ಬಸ್ ನಿಲ್ದಾಣದಲ್ಲಿ ಯುವಕನ ಕೈಗೆ ಮಗು ನೀಡಿ ನಾಪತ್ತೆಯಾದ ಮಹಿಳೆ!

ಮೈಸೂರು, ಮೇ 10: ವೈಯಕ್ತಿಕ ಕೆಲಸಕ್ಕೆಂದು ರಾಯಚೂರಿಗೆ ತೆರಳಿದ್ದ ಯುವಕ ಮೈಸೂರು ಬಸ್ ಗೆ ಕಾಯುತ್ತಿದ್ದ ವೇಳೆ ಅಪರಿಚಿತ ಮಹಿಳೆಯೊಬ್ಬರು ತನ್ನ 9 ತಿಂಗಳ ಮಗುವನ್ನು ಯುವಕನ ಕೈಗೆ ನೀಡಿ ಮೂರು ಗಂಟೆಗಳು ಕಳೆದರೂ ವಾಪಸ್ಸು ಬಾರದೆ ನಾಪತ್ತೆಯಾಗಿರುವ ಘಟನೆ ರಾಯಚೂರಿನ ಬಸ್ ನಿಲ್ದಾಣದಲ್ಲಿ ನಡೆದಿದೆ
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ನಿವಾಸಿ ರಘು ಕೆಲಸದ ಮೇಲೆ ರಾಯಚೂರಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ.
ರಘು ಮಗುವನ್ನು ಸುರಕ್ಷಿತವಾಗಿ ಮೈಸೂರಿಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಲಷ್ಕರ್ ಪೊಲೀಸ್ ಠಾಣೆಗೆ ಮಗುವನ್ನು ನೀಡಿದ್ದಾರೆ.
ಮಗುವನ್ನು ಆರೈಕೆ ಮಾಡಿದ ಸಿಬ್ಬಂದಿ ಬಾಲ ಮಂದಿರಕ್ಕೆ ಮಗುವನ್ನು ಒಪ್ಪಿಸಿ ತಾಯಿಯನ್ನು ಪತ್ತೆ ಹಚ್ಚುವಂತೆ ರಾಯಚೂರು ಪೊಲೀಸರಿಗೆ ತಿಳಿಸಿದ್ದಾರೆ.
Next Story





