ಕಥೆಗಳಲ್ಲಿ ವಾಸ್ತವದ ಜೊತೆ ಮಸಾಲೆ ರುಚಿಯೂ ಇರಲಿ : ಅಕ್ಷಯ ಶೆಟ್ಟಿ

ಮಂಗಳೂರು : ಕಥೆಯನ್ನು ಬರೆಯುವಾಗ ಪೂರ್ವ ಸಿದ್ಧತೆ, ವಸ್ತು, ಪಾತ್ರ ಸೃಷ್ಟಿ ಮತ್ತು ಓದಿಸಿಕೊಂಡು ಹೋಗುವ ನವಿರು ನಿರೂಪಣೆ, ನಿಗೂಢತೆ ಮುಖ್ಯವಾಗಿದೆ. ಮೂಗುವಿಕೆಯೇ ಕಥೆಗಾರನ ಜೀವಾಳ. ಕಥೆಗಳಲ್ಲಿ ಕೇವಲ ವಾಸ್ತವದ ಸಂಗತಿಗಳನ್ನು ನೇರ ಹೇಳದೆ ಮಸಾಲೆ ರುಚಿಯೂ ಸಮ್ಮಿಲಿತವಾಗಿದ್ದರೆ ಓದುಗರಿಗೆ ಕಥೆಗಳು ಇಷ್ಟವಾಗುತ್ತವೆ’ ಎಂದು ಲೇಖಕಿ ಅಕ್ಷಯ ಆರ್ ಶೆಟ್ಟಿ ಹೇಳಿದರು.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ನಗರದ ವಸಂತ ಮಹಲ್ ಸಭಾಭವನದಲ್ಲಿ ರವಿವಾರ ಏರ್ಪಡಿಸಿದ್ದ ’ಕಥಾ ಸಮಯ’ ಕಥಾ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಥಾ ಸಮಯ, ಕಾವ್ಯ ಸಂಚಯ, ಸನ್ಮಾನ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಡಾ.ಸುರೇಶ್ ನೆಗಳಗುಳಿ ಉದ್ಘಾಟಿಸಿದರು.ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಅಮ್ಮಂದಿರ ದಿನದ ಹಿನ್ನೆಲೆಯಲ್ಲಿ ಅಮ್ಮ ಎಂಬ ಪರಿಕಲ್ಪನೆಗೆ ಅಧ್ಯಕ್ಷತೆ ನೀಡಿ ಪರಿಷತ್ತು ವಿನೂತನ ಪ್ರಯೋಗ ಮಾಡಿತು. ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಕಲ್ಲಚ್ಚು ಪ್ರಕಾಶನದ ಅಧ್ಯಕ್ಷ ಮಹೇಶ್ ಆರ್. ನಾಯಕ್ ಅತಿಥಿಗಳಾಗಿದ್ದರು.
ಕಥಾ ಗೋಷ್ಠಿಯಲ್ಲಿ ರಶ್ಮಿ ಸನಿಲ್, ವ.ಉಮೇಶ್ ಕಾರಂತ,ಚಿತ್ರಾಶ್ರೀ ಕೆ.ಎಸ್, ಅಪೂರ್ವ ಪುತ್ತೂರು, ಎಡರ್ಡ್ ಲೋಬೊ, ಅರುಣಾ ನಾಗರಾಜ್, ಜೀವಪರಿ ಪರಿಮಳ ಮಹೇಶ್, ರೇಖಾ ನಾರಾಯಣ್ ಕಥೆಗಳನ್ನು ಪ್ರಸ್ತುತ ಪಡಿಸಿದರು.
ಕವಿಗೋಷ್ಠಿಯಲ್ಲಿ ಅಬ್ದುಲ್ ಸಮದ್ ಬಾವ, ಜಯರಾಮ್ ಪಡ್ರೆ, ಎಸ್ಕೆ ಕುಂಪಲ, ವಿಶ್ವನಾಥ್ ಕುಲಾಲ್ ಮಿತ್ತೂರು,ಬದ್ರುದ್ದೀನ್ ಕೂಳೂರು,ವೆಂಕಟೇಶ್ ಗಟ್ಟಿ, ಗೀತಾ ಲಕ್ಷ್ಮೀಶ್ ಕೊಂಚಾಡಿ, ರೇಖಾ ಸುದೇಶ್ ರಾವ್, ಮಂಜುಶ್ರೀ ನಲ್ಕ, ಹಿತೇಶ್ ಕುಮಾರ್, ಮನೋಜ್ ಕುಮಾರ್ ಶಿಬಾರ್ಲ,ಇಬ್ರಾಹಿಂ ಖಲೀಲ್, ಆಕೃತಿ ಐ ಎಸ್ ಭಟ್, ಡಾ.ಸುರೇಶ್ ನೆಗಳಗುಳಿ, ರೇಮಂಡ್ ಡಿಕುನಾ, ಚಂದನಾ ಕೆ.ಎಸ್,ಸುಮಂಗಲ ದಿನೇಶ್ ಶೆಟ್ಟಿ,ಅರ್ಚನಾ ಎಂ. ಬಂಗೇರ ಕುಂಪಲ, ಗೋಪಾಲಕೃಷ್ಣ ಶಾಸ್ತ್ರಿ, ಸೌಮ್ಯ ಗೋಪಾಲ್, ಸುಹಾನ ಸಯ್ಯದ್, ಎಂ,ಸೌಮ್ಯ ಆರ್. ಶೆಟ್ಟಿ, ಆನಂದ ರೈ ಅಡ್ಕಸ್ಥಳ ಕವಿತೆಗಳನ್ನು ವಾಚಿಸಿದರು.
ರೇಖಾ ನಾರಾಯಣ್ ಮತ್ತು ಅರ್ಚನಾ ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಗುಣವತಿ ಕಿನ್ಯ, ಜತೆ ಕಾರ್ಯ ದರ್ಶಿ ವೆಂಕಟೇಶ್ ಗಟ್ಟಿ ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು.
ನೂತನ ತಾಲೂಕು ಅಧ್ಯಕ್ಷರ ನೇಮಕ
ಈ ಸಂದರ್ಭ ಉಳ್ಳಾಲ ತಾಲೂಕು ಅಧ್ಯಕ್ಷರಾಗಿ ಎಡ್ವರ್ಡ್ ಲೋಬೋ ಮತ್ತು ಪುತ್ತೂರು ತಾಲೂಕು ಅಧ್ಯಕ್ಷರಾಗಿ ಅಬ್ದುಲ್ ಸಮದ್ ಬಾವ ಅವರನ್ನು ಜಿಲ್ಲಾ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಶಿಫಾರಸಿನಂತೆ ಜಿಲ್ಲಾಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ನೇಮಕ ಮಾಡಿ ಘೋಷಿಸಿದರು.







