Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಎಪ್ರಿಲ್ ನಲ್ಲಿ ಆಹಾರದ ಬೆಲೆ ತುಸು...

ಎಪ್ರಿಲ್ ನಲ್ಲಿ ಆಹಾರದ ಬೆಲೆ ತುಸು ಇಳಿಕೆಯಾಗಿದೆ: ವಿಶ್ವಸಂಸ್ಥೆ

ವಾರ್ತಾಭಾರತಿವಾರ್ತಾಭಾರತಿ7 May 2022 12:36 AM IST
share
ಎಪ್ರಿಲ್ ನಲ್ಲಿ ಆಹಾರದ ಬೆಲೆ ತುಸು ಇಳಿಕೆಯಾಗಿದೆ: ವಿಶ್ವಸಂಸ್ಥೆ

ರೋಮ್, ಮೇ 6: ಮಾರ್ಚ್ನಲ್ಲಿ ದಾಖಲೆ ಮಟ್ಟ ತಲುಪಿದ್ದ ಆಹಾರದ ಬೆಲೆ ಎಪ್ರಿಲ್ನಲ್ಲಿ ತುಸು ಇಳಿಕೆಯಾಗಿದೆ. ಆದರೆ ಮಾರುಕಟ್ಟೆಯ ಕಠಿಣ ಪರಿಸ್ಥಿತಿಯಿಂದಾಗಿ ಜಾಗತಿಕ ಆಹಾರ ಭದ್ರತೆಯ ಆತಂಕ ಮುಂದುವರಿದಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ(ಎಫ್ಎಒ) ಶುಕ್ರವಾರ ಹೇಳಿದೆ.
ಜಾಗತಿಕ ಆಹಾರ ವಸ್ತುಗಳ ವ್ಯವಹಾರದ ಮೇಲೆ ನಿಗಾ ಇರಿಸುವ ಎಫ್ಎಒ ಬೆಲೆ ಸೂಚ್ಯಾಂಕವು ಮಾರ್ಚ್ನಲ್ಲಿ 159.7 ಅಂಕಕ್ಕೆ ಏರಿಕೆಯಾಗಿದ್ದರೆ ಎಪ್ರಿಲ್ನಲ್ಲಿ 158.5 ಅಂಕ ದಾಖಲಿಸಿದೆ. ಸೂಚ್ಯಾಂಕದಲ್ಲಿ ತುಸು ಇಳಿಕೆ ದಾಖಲಾಗಿರುವುದು, ವಿಶೇಷವಾಗಿ ಕನಿಷ್ಟ ಆದಾಯದ, ಆಹಾರದ ಕೊರತೆ ಇರುವ ದೇಶಗಳಿಗೆ , ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೂ ಆಹಾರದ ಬೆಲೆ ಇನ್ನೂ ಗರಿಷ್ಟ ಮಟ್ಟದಲ್ಲಿಯೇ ಮುಂದುವರಿದಿರುವುದು ನಿರಂತರ ಮಾರುಕಟ್ಟೆ ಬಿಗಿತವನ್ನು ಪ್ರತಿಬಿಂಬಿಸುತ್ತದೆ ಮತ್ತು ದುರ್ಬಲ ವರ್ಗದವರಿಗೆ ಆಹಾರ ಭದ್ರತೆಯ ಸವಾಲನ್ನು ಒಡ್ಡಿದೆ ಎಂದು ಎಫ್ಎಒ ಮುಖ್ಯ ಆರ್ಥಿಕತಜ್ಞ ಮ್ಯಾಕ್ಸಿಮೊ ಟೊರೆರೊ ಕ್ಯುಲೆನ್ ಹೇಳಿದ್ದಾರೆ.
   

ಕೆಲ ತಿಂಗಳಿಂದ ಇಳಿಮುಖವಾಗಿದ್ದ ಜಾಗತಿಕ ಆಹಾರ ದರ ಉಕ್ರೇನ್-ರಶ್ಯ ಯುದ್ಧದ ಹಿನ್ನೆಲೆಯಲ್ಲಿ ಎಪ್ರಿಲ್ನಲ್ಲಿ ಗರಿಷ್ಟ ಮಟ್ಟಕ್ಕೇರಿತ್ತು. ಮಾರ್ಚ್ನಲ್ಲಿ 17% ಹೆಚ್ಚಳ ದಾಖಲಿಸಿದ್ದ ಬೇಳೆಕಾಳು ದರ ಸೂಚ್ಯಾಂಕ ಎಪ್ರಿಲ್ನಲ್ಲಿ 0.7% ಇಳಿಕೆಯಾಗಿದೆ. ಜೋಳದ ಬೆಲೆ 3%, ಗೋಧಿ ಬೆಲೆ 0.2% ಇಳಿಕೆಯಾಗಿದೆ. ತಾಳೆಎಣ್ಣೆ, ಸೂರ್ಯಕಾಂತಿ ಎಣ್ಣೆ ಸಹಿತ ಖಾದ್ಯತೈಲಗಳನ್ನು ಪಡಿತರ ವ್ಯವಸ್ಥೆಯಡಿ ತಂದ ಕಾರಣ ಎಪ್ರಿಲ್ನಲ್ಲಿ ಇದರ ಬೆಲೆ 5.7% ಇಳಿಕೆಯಾಗಿದೆ. ಸಕ್ಕರೆ ಬೆಲೆ 3.3%, ಮಾಂಸದ ಬೆಲೆ 2.2% ಮತ್ತು ಹಾಲಿನ ಉತ್ಪನ್ನಗಳ ಬೆಲೆ 0.9% ಏರಿಕೆಯಾಗಿದೆ ಎಂದು ವರದಿ ಹೇಳಿದೆ. ಈ ಮಧ್ಯೆ, 2022ರಲ್ಲಿ ಜಾಗತಿಕ ಗೋಧಿ ಉತ್ಪಾದನೆಯನ್ನು 782 ಮಿಲಿಯನ್ ಟನ್ಗೆ ನಿಗದಿಗೊಳಿಸಲಾಗಿದೆ. ಕಳೆದ ತಿಂಗಳು ಇದನ್ನು 784 ಮಿಲಿಯನ್ ಟನ್ಗೆ ನಿಗದಿಗೊಳಿಸಲಾಗಿತ್ತು. ಉಕ್ರೇನ್-ರಶ್ಯ ನಡುವಿನ ಯುದ್ಧ ಇನ್ನೂ ಮುಂದುವರಿದಿರುವುದರಿಂದ ಉಕ್ರೇನ್ನಲ್ಲಿ ಗೋಧಿ ಬೆಳೆಯುವ ಪ್ರದೇಶದಲ್ಲಿ 20% ಕಡಿಮೆಯಾಗಬಹುದು. ಅಲ್ಲದೆ ಉತ್ತರ ಆಫ್ರಿಕಾದಲ್ಲಿ ಬರಗಾಲ ಪರಿಸ್ಥಿತಿ ಇರುವುದು ಇದಕ್ಕೆ ಮೂಲ ಕಾರಣ. ಉಕ್ರೇನ್ ಮತ್ತು ರಶ್ಯ ಅತ್ಯಧಿಕ ಗೋಧಿ ಬೆಳೆಯುವ ಮತ್ತು ರಫ್ತು ಮಾಡುವ ದೇಶಗಳಾಗಿವೆ.

  2021/22ರಲ್ಲಿ ಜಾಗತಿಕ ಬೇಳೆಕಾಳು ವ್ಯಾಪಾರ 473 ಮಿಲಿಯನ್ ಟನ್ಗೆ ತಲುಪಲಿದೆ ಎಂದು ಎಫ್ಎಒ ಅಂದಾಜಿಸಿದೆ. ಕಳೆದ ತಿಂಗಳು ಅಂದಾಜು ಮಾಡಿದ್ದಕ್ಕಿಂತ ಇದು 3.7 ಮಿಲಿಯನ್ ಟನ್ ಅಧಿಕವಾಗಿದೆ, ಆದರೆ 2020/21ರ ದಾಖಲೆ ಮಟ್ಟಕ್ಕಿಂತ 1.2% ಕಡಿಮೆಯಾಗಲಿದೆ. ಎಪ್ರಿಲ್ನಲ್ಲಿ ರಶ್ಯವು ಈಜಿಪ್ಸ್, ಇರಾನ್ ಮತ್ತು ಟರ್ಕಿಗೆ ಅತ್ಯಧಿಕ ರಫ್ತು ಮಾಡಿದ್ದರಿಂದ ಹೆಚ್ಚಳ ದಾಖಲಾಗಿದೆ ಎಂದು ಎಫ್ಎಒ ಹೇಳಿದೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X