Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ತುಳುನಾಡಿನ ದೈವಗಳು ಸೌಹಾರ್ದ, ಸಾಮರಸ್ಯ,...

ತುಳುನಾಡಿನ ದೈವಗಳು ಸೌಹಾರ್ದ, ಸಾಮರಸ್ಯ, ಸಹಬಾಳ್ವೆಯ ಪ್ರತೀಕ

ಅಭಿಷೇಕ್ ಪಡಿವಾಲ್, ಸುಳ್ಯಅಭಿಷೇಕ್ ಪಡಿವಾಲ್, ಸುಳ್ಯ6 May 2022 11:27 PM IST
share

ಮಾನ್ಯರೇ,

ತುಳುನಾಡಿನ ಸಾಂಸ್ಕೃತಿಕ ವೈಶಿಷ್ಟವೆಂದರೆ ಭೂತಾರಾಧನೆ ಮತ್ತು ನಾಗಾರಾಧನೆ. ತುಳುವರು ವೈದಿಕ ದೇವರುಗಳಿಗಿಂತ ಹೆಚ್ಚಾಗಿ ಭೂತಾರಾಧನೆ ಮತ್ತು ನಾಗಾರಾಧನೆಯಲ್ಲಿ ನಂಬಿಕೆ ಇಡುತ್ತಾರೆ. ಇತ್ತೀಚೆಗೆ ತುಳುನಾಡಿನಲ್ಲಿ (ದ.ಕ., ಉಡುಪಿ ಜಿಲ್ಲೆಯಲ್ಲಿ) ಸ್ಥಾಪಿತ ಹಿತಾಸಕ್ತಿಗಳು ಹಿಂದೂ ದೇವಸ್ಥಾನದ ಹೆಸರಲ್ಲಿ ಮುಸ್ಲಿಮ್ ದ್ವೇಷ ಸಾಧಿಸುವುದು ವಿಪರೀತವಾಗಿದೆ. 300-400 ವರ್ಷಗಳ ಹಿಂದೆ ಸ್ವತಃ ಮುಸ್ಲಿಮರು ಕಟ್ಟಿಸಿದ ಹಿಂದೂ ದೇವಸ್ಥಾನಗಳಲ್ಲೂ ಮುಸ್ಲಿಮರ ವಿರುದ್ಧವೇ ದ್ವೇಷ ಸಾಧಿಸುವವರೂ ಇದ್ದಾರೆ. ಅಷ್ಟೇ ಅಲ್ಲ ಕೆಲವೆಡೆ ಭೂತದೈವಗಳ ಕೋಲ, ನೇಮ, ತಂಬಿಲಗಳಲ್ಲೂ ಮುಸ್ಲಿಮರ ವಿರುದ್ಧ ಪರೋಕ್ಷ ದ್ವೇಷ ತೋರಿಸಲಾಗುತ್ತಿದೆ. ತುಳುನಾಡಿನ ದೈವಗಳು ಸೌಹಾರ್ದ, ಸಾಮರಸ್ಯ, ಸಹಬಾಳ್ವೆಯ ಪ್ರತೀಕಗಳಾಗಿವೆ. ಆದರೆ ಈಗೀಗ ತುಳುವ ಭೂತದೈವಗಳಿಗೆ ಯಾವುದೇ ಸಂಬಂಧವಿಲ್ಲದ ಶಿವಾಜಿಯ ಚಿತ್ರದ ಪತಾಕೆ, ಕೇಸರಿ ಬಾವುಟ-ಬಂಟಿಂಗ್‌ಗಳು, ಮೂಲ ಪಾಲಿ ಭಾಷೆಯ ಓಂ ಅಕ್ಷರ, ಒಂಟಿ ರಾಮನ ಚಿತ್ರ ಕೋಲ, ನೇಮಗಳಲ್ಲಿ ಎಲ್ಲೆಡೆ ರಾರಾಜಿಸುತ್ತವೆ. ಮಹಾರಾಷ್ಟ್ರದ ಶಿವಾಜಿ, ಉತ್ತರ ಭಾರತದ ಪುರಾಣದ ಹನುಮಂತ, ಶ್ರೀರಾಮರಿಗೆ ಹಾಗೂ ತುಳುವರ ಭೂತದೈವಗಳಿಗೆ ಎಲ್ಲಿಂದ ಎಲ್ಲಿಯ ಸಂಬಂಧ ಎಂದೇ ಆರ್ಥವಾಗುತ್ತಿಲ್ಲ!

ನಿಜವಾಗಿ ಈಗ ನಾವು ಭೂತ ದೈವ ಎಂದು ಪೂಜಿಸುವ ಪವಿತ್ರ ಶಕ್ತಿಗಳು ಯಾರೆಂದರೆ ಮೂಲತಃ ಈ ತುಳುನಾಡಿನ ಮಣ್ಣಿನಲ್ಲಿ ಮನುಷ್ಯರಾಗಿ ಬದುಕಿ ಸಮಾಜದ ಉದ್ಧಾರದ ಕೆಲಸ ಮಾಡಿದ ಹಾಗೂ ಇಲ್ಲಿಯ ಜೈನ-ಬಂಟ ಅರಸರ ಅಥವಾ ಜಮೀನುದಾರರ ಶೋಷಣೆಯ ವಿರುದ್ಧ ಹೋರಾಡಿ ಮಡಿದ ವೀರ ಮಹಾಪುರುಷರಾಗಿದ್ದರು. ಈ ಮಹಾಪುರುಷ/ವೀರ ಮಹಿಳೆಯರಲ್ಲಿ ಹೆಚ್ಚಿನವರು 700 ವರ್ಷಗಳಿಂದೀಚಿನವರು. ಮುಸ್ಲಿಮರು ನಮ್ಮ ತುಳುನಾಡಿಗೆ 1,200 ವರ್ಷಗಳ ಹಿಂದೆಯೇ ಬಂದು ನೆಲೆಸಿದ್ದರು. ಹಾಗಿದ್ದರೂ ಆ ಮುಸ್ಲಿಮರು ತುಳುವ ಶೂರ ಮಹಾಪುರುಷರಿಗೆ ಯಾವುದೇ ತೊಂದರೆ ಕೊಟ್ಟ ಉದಾಹರಣೆ ನಮ್ಮ ಭೂತಾರಾಧನೆಯ ಇತಿಹಾಸದಲ್ಲಿ ಇಲ್ಲ.

ಈ ಮಹಾಪುರುಷರಿಗೆ ನಿಜವಾಗಿ ತೊಂದರೆ ಕೊಟ್ಟು ಅವರನ್ನು ಮೋಸದಿಂದ ಕೊಂದು ನಂತರ ಆ ಮಹಾಪುರುಷರು ಇಂತಹ ಸ್ಥಳದಲ್ಲಿ 'ಮಾಯವಾದರು' ಎಂದು ಅಜ್ಜಿ ಕಥೆ ಕಟ್ಟಿ ಹಣ ಸಂಗ್ರಹಿಸಿ ಗುಡಿ ಕಟ್ಟಿ ಮೆರೆದು ತುಳುವ ಶೂದ್ರರನ್ನು ಮಾನಸಿಕ ಗುಲಾಮರನ್ನಾಗಿ ಮಾಡಿದವರು ತುಳುವ ಹಿಂದೂ-ಜೈನ ಮೇಲ್ಜಾತಿಯವರೇ ಆಗಿದ್ದರು. ಅತಿ ಅದ್ಭುತ ಗೋಮಟೇಶ್ವರ ಮೂರ್ತಿಯನ್ನು ಕಡೆದು ಕೊಟ್ಟ ಕಲ್ಕುಡ, ಕಲ್ಲುರ್ಟಿಗೆ ಅನ್ಯಾಯ ಮಾಡಿದವರು ಜೈನ ಅರಸರು. ಕೋಟೆದ ಬಬ್ಬು (ಕೋರ್ದಬ್ಬು), ಕೊರಗಜ್ಜ (ಕೊರಗ ತನಿಯ), ಕೋಟಿ ಚೆನ್ನಯ, ಬೊಬ್ಬರ್ಯ (ಬೊಬ್ಬಬ್ಯಾರಿ), ಜಾರಂದಾಯ, ಕೊಡಮಂದಾಯ, ಉಲ್ಲಾಯ, ಜುಮಾದಿ (ತೃತೀಯಾ ಲಿಂಗಿ) ಇವರಿಗೆಲ್ಲಾ ಅನ್ಯಾಯ ಮಾಡಿದವರು ಹಿಂದೂ ಮೇಲ್ಜಾತಿಯವರೇ ವಿನಹ ಮುಸ್ಲಿಮರಲ್ಲ. ಹಾಗಿದ್ದರೂ ಕೋಲ, ನೇಮ, ತಂಬಿಲಗಳಲ್ಲಿ ಆಯೋಜಕರ ಮುಸ್ಲಿಮ್ ದ್ವೇಷ ಇತ್ತೀಚೆಗೆ ಎದ್ದು ಕಾಣುತ್ತದೆ. ಕೋಲ, ನೇಮ ಆಯೋಜಿಸುವ ಗುತ್ತಿನವರು ಮುಸ್ಲಿಮ್ ವ್ಯಾಪಾರಿಗಳಿಗೆ ಅಂಗಡಿ ಹಾಕಲು ಬಿಡುವುದಿಲ್ಲ. ವಿಚಿತ್ರವೆಂದರೆ ಈ ಮಹಾಪುರುಷರು ಬದುಕಿದ್ದಾಗ ಅವರಿಗೆ ಘೋರ ಅನ್ಯಾಯ ಮಾಡಿ ಕೊನೆಗೆ ಅವರಿಗೆ ಮೋಸದಿಂದ ಮರಣ ತಂದ ಮೇಲ್ಜಾತಿಯವರೇ ಈಗ ಹೆಚ್ಚಿನ ಭೂತ ದೈವಸ್ಥಾನಗಳ ಮೊಕ್ತೇಸರರು! ಬುದ್ಧಿವಂತರ ನಾಡಿನ ಈ ವಿಪರ್ಯಾಸಕ್ಕೆ ಏನೆನ್ನಬೇಕು?

ಕೊನೆಗೆ ತುಳುವರ ಒಂದು ವಿಶೇಷ ಎಲ್ಲರೂ ಗಮನಿಸಬೇಕು, ಅದೇನೆಂದರೆ ಹೊರನಾಡಿನಿಂದ ಬಂದ ಕೊಂಕಣಿ ಬ್ರಾಹ್ಮಣರು ಭೂತ ದೈವಗಳನ್ನು ನಂಬುತ್ತಾರೆ ಮತ್ತು ಗೌರವಿಸುತ್ತಾರೆ. ಹೊರಗಿನ ಕ್ರೈಸ್ತರೂ ಭೂತದೈವಗಳ ಕಾರಣಿಕವನ್ನು ನಂಬುತ್ತಾರೆ. ಆದರೆ ತುಳುವ ಸ್ಮಾರ್ತ ಮತ್ತು ಮಧ್ವ ಬ್ರಾಹ್ಮಣರು ಅಪ್ಪಿತಪ್ಪಿಯೂ ಭೂತ ದೈವಗಳಿಗೆ ಕೈಮುಗಿಯುವುದಿಲ್ಲ ಹಾಗೂ ಗಂಧ ಪ್ರಸಾದ ಸ್ವೀಕರಿಸಲು ಬಹಿರಂಗವಾಗಿ ನಿರಾಕರಿಸುತ್ತಾರೆ. ಆದರೂ ಅವರು ಹಿಂದೂ ಸಂಸ್ಕೃತಿಯ ರಕ್ಷಕರಂತೆ.

share
ಅಭಿಷೇಕ್ ಪಡಿವಾಲ್, ಸುಳ್ಯ
ಅಭಿಷೇಕ್ ಪಡಿವಾಲ್, ಸುಳ್ಯ
Next Story
X