ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ: ಅಕ್ರಮದ ಸೂಕ್ತ ತನಿಖೆ, ಶಿಕ್ಷೆ ಖಾತ್ರಿಪಡಿಸಲು ಎಐಡಿಎಸ್ಓ ಒತ್ತಾಯ

ಬೆಂಗಳೂರು, ಮೇ 10: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಮೀನುಗಳನ್ನು ಹಿಡಿದು ತಿಮಿಂಗಿಲಗಳನ್ನು ಬಿಟ್ಟಂತೆ ಆಗಬಾರದು. ಈ ಅಕ್ರಮದ ಕುರಿತು ಸರಿಯಾದ ತನಿಖೆ ನಡೆಸಿ, ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಿ, ಸೂಕ್ತ ಶಿಕ್ಷೆ ನೀಡಬೇಕು ಎಂದು ಎಐಡಿಎಸ್ಓ ಒತ್ತಾಯಿಸಿದೆ.
ಎಐಡಿಎಸ್ಓ ವತಿಯಿಂದ ಇಂದು ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್ಕುಮಾರ್, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಅಕ್ರಮದಲ್ಲಿ ಭಾಗಿಯಾಗಿದ್ದರು ಎನ್ನಲಾದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರನ್ನು(ಮೌಲ್ಯಮಾಪನ) ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಪರೀಕ್ಷೆಗೆ ಸಿದ್ಧಪಡಿಸಿದ್ದ ಭೂಗೋಳಶಾಸ್ತ್ರ ವಿಷಯದ 18 ಪ್ರಶ್ನೆಗಳು ಸೋರಿಕೆ ಆಗಿದ್ದವು. ಈಗ ಅರ್ಥಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಇಂಗ್ಲೀμï ಪ್ರಶ್ನೆ ಪತ್ರಿಕೆಗಳೂ ಸೋರಿಕೆಯಾಗಿವೆ ಎಂಬ ಅನುಮಾನ ವ್ಯಕ್ತವಾಗಿದೆ. ಶೈಕ್ಷಣಿಕ ರಂಗದಲ್ಲಿ ಹಾಗೂ ನೇಮಕಾತಿ ವಿಚಾರದಲ್ಲಿ ಈ ರೀತಿಯ ಅಕ್ರಮಗಳು ನಡೆಯುತ್ತಿರುವುದು ಅತ್ಯಂತ ವಿಷಾದನೀಯ ಮತ್ತು ನೋವಿನ ಸಂಗತಿಯಾಗಿದೆ ಎಂದರು.
ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದಾತ್ತ ವೃತ್ತಿಗೆ ಭ್ರಷ್ಟಾಚಾರದ ಮೂಲಕ ನೇಮಕಾತಿ ಪಡೆದರೆ ಅದು ಅತ್ಯಂತ ಖೇದಕರ. ಅಂತಹವರಿಂದ ಯಾವ ರೀತಿಯ ಬೋಧನೆ ನಿರೀಕ್ಷಿಸಲು ಸಾಧ್ಯ? ಅವರು ಯಾವ ರೀತಿ ವಿದ್ಯಾರ್ಥಿಗಳ ವ್ಯಕ್ತಿತ್ವ, ಯೋಚನೆ ಹಾಗೂ ಜ್ಞಾನವನ್ನು ಬೆಳೆಸಲು ಸಾಧ್ಯ? ಯಾವ ನೈತಿಕತೆಯನ್ನು ಬಿತ್ತಲು ಸಾಧ್ಯ? ಎಂದು ಪ್ರಶ್ನಿಸಿದರು.
ಪ್ರಸ್ತುತ ಅಕ್ರಮದಲ್ಲಿ, ಪತ್ರಿಕೆಗಳ ವರದಿ ಅನುಸಾರ ಹಲವು ವಿವಿಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿರುವವರು, ಉಪನ್ಯಾಸಕರು ತೊಡಗಿದ್ದಾರೆ. ಶೈಕ್ಷಣಿಕ ಜವಾಬ್ದಾರಿ ಹೊಂದಿರುವವರೇ ಇಂತಹ ಅಕ್ರಮಗಳಿಗೆ ಪುಷ್ಟಿ ನೀಡಿದರೆ, ಇನ್ನು ಶಿಕ್ಷಣವನ್ನು ಉಳಿಸುವವರು ಯಾರು ಎಂಬ ಆತಂಕ ಮೂಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
.jpg)







