆ ಮತ್ತೆ ಹೇಳುತ್ತಿದ್ದೇನೆ. ಇದನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ. ಕೊನೆಯದಾಗಿ, ಸನ್ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪತ್ರ ಬರೆದು ಶ್ರೀ ಕೆಂಪಯ್ಯ IPS ಅವರ ಮೂಲಕ ತಲುಪಿಸಲಾಗಿತ್ತು. ಅದರ ಪೂರ್ಣ ಪಾಠ:

1. ತಾತ್ಕಾಲಿಕವಾಗಿ ತಕ್ಷಣಕ್ಕೆ ಉಪಜಾತಿಗಳಿಗೆ ಪ್ರತ್ಯೇಕ ನಿಗಮ ಮಾಡಿ, ಅವುಗಳ ಅಂದಾಜು ಜನಸಂಖ್ಯೆಗೆ ಅನುಗುಣವಾಗಿ ಆಯಾಯ ನಿಯಮಗಳಿಗೆ ನೇರ ಹಣಕಾಸು ಬಿಡುಗಡೆ ಮಾಡುವುದು. ಇದು ಸ್ವಲ್ಪವಾದರೂ ತಾತ್ಕಾಲಿಕ ಸಮಾಧಾನ ಕೊಡಬಹುದೇ ?
2. ಆಯಾಯ ಉಪಜಾತಿಗಳ ಜನಸಂಖ್ಯೆ ಪ್ರಮಾಣ ಹಾಗೂ ಆ ಉಪಜಾತಿಗಳಿಗೆ ಉದ್ಯೋಗಸ್ಥರು- ಈ ಎರಡರ ಅಂಕಿ ಅಂಶಗಳನ್ನು ಪರಿಗಣಿಸಿ ಕೊರತೆಯಾಗಿಯೋ- ಆ ಕೊರತೆ ಅನುಭವಿಸುತ್ತಿರುವ ಉಪಜಾತಿಗಳಿಗೆ (ಕೆಟಗರಿಯ ಅನ್ವಯ) ನ್ಯಾಯ ಸಲ್ಲುವಂತಾಗಲು ‘ಬ್ಯಾಕ್‌ಲಾಗ್ ಸಮತೋಲನ’ ಎಂದು ಪರಿಗಣಿಸಿ, ಸಮತೋಲನ ಆಗುವವರೆಗೂ ಹುದ್ದೆಗಳು ಕೊರತೆ ಅನುಭವಿಸುತ್ತಿರುವ ಉಪಜಾತಿಗಳೇನೇ ಉದ್ಯೊಗ ದಕ್ಕುವಂತೆ - ಕಾನೂನು ರಚಿಸಲು ಸಾಧ್ಯವಿಲ್ಲವೇ? ಈ ಕಾನೂನು ರೂಪಿಸಿರುವುದು ರಾಜ್ಯ ಸರಕಾದ ವ್ಯಾಪ್ತಿಗೆ ಬರಬಹುದೇ?
3. (ಅ) ಪೌರಕಾರ್ಮಿಕರು ಹಾಗೂ ಸಂಖ್ಯೆಯಲ್ಲಿ ಕಮ್ಮಿ ಪ್ರಮಾಣದಲ್ಲಿರುವ ಪಂಗಡಗಳು ಉದಾಹರಣೆಗೆ- ಶಿಶುಮಕ್ಕಳು, ನೆಲೆ ಕಾಣದ ಅಲೆಮಾರಿಗಳು - ಮುಂತಾದ ಸ್ಫರ್ಧಿಸಲಾಗದ ಧ್ವನಿ ಇಲ್ಲದ ಸಮುದಾಯಗಳನ್ನು ಗುರುತಿಸಿ ಅದನ್ನು ಒಂದು ಪ್ರತ್ಯೇಕ ಗುಂಪಾಗಿ ಪರಿಗಣಿಸಿ ಅವರಿಗೂ ಕಿಂಚಿತ್ ದಕ್ಕುವಂತೆ ಎಚ್ಚರವಹಿಸಬೇಕು.
(ಆ) ಜೊತೆಜೊತೆಗೆ ಸುಳ್ಳು ಜಾತಿ ಸರ್ಟಿಫಿಕೇಟ್ ಗೊಂದಲ (ಬುಡ್ಡಜಂಗಮ ಇತ್ಯಾದಿ) ಸಮಸ್ಯೆ ಮುಂದಾದರೂ ನಿಲ್ಲುವಂತಾಗಲು ಗೊಂದಲದ ಜಾತಿ ಹೆಸರುಗಳಿಗೆ ತಿದ್ದುಪಡಿ ತಂದು ಎಚ್ಚರ ವಹಿಸಬೇಕು.
4. ಮೇಲ್ಕಂಡ ಸಾಧ್ಯತೆಗಳನ್ನು- ಇತ್ತೀಚಿನ ಜಾತಿ ಜನಗಣತಿ ವಿವರಗಳನ್ನು ಬಹಿರಂಗಪಡಿಸಿ ಇದನ್ನು ಆಧಾರವಾಗಿಟ್ಟುಕೊಂಡೇ ಮಾಡಬೇಕು. ಇಲ್ಲದಿದ್ದರೆ ಇರುವ ಗೊಂದಲವನ್ನು ಮತ್ತೂ ಉಲ್ಬಣಗೊಳಿಸಿದಂತಾಗುತ್ತದೆ.
5. ಈ ಒಳ ಮೀಸಲಾತಿ ಸಮಸ್ಯೆಯು ಸಂಸತ್‌ನಲ್ಲಿ ತಿದ್ದುಪಡಿಯ ಮೂಲಕವೇ ಬಗೆಹರಿಯಬೇಕಾಗಿರುವುದರಿಂದ , ಅದು ಯಾವ ಕಾಲಕ್ಕಾಗುತ್ತದೋ ಅದು ಕಾಲಕ್ಕೆ ಬಿಟ್ಟ ವಿಚಾರವಾಗಿಬಿಟ್ಟಿದೆ! ಹಾಗಾಗಿ ರಾಜ್ಯ ಸರಕಾರದ ವ್ಯಾಪ್ತಿಯಲ್ಲಿಯೇ ಇಂದು ವರ್ತಮಾನದಲ್ಲೇ ವಂಚಿತರಲ್ಲೇ ವಂಚಿತರಿಗೂ ಅನುಕೂಲವಾಗುವಂತೆ- ಒಳಉಪಾಯಗಳನ್ನು ನಮ್ಮ ರಾಜ್ಯ ಸರಕಾರ ಹುಡುಕಿದರೆ - ಅದು ಹೆಚ್ಚು ಮಾನವೀಯವಾಗುತ್ತದೆ. ಭಾರತಕ್ಕೂ ಮಾರ್ಗದರ್ಶಿಯಾಗುತ್ತದೆ.
ಇದು ನಿಮ್ಮ ಬಹುತೇಕ ಉಳಿದೆಲ್ಲಾ ಪ್ರಶ್ನೆಗಳಿಗೆ ಉತ್ತರವಾಗಬಹುದು. ಸಿದ್ದರಾಮಯ್ಯ ಅವರಿಗೆ ಬರೆದ ಈ ಪತ್ರದ ಬಗ್ಗೆ ಕೆಲವೇ ಬೆರಳೆಣಿಕೆಯ ಸ್ನೇಹಿತರಿಗಷ್ಟೇ ತಿಳಿಸಿದ್ದೆ. ಆಗ ಬಹಿರಂಗಗೊಳಿಸಿದ್ದರೆ ಇದು ಏನೊ ಸಂಚು ಅಂದುಕೊಳ್ಳುವವರೂ ಇದ್ದರು! ಆಗ ವಾತಾವರಣ ಅಷ್ಟು ಕಲುಷಿತವಾಗಿತ್ತು. ಈಗ, ಎಲ್ಲರೂ ಗುದ್ದಾಡಿ ಎದ್ದು ಬಿದ್ದು ವಿವೇಕ, ವಿವೇಚನೆಗಳಿಗೂ ಬರುತ್ತಿದೆ ಅನ್ನಿಸುತ್ತಿರುವುದರಿಂದ ಈಗ ಬಹಿರಂಗಗೊಳಿಸಿದರೂ ಪರವಾಗಿಲ್ಲ! ಇಂದು ಸರಕಾರ ತನ್ನ ಇಲಾಖೆಯ ಉದ್ಯೋಗಗಳನ್ನು ಭರ್ತಿ ಮಾಡದ ಪರಿಣಾಮವಾಗಿ ದಲಿತರ ಪಾಲಿನ ಬ್ಯಾಕ್‌ಲಾಗ್ ಹುದ್ದೆಗಳು ಅಸಂಖ್ಯವಾಗಿ ಖಾಲಿ ಬಿದ್ದಿವೆ. ಇನ್ನೊಂದು ಕಡೆ ಖಾಸಗಿ ದವಡೆಗೆ ಉದ್ಯೋಗಗಳು ಬೀಳುತ್ತಿವೆ. ‘ಈ ಬ್ಯಾಕ್‌ಲಾಗ್ ಉದ್ಯೋಗಗಳನ್ನು ಭರ್ತಿ ಮಾಡಿ; ದಲಿತ ಪಂಗಡಗಳಲ್ಲಿ ಯಾವುದು ಪ್ರಾತಿನಿಧ್ಯ ಕೊರತೆ ಅನುಭವಿಸುತ್ತಿದೆಯೋ ಆ ಪಂಗಡಕ್ಕೆ ಸಮತೋಲನ ಆಗುವವರೆಗೆ ಈ ಎಲ್ಲಾ ಉದ್ಯೋಗವು ಆ ಪಂಗಡಕ್ಕೇ ಸಿಗಲಿ’ ಎಂಬುದು ಇಂದಿನ ಕೂಗಾಗಬೇಕಿದೆ.

share
ದೇವನೂರ ಮಹಾದೇವ
ದೇವನೂರ ಮಹಾದೇವ
Next Story
X